Showing posts with label ನೌಕರರು. Show all posts
Showing posts with label ನೌಕರರು. Show all posts

Wednesday, March 27, 2019

ಸುತ್ತೋಲೆ ವಿಷಯ : ಸರ್ಕಾರಿ ಅಧಿಕಾರಿ / ನೌಕರರುಗಳ ವಿರುದ್ಧ ಶಿಸ್ತುಕ್ರಮ ಇಲಾಖಾ ವಿಚಾರಣೆಯ ಅವಶ್ಯಕ ಪರಿಪೂರ್ಣ ಪ್ರಸ್ತಾವನೆಗಳನ್ನು ವಿಳಂಬವಿಲ್ಲದೇ ಸಲ್ಲಿಸುವ ಬಗ್ಗೆ.

ಕರ್ನಾಟಕ ಸರ್ಕಾರ
ಸಂಖ್ಯೆ : ಸಿಆಸುಇ 76 ಸೇವಿ 2018
ಕರ್ನಾಟಕ ಸರ್ಕಾರದ ಸಚಿವಾಲಯ ,
ವಿಧಾನಸೌಧ . ಬೆಂಗಳೂರು , ದಿನಾಂಕ : 21 . 01 . 2019
ಸುತ್ತೋಲೆ
ವಿಷಯ : ಸರ್ಕಾರಿ ಅಧಿಕಾರಿ / ನೌಕರರುಗಳ ವಿರುದ್ಧ ಶಿಸ್ತುಕ್ರಮ ಇಲಾಖಾ ವಿಚಾರಣೆಯ
ಅವಶ್ಯಕ ಪರಿಪೂರ್ಣ ಪ್ರಸ್ತಾವನೆಗಳನ್ನು ವಿಳಂಬವಿಲ್ಲದೇ ಸಲ್ಲಿಸುವ ಬಗ್ಗೆ
ಮರು ಸೂಚನೆಗಳು , ಉಲ್ಲೇಖ : ( 1 ) ಅಧಿಕೃತ ಜ್ಞಾಪನ ಸಂಖ್ಯೆ : ಡಿಪಿಎಆರ್ 41 ಎಸ್‌ಡಿಇ 83 , ದಿನಾಂಕ : 16 . 08 . 1983 .
( 2 ) ಅಧಿಕೃತ ಜ್ಞಾಪನ ಸಂಖ್ಯೆ : ಡಿಪಿಎಆರ್‌ 33 ಎಸ್‌ಡಿಇ 83 , ದಿ : 24 . 05 . 1984 , ( 3 ) ಸುತ್ತೋಲೆ ಸಂಖ್ಯೆ : ಸಿಆಸುಇ 7 ನೇಣವಿ 96 , ದಿನಾಂಕ : 04 . 07 . 1996 , ( 4 ) ಸುತ್ತೋಲೆ ಸಂಖ್ಯೆ : ಸಿಆಸುಇ 04 ಸೇಇವಿ 96 , ದಿನಾಂಕ : 28 . 08 . 1996 , ( 5 ) ಸುತ್ತೋಲೆ ಸಂಖ್ಯೆ : ಸಿಆಸುಇ 09 ಸೇಣವಿ 98 , ದಿನಾಂಕ : 03 . 08 . 1998 , ( 6 ) ಸುತ್ತೋಲೆ ಸಂಖ್ಯೆ : ಸಿಆಸುಇ 47 ಸೇವಿ 2007 , ದಿನಾಂಕ : 23 . 03 . 2002 . ( 7 ) ಸುತ್ತೋಲೆ ಸಂಖ್ಯೆ : ಸಿಆಸುಇ 07 ಸೇವಿ 2003 , ದಿನಾಂಕ : 12 . 05 . 2003 , ( 8 ) ಸುತ್ತೋಲೆ ಸಂಖ್ಯೆ : ಸಿಆಸುಇ 1 ಸೇಇವಿ 2005 , ದಿನಾಂಕ : 09 . 02 . 2005 ,
ಸರ್ಕಾರಿ ನೌಕರನು ಸೇವೆಯಲ್ಲಿದ್ದಾಗ ಅವನ ಮೇಲೆ ಹೂಡಿದ ಯಾವುದೇ ಇಲಾಖಾ ತನಿಖೆಗಳ ಬಗ್ಗೆ ಅವನು ಸೇವೆಯಿಂದ ನಿವೃತ್ತಿಯಾದ ನಂತರ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 214 ( 2 ) ( ಬಿ ) ರ ಉಪಬಂಧಗಳಿಗೆ ಒಳಪಟ್ಟು ಇಲಾಖಾ ವಿಚಾರಣೆಯನ್ನು ಆರಂಭಿಸುವ ಮತ್ತು ಸೇವೆಯಲ್ಲಿದ್ದಾಗ ಅವನ ವಿರುದ್ಧ ಆರಂಭಿಸಿರುವ ಇಲಾಖಾ ವಿಚಾರಣೆಯನ್ನು ನಿಯಮ 214 ( 2 ) ( ಎ ) ರ ಉಪಬಂಧಗಳಿಗೆ ಒಳಪಟ್ಟು ಮುಂದುವರೆಸುವ ಅವಕಾಶವಿದೆ . ಇದರ ಹೊರತಾಗಿ ಕರ್ನಾಟಕ ನಾಗರಿಕ ಸೇವಾ ( ವರ್ಗೀಕರಣ , ನಿಯಂತ್ರಣ ಮತ್ತು ಮೇಲ್ಮನವಿ ) ನಿಯಮಗಳು , 1957ರಲ್ಲಿರುವ ನಿಯಮಗಳ ಪ್ರಕಾರ ಹೊಸದಾಗಿ ಇಲಾಖಾ ವಿಚಾರಣೆ ಪ್ರಾರಂಭಿಸುವುದಕ್ಕೆ ಮತ್ತು ಪ್ರಾರಂಭಿಸಿರುವ ಇಲಾಖಾ ವಿಚಾರಣೆಯನ್ನು ಮುಂದುವರೆಸುವುದಕ್ಕೆ ಅವಕಾಶವಿರುವುದಿಲ್ಲ . ಕಾರಣ ಕರ್ನಾಟಕ ನಾಗರಿಕ ಸೇವಾ ( ವರ್ಗೀಕರಣ , ನಿಯಂತ್ರಣ ಮತ್ತು ಮೇಲ್ಮನವಿ ) ನಿಯಮಗಳು ಅಂತಹ ನಿವೃತ್ತ ನೌಕರರಿಗೆ ಅನ್ವಯಿಸುವುದಿಲ್ಲ . ಸರ್ಕಾರಿ ನೌಕರನು ನಿವೃತ್ತಿಯಾದ ನಂತರ ಅವನ ಮೇಲೆ ಹೂಡಲಾಗಿದ್ದ ಇಲಾಖಾ ತನಿಖೆಗಳನ್ನು ಸರ್ಕಾರಕ್ಕೆ ಆರ್ಥಿಕ ಹಾನಿ ಉಂಟಾಗಿಲ್ಲವೆಂಬ ಕಾರಣ ನೀಡಿ ಅವುಗಳನ್ನು ಹಿಂದಕ್ಕೆ ತೆಗೆದುಕೊಳ್ಳುವ ಪ್ರಸ್ತಾವನೆಗಳು ಸರ್ಕಾರದ ಮುಂದೆ ಬಂದ ಸಂದರ್ಭದಲ್ಲಿ ಸರ್ಕಾರವು ಆ ಬಗ್ಗೆ ಪರಿಶೀಲಿಸಿ , ಉಲ್ಲೇಖ ( I ) ಮತ್ತು ( 2 ) ರ ಅಧಿಕೃತ ಜ್ಞಾಸನಗಳಲ್ಲಿ ನಿವೃತ್ತಿ ಆಗುವಂತಹ ಸರ್ಕಾರಿ ನೌಕರರ ಮೇಲೆ ಹೂಡಲಾಗಿರುವ ಇಲಾಖಾ ತನಿಖೆಗಳನ್ನು ಅವರು ನಿವೃತ್ತಿ ಆಗುವುದಕ್ಕೆ ಮುಂಚೆ ಇತ್ಯರ್ಥ ಮಾಡುವ ಕುರಿತು ಸೂಚನೆಗಳನ್ನು ನೀಡಿದೆ .
2 . ತದನಂತರದಲ್ಲಿ ನಿವೃತ್ತಿ ಹೊಂದಿದ ಆಪಾದಿತ ಅಧಿಕಾರಿ ವಿರುದ್ಧ ಇಲಾಖಾ ವಿಚಾರಣೆ ಪ್ರಾರಂಭಿಸಬೇಕಾದ ಪ್ರಕರಣವೊಂದರಲ್ಲಿ ಸಕಾಲದಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 214 ( ಬಿ ) ( ತ ) ರಲ್ಲಿ ನಿಗದಿಪಡಿಸಿದ ಕಾಲಮಿತಿಯೊಳಗೆ ವಿಚಾರಣೆಯನ್ನು ಪ್ರಾರಂಭಿಸಿಲ್ಲದ ಕಾರಣ ಆಪಾದಿತ ಅಧಿಕಾರಿಯ ಮೇಲೆ ಇಲಾಖಾ ವಿಚಾರಣೆ ಹೂಡಲು ಅಸಾಧ್ಯವಾದ ಪರಿಸ್ಥಿತಿ ಉಂಟಾದುದಲ್ಲದೇ ಆರೋಪಿ ಸರ್ಕಾರಿ ನೌಕರರು ನಿವೃತ್ತಿ ಹೊಂದುವ 2 - 3 ದಿನಗಳ ಮುಂಚೆ ಇಲ್ಲವೇ ಹಿಂದಿನ ದಿನ ಅವ ದುರ್ನಡತೆಗೆ ಸಂಬಂಧಿಸಿದ ವಿವರಗಳು ನೀಡಿ ಅವರ ಮೇಲೆ ಶಿಸ್ತಿನ ಕ್ರಮ ಆರಂಭಿಸಲು ಇಲಾಖೆಗಳು ಸರ್ಕಾರಕ್ಕೆ ಪ್ರಸ್ತಾವನೆಗಳನ್ನು ಕಳುಹಿಸುತ್ತಿರುವುದು ಸಹ ಸರ್ಕಾರದ ಗಮನಕ್ಕೆ ಬಂದ ಸಂದರ್ಭದಲ್ಲಿ ಸರ್ಕಾರವು ಉಲ್ಲೇಖ ( 4 ) ರ ಸುತ್ತೋಲೆಯಲ್ಲಿ ಸರ್ಕಾರಿ ನೌಕರನ ದುರ್ನಡತೆ ಗಮನಕ್ಕೆ ಬಂದ ತಕ್ಷಣ ಶಿಸ್ತಿನ ಪ್ರಾಧಿಕಾರಕ್ಕೆ ಅದನ್ನು ತಿಳಿಸಬೇಕು . ನಿವೃತ್ತಿ ಹೊಂದಲಿರುವ ನೌಕರರ ಪ್ರಕರಣದಲ್ಲಿ ಶಿಸ್ತಿನ ಪ್ರಾಧಿಕಾರಕ್ಕೆ ಅಂತಹ ಮಾಹಿತಿ ಸರ್ಕಾರಿ ನೌಕರನು ನಿವೃತ್ತಿ ಹೊಂದುವ ಕನಿಷ್ಠ 2 ಅಥವಾ 3 ತಿಂಗಳ ಪೂರ್ವದಲ್ಲಿ ನೀಡಿ , ಕರಡು ದೋಷಾರೋಪಣಾ ಪಟ್ಟಿ ಇತ್ಯಾದಿ , ಸಂಬಂಧಿಸಿದ ಕಾಗದ ಪತ್ರ ಮತ್ತು ದಾಖಲೆಗಳೊಡನೆ ಶಿಸ್ತುಪಾಧಿಕಾರಿಗಳಿಗೆ ಕಳುಹಿಸುವ ಬಗ್ಗೆ ಮತ್ತು ವಯೋನಿವೃತ್ತಿ ಅಂಚಿನಲ್ಲಿರುವ ಅಂತಹ ಆಪಾದಿತ ಸರ್ಕಾರಿ ನೌಕರರ ನಿವೃತ್ತಿ ದಿನಾಂಕವನ್ನು ಕಡ್ಡಾಯವಾಗಿ ನಮೂದಿಸುವ ಬಗ್ಗೆ ಸೂಚನೆಗಳನ್ನು ನೀಡಲಾಗಿದೆ . ಉಲ್ಲೇಖ ( 5 ) ರ ಸುತ್ತೋಲೆಯಲ್ಲಿ ನಿವೃತ್ತಿ ಹೊಂದಲಿರುವ ಅಧಿಕಾರಿಗಳ ವಿರುದ್ಧ ಶಿಸ್ತಿನ ಪ್ರಸ್ತಾವನೆಗಳನ್ನು ಸಂಬಂಧಿಸಿದ ಅಧಿಕಾರಿ ವಯೋ ನಿವೃತ್ತಿ ಹೊಂದುವ ಕನಿಷ್ಠ ಆರು ತಿಂಗಳ ಮುಂಚೆಯೇ ಕಳುಹಿಸಬೇಕೆಂದು ತಿಳಿಸಲಾಗಿದೆ .
3 . ಉಲ್ಲೇಖ ( 8 ) ರ ಸುತ್ತೋಲೆಯಲ್ಲಿ ನಿವೃತ್ತಿ ಅಂಚಿನಲ್ಲಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಪ್ರಕರಣಗಳನ್ನು ಕಳುಹಿಸುವಲ್ಲಿ ಇಲಾಖೆಗಳು ಯಾವುದೇ ವಿಳಂಬವನ್ನು ಮಾಡಬಾರದು , ಹೀಗೆ ಕೊನೆ ಗಳಿಗೆಯಲ್ಲಿ ಪ್ರಸ್ತಾವನೆಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಕಳುಹಿಸಿದಲ್ಲಿ ಮತ್ತು ಅಂತಹ ವಿಚಾರಣೆಯು ಕಾಲಮಿತಿಯನ್ನು ಮೀರಿದ್ದಾದಲ್ಲಿ ವಿಳಂಬಕ್ಕೆ ಜವಾಬ್ದಾರರಾದ ನೌಕರರು / ಅಧಿಕಾರಿಗಳನ್ನು ಗುರುತಿಸಿ ಅವರುಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ತಿಳಿಸಲಾಗಿದೆ .
4 , ಉಲ್ಲೇಖ ( 6 ) ರ ಸುತ್ತೋಲೆಯಲ್ಲಿ ಕರ್ನಾಟಕ ನಾಗರಿಕ ಸೇವಾ ( ವರ್ಗೀಕರಣ , ನಿಯಂತ್ರಣ ಮತ್ತು ಮೇಲ್ಮನವಿ ) ನಿಯಮಗಳು , 1957ರ ನಿಯಮಗಳ ಅಡಿಯಲ್ಲಿ ಆರಂಭಿಸುವ ಪ್ರತಿಯೊಂದು ಪ್ರಕರಣದಲ್ಲಿ ಆಪಾದಿತ ಸರ್ಕಾರಿ ನೌಕರನ ವಯೋ ನಿವೃತ್ತಿ ದಿನಾಂಕ ಸೇರಿದಂತೆ ಇತರೆ ವಿವರಗಳನ್ನು ಸಂಬಂಧಿಸಿದ ದಾಖಲೆಗಳೊಂದಿಗೆ ಯಾವಾಗಲೂ ಇಡತಕ್ಕದ್ದೆಂದು ಹಾಗೂ ಅದನ್ನು ಸಂಬಂಧಿಸಿದ ಪ್ರಾಧಿಕಾರಿಗಳಿಗೆ ಲಭ್ಯಮಾಡತಕ್ಕದ್ದೆಂದು ಹಾಗೂ ಈ ವಿವರಗಳನ್ನು ತಪ್ಪದೆ ಕಡತದ ಕವಚದ ಮೇಲೆ ದಪ್ಪ ಅಕ್ಷರದಲ್ಲಿ ಕೆಂಪು ಶಾಯಿಯಲ್ಲಿ ನಮೂದಿಸಬೇಕೆಂದು ಸೂಚನೆಗಳನ್ನು ನೀಡಲಾಗಿದೆ .
5 , ಈ ರೀತಿ ಸರ್ಕಾರವು ಕಾಲಕಾಲಕ್ಕೆ ಹೊರಡಿಸಿದ ಮೇಲ್ಕಂಡ ಸೂಚನೆಗಳಿದ್ದಾಗ್ಯೂ ಇತ್ತೀಚೆಗೆ ಆಡಳಿತ ಇಲಾಖೆಯೊಂದು ಆರೋಪಿತ ಸರ್ಕಾರಿ ನೌಕರನ ವಿರುದ್ಧ ಶಿಸ್ತು ಪ್ರಕರಣದ ಪೂರ್ಣ ಪ್ರಸ್ತಾವನೆಯನ್ನು ಶಿಸ್ತುಪ್ರಾಧಿಕಾರಕ್ಕೆ ಆ ಅಧಿಕಾರಿ ನಿವೃತ್ತಿ ಹೊಂದುವ ಒಂದು ವಾರದ ಮುಂಚೆ ಕಳುಹಿಸಿರುವುದರಿಂದ , ಅಂತಹ ಆರೋಪಿತ ಅಧಿಕಾರಿ ವಿರುದ್ಧ ಕ್ರಮ ಜರುಗಿಸಲು ಅವಕಾಶವಿಲ್ಲದಂತಾಗಿರುವ ವಿಷಯವು ಸರ್ಕಾರದ ಗಮನಕ್ಕೆ ಬಂದಿದೆ .
( 1 ) ಆದುದರಿಂದ , ನಿವೃತ್ತಿ ಹೊಂದಲಿರುವ ಅಧಿಕಾರಿ / ನೌಕರರ ವಿರುದ್ದದ ಶಿಸ್ತುಕ್ರಮದ ಪರಿಪೂರ್ಣ ಪ್ರಸ್ತಾವನೆ ಗಳನ್ನು ಆಡಳಿತ ಇಲಾಖೆಗಳು ಅಂತಹ ಅಧಿಕಾರಿ / ನೌಕರರು ನಿವೃತ್ತರಾಗುವ ಕನಿಷ್ಠ 30 ದಿನಗಳ ಮುಂಚೆ ಶಿಸ್ತುಪ್ರಾಧಿಕಾರಕ್ಕೆ ಸಲ್ಲಿಸತಕ್ಕದ್ದು .
> > 2) ಕಡತದ ಕವಚದ ಮೇಲೆ ದಪ್ಪ ಅಕ್ಷರಗಳಲ್ಲಿ ಕೆಂಪು ಶಾಹಿಯಲ್ಲಿ ಆಪಾದಿತ ಸರ್ಕಾರಿ ನೌಕರರ ವಯೋ ನಿವೃತ್ತಿ ದಿನಾಂಕ ನಮೂದಿಸತಕ್ಕದ್ದು .
( 3 ) ಮೇಲಿನ ಕಾಲಮಿತಿ ಮೀರಿದಾದಲ್ಲಿ ವಿಳಂಬಕ್ಕೆ ಜವಾಬ್ದಾರರಾದ ನೌಕರರ / ಅಧಿಕಾರಿಗಳನ್ನು ಗುರುತಿಸಿ , ಆದರುಗಳ ವಿರುದ್ಧ ಶಿಸ್ತು ಕ್ರಮ ಜರುಗಿಸತಕ್ಕದ್ದು . ಈ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು .
ಸವಿಲ್ಲಾ ( ಟಿ . ಎಂ . ವಿಜಯ್ ಭಾಸ್ಕರ್ ) ಸರ್ಕಾರದ ಮುಖ್ಯ ಕಾರ್ಯದರ್ಶಿ
ಅವರಿಗೆ : ಸಂಕಲನಕಾರರು , ಕರ್ನಾಟಕ ರಾಜ್ಯ ಪತ್ರ ಇವರಿಗೆ ಇದನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿ ಅದರ 200 ಪ್ರತಿಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ( ಸೇವಾ ನಿಯಮಗಳು ) , ವಿಧಾನಸೌಧ ಇಲ್ಲಿಗೆ ಕಳುಹಿಸಲು ಕೋರಿದೆ .
1 ) ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು , 2 ) ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು / ಪ್ರಧಾನ ಕಾರ್ಯದರ್ಶಿಗಳು / ಕಾರ್ಯದರ್ಶಿಗಳು . 3 ) ಎಲ್ಲಾ ಇಲಾಖಾ ಮುಖ್ಯಸ್ಥರು / ಜಿಲ್ಲಾಧಿಕಾರಿಗಳು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು , ಜಿಲ್ಲಾ
ಪಂಚಾಯತ್ , 4 ) ಸರ್ಕಾರದ ಎಲ್ಲಾ ವಿಶೇಷ / ಅಪರ / ಸಹ / ಉಪ ಕಾರ್ಯದರ್ಶಿಗಳು . 5 ) ಸರ್ಕಾರದ ಎಲ್ಲಾ ಅಧೀನ ಕಾರ್ಯದರ್ಶಿಗಳು . 6 ) ನಿರ್ದೇಶಕರು , ಕರ್ನಾಟಕ ಸರ್ಕಾರ ಸಚಿವಾಲಯ ತರಬೇತಿ ಸಂಸ್ಥೆ .

ದಿನಕ್ಕೊಂದು ಸುದ್ದಿ *ಪರೀಕ್ಷಾ ರಜೆ ಪ್ರಸೂತಿ ರಜೆ*

ಪರೀಕ್ಷಾ ರಜೆ (Examination Leave): ನಿಗದಿಪಡಿಸಿದ ಇಲಾಖಾ ಪರೀಕ್ಷೆಯ ಸಂಬಂಧದಲ್ಲಿ ಪರೀಕ್ಷೆಗೆ ಹಾಜರಾಗಲು ಆತನ ಸೇವಾವಧಿಯಲ್ಲಿ 2 ಬಾರಿ ಮಾತ್ರ ಅನುಮತಿ ನೀಡಲಾಗುವುದು ಆದರೆ ರಾಜ್ಯ ಲೆಕ್ಕಪತ್ರ ಇಲಾಖೆಯ ಎಸ್ಎಎಸ್ ಹಾಗೂ ಖಜಾನೆ ಇಲಾಖೆಯ ಟ್ರೆಝುರಿ ಹೆಡ್ ಅಕೌಂಟಂಟ್ ಪರೀಕ್ಷೆಗೆ ಹಾಜರಾಗಲು 3 ಬಾರಿ ಅನುಮತಿ ನೀಡಲಾಗುವುದು. ಈ ಸಂದರ್ಭಗಳಲ್ಲಿ ಪರೀಕ್ಷೆ ದಿನ ಮತ್ತು ಪ್ರಯಾಣದ ದಿನಗಳಿಗೆ ರಜೆ ನೀಡಲಾಗುವುದು.
ಪ್ರಸೂತಿ ರಜೆ (Maternity Leave): ಎರಡು ಅಥವಾ ಹೆಚ್ಚು ಜೀವಂತ ಮಕ್ಕಳನ್ನು ಹೊಂದಿರದ ವಿವಾಹಿತ ಸರ್ಕಾರಿ ನೌಕರಳಿಗೆ ಪ್ರಸೂತಿ ರಜೆಯನ್ನು ಅದರ ಆರಂಭದ ದಿನಾಂಕದಿಂದ 180 ದಿನಗಳು ನೀಡಬಹುದು. ಈ ಅವಧಿಯಲ್ಲಿ ಅವಳು ರಜೆಯ ಮೇಲೆ ಹೋಗುವ ನಿಕಟಪೂರ್ವದಲ್ಲಿ ಆಕೆ ಪಡೆಯುತ್ತಿದ್ದ ವೇತನಕ್ಕೆ ಸಮನಾದ ರಜಾವೇತನವನ್ನು ನೀಡಲಾಗುವುಗು. (ಕ.ಸ.ಸೇ.ನಿ. 135(1).
ಇದನ್ನು ವೊಕೆಷನ್ ರಜೆ ಅಥವಾ ಇನ್ನಾವುದೇ ರೀತಿಯ ರಜೆಯೊಂದಿಗೆ ಸೇರಿಸಬಹುದು. ವೈದ್ಯಕೀಯ ಪ್ರಮಾಣಪತ್ರವನ್ನು ಹಾಜರುಪಡಿಸದೆ ಇದ್ದರೂ 60 ದಿನಗಳಿಗೆ ಮೀರದಂತೆ ರಜೆಯನ್ನು ಮಂಜೂರು ಮಾಡಬಹುದು (ಕ.ಸ.ಸೇ.ವಿ. 135 (4ಎ) ಪ್ರಸೂತಿ ರಜೆಯನ್ನು ಯಾವುದೇ ರಜೆಯ ಲೆಕ್ಕದಿಂದ ಕಳೆಯತಕ್ಕದ್ದಲ್ಲ. (ಕ.ಸ.ಸೇ.ವಿ. 135 (4ಬಿ).
ಗರ್ಭಸ್ರಾವ ಅಥವಾ ಗರ್ಭಪಾತ ರಜೆ (Medical Termination Leave): ವೈದ್ಯಕೀಯ ಪರ್ಯವಸಾನ ಅಧಿನಿಯಮ 71ರ ಮೇರೆಗೆ ಪ್ರೇರಣೆಯಿಂದ ಮಾಡಿಸಿಕೊಂಡ ಗರ್ಭಪಾತವು ಸೇರಿದಂತೆ ಗರ್ಭಸ್ರಾವ ಅಥವಾ ಗರ್ಭಪಾತವಾದಾಗ ವೈದ್ಯಕೀಯ ಪ್ರಮಾಣ ಪತ್ರದ ಆಧಾರದಿಂದ 2 ಅಥವಾ ಹೆಚ್ಚು ಜೀವಂತ ಮಕ್ಕಳನ್ನು ಹೊಂದಿರದ ವಿವಾಹಿತ ಸರ್ಕಾರಿ ನೌಕರಳಿಗೆ 6 ವಾರಗಳಿಗೆ ಮೀರದಂತೆ ಮಂಜೂರು ಮಾಡಬಹುದು. (ಕ.ಸ.ಸೇ.ವಿ. 135 (2ಎ, ಬಿ, 3)
ಮಗುವನ್ನು ದತ್ತು ತೆಗೆದುಕೊಂಡಾಗ ಮಹಿಳಾ ಸರ್ಕಾರಿ ನೌಕರಳಿಗೆ ರಜೆ Leave to female Govt. Servant on adoption of child): ಎರಡು ಜೀವಂತ ಮಕ್ಕಳನ್ನು ಹೊಂದಿರದ ಮಹಿಳಾ ಸರ್ಕಾರಿ ನೌಕರಳು ಮಗುವೊಂದನ್ನು ದತ್ತು ತೆಗೆದುಕೊಂಡಾಗ ಒಂದು ವರ್ಷದ ಅಥವಾ ದತ್ತಕ ಮಗುವಿಗೆ ಒಂದು ವರ್ಷ ವಯಸ್ಸಾಗುವವರೆಗೆ ಇವುಗಳಲ್ಲಿ ಯಾವುದು ಕಡಿಮೆಯೊ ಆವರೆಗೆ ದೊರೆಯಬಹುದಾದ ಮತ್ತು ಅನುಮತಿಸಬಹುದಾದ ರಜೆಯನ್ನು (60 ದಿನಗಳನ್ನು ಮೀರದಂತೆ, ವೈದ್ಯಕೀಯ ಪ್ರಮಾಣಪತ್ರವನ್ನು ಹಾಜರುಪಡಿಸದೆ ಪರಿವರ್ತಿತ ರಜೆ ಮತ್ತು ಗಳಿಸದ ರಜೆ ಸೇರಿದಂತೆ) ಮಂಜೂರು ಮಾಡಬಹುದು. (ಕ.ಸ.ಸೇ.ವಿ. 135ಎ).
ಪಿತೃತ್ವ ರಜೆ (Paternity Leave): ಎರಡು ಅಥವಾ ಹೆಚ್ಚಿಗೆ ಜೀವಂತ ಮಕ್ಕಳಿಲ್ಲದ ಸರ್ಕಾರಿ ನೌಕರನ ಪತ್ನಿಯ ಹೆರಿಗೆ ಸಂದರ್ಭದಲ್ಲಿ ಹೆರಿಗೆ ದಿನಾಂಕದಿಂದ ಪ್ರಾರಂಭವಾಗುವಂತೆ 15 ದಿನಗಳ ಮೆಟರ್ನಿಟಿ ರಜೆಯನ್ನು ಮಂಜೂರು ಮಾಡಬಹುದು. ಇದನ್ನು ಯಾವುದೇ ರಜಾ ಲೆಕ್ಕದಿಂದ ಕಳೆಯತಕ್ಕದ್ದಲ್ಲ ಹಾಗೂ ಸಾಂರ್ದಭಿಕ ರಜೆ ಹೊರತು ಉಳಿದ ಯಾವುದೇ ರಜೆಯೊಂದಿಗೆ ಸಂಯೋಜಿಸಿಕೊಳ್ಳಬಹುದು. ಈ ರಜೆ ಅವಧಿಯಲ್ಲಿ ರಜೆಗೆ ಹೋಗುವ ನಿಕಟ ಪೂರ್ವದಲ್ಲಿದ್ದಂತೆ ವೇತನವು ಪ್ರಾಪ್ತವಾಗುತ್ತದೆ. ಈ ರಜೆಯನ್ನು ನಗದೀಕರಿಸಿಕೊಳ್ಳಲು ಅಥವಾ ಗಳಿಕೆ ರಜೆಯೊಂದಿಗೆ ಸೇರಿಸಿಕೊಳ್ಳಲು ಆಗುವುದಿಲ್ಲ. ಸಾಮಾನ್ಯವಾಗಿ ಈ ರಜೆಯನ್ನು ನಿರಾಕರಿಸುವಂತಿಲ್ಲ (ಕ.ಸ.ಸೇ.ವಿ. 135 (ಬಿ
ಸರ್ಕಾರಿ ನೌಕರ ತನ್ನ ಕಚೇರಿ ಕೆಲಸದ ನಿರ್ವಹಣೆ ವೇಳೆ ಅಂಗವಿಕಲನಾದರೆ(ಕಾಯಂ ಅಥವಾ ತಾತ್ಕಾಲಿಕ ನೌಕರ)ಅಂಗವೈಕಲ್ಯ ವಿಶೇಷ ರಜೆ ಮಂಜೂರು ಮಾಡಬಹುದು. ವೈಕಲ್ಯ ಸಂಭವಿಸಲು ಕಾರಣವಾದ ಘಟನೆ ನಡೆದ ಮೂರು ತಿಂಗಳ ತರುವಾಯ ವೈಕಲ್ಯ ಕಾಣಿಸಿಕೊಂಡಾಗ ಇದರ ಕಾರಣವು ಸರ್ಕಾರಕ್ಕೆ ಮನದಟ್ಟಾದರೆ ರಜೆಗೆ ಅನುಮತಿ ನೀಡಬಹುದು. ಅಧಿಕೃತ ಮೆಡಿಕಲ್ ಅಟೆಂಡರ್ಗಳು ಅಗತ್ಯವೆಂದು ಪ್ರಮಾಣೀಕರಿಸಿದ ಅವಧಿಗೆ ರಜೆ ಮಂಜೂರು ಮಾಡಬಹುದು. ಆದರೆ ಇದು 24 ತಿಂಗಳನ್ನು ಮೀರತಕ್ಕದ್ದಲ್ಲ. ಇದನ್ನು ಯಾವುದೇ ಇತರ ರಜೆಯೊಂದಿಗೆ ಸೇರಿಸಬಹುದು. ಈ ರಜೆಯನ್ನು ನಿವೃತ್ತಿಗೆ ಸಂಬಂಧಪಟ್ಟಂತೆ ಕರ್ತವ್ಯದ ದಿನಗಳೆಂದು ಪರಿಗಣಿಸಲಾಗುವುದು. ಈ ರಜೆಯ ಯಾವುದೇ ಅವಧಿಯ ಮೊದಲ 120 ದಿನಗಳಿಗೆ ಗಳಿಕೆ ರಜೆಯಲ್ಲಿದ್ದಾಗ ಪಡೆಯುವ ರಜಾವೇತನಕ್ಕೆ ಸಮನಾದ ವೇತನ ದೊರೆಯುವುದು.
ವಿಶೇಷ ರಜೆ: ಪಶು ವೈದ್ಯಕೀಯ ಇಲಾಖೆಯ ಲೈವ್ಸ್ಟಾಕ್ ಫಾರ್ಮ್ಗಳ ತಾತ್ಕಾಲಿಕ ನೌಕರರು ಕರ್ತವ್ಯ ನಿರ್ವಹಿಸುವಾಗ ಗಾಯಗಳಾಗಿ ಕೆಲಸ ಮಾಡಲು ಅಸಮರ್ಥರಾದರೆ (ನಿರ್ಲಕ್ಷತೆಯಿಂದಲ್ಲದೆ) ಕರ್ನಾಟಕ ಪಶು ಸಂಗೋಪನ ನಿರ್ದೇಶಕರು, ಜಿಲ್ಲಾ ವೈದ್ಯಾಧಿಕಾರಿ ಪ್ರಮಾಣಪತ್ರದ ಆಧಾರದ ಮೇಲೆ ಭತ್ಯೆ ಸಹಿತ ರಜೆಯನ್ನು 30 ದಿನಗಳವರೆಗೆ ವಿಶೇಷ ರಜೆ ನೀಡಬಹುದು. ಸ.ಸೇ.ವಿ. 138.
ವೈದ್ಯ ಇಲಾಖೆಯಲ್ಲಿ ರೇಡಿಯಂ ಸಂಪರ್ಕವಿರುವ ಸರ್ಕಾರಿ ನೌಕರನಿಗೆ ಪ್ರತಿ 6 ತಿಂಗಳಿಗೊಮ್ಮೆ 15 ದಿನಗಳಿಗೆ ಮೀರದಂತ ರಜೆ ಮಂಜೂರು ಮಾಡಬಹುದು. ಈ ಅವಧಿಯು ಅರ್ಧ ವೇತನದ ರಜೆಗೆ ಗಣನೆಗೆ ಬರುವುದು. ಆದರೆ ಗಳಿಕೆ ರಜೆಗೆ ಗಣನೆಗೆ ಬರುವುದಿಲ್ಲ. ಈ ರಜೆಯ ಅವಧಿಯಲ್ಲಿ ಗಳಿಕೆ ರಜೆಯ ಕಾಲದಲ್ಲಿ ದೊರೆಯುವಂತೆ ರಜಾ ಭತ್ಯೆಗಳು ದೊರೆಯುವುದು. (ಕ.ಸ.ಸೇ.ವಿ. 139).
ಅರಣ್ಯ ಇಲಾಖೆಯ ಕೆಲವು ಆಯ್ದ ರೇಂಜುಗಳಲ್ಲಿ ಕೆಲಸ ಮಾಡುತ್ತಿರುವ ರೇಂಜರ್, ಫಾರೆಸ್ಟರ್, ಅರಣ್ಯ ರಕ್ಷಕ ಮತ್ತು ಗುಮಾಸ್ತರಿಗೆ ಗಳಿಕೆ ರಜೆ ಜತೆಗೆ ಆರೋಗ್ಯ ಸುಧಾರಣೆಗೆ ಸ್ಥಳ ಬದಲಾಯಿಸಲು ಪ್ರತಿ ವರ್ಷವು ಒಂದು ತಿಂಗಳು ಪೂರ್ಣ ವೇತನ ಸಹಿತ ವಿಶೇಷ ಸ್ಥಳದ ರಜೆ ನೀಡಬಹುದು.
ಅನಧಿಕೃತ ಗೈರು ಹಾಜರಿ: ಸರ್ಕಾರಿ ನೌಕರನು ಸಕ್ಷಮ ಪ್ರಾಧಿಕಾರಿಯ ಮಂಜೂರಾತಿಯಿಲ್ಲದೆ ಕರ್ತವ್ಯಕ್ಕೆ ಗೈರಾಗುವಂತಿಲ್ಲ, ಆದರೆ ನೌಕರನು ತನ್ನ ನಿಯಂತ್ರಣಕ್ಕೆ ಮೀರಿದ ಕಾರಣದಿಂದ ಸಕ್ಷಮ ಪ್ರಾಧಿಕಾರದ ಮಂಜೂರಾತಿಯಿಲ್ಲದೆ ಗೈರಾದ ಬಗ್ಗೆ ತಿಳಿಸಿದಾಗ ಅದನ್ನು ಪರಿಶೀಲಿಸಿ ತೃಪ್ತಿಕರವಾಗಿದೆ ಎಂದು ಪರಿಗಣಿಸಿ ಗೈರು ಅವಧಿಯನ್ನು ನೌಕರನ ಹಕ್ಕಿನಲ್ಲಿರುವ ಯಾವುದಾದರೂ ರಜೆಯನ್ನಾಗಿ ಪರಿವರ್ತಿಸಬಹುದು. ಸಕ್ಷಮ ಪ್ರಾಧಿಕಾರಿಯು ನೌಕರನ ಗೈರಿನ ಕಾರಣ ಒಪ್ಪಿಕೊಳ್ಳದಿದ್ದಲ್ಲಿ ಗೈರು ಅವಧಿಯನ್ನು ಅನಧಿಕೃತ ಗೈರು  ಹಾಜರಿ ಎಂದು ಆದೇಶಿಸಬಹುದು. ಇಂತಹ ಅವಧಿಯಲ್ಲಿ ನೌಕರನಿಗೆ ಯಾವುದೇ ವೇತನ ಭತ್ಯೆಗಳು ಲಭ್ಯವಾಗುವುದಿಲ್ಲ.
ಸರ್ಕಾರಿ ನೌಕರನು ಸಕ್ಷಮ ಪ್ರಾಧಿಕಾರದ ಅನುಮತಿ ಪಡೆದು ರಜೆ ಬಳಸಿಕೊಂಡು, ರಜಾ ಅವಧಿ ಮುಗಿದ ನಂತರ ಕೂಡಲೆ ಕರ್ತವ್ಯಕ್ಕೆ ಹಾಜರಾಗಿದ್ದಾಗಲೂ ಅವಧಿ ಮೀರಿದ ಗೈರು ಹಾಜರಿ ಪ್ರಕರಣ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲೂ ಈ ಮೇಲಿನಂತೆಯೇ ಕ್ರಮ ತೆಗೆದುಕೊಳ್ಳಬಹುದು.
ಕಚೇರಿ ವೇಳೆಯನ್ನು ಎರಡು ಬಾಗಗಳಾಗಿ ವಿಂಗಡಿಸಿರುವಾಗ ಯಾವುದೇ ಒಂದು ಭಾಗದ ಅನಧಿಕೃತ ಗೈರಿಗೆ ಅರ್ಧ ದಿನದ ವೇತನ ಭತ್ಯೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಕಚೇರಿ ಪ್ರಾರಂಭದ ವೇಳೆಯೊಳಗೆ ಹಾಜರಾಗಬೇಕು, ಹತ್ತು ನಿಮಿಷ ತಡವಾದರೆ ಮಾತ್ರ ಸಾಂರ್ದಭಿಕ ವಿನಾಯಿತಿ ಇರುತ್ತದೆ. ಹತ್ತು ನಿಮಿಷಗಳ ನಂತರ ಮಧ್ಯಾಹ್ನ 2 ಗಂಟೆ ಒಳಗೆ ಕಚೇರಿಗೆ ಹಾಜರಾದಾಗ ನೌಕರನು 1/2 ದಿನದ ಸಾಂರ್ದಭಿಕ ರಜೆ ಕಳೆದುಕೊಳ್ಳುತ್ತಾನೆ. ನೌಕರನ ಹಕ್ಕಿನಲ್ಲಿ ಸಾಂರ್ದಭಿಕ ರಜೆ ಇಲ್ಲದಿದ್ದರೆ ಹಕ್ಕಿನಲ್ಲಿರುವ ಒಂದು ದಿನದ ಗಳಿಕೆ ರಜೆ ಅಥವಾ ಇತರೆ ರಜೆ ಕಳೆದುಕೊಳ್ಳಬೇಕಾಗುತ್ತದೆ. (ಕ.ಸ.ಸೇ.ನಿ. 106ಎ)
ಮುಷ್ಕರದ ಕಾರಣದಿಂದ ಕರ್ತವ್ಯಕ್ಕೆ ಗೈರಾದ ಸರ್ಕಾರಿ ನೌಕರನು ಯಾವುದೇ ರಜೆಗೆ ಹಕ್ಕು ಹೊಂದಿರುವುದಿಲ್ಲ, ಹಾಗೂ ತನ್ನ ಲೆಕ್ಕದಲ್ಲಿರುವ ಎಲ್ಲಾ ಬಗೆಯ ರಜೆ ಕಳೆದುಕೊಳ್ಳುತ್ತಾನೆ.(ಕ.ಸ.ಸೇ.ನಿ. 106,  ಬಿ

Thursday, October 25, 2018

**RSGE**::: ಸರ್ಕಾರಿ ಕಾರ್ನರ್​

ಭೂಮಾಪನ ಇಲಾಖೆಯಲ್ಲಿ ಭೂಮಾಪಕರಾಗಿದ್ದ ನನ್ನ ತಂದೆ 2018ರ ಆ.18ರಂದು ಆಕಸ್ಮಿಕವಾಗಿ ನಿಧನರಾದರು. ನಾನು ಸ್ನಾತಕೋತ್ತರ ಪದವೀಧರನಾಗಿದ್ದು, ಪ್ರಥಮ ದರ್ಜೆ ಸಹಾಯಕ ಹುದ್ದೆ ನೀಡಲು ಕೋರಿದಾಗ ಸಕ್ಷಮ ಅಧಿಕಾರಿಯು ದ್ವಿತೀಯ ದರ್ಜೆ ಸಹಾಯಕ ಹುದ್ದೆ ಅಂಗೀಕರಿಸಿದ್ದಾರೆ. ಸದ್ಯ ದ್ವಿತೀಯ ದರ್ಜೆ ಸಹಾಯಕನಾಗಿರುವ ನಾನು ಪ್ರಥಮದರ್ಜೆ ಸಹಾಯಕ ಹುದ್ದೆಗೆ ನಿಯೋಜಿಸುವಂತೆ ಮತ್ತೆ ಮನವಿ ಸಲ್ಲಿಸಬಹುದೇ? ಇಲಾಖೆ ಕೈಗೊಂಡ ನಿರ್ಧಾರ ಕ್ರಮಬದ್ಧವಾಗಿದೆಯೇ?
| ಬಿ.ಕೆ. ಕುಲಕರ್ಣಿ ವಿಜಯಪುರ
ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಮೇರೆಗೆ ನೇಮಕ) ನಿಯಮಾವಳಿ 1996ರ ನಿಯಮ 3ರ ಪ್ರಕಾರ ಅನುಕಂಪದ ಮೇರೆಗೆ ನೇಮಕವಾಗಲು ನಿಗದಿತ ವಿದ್ಯಾರ್ಹತೆ ಹೊಂದಿದ್ದರೆ ಅರ್ಹರಾಗುತ್ತಾರೆ. 2017ರ ಅ.27ರ ಸರ್ಕಾರಿ ಸುತ್ತೋಲೆ ಸಂಖ್ಯೆ ಸಿಆಸುಇ 105, ಸೇಅನೇ 2017ರ ಪ್ರಕಾರ ಅನುಕಂಪದ ಆಧಾರದ ಮೇಲೆ ನೇಮಕಾತಿ ಸಂದರ್ಭ ಅರ್ಜಿದಾರರ ಅರ್ಜಿ ಪರಿಗಣಿಸುವಾಗ ಆತನ ವಿದ್ಯಾರ್ಹತೆಗೆ ಅನುಸಾರವಾಗಿಯೇ ಗ್ರೂಪ್ ಸಿ ಅಥವಾ ಡಿ ಹುದ್ದೆಗೆ ನೇಮಕಾತಿ ಆದೇಶ ಹೊರಡಿಸಬೇಕೆಂದು ಸೂಚಿಸಲಾಗಿರುತ್ತದೆ. ಹಾಗಾಗಿ ನೀವು ಮತ್ತೆ ನೇಮಕಾತಿ ಪ್ರಾಧಿಕಾರಕ್ಕೆ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಮರು ನೇಮಕ ಮಾಡಿಕೊಳ್ಳುವಂತೆ ಮನವಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ’ ಪುಸ್ತಕ ನೋಡಬಹುದು.

**RSGE**::: ಸರ್ಕಾರಿ ಕಾರ್ನರ್​

ನಾನು 3 ವರ್ಷದಿಂದ ಬಳ್ಳಾರಿ ನ್ಯಾಯಾಂಗ ಇಲಾಖೆಯಲ್ಲಿ ಬೆರಳಚ್ಚು ನಕಲುಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಈಗ ಕೆಪಿಎಸ್​ಸಿ ನಡೆಸಿದ ಪರೀಕ್ಷೆಯಲ್ಲಿ ಬೆರೆಳಚ್ಚುಗಾರ ಹುದ್ದೆಗೆ ಆಯ್ಕೆ ಆಗಿದ್ದು, ಒಂದು ವೇಳೆ ಕಾರಣಾಂತರದಿಂದ ಈ ಹುದ್ದೆ ರದ್ದುಪಡಿಸಿದರೆ ನಾನು ನ್ಯಾಯಾಂಗ ಇಲಾಖೆಗೆ ಮರಳಿ ಕರ್ತವ್ಯಕ್ಕೆ ಹಾಜರಾಗಬಹುದೇ? ಎಷ್ಟು ವರ್ಷಗಳ ಒಳಗೆ ನ್ಯಾಯಾಂಗ ಇಲಾಖೆಗೆ ಮರಳಲು ಅವಕಾಶವಿರುತ್ತದೆ?
| ಎಚ್. ಆನಂದ್ ಗಂಗಾವತಿ, ಕೊಪ್ಪಳ
ಕರ್ನಾಟಕ ಸರ್ಕಾರಿ ಸೇವಾ (ನೇರ ನೇಮಕಾತಿ) ನಿಯಮಾ ವಳಿಯ 1977ರ ನಿಯಮ 11ರ ಮೇರೆಗೆ ನೀವು ಅನುಮತಿ ಪಡೆದು ಅರ್ಜಿ ಸಲ್ಲಿಸಿ ಬೆರಳಚ್ಚುಗಾರ ಹುದ್ದೆಗೆ ಆಯ್ಕೆಯಾದರೆ ಈ ಹುದ್ದೆಯ ಆದೇಶ ಪಡೆದ ಮೇಲೆ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 252ಬಿ ರಂತೆ ಕರ್ತವ್ಯ ದಿಂದ ಬಿಡುಗಡೆ ಹೊಂದಬೇಕಾಗುತ್ತದೆ. ಹೀಗೆ ಬಿಡುಗಡೆ ಹೊಂದುವ ಮೊದಲು ನೀವು ನಿಮ್ಮನೇಮಕಾತಿ ಪ್ರಾಧಿಕಾರಕ್ಕೆ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 2ರ ಮೇರೆಗೆ ನಿಮ್ಮ ಹುದ್ದೆಯ ಹಕ್ಕನ್ನು (ಲೀನ್) 2 ವರ್ಷದ ವರೆಗೆ ಕಾಯ್ದಿರಿಸಬೇಕೆಂದು ವಿನಂತಿಸಬೇಕು. ಆಕಸ್ಮಿಕವಾಗಿ ಕೆಪಿಎಸ್​ಸಿಯ ಬೆರಳಚ್ಚುಗಾರರ ಹುದ್ದೆ ರದ್ದಾದಲ್ಲಿ 2 ವರ್ಷದ ಒಳಗೆ ನೀವು ಪುನಃ ನ್ಯಾಯಾಂಗ ಇಲಾಖೆಗೆ ಮರಳಿ ಕರ್ತವ್ಯಕ್ಕೆ ಹಾಜರಾಗಬಹುದು. ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕ ನೋಡಬಹುದು.

ಬಡ್ತಿ ಮೀಸಲು ಕಾಯ್ದೆಗೆ ತಕರಾರು,

ಎಸ್ಸಿ-ಎಸ್ಟಿ ಸರ್ಕಾರಿ ನೌಕರರ ಹಿತರಕ್ಷಣೆ ಹೆಸರಲ್ಲಿ ಸರ್ಕಾರ ಜಾರಿಗೆ ತಂದಿದ್ದ ಕಾಯ್ದೆ ನ್ಯಾಯಾಂಗದ ಅಧಿಕಾರವನ್ನು ಕಿತ್ತುಕೊಂಡಿದೆ. ಎಂ. ನಾಗರಾಜ್ ಪ್ರಕರಣಕ್ಕೆ ಸಂಬಂದಿಸಿ ಸೆ.26ರಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಬಡ್ತಿ ಮೀಸಲಾತಿಯಲ್ಲಿ ಕೆನೆಪದರ ತತ್ವ ಅಳವಡಿಸ ಬೇಕು ಎಂದು ತೀರ್ಪು ನೀಡಿದ್ದು, ಈ ಪ್ರಕರಣ ವನ್ನು ಆ ತೀರ್ಪಿನ ವ್ಯಾಪ್ತಿಯಲ್ಲೇ ನೋಡಬೇಕು ಎಂದು ಅರ್ಜಿದಾರ ಬಿ.ಕೆ. ಪವಿತ್ರ ಪರ ವಕೀಲ ರಾಜೀವ್ ಧವನ್ ವಾದ ಮಂಡಿಸಿದ್ದಾರೆ.
ಬಡ್ತಿ ಮೀಸಲಾತಿ ಹೊಂದಿರುವ ಸರ್ಕಾರಿ ನೌಕರರಿಗೆ ಜ್ಯೇಷ್ಠತೆ ವಿಸ್ತರಿಸುವ ಕುರಿತ ಸರ್ಕಾರದ ನೂತನ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ವೇಳೆ ಕೆಲ ವಿಚಾರ ಗಳನ್ನು ಮುಂದಿಟ್ಟ ವಕೀಲ ಧವನ್, ಬಡ್ತಿ ಮೀಸಲಾತಿ ನೀಡುವಾಗ ಎಸ್ಸಿ-ಎಸ್ಟಿ ಸಮುದಾಯದ ನೌಕರನ ಆಡಳಿತ ದಕ್ಷತೆ, ಹಿಂದುಳಿದಿರುವಿಕೆ, ಸಮುದಾಯಗಳಿಗೆ ಸಿಕ್ಕಿರುವ ಪ್ರಾತಿನಿಧ್ಯಗಳಂತಹ ಮಾನದಂಡಗಳನ್ನು ಅನುಸರಿಸಬೇಕು. ಇದನ್ನು 2006ರ ಎಂ. ನಾಗರಾಜ್ ತೀರ್ಪಿನಲ್ಲೂ ಹೇಳ ಲಾಗಿತ್ತು. ಕಳೆದ ತಿಂಗಳು ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠದ ತೀರ್ಪಿನಲ್ಲೂ ಪುನರುಚ್ಚರಿಸಲಾಗಿದ್ದು, ಕೆನೆಪದರ ತತ್ವ ಅಳವಡಿಸಿಕೊಳ್ಳುವ ಬಗ್ಗೆ ಒತ್ತಿ ಹೇಳಲಾಗಿದೆ ಎಂದು ನ್ಯಾಯಮೂರ್ತಿ ಉದಯ್ ಲಲಿತ್ ಮತ್ತು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ವಿಭಾಗೀಯ ಪೀಠದ ಗಮನಸೆಳೆದರು.
ಈ ಮೊದಲು ನೂತನ ಕಾಯ್ದೆ ಜಾರಿಗೆ ಕ್ರಮ ಕೈಗೊಳ್ಳದೆ ಯಥಾಸ್ಥಿತಿ ಕಾಯ್ದುಕೊಳ್ಳಲಾಗುವುದು ಎಂದಿದ್ದ ಸರ್ಕಾರ, ಕಳೆದ ವಿಚಾರಣೆ ವೇಳೆ ಮೌಖಿಕ ಭರವಸೆಯನ್ನು ಹಿಂತೆಗೆದುಕೊಳ್ಳಲಾಗುವುದು ಎಂಬ ಹೇಳಿಕೆ ನೀಡಿ ದ್ವಂದ್ವ ನೀತಿ ಅನುಸರಿಸಿತು ಎಂದು ಆರೋಪಿಸಿದ ಅವರು, ಸರ್ಕಾರಿ ನೇಮಕಾತಿಗಳಲ್ಲಿ ಮೀಸಲಾತಿ ನೀತಿ ಅಳವಡಿಸಿಕೊಳ್ಳುವುದು ತಪ್ಪೇನಲ್ಲ. ರೋಸ್ಟರ್, ಬ್ಯಾಕ್​ಲಾಗ್ ನಿಯಮ ಗಳನ್ನೂ ನಾವು ವಿರೋಧಿಸಿಲ್ಲ. ಕೆಳ ಹಂತದ ಹುದ್ದೆಗಳ ನೇರ ನೇಮಕಾತಿ ಹಾಗೂ ಕೆಳ ಹಂತದ ನೌಕರರ ನೇಮಕಾತಿಗೆ ಬಡ್ತಿ ಮೀಸಲಾತಿ ನೀತಿ ಅನುಸರಿಸಿ, ಕೆನೆಪದರದ ನಿಯಮ ಅಳವಡಿಸಿಕೊಳ್ಳುವುದಕ್ಕೆ ತಕರಾರಿಲ್ಲ ಎಂದು ವಿವರಿಸಿದರು. 3 ಗಂಟೆ ವಾದಿಸಿದ ಧವನ್, ಪ್ರಕರಣಕ್ಕೆ ಪೂರಕವಾಗಿರುವ ಹಿಂದಿನ ಅನೇಕ ತೀರ್ಪಗಳನ್ನು ಉಲ್ಲೇಖಿಸಿದರು. ಬುಧವಾರವೂ ವಾದ ಮುಂದುವರಿಸಲಿದ್ದಾರೆ. ನಂತರ ರಾಜ್ಯ ಸರ್ಕಾರ ಮತ್ತು ಎಸ್ಸಿ-ಎಸ್ಟಿ ನೌಕರರ ಪರ ವಕೀಲರು ಅವರ ವಿಚಾರಗಳನ್ನು ನ್ಯಾಯಪೀಠದ ಮುಂದೆ ಪ್ರಸ್ತುತಪಡಿಸಲಿದ್ದಾರೆ.

Wednesday, October 17, 2018

**RSGE**::: ನೌಕರರಿಗೆ ಮುಂಬಡ್ತಿ ಮರೀಚಿಕೆ,

5000 ಹುದ್ದೆಗಳಿಗೆ ಬಡ್ತಿ ಸ್ಥಗಿತ | ನಿವೃತ್ತಿ ಅಂಚಿನಲ್ಲಿರುವವರಿಗೆ ಸಂಕಟ >>
| ರುದ್ರಣ್ಣ ಹರ್ತಿಕೋಟೆ
ಬೆಂಗಳೂರು: ಬಡ್ತಿ ಮೀಸಲಾತಿ ವಿಷಯದಲ್ಲಿ ಸರ್ಕಾರ ಯಾವುದೇ ತೀರ್ವನಕ್ಕೆ ಬರಲು ಸಾಧ್ಯವಾಗದ್ದರಿಂದ ಸರ್ಕಾರಿ ನೌಕರರು ಮುಂಬಡ್ತಿ ಇಲ್ಲದೆ ನಿವೃತ್ತರಾಗುತ್ತಿರುವ ಪರಿಸ್ಥಿತಿ ನಿರ್ವಣವಾಗಿದೆ. ಅ. 23ರ ಸುಪ್ರೀಂಕೋರ್ಟ್ ತೀರ್ಪಿಗಾಗಿ ಎದುರು ನೋಡುತ್ತಿರುವ ನೌಕರರು ನಿಯಮ 32 ಜಾರಿಗೆ ಒತ್ತಾಯಿಸಿದ್ದಾರೆ. ರಾಜ್ಯದ ಎಲ್ಲ ಇಲಾಖೆಗಳಲ್ಲಿ ಸುಮಾರು 5 ಸಾವಿರ ಹುದ್ದೆಗಳ ಬಡ್ತಿ ಪ್ರಕ್ರಿಯೆ 19 ತಿಂಗಳಿನಿಂದ ಸ್ಥಗಿತವಾಗಿದ್ದು, ನೂರಾರು ನೌಕರರು ಕನಿಷ್ಠ ಒಂದು ಬಡ್ತಿಯೂ ಇಲ್ಲದೆ ವಂಚಿತರಾಗುತ್ತಿದ್ದಾರೆ.
ಬಡ್ತಿ ಮೀಸಲಾತಿ ವಿಚಾರದಲ್ಲಿ ಸುಪ್ರೀಂಕೋರ್ಟ್​ನಲ್ಲಿನ ಪ್ರಕರಣ ಮುಂದಕ್ಕೆ ಹೋಗುತ್ತಿರುವುದರಿಂದ ನಿವೃತ್ತಿ ಅಂಚಿನಲ್ಲಿನ ನೌಕರರಿಗೆ ಬಡ್ತಿ ಮರೀಚಿಕೆಯಾಗಿದೆ. ಸರ್ಕಾರಕ್ಕೆ ಸುಪ್ರೀಂಕೋರ್ಟ್ ತೀರ್ಪು ಹಾಗೂ ರಾಷ್ಟ್ರಪತಿ ಅಂಕಿತ ಹಾಕಿರುವ ಕಾನೂನು ಅತ್ತ ಧರಿ ಇತ್ತ ಪುಲಿ ಎಂಬ ವಾತಾವರಣ ಸೃಷ್ಟಿಸಿದ್ದರಿಂದ ಬಡ್ತಿ ಪ್ರಕ್ರಿಯೆ ತಡೆಹಿಡಿದಿದೆ.
ಬಡ್ತಿಗೆ ತಡೆ: ಕಳೆದ ವರ್ಷ ಪವಿತ್ರಾ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪು ಹೊರಬೀಳುತ್ತಿದ್ದಂತೆ, 2017ರ ಮಾ.22ರಂದು 6 ತಿಂಗಳ ಅವಧಿಗೆ ಸರ್ಕಾರ ಬಡ್ತಿ ಸ್ಥಗಿತಗೊಳಿಸಿತ್ತು. ಬಳಿಕ ಸೆಪ್ಟೆಂಬರ್​ನಲ್ಲಿ 15 ದಿನಗಳ ಅವಧಿಗೆ ಬಡ್ತಿಗೆ ತಡೆ ಮುಂದುವರಿಸಲಾಯಿತು. 2018ರ ಜನವರಿಯಲ್ಲಿ ಮತ್ತೆ 15 ದಿನಗಳ ಕಾಲ ಬಡ್ತಿ ನೀಡುವುದಕ್ಕೆ ತಡೆ ಅವಧಿ ವಿಸ್ತರಿಸಲಾಯಿತು. ನೌಕರರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ನ್ಯಾಯಾಲಯದ ಮುಂದೆ ಸರ್ಕಾರ ಸರಿಯಾಗಿ ಮನವರಿಕೆ ಮಾಡುತ್ತಿಲ್ಲ ಎಂಬುದು ನೌಕರರ ಕೂಗು.
ನಿವೃತ್ತಿ ಅಂಚಿನವರಿಗೆ ಸಮಸ್ಯೆ: ಪ್ರತಿ ವರ್ಷ ಸುಮಾರು 15 ಸಾವಿರ ನೌಕರರು ನಿವೃತ್ತರಾಗುತ್ತಾರೆ. ಇದರಲ್ಲಿ ಬಹುತೇಕರಿಗೆ ಒಂದು ಬಡ್ತಿಯೂ ಸಿಕ್ಕಿರುವುದಿಲ್ಲ. ಒಂದಾದರೂ ಮುಂಬಡ್ತಿ ಸಿಕ್ಕರೆ ನಿವೃತ್ತಿ ವೇತನ ಹಾಗೂ ಸೌಲಭ್ಯದಲ್ಲಿ ಒಂದಷ್ಟು ಅನುಕೂಲವಾಗುತ್ತದೆ ಎಂಬುದು ನೌಕರರ ಉದ್ದೇಶ. ಕಳೆದ ವರ್ಷ ಸಚಿವಾಲಯದಲ್ಲೇ 150 ನೌಕರರು ಬಡ್ತಿ ಇಲ್ಲದೆ ನಿವೃತ್ತರಾಗಿ ದ್ದಾರೆ. ಈ ವರ್ಷ ಏಪ್ರಿಲ್​ನಿಂದ ನಿವೃತ್ತರಾದವರಲ್ಲಿ 40ಕ್ಕೂ ಹೆಚ್ಚು ಜನ ಬಡ್ತಿ ವಂಚಿತರಿದ್ದಾರೆ. ಸರ್ಕಾರದ ಮಟ್ಟದಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಾಗಿದೆ.
ಏಕ ಆದೇಶ?
ಬಡ್ತಿ ಪ್ರಕ್ರಿಯೆ ಸ್ಥಗಿತವಾಗಿದ್ದರೂ ಕೆಲ ಇಲಾಖೆಗಳಲ್ಲಿ ಏಕ ಆದೇಶ (ಸಿಂಗಲ್ ಆರ್ಡರ್) ಹೊರಡಿಸಿರುವ ಉದಾಹರಣೆ ಗಳಿವೆ. ಆದ್ದರಿಂದಲೇ ನೌಕರರು ನಿವೃತ್ತಿಗೆ ಮುನ್ನ ನಿಯಮ 32 ಅನ್ವಯ ಬಡ್ತಿ ನೀಡಿ ಎಂದು ಮುಖ್ಯ ಕಾರ್ಯದರ್ಶಿ ಮುಂದೆ ಬೇಡಿಕೆ ಇಟ್ಟಿದ್ದಾರೆ. ನಿವೃತ್ತಿಯ ಕೊನೇ ದಿನವೂ ಬಡ್ತಿ ಪಡೆಯಲು ಅವಕಾಶಗಳಿವೆ. ಆದ್ದರಿಂದ ನ್ಯಾಯಾಲಯದ ತೀರ್ಪು ಏನಾದರೂ ಬರಲಿ, ಮುಂಬಡ್ತಿ ಅವಕಾಶ ಒದಗಿಸಿ ಎಂದು ಕೋರಿದ್ದಾರೆ. ಆದರೆ ನ್ಯಾಯಾಲಯದ ಭಯದಲ್ಲಿರುವ ಮುಖ್ಯ ಕಾರ್ಯದರ್ಶಿ ಏನನ್ನೂ ನಿರ್ಧರಿಸುತ್ತಿಲ್ಲ. ಸುಪ್ರೀಂಕೋರ್ಟ್ ಅ.23ರಂದು ಸ್ಪಷ್ಟ ಆದೇಶ ನೀಡಬಹುದು ಎಂಬುದು ನೌಕರರ ಆಶಯ.
ಸಾಕಷ್ಟು ಬಡ್ತಿ ಹುದ್ದೆಗಳು ಖಾಲಿ ಇವೆ. ಅ.23ರಂದು ನ್ಯಾಯಾಲಯದಲ್ಲಿ ಸ್ಪಷ್ಟ ಆದೇಶ ಹೊರಬಿದ್ದರೆ ಸಮಸ್ಯೆ ಬಗೆಹರಿಯಲಿದೆ.
| ಟಿ.ಎಂ. ವಿಜಯಭಾಸ್ಕರ್, ಮುಖ್ಯ ಕಾರ್ಯದರ್ಶಿ
ಅರ್ಹರಿಗೆ ಮುಂಬಡ್ತಿಯಲ್ಲಿ ಯಾವುದೇ ಅನ್ಯಾಯ ಆಗಬಾರದು. ನಿವೃತ್ತಿ ಅಂಚಿನಲ್ಲಿರುವವರು ಬಡ್ತಿಯಿಂದ ವಂಚಿತರಾಗದಂತೆ ಸರ್ಕಾರ ಕ್ರಮ ಕೈಗೊಳ್ಳಲಿ.
| ಪಿ. ಗುರುಸ್ವಾಮಿ, ಅಧ್ಯಕ್ಷ, ಸಚಿವಾಲಯ ನೌಕರರ ಸಂಘ
ಮುಂಬಡ್ತಿಗೆ ಅರ್ಹರಾಗಿರುವ ನೌಕರರಿಗೆ ಅನ್ಯಾಯವಾಗುತ್ತಿದೆ. ಆದಷ್ಟು ಬೇಗ ನೌಕರರಿಗೆ ನ್ಯಾಯ ದೊರಕಬೇಕು.
| ಮಹದೇವಯ್ಯ ಮಠಪತಿ, ಅಧ್ಯಕ್ಷ, ಸರ್ಕಾರಿ ನೌಕರರ ಒಕ್ಕೂಟ
ರಕ್ಷಣೆ ಕಾಯ್ದೆ ಅನುಷ್ಠಾನಕ್ಕೆ ಮುಂದಾದ ರಾಜ್ಯ ಸರ್ಕಾರ
ಬೆಂಗಳೂರು: ಬಡ್ತಿ ಕಾನೂನನ್ನು ತಕ್ಷಣದಿಂದಲೇ ಅನುಷ್ಠಾನಗೊಳಿಸುವಂತೆ ಸರ್ಕಾರದ ಕಾಂಗ್ರೆಸ್ ಕಡೆಯಿಂದ ಒತ್ತಡ ಹೆಚ್ಚಾಗಿದೆ. ಸರ್ಕಾರವೂ ವಕೀಲರ ಅಭಿಪ್ರಾಯ ಪಡೆದು ಕಾನೂನು ಜಾರಿಗೆ ಮುಂದಾಗಿದೆ. ಶೇ.18:82ರ ಸೂತ್ರದಂತೆ ಬಡ್ತಿ ಹಂಚಿಕೆಗೆ ಎಸ್ಸಿ- ಎಸ್ಟಿ ಹಾಗೂ ಸಾಮಾನ್ಯ ವರ್ಗದ ಸಂಘಟನೆಗಳ ನಡುವೆ ಒಮ್ಮತ ಮೂಡುತ್ತಿರುವಾಗಲೇ, ಅ.23ರೊಳಗೆ ಕಾನೂನು ಜಾರಿಗೆ ಎಸ್ಸಿ-ಎಸ್ಟಿ ನೌಕರರ ಒಂದು ತಂಡ ಒತ್ತಡ ತರುತ್ತಿದೆ. ಹೀಗಾಗಿ ಸುಪ್ರೀಂಕೋರ್ಟ್​ನಲ್ಲಿ ರಾಜ್ಯ ಸರ್ಕಾರವನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಮುಕುಲ್ ರೋಹ್ಟಗಿ ಜತೆ ಅಧಿಕಾರಿಗಳು ರ್ಚಚಿಸಿದ್ದು, ಬಡ್ತಿ ರಕ್ಷಿಸುವ ಕಾನೂನನ್ನು ಸುಪ್ರೀಂಕೋರ್ಟ್ ಸೂಚನೆ ಪಕ್ಕಕ್ಕಿಟ್ಟು ಜಾರಿ ಮಾಡುವ ಬಗ್ಗೆ ಚಿಂತಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಸಿಎಂ ಸೂಚನೆ ಮೇರೆಗೆ ಸಿಎಸ್ ಮತ್ತು ಇತರ ಉನ್ನತ ಅಧಿಕಾರಿಗಳು ಸಭೆ ನಡೆಸಿದ್ದು, ಮುಂದಾಗುವ ಸವಾಲಿನ ಬಗ್ಗೆ ರ್ಚಚಿಸಿದ್ದಾರೆಂದು ತಿಳಿದುಬಂದಿದೆ. ಹೊಸ ಕಾನೂನು ಜಾರಿಮಾಡಿ, ಮುಂದಿನದನ್ನು ನಾವು ನೊಡಿಕೊಳ್ಳುತ್ತೇವೆ ಎಂದು ಸರ್ಕಾರವನ್ನು ಪ್ರತಿನಿಧಿಸುವ ದೆಹಲಿಯ ಹಿರಿಯ ವಕೀಲರು ಅಭಿಪ್ರಾಯ ನೀಡಿದ್ದು, ಲಿಖಿತ ಅಭಿಪ್ರಾಯ ಕೊಡುವುದಕ್ಕೂ ಮುಂದಾಗಿದ್ದಾರೆನ್ನಲಾಗಿದೆ. ಕಾಯ್ದೆ ಅನುಷ್ಠಾನಕ್ಕೆ ಅಭಿಪ್ರಾಯಪಡೆದುಕೊಳ್ಳಲು ರಾಜ್ಯ ಸರ್ಕಾರದ ಕಾನೂನು ಪ್ರತಿನಿಧಿಗಳು ದೆಹಲಿ ವಕೀಲರಿಗೆ ಪತ್ರ ಬರೆದಿದ್ದು, ಅಲ್ಲಿಂದ ಪತ್ರ ಬರುತ್ತಿದ್ದಂತೆ ಕಾನೂನು ಜಾರಿ ಮಾಡಲು ನಿರ್ಧರಿಸಲಾಗಿದೆ.
ಆಯೋಗಕ್ಕೂ ದೂರು
ಉಪ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರು ವುದರಿಂದ ಈ ಕಾನೂನು ಜಾರಿಗೆ ಅವಕಾಶ ಮಾಡಿಕೊಡದಂತೆ ಚುನಾವಣೆ ಆಯೋಗ, ಸಿಎಂ ಮತ್ತು ಸರ್ಕಾರದ ಮುಖ್ಯಕಾರ್ಯದರ್ಶಿ ಅವರಿಗೆ ಅಹಿಂಸಾ ಸಂಘಟನೆ ಮನವಿ ಸಲ್ಲಿಸಿದೆ. ಕಾನೂನು ಜಾರಿ ಮಾಡಿದರೆ ತಕ್ಷಣ ಹೋರಾಟಕ್ಕಿಳಿಯುವ ಎಚ್ಚರಿಕೆಯನ್ನೂ ನೀಡಿದೆ.
ಅನುಷ್ಠಾನವೂ ಸುಲಭವಲ್ಲ
ಒಂದು ವೇಳೆ ಸರ್ಕಾರ ಹೊಸ ಕಾನೂನು ಜಾರಿ ಮಾಡಿದರೆ 2017ರ ಫೆ.9ರ ನಂತರ ಹೊರಡಿಸಿದ ಹಿಂಬಡ್ತಿ- ಮುಂಬಡ್ತಿ ಆದೇಶವೆಲ್ಲ,  ರದ್ದಾಗುತ್ತದೆ. ಅಲ್ಲದೆ ಹೊಸದಾಗಿ ಎಲ್ಲ ಇಲಾಖೆಯ ಜ್ಯೇಷ್ಠತಾ ಪಟ್ಟಿ ಮಾಡಿ, ಆಕ್ಷೇಪಣೆ ಕರೆದು ಮುಂಬಡ್ತಿ ನೀಡಬೇಕಾಗುತ್ತದೆ. ಈ ಪ್ರಕ್ರಿಯೆ ತಕ್ಷಣಕ್ಕೆ ಮುಗಿಯುವ ಕೆಲಸವೂ ಅಲ್ಲ.

Friday, October 12, 2018

**RSGE**::: ಪ್ರಾಂಶುಪಾಲರ ವಿರುದ್ಧ ಕ್ರಮಕ್ಕೆ ಸರ್ಕಾರ ಆದೇಶ

ಹುಬ್ಬಳ್ಳಿ ಆರ್ಯುವೇದ ಮಹಾವಿದ್ಯಾಲಯದಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಬೋಧಕ, ಬೋಧಕೇತರ ಹುದ್ದೆಗಳ ಭರ್ತಿ ಸಂದರ್ಭ ಮೀಸಲಾತಿ ನಿಯಮಗಳನ್ನು ಗಾಳಿಗೆ ತೂರಿರುವವರ ವಿರುದ್ಧ ಕೂಡಲೇ ಕ್ರಿಮಿನಲ್ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಸರ್ಕಾರ ಆದೇಶಿಸಿದೆ.
ನೇರ ನೇಮಕಾತಿ ಮತ್ತು ಮುಂಬಡ್ತಿ ಮೂಲಕ ಖಾಲಿ ಹುದ್ದೆ ಭರ್ತಿ ಮಾಡುವಾಗ ಮೀಸಲಾತಿ ನಿಯಮ ಉಲ್ಲಂಘಿಸಿರುವ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಆಯುಕ್ತರು ತನಿಖೆ ನಡೆಸಿ ನೀಡಿರುವ ವರದಿ ಹಿನ್ನೆಲೆಯಲ್ಲಿ ಸಂಸ್ಥೆಯ ಪ್ರಾಂಶುಪಾಲ ಮತ್ತು ಕಾರ್ಯದರ್ಶಿ ವಿರುದ್ದ ಎಸ್ಸಿ-ಎಸ್ಟಿ, ಹಿಂದುಳಿದ ವರ್ಗಗಳ ನಿಯಮ 2000ರ ನಿಯಮಗಳ ಕಲಂ 5ರ ಪ್ರಕಾರ ಕ್ರಮ ಜರುಗಿಸುವಂತೆ ಆದೇಶದಲ್ಲಿ (ಸಂಖ್ಯೆ: ಸಕಿ 37 ಎಸ್ಟಿಸಿ 2018) ತಿಳಿಸಲಾಗಿದೆ. ಅಲ್ಲದೆ, ಸದರಿ ಸಂಸ್ಥೆಗೆ ನೀಡಲಾಗುತ್ತಿರುವ ಅನುದಾನ ತಡೆ ಹಿಡಿಯಬೇಕು ಎಂದು ಆದೇಶಿಸಲಾಗಿದೆ.
1986ನೇ ಸಾಲಿನಿಂದ ಈ ತನಕವೂ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡುವಾಗ ಮೀಸಲಾತಿ ನಿಯಮ ಉಲ್ಲಂಘನೆಯಾಗಿರುವ ಬಗ್ಗೆ ಹಿರಿಯ ಪತ್ರಕರ್ತ ಭೋಜಶೆಟ್ಟರ ಸರ್ಕಾರಕ್ಕೆ ದೂರು ಸಲ್ಲಿಸಿ ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿ, ಕ್ರಿಮಿನಲ್ ಪ್ರಕರಣ ದಾಖಲು ಮಾಡಲು ಆದೇಶಿಸಲಾಗಿತ್ತು.
ಪ್ರಕರಣ ಮುಚ್ಚಿಹಾಕಲು ಪ್ರಯತ್ನ
ಮೀಸಲು ನಿಯಮ ಉಲ್ಲಂಘನೆ ಗಂಭೀರ ಪ್ರಕರಣ ವಾಗಿದ್ದರೂ ರಾಜಕೀಯ ಪ್ರಭಾವ ಬಳಸಿ ಪ್ರಕರಣ ಮುಚ್ಚಿ ಹಾಕುವ ಮೂಲಕ ಸಂಸ್ಥೆ ಪ್ರಾಂಶುಪಾಲ, ಕಾರ್ಯದರ್ಶಿ ರಕ್ಷಣೆಗೆ ತೆರೆಮರೆ ಪ್ರಯತ್ನ ನಡೆಯುತ್ತಿದೆ ಎಂದು ಭೋಜಶೆಟ್ಟರ ದೂರಿದ್ದಾರೆ. ಕೆಲ ಪಟ್ಟಭದ್ರರ ಹಿತಾಸಕ್ತಿಗೆ ಮಣಿದು ಕ್ರಿಮಿನಲ್ ಪ್ರಕರಣ ದಾಖಲು ಮಾಡದೆ ಮೀನಮೇಷ ಎಣಿಸುತ್ತಿರುವ ಸರ್ಕಾರ, ಈಗಲಾದರೂ ಕ್ರಮ ಕೈಗೊಳ್ಳಬೇಕು.  ಇಲ್ಲದಿದ್ದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಕೆ ನೀಡಿದ್ದಾರೆ.
ಮುಂಬಡ್ತಿ ರಕ್ಷಿಸುವ ಕಾಯ್ದೆ ಜಾರಿ ಮಾಡುವುದಾಗಿ ಸರ್ಕಾರದ ವತಿಯಿಂದ ಸಲ್ಲಿಸುವ ಅಫಿಡವಿಟ್​ಗೆ ಸಿಎಂ ಗುರುವಾರ ಸಹಿ ಮಾಡಿ ಕಳಿಸಿಕೊಟ್ಟಿದ್ದರು. ನ್ಯಾಯಾಲಯದಲ್ಲಿ ಯಾವ ತೀರ್ಮಾನ ಆಗುತ್ತದೆ ಎಂದು ನೋಡಿ ಮುಂದಿನ ಚರ್ಚೆ ಮಾಡಲಾಗುತ್ತದೆ.
| ಪ್ರಿಯಾಂಕ್ ಖರ್ಗೆ ಸಮಾಜ ಕಲ್ಯಾಣ ಸಚಿವ
ಮುಂಬಡ್ತಿ ಕುರಿತು ನ್ಯಾಯಾಲಯ ವಿಚಾರಣೆ ಮುಂದೂಡಿದೆ. ಈ ಬಗ್ಗೆ ನಮ್ಮ ಕಾನೂನು ಇಲಾಖೆ ಪರಾಮರ್ಶೆ ನಡೆಸಿ ನಿರ್ಧಾರ ಕೈಗೊಳ್ಳಲಿದೆ.
| ಎಚ್.ಡಿ. ಕುಮಾರಸ್ವಾಮಿ ಸಿಎಂ

**RSGE**::: ಬಡ್ತಿ ಮೀಸಲು ಮತ್ತೆ ಯಥಾಸ್ಥಿತಿ,

ಬಡ್ತಿ ಮೀಸಲಿಗೆ ಸಂಬಂಧಿಸಿ ಯಥಾಸ್ಥಿತಿ ಕಾಯ್ದು ಕೊಳ್ಳುವುದು ರಾಜ್ಯ ಸರ್ಕಾರಕ್ಕೆ ಅನಿವಾರ್ಯವಾಗಿದೆ. ಎಸ್ಸಿ, ಎಸ್ಟಿ ನೌಕರರ ಹಿತ ಕಾಯುವ ಹಾಗೂ ಬಡ್ತಿ ಮೀಸಲಾತಿ ಮುಂದುವರಿಕೆಗೆ ಅವಕಾಶ ನೀಡುವ ತಿದ್ದುಪಡಿ ಕಾಯ್ದೆ ಜಾರಿ ಅನಿವಾರ್ಯವೆಂಬ ರಾಜ್ಯದ ವಾದಕ್ಕೆ ಸುಪ್ರೀಂ ಕೋರ್ಟ್ ಸೊಪು್ಪಹಾಕಿಲ್ಲ.
‘ಪ್ರಕರಣದ ಸೂಕ್ಷ್ಮತೆ ಹಾಗೂ ಜರೂರತ್ತನ್ನು ಪರಿಗಣಿಸಿ ಆದ್ಯತೆ ಮೇರೆಗೆ ಅಕ್ಟೋಬರ್ 23ರಿಂದ ಸಮಗ್ರ ವಿಚಾರಣೆ ನಡೆಸಲಿದ್ದೇವೆ’ ಎಂದು ನ್ಯಾಯಮೂರ್ತಿ ಉದಯ್ ಲಲಿತ್ ನೇತೃತ್ವದ ದ್ವಿಸದಸ್ಯ ನ್ಯಾಯಪೀಠ ತಿಳಿಸಿದೆ.
ಸದ್ಯಕ್ಕೇನೂ ಹೇಳಲ್ಲ: ಕಾಯ್ದೆ ಮುಂದುವರಿಕೆಗೆ ಅವಕಾಶ ನೀಡದಿದ್ದರೆ ಸಾವಿರಾರು ಎಸ್ಸಿ, ಎಸ್ಟಿ ನೌಕರರ ಸ್ಥಿತಿ ಡೋಲಾಯಮಾನವಾಗಲಿದೆ. ಅಂತಿಮ ತೀರ್ಪು ಬರುವ ತನಕ ಅವಕಾಶ ಕೊಡಿ ಎಂದು ಎಸ್ಸಿ, ಎಸ್ಟಿ ನೌಕರರ ಪರ ವಕೀಲೆ ಇಂದಿರಾ ಜೈಸಿಂಗ್ ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಲಲಿತ್, ಸದ್ಯಕ್ಕೆ ನಾವು ಏನೂ ಹೇಳುವುದಿಲ್ಲ. ವಿಚಾರಣೆ ಹಂತದಲ್ಲಿ ಎಲ್ಲರ ವಾದಗಳನ್ನೂ ಆಲಿಸಲಿದ್ದೇವೆ ಎಂದು ತಿಳಿಸಿದರು.
ರಾಜ್ಯದ ಪರ ವಾದಿಸಿದ ಮುಕುಲ್ ರೋಹಟ್ಗಿ, ಕೋರ್ಟ್ ತೀರ್ಪಿನ ತನಕ ಯಥಾಸ್ಥಿತಿ ಕಾಯ್ದುಕೊಳ್ಳುವುದಾಗಿ ಅಡ್ವೊಕೇಟ್ ಜನರಲ್ ತಿಳಿಸಿದ್ದರು. ಆದರೆ, ರಾಜ್ಯದಲ್ಲಿ ಕಾಯ್ದೆಯ ಅನುಷ್ಠಾನ ಆಗದಿರುವುದರಿಂದ ಸಮಸ್ಯೆಯಾಗಿದೆ. ಇದನ್ನು ಜಾರಿ ಮಾಡಲೇ ಬೇಕಾದ ಪರಿಸ್ಥಿತಿ ಇದೆ ಎಂದರು. ಇದಕ್ಕೆ ದನಿಗೂಡಿಸಿದ ಇಂದಿರಾ ಜೈಸಿಂಗ್, ಕಾಯ್ದೆಯನ್ನು ಜಾರಿಗೊಳಿಸಿ ಸೂಪರ್ ನ್ಯೂಮರಿ ಹುದ್ದೆಗಳನ್ನು ಸೃಷ್ಟಿಸುವಂತಹ ಅವಕಾಶ ಕಾನೂನಿನಲ್ಲಿದೆ ಎಂದರು.
ಅರ್ತಾಕ ವಾದ: ಎರಡೂ ವಾದಗಳಿಗೆ ಆಕ್ಷೇಪ ತೆಗೆದ ಬಿ.ಕೆ. ಪವಿತ್ರಾ ಪರ ವಕೀಲ ರಾಜೀವ್ ಧವನ್, ಸುಪ್ರೀಂಕೋರ್ಟ್ ತೀರ್ಪಗಳನ್ನು ಬದಿಗೊತ್ತಲೆಂದೇ ಸರ್ಕಾರಗಳು ಕಾಯ್ದೆಗಳನ್ನು ಜಾರಿಗೆ ತರುತ್ತಿರುವುದೇ ತಪ್ಪು. ಅದಲ್ಲದೆ, ಅಂತಿಮ ತೀರ್ಪು ಬರುವ ತನಕ ಮುಂಬಡ್ತಿಗೆ ಅವಕಾಶ ನೀಡಬೇಕು ಎಂದು ವಾದಿಸುವುದೇ ಅರ್ತಾಕ. ಕೆಲ ದಿನಗಳ ಹಿಂದೆ ಸುಪ್ರೀಂಕೋರ್ಟ್​ನ ಸಾಂವಿಧಾನಿಕ ಪೀಠ ಮುಂಬಡ್ತಿ ವೇಳೆ ಕೆನೆ ಪದರ ತತ್ವ ಅಳವಡಿಸಬೇಕು ಎಂದೂ ತೀರ್ಪು ನೀಡಿರುವುದರಿಂದ ಆ ಹಿನ್ನೆಲೆಯಲ್ಲಿಯೂ ನಾವು ಸದರಿ ಪ್ರಕರಣವನ್ನು ನೋಡಬೇಕಾಗುತ್ತದೆ ಎಂದು ವಿವರಿಸಿದರು. ಇದೇ ವೇಳೆ, ಸುಪ್ರೀಂಕೋರ್ಟ್ ತೀರ್ಪಿನ ಉಲ್ಲಂಘನೆ ಮಾಡಿದೆ ಎಂದು ಸರ್ಕಾರದ ವಿರುದ್ಧ ಸಲ್ಲಿಸಲಾಗಿದ್ದ ನ್ಯಾಯಾಂಗ ನಿಂದನೆ ಅರ್ಜಿ ಇತ್ಯರ್ಥಗೊಂಡಿರುವ ಬಗ್ಗೆ ಸರ್ಕಾರದ ವಕೀಲ ಬಸವ ಪ್ರಭು ಪಾಟೀಲ್ ಸ್ಪಷ್ಟಪಡಿಸಿದರು.
ಬಾತ್​ರೂಂ ಹಾಡಿನ ವೃತ್ತಾಂತ
ಬಡ್ತಿ ಮೀಸಲಾತಿ ವಿರೋಧಿಸಿ ವಕೀಲ ರಾಜೀವ್ ಧವನ್ ವಾದಿಸುತ್ತಿದ್ದಾಗ ಪ್ರತಿವಾದಿ ಪರ ವಕೀಲೆ ಇಂದಿರಾ ಜೈಸಿಂಗ್ ಪದೇಪದೆ ಹಸ್ತಕ್ಷೇಪ ಮಾಡುತ್ತಿದ್ದುದು ಭಾರಿ ವಾಗ್ವಾದಕ್ಕೆ ಕಾರಣವಾಯಿತು. ‘ದಯವಿಟ್ಟು ನನಗೆ ಮಾತನಾಡಲು ಬಿಡುತ್ತೀರಾ? ಮಧ್ಯದಲ್ಲಿ ಬಾಯಿ ಹಾಕಿ ಏಕೆ ಹೀಗೆ ತೊಂದರೆ ಕೊಡುತ್ತೀರಿ? ಎಂದು ಧವನ್ ಸಿಡಿಮಿಡಿಗೊಂಡದ್ದಕ್ಕೆ ಪ್ರತಿಕ್ರಿಯಿಸಿದ ಜೈಸಿಂಗ್, ‘ಈ ರೀತಿ ವಾದ ಮಾಡುವುದನ್ನು ಹಿರಿಯರಾದ ನಿಮ್ಮಿಂದಲೇ ನಾನು ಕಲಿತೆ, ನೀವೇ ನನ್ನ ಗುರು’ ಎಂದು ಕಾಲೆಳೆದರು. ‘ನಾನು ನಿಮ್ಮ ಗುರುವಾಗಲು ಸಾಧ್ಯವೇ ಇಲ್ಲ. ನೀವು ಬಂದಾಗ ನಾನು ಈ ಕೋರ್ಟ್​ನಲ್ಲೇ ಇರಲಿಲ್ಲ’ ಎಂದು ವಾದ ಮುಂದುವರಿಸಿದರು. ಸುಪ್ರೀಂ ಕೋರ್ಟ್ ತೀರ್ಪಿಗೆ ಮಾನ್ಯತೆ ನೀಡದ ಸರ್ಕಾರದ ನಡೆ ಖಂಡನೀಯ. ನಾನಿದನ್ನು ಹಾಡಿನ ಮೂಲಕ ವಿವರಿಸಬಲ್ಲೆ. ಆದರೆ,
ಕೋರ್ಟ್​ನಲ್ಲಿ ಹಾಡುವುದು ಸರಿಯಲ್ಲ ಎಂದು ಧವನ್ ಹಾಸ್ಯಚಟಾಕಿ ಹಾರಿಸಿದರು. ಆಗ ಮತ್ತೋರ್ವ ವಕೀಲ ದಿನೇಶ್ ದ್ವಿವೇದಿ, ‘ನಿಮ್ಮ ಹಾಡನ್ನು ಕೇಳಬೇಕಿದೆ, ದಯವಿಟ್ಟು ಹಾಡಿ’ ಎಂದಿದ್ದಕ್ಕೆ, ‘ನಾನು ಹಾಡುವುದನ್ನು ಕೇಳಬೇಕೆಂದರೆ ನನ್ನ ಬಾತ್​ರೂಂ ಹೊರಗಡೆ ಬಂದು ನಿಲ್ಲಿ’ ಎಂದು ಧವನ್ ಹೇಳಿಬಿಟ್ಟರು. ಸಿಡಿಮಿಡಿಗೊಂಡ ಜೈಸಿಂಗ್, ‘ಅಲ್ಲಿಗೆ ಬಂದು ಹಾಡು ಕೇಳುವ ಅಗತ್ಯ ನನಗಂತೂ ಇಲ್ಲ’ ಎಂದರು. ಇದಕ್ಕೆ ಪ್ರತಿಕ್ರಿಯಿಸದ ನ್ಯಾಯಮೂರ್ತಿಗಳು, ಅ.23ಕ್ಕೆ ಸಿಗೋಣ ಎಂದು ಭೋಜನಕ್ಕೆ ತೆರಳಿದರು.

Sunday, September 30, 2018

**RSGE**::: ಹುದ್ದೆ ಕಡಿತ, ನೇಮಕಾತಿ ಸ್ಥಗಿತ?,

ಸರ್ಕಾರದಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಮುಖ್ಯ ಕಾರ್ಯದರ್ಶಿ ಇಲಾಖಾವಾರು ಮಾಹಿತಿ ಕೇಳಿದ ಬೆನ್ನ ಹಿಂದೆಯೇ, ಹುದ್ದೆಗಳ ಕಡಿತ ಮಾಡಬೇಕು, ಹೊಸ ನೇಮಕಾತಿ ಮಾಡಬಾರದೆಂಬ ಶಿಫಾರಸು ಮಾಡಲು ಹಣಕಾಸು ಇಲಾಖೆ ಸಜ್ಜಾಗಿದೆ.
ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಆಯೋಗ ಆಡಳಿತ ಸುಧಾರಣೆಗೆ ಸಂಬಂಧಿಸಿ ತನ್ನ ಎರಡನೇ ವರದಿಯಲ್ಲಿರುವ ಅಂಶಗಳನ್ನು ಆಧರಿಸಿ ಸಚಿವ ಸಂಪುಟಕ್ಕೆ ಕಡತ ಮಂಡಿಸಲು ಸಿದ್ಧತೆ ನಡೆಸಿದೆ ಎಂದು ಸರ್ಕಾರದ ಉನ್ನತ ಮೂಲಗಳು ಖಚಿತಪಡಿಸಿವೆ. ಸರ್ಕಾರದಲ್ಲಿ ಸಾಕಷ್ಟು ಸಿಬ್ಬಂದಿ ಇಲ್ಲದೆ ಆಡಳಿತದ ಗುಣಮಟ್ಟ ದಿನೇದಿನೆ ಕುಸಿಯುತ್ತಿದೆ. ವೇತನ ಪರಿಷ್ಕರಣೆ ಆಯೋಗ ಸಾಧ್ಯವಾದಷ್ಟು ಹುದ್ದೆಗಳನ್ನು ನೇಮಕಾತಿ ಮಾಡುವ ಅಗತ್ಯವನ್ನು ಪ್ರತಿಪಾದಿಸಿತ್ತು. ಅದರ ಆಧಾರದಲ್ಲೇ ಮುಖ್ಯ ಕಾರ್ಯದರ್ಶಿ ಅವರು ಇಲಾಖಾವಾರು ಮಾಹಿತಿ ಕೋರಿದ್ದರು.
2ನೇ ವರದಿ ಶಿಫಾರಸು
ಸರ್ಕಾರಿ ನೌಕರರ ಸಿಎಲ್ 12 ರಿಂದ 8ಕ್ಕೆ ಇಳಿಸಬೇಕು. ನಾಲ್ಕನೇ ಶನಿವಾರ ರಜೆ ನೀಡಬೇಕು.
ವಿವಿಧ ಜಯಂತಿಗಳಿಗೆ ನೀಡುವ ರಜೆ ರದ್ದು ಮಾಡಬೇಕು.
ಕ್ಷೇತ್ರ ಇಲಾಖೆಗಳ ಸಿಬ್ಬಂದಿ ಸಚಿವಾಲಯಕ್ಕೆ ನಿಯೋಜನೆ ಮೇಲೆ ಬರಲು ಅವಕಾಶ.
ಎಸ್​ಒಗಳಿಗೆ ಬಡ್ತಿ ನೀಡಲು ಪದವಿ ಕಡ್ಡಾಯ ಮಾಡಬೇಕು.
ಸಚಿವಾಲಯದಲ್ಲಿ ಕಿರಿಯ ಸಹಾಯಕರು ಹಾಗೂ ಟೈಪಿಸ್ಟ್ ಹುದ್ದೆಯನ್ನು ಸಂಪೂರ್ಣ ರದ್ದು ಮಾಡಬೇಕು.
ನೌಕರರ ವಿರೋಧ
ಸಚಿವಾಲಯ ನೌಕರರ ಸಂಘ ಸೇರಿ ವಿವಿಧ ನೌಕರರ ಸಂಘಟನೆಗಳು ಈ ವರದಿ ಜಾರಿಗೆ ವಿರೋಧ ವ್ಯಕ್ತಪಡಿಸಿವೆ. ಈಗಾಗಲೇ ಸಿಬ್ಬಂದಿ ಸಂಖ್ಯೆ ಕಡಿಮೆ ಇರುವುದರಿಂದ ನೇಮಕಾತಿ ಮಾಡಬೇಕು. ಯಾವುದೇ ಹುದ್ದೆ ರದ್ದು ಮಾಡಬಾರದು, ರಜೆಗಳ ಸಂಖ್ಯೆ ಕಡಿತ ಬೇಡ. ಉಪ ಕಾರ್ಯದರ್ಶಿಗಳಿಗೆ ಕೆಎಎಸ್ ಅಧಿಕಾರಿಗಳಿಗೆ ಸರಿಸಮಾನ ವೇತನ ನೀಡಬೇಕು. ವೇತನ ಪರಿಷ್ಕರಣೆ ಸಂದರ್ಭದಲ್ಲಿ ಆಗಿರುವ ಅನ್ಯಾಯ ಸರಿಪಡಿಸಬೇಕು. ಎನ್​ಪಿಎಸ್ ಸಂಪೂರ್ಣ ರದ್ದು ಮಾಡಿ, ಹಳೆಯ ಪಿಂಚಣಿ ಯೋಜನೆ ಜಾರಿಗೆ ತರಬೇಕು ಎಂಬುದು ನೌಕರರ ಬೇಡಿಕೆಗಳಾಗಿವೆ.
ವೇತನ ಪರಿಷ್ಕರಣೆ ಆಯೋಗದ ಎರಡನೇ ವರದಿ ನೌಕರರ ವಿರೋಧಿಯಾಗಿದೆ. ಸರ್ಕಾರ ಏನಾದರೂ ಈ ವರದಿ ಜಾರಿಗೆ ಮುಂದಾದರೆ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ. ಯಾವುದೇ ಕಾರಣಕ್ಕೂ ಜಾರಿಗೆ ತರಲು ಬಿಡುವುದಿಲ್ಲ.
| ಸಿ. ಗುರುಸ್ವಾಮಿ, ಅಧ್ಯಕ್ಷ ಸಚಿವಾಲಯ ನೌಕರರ ಸಂಘ

Monday, September 24, 2018

**RSGE**::: ಪಿಡಿಒಗಳಿಗೆ ಮುಂಬಡ್ತಿ,

ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ(ಪಿಡಿಒ) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾ ಯತ್​ರಾಜ್ ಇಲಾಖೆ ಸಹಾಯಕ ನಿರ್ದೇಶಕರ ಹುದ್ದೆಗೆ ಬಡ್ತಿ ನೀಡಲು ಸರ್ಕಾರ ಮುಂದಾಗಿದೆ. ಈ ಸಂಬಂಧ ಎಲ್ಲ ಜಿಲ್ಲ್ಲಾ ಪಂಚಾಯಿತಿ ಸಿಇಒಗಳಿಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಪತ್ರ ಬರೆದಿದೆ. ಪಿಡಿಒ ವೃಂದದ ಹಳೆಯ ಮತ್ತು ಹೊಸ ಜ್ಯೇಷ್ಠತಾ ಕ್ರ.ಸಂ. 420/1223 ರಿಂದ 500/1329ರವರೆಗಿನ ಅಧಿಕಾರಿಗಳಿಗೆ ಮುಂಬಡ್ತಿ ಅವಕಾಶವಿದೆ. ಈ ಕ್ರಮ ಸಂಖ್ಯೆಯಲ್ಲಿ ತಮ್ಮ ಕಚೇರಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವ ಹಿಸುತ್ತಿರುವ ಅಧಿಕಾರಿಗಳ ವಿವರ ಸಹಿತ ಪ್ರಸ್ತಾವನೆ ಸಲ್ಲಿಸಬೇಕು. ಪ್ರತಿ ಅಧಿ ಕಾರಿಯ 2017-18ನೇ ಸಾಲಿನ ಮೂಲ ಕಾರ್ಯನಿರ್ವಹಣಾ ವರದಿ ಜತೆ ಸದರಿ ನೌಕರರ ವಿರುದ್ಧ ನಡೆಯುತ್ತಿರುವ, ನಡೆಸಲು ಉದ್ದೇಶಿಸಲಾಗಿರುವ ಅಥವಾ ಮುಕ್ತಾಯ ಗೊಂಡಿರುವ ಇಲಾಖಾ ವಿಚಾರಣೆ ಮಾಹಿತಿ ಹಾಗೂ ಆದೇಶದ ಪ್ರತಿ ನೀಡಬೇಕು. ಈ ನೌಕರರ ವಿರುದ್ಧ ಲೋಕಾಯುಕ್ತ ಪ್ರಕರಣ ಬಾಕಿಯಿದ್ದರೆ ವಿವರ ನೀಡಬೇಕೆಂದು ಸಿಇಒಗಳಿಗೆ ತಿಳಿಸಲಾಗಿದೆ.

Thursday, August 16, 2018

**RSGE**::: ಮುಂಬಡ್ತಿ ಹಿಂಬಡ್ತಿಗೆ ಹಿನ್ನಡೆ, | ಲ.ರಾಘವೇಂದ್ರ, ಸೇವಾ ಕಾನೂನು ತಜ್ಞರು

ರಾಷ್ಟ್ರದಲ್ಲಿ ಪ್ರಥಮ ಬಾರಿಗೆ ರಾಜ್ಯ ಸಿವಿಲ್ ಸೇವೆಯಲ್ಲಿ ಪರಿಶಿಷ್ಟ ವರ್ಗ ಮತ್ತು
ಜಾತಿಯವರಿಗೆ ಸಾಕಷ್ಟು ಪ್ರಾತಿನಿದ್ಯವಿಲ್ಲವೆಂದು ರಾಜ್ಯ ಸರ್ಕಾರವು 1978ರಿಂದ
ಪದೋನ್ನತಿಯಲ್ಲಿ ಮೀಸಲಾತಿ ಕಲ್ಪಿಸಿಕೊಟ್ಟಿತು. ಇದರಲ್ಲಿ ಶೇ.15ರಷ್ಟು ಪರಿಶಿಷ್ಟ
ಜಾತಿಯವರಿಗೆ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ.3ರಷ್ಟು ಮೀಸಲಾತಿಯನ್ನು ಸಿವಿಲ್ ಸೇವೆಯ
‘ಎ’ ಗುಂಪಿನ ಹುದ್ದೆಯ ಕಿರಿಯ ಶ್ರೇಣಿಯವರಿಗೂ ಪದೋನ್ನತಿ ಕಲ್ಪಿಸಲಾಯಿತು. ಇದರ ಪರಿಣಾಮ
ಸಾವಿರಾರು ಮಂದಿ ಪರಿಶಿಷ್ಟ ಗುಂಪಿನವರು ಮೀಸಲಾತಿ ಪಡೆದು ಇನ್ನುಳಿದ ಸಾಮಾನ್ಯ ವರ್ಗದ
ನೌಕರರಿಗೆ ಸ್ವಾಭಾವಿಕ ನ್ಯಾಯ ದೊರಕಿಸಿಕೊಡುವಲ್ಲಿ ಸರ್ಕಾರ ವಿಫಲವಾಯಿತು. ಈ ವೈಫಲ್ಯದ
ಹಿನ್ನೆಲೆಯಲ್ಲಿ ಹಲವಾರು ಸರ್ಕಾರಿ ನೌಕರರು ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಹಾಗೂ ಸರ್ವೇಚ್ಛ
ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ಸಂವಿಧಾನದ ಅನುಚ್ಛೇದ 14 ಮತ್ತು 16ರಂತೆ
ಪ್ರಶ್ನಿಸಲ್ಪಟ್ಟಿತು. ಈ ಹಿನ್ನೆಲೆಯಲ್ಲಿ 2011ರಲ್ಲಿ ಶ್ರೀ ಬಿ.ಕೆ. ಪವಿತ್ರ ಅವರು
(ಸಿವಿಲ್ ಅಪೀಲು ಸಂಖ್ಯೆ 2368/2011) ಸರ್ವೇಚ್ಛ ನ್ಯಾಯಾಲಯದಲ್ಲಿ ಪರಿಶಿಷ್ಟ ಗುಂಪಿನ
ಪದೋನ್ನತಿ ಬಗ್ಗೆ ತತ್ಪರಿಣಾಮದ ಜ್ಯೇಷ್ಠತೆ ಪ್ರಶ್ನಿಸಿ ಪ್ರಕರಣ ದಾಖಲಿಸಿದರು. ಇದರ
ವಿಚಾರಣೆ ನಡೆದು ಮಾನ್ಯ ಸರ್ವೇಚ್ಛ ನ್ಯಾಯಾಲಯವು ದಿನಾಂಕ 9.2.2017ರಂದು ರಾಜ್ಯ ಸಿವಿಲ್
ಸೇವೆಗಳಲ್ಲಿನ ಎಲ್ಲ ವೃಂದಗಳ ಜ್ಯೇಷ್ಠತಾ ಪಟ್ಟಿಗಳನ್ನು ಪರಿಷ್ಕರಿಸಿ ಪದೋನ್ನತಿ ನೀಡಲು
ಸೂಚಿಸಿತು. ಇದರನ್ವಯ ರಾಜ್ಯ ಸರ್ಕಾರವು ಅನೇಕ ಸರ್ಕಾರಿ ಆದೇಶ/ಸುತ್ತೋಲೆಗಳನ್ನು ಹೊರಡಿಸಿ
ಜ್ಯೇಷ್ಠತಾ ಪಟ್ಟಿಯನ್ನು ಪರಿಷ್ಕರಿಸಲು ಸೂಚಿಸಿತ್ತು. ಇದರಿಂದಾಗಿ ಸಾಮಾನ್ಯ ವರ್ಗದ
ಸುಮಾರು ನಾಲ್ಕು ಸಾವಿರ ನೌಕರರು ಮುಂಬಡ್ತಿ ಪಡೆದರು. ಅಷ್ಟೇ ಪ್ರಮಾಣದಲ್ಲಿ ಪರಿಶಿಷ್ಟ
ಗುಂಪಿನವರು ಹಿಂಬಡ್ತಿ ಪಡೆದರು. ಇದರ ಪರಿಣಾಮ ರಾಜ್ಯ ಸರ್ಕಾರವು ವರ್ಲ್ಡ್ ಬ್ಯಾಂಕಿನ
ಹಿತದೃಷ್ಟಿಯಿಂದ 2017ರಲ್ಲಿ ಅಧಿನಿಯಮ ರಚಿಸಿತು. ಈ ಅಧಿನಿಯಮವು 2002ರಲ್ಲಿ ರಾಜ್ಯ
ಸರ್ಕಾರವು ಕರ್ನಾಟಕ ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿದ ಸರ್ಕಾರಿ ನೌಕರರ
ಜ್ಯೇಷ್ಠತೆಯ ನಿರ್ಧಾರಣೆ ಅಧಿನಿಯಮ ರಚಿಸಿತು. 2002ರ ಮತ್ತು 2017ರ ಅಧಿನಿಯಮದ ಪ್ರಕರಣ 3
ಮತ್ತು 4 ಒಂದೇ ಆಗಿದ್ದು ಅದನ್ನು ಸರ್ವೇಚ್ಛ ನ್ಯಾಯಾಲಯವು ಬಿ.ಕೆ. ಪವಿತ್ರ ಪ್ರಕರಣದಲ್ಲಿ
ಅಧಿಕಾರಾತೀತವೆಂದು ಘೊಷಿಸಿ ಅಸಿಂಧುಗೊಳಿಸಿತು. ಈ ರೀತಿ ಅಸಿಂಧುಗೊಂಡ ಪ್ರಕರಣವನ್ನೇ
ಮತ್ತೆ ಹೊಸ ಅಧಿನಿಯಮದಲ್ಲಿ ಅಳವಡಿಸಿಕೊಂಡಿರುವುದು ಸರ್ವೇಚ್ಛ ನ್ಯಾಯಾಲಯದ ತೀರ್ಪಿಗೆ
ವ್ಯತಿರಿಕ್ತವಾಗಿದೆ. 2017ರ ಅಧಿನಿಯಮದ ಪ್ರಕರಣ 2(ಡಿ)ಯಲ್ಲಿ ಹಿಂಬಾಕಿ ಹುದ್ದೆಗಳನ್ನು
ಪದೋನ್ನತಿಗೆ ಸೇರಿಸಲಾಗಿದೆ. ಪ್ರಕರಣ 5ರಲ್ಲಿ ಪುನರಾವಲೋಕನಕ್ಕಾಗಿ ಅವಕಾಶ ಕಲ್ಪಿಸಿ
ರಾಜ್ಯ ಸಿವಿಲ್ ಸೇವೆಗಳಿಗೆ ಸೇರಿದ ಹುದ್ದೆಗಳಿಗೆ ಇರುವ ಎಲ್ಲಾ ಪದೋನ್ನತಿಗಳು ಮೀಸಲಾತಿ
ಆದೇಶಗಳ ವ್ಯಾಪ್ತಿಯೊಳಗೆ ಮತ್ತು ನೇಮಕಾತಿ ವಿಧಾನಕ್ಕೆ ಹಾಗೂ ಜ್ಯೇಷ್ಠತೆಗೆ ಸಂಬಂಧಿಸಿದ
ಇತರ ನಿಯಮಗಳಿಗೆ ಅನುಸಾರವಾಗಿ ಇರತಕ್ಕದ್ದು. ನೇಮಕಾತಿ ಪ್ರಾಧಿಕಾರವು ಪದೋನ್ನತಿಗಳು
ಕ್ರಮಾನುಸಾರವಾಗಿ ಮಾಡಲಾಗುತ್ತಿರುವುದನ್ನು ಖಚಿತಪಡಿಸಿಕೊಳ್ಳಲು ವ್ಯಕ್ತಿತ್ವದಲ್ಲಿರುವ
ಜ್ಯೇಷ್ಠತಾ ಪಟ್ಟಿಗಳನ್ನು ಪುನರಾವಲೋಕಿಸತಕ್ಕದ್ದು ಮತ್ತು ಪುನರಚಿಸತಕ್ಕದ್ದು ಎಂದು
ಸೂಚಿಸಿದೆ. ಇದು ಸಹ ಸರ್ವೇಚ್ಛ ನ್ಯಾಯಾಲಯದ ತೀರ್ಪನ್ನು ಜಾರಿಗೆ ತರುವಲ್ಲಿ
ಗೊಂದಲವನ್ನುಂಟು ಮಾಡಿದೆ. ಇದೇ ಪ್ರಕರಣದ ಪರಂತುಕದಲ್ಲಿ ಪುನರಾವಲೋಕನದ ನಂತರ ಪರಿಶಿಷ್ಟ
ಗುಂಪಿನ ಸರ್ಕಾರಿ ನೌಕರರನ್ನು ಮೀಸಲಾತಿ ಮತ್ತು ಬ್ಯಾಕ್​ಲಾಗ್ ಖಾಲಿ ಸ್ಥಾನಗಳಿಗಿಂತ
ಹೆಚ್ಚಾಗಿ ಅಥವಾ ಮೀಸಲಾತಿ ಕಲ್ಪಿಸಿರುವ ಮೀಸಲಾತಿಗೆ ಪ್ರತಿಯಾಗಿ ಪದೋನ್ನತಿ ನೀಡಿರುವುದು
ಕಂಡು ಬಂದರೆ ಕಾಲಕಾಲಕ್ಕೆ ಹೊರಡಿಸಿದ ಮೀಸಲಾತಿಗೆ ಆದೇಶಕ್ಕನುಸಾರವಾಗಿ ಇರುವ ರೋಸ್ಟರ್
ಬಿಂದುಗಳಿಗೆ ಸಂಬಂಧಿಸಿದಂತೆ ಸೂಕ್ತ ಅರ್ಹತೆ ದಿನಾಂಕಗಳನ್ನು ನಮೂದಿಸಿ
ಸರಿಹೊಂದಿಸತಕ್ಕದ್ದು. ಈಗಾಗಲೇ ಪರಿಶಿಷ್ಟ ಗುಂಪಿನ ವ್ಯಕ್ತಿಗಳು ಪದೋನ್ನತಿ ಹೊಂದಿದ್ದು
ರೋಸ್ಟರ್ ಬಿಂದುಗಳಿಗೆ ಪ್ರತಿಯಾಗಿ ಸರಿಹೊಂದಿಸಲು ಸಾಧ್ಯವಾಗದಿದ್ದರೆ ಪ್ರಸ್ತುತ ಅವರು
ಕಾರ್ಯನಿರ್ವಹಿಸುತ್ತಿರುವ ವೃಂದದಲ್ಲಿ ಅವರು ಪದೋನ್ನತಿ ಪಡೆಯುವ ದಿನಾಂಕದವರೆಗೆ
ಸಂಖ್ಯಾತೀತ ಹುದ್ದೆಗಳಾಗಿ ಮುಂದುವರಿಸತಕ್ಕದ್ದು ಎಂದು ತಿಳಿಸಲಾಗಿದೆ.

5ನೇ ಪ್ರಕರಣವು 3 ಮತ್ತು 4ನೇ ಪ್ರಕರಣಗಳಅನುಷ್ಠಾನದ ಬಗ್ಗೆ ಗೊಂದಲವನ್ನುಂಟು ಮಾಡುತ್ತದೆ.
ಮತ್ತು ರಾಜ್ಯ ಸರ್ಕಾರದಲ್ಲಿ ಈಗಾಗಲೇ ಪರಿಶಿಷ್ಟ ಗುಂಪಿನ 20,000ಕ್ಕಿಂತಲೂ ಹೆಚ್ಚು ನೌಕರರು
ಪದೋನ್ನತಿ ಪಡೆದಿದ್ದು, ಅವರ ಅಕ್ರಮ ಪದೋನ್ನತಿಯನ್ನು ಸಕ್ರಮಗೊಳಿಸಿದಂತಾಗುತ್ತದೆ. ಇದು
ಸಹ ಬಿ.ಕೆ. ಪವಿತ್ರ ಪ್ರಕರಣದ ಆದೇಶಕ್ಕೆ ವಿರುದ್ಧವಾಗಿದೆ.

ಇದೇ ಅಧಿನಿಯಮದ ಪ್ರಕರಣ 9ರಲ್ಲಿ ಈ ಅಧಿನಿಯಮದ ಉಪಬಂಧಗಳಡಿಯಲ್ಲಿ ಸಿಂಧುತ್ವವನ್ನು
ಪ್ರಶ್ನಿಸಲಾಗುತ್ತದೆ. ಈ ಅಧಿನಿಯಮದ 3 ಮತ್ತು 5ನೇ ಪ್ರಕರಣಗಳಿಗೆ ವ್ಯತಿರಿಕ್ತವಾಗಿ ಯಾವುದೇ
ನ್ಯಾಯಾಲಯದ ಅಥವಾ ಇತರ ಪ್ರಾಧಿಕಾರದ ಯಾವುದೇ ತೀರ್ಪು ಅಥವಾ ಆದೇಶದಡಿ ಏನೇ ಒಳಗೊಂಡಿದ್ದರೂ ಈ
ಅಧಿನಿಯಮಕ್ಕೂ ಪ್ರಕಟಣೆ ಪೂರ್ವದಲ್ಲಿ 3 ಮತ್ತು 4 ಪ್ರಕರಣದ ಅನುಸಾರವಾಗಿ ನೀಡಿದ
ಪದೋನ್ನತಿಗಳ ಸಂಬಂಧದಲ್ಲಿ 27.4.1978ನೇ ದಿನಾಂಕದಂದು ಕೈಗೊಂಡ ಕ್ರಮವಾಗಿದೆ ಎಂದು
ಅರ್ಥೈಸಲಾಗಿರುವ ಎಲ್ಲಾ ನಡವಳಿಗಳು ಸಿಂಧುವಾಗಿದೆ ಎಂದು ಸೂಚಿಸಲಾಗಿದೆ. ಪ್ರಕರಣ 9(ಎ)ರಲ್ಲಿ
ಈ ಅಧಿನಿಯಮದ ಉಪಬಂಧಗಳಿಗೆ ವ್ಯತಿರಿಕ್ತವಾಗಿ ಯಾವುದೇ ದಾವೆ ಅಥವಾ ಇತರೆ ನಡವಳಿಗಳನ್ನು ಅಂತಹ
ಬಡ್ತಿಗಳ ಪುನರೀಕ್ಷಣೆಗಾಗಿ ಯಾವುದೇ ನ್ಯಾಯಾಲಯದಲ್ಲಿ ಅಥವಾ ಯಾವುದೇ ಪ್ರಾಧಿಕಾರದ ಮುಂದೆ
ನಿರ್ವಹಿಸತಕ್ಕದ್ದಲ್ಲ ಅಥವಾ ಮುಂದುವರಿಸತಕ್ಕದ್ದಲ್ಲ ಮತ್ತು ಪ್ರಕರಣ 9(ಬಿ)ರಂತೆ ಈ
ಅಧಿನಿಯಮದ ಉಪಬಂಧಗಳಿಗೆ ವಿರುದ್ಧವಾಗಿ ಯಾವುದೇ ಅಂತಹ ಮೊಕದ್ದಮೆಗಳನ್ನು ಪುನರೀಕ್ಷಿಸಲು
ನಿರ್ದೇಶಿಸಿ ಯಾವುದೇ ಡಿಕ್ರಿ ಅಥವಾ ಆದೇಶವನ್ನು  ಯಾವುದೇ ನ್ಯಾಯಾಲಯವು
ಹೊರಡಿಸತಕ್ಕದ್ದಲ್ಲವೆಂದು ತಿಳಿಸಲಾಗಿದೆ. ಈ 9ನೇ ಪ್ರಕರಣವು ಸಂವಿಧಾನದ ಮೂಲಭೂತ
ಹಕ್ಕುಗಳಿಗೆ ಧಕ್ಕೆಯನ್ನುಂಟು ಮಾಡುವಂತಿದೆ. ಬಾಧಿತ ವ್ಯಕ್ತಿಗಳು ಯಾವುದೇ ನ್ಯಾಯಾಲಯದಲ್ಲಿ
ತನಗಾದ ಸ್ವಾಭಾವಿಕ ಅನ್ಯಾಯವನ್ನು ಸರಿಪಡಿಸಿಕೊಳ್ಳಲು ದಾವೆ ಹೂಡತಕ್ಕದ್ದಲ್ಲ ಎನ್ನುವುದು
ಸಂವಿಧಾನ ಬಾಹಿರವಾಗುತ್ತದೆ. ಈ ಅಧಿನಿಯಮದಲ್ಲಿ ನ್ಯಾಯಾಂಗ ವ್ಯವಸ್ಥೆಯೇ ಬೇಡ ಎನ್ನುವಂತೆ
ಪ್ರಕರಣ 9ನ್ನು ಅಳವಡಿಸಿರವುದು ಮೂಲಭೂತ ಹಕ್ಕಿಗೆ ಚ್ಯುತಿಬಂದಂತಾಗುತ್ತದೆ.

ಸರ್ಕಾರವು ದಿನಾಂಕ 23.6.2018ರಿಂದ ಕರ್ನಾಟಕ (ರಾಜ್ಯದ ಸಿವಿಲ್ ಸೇವೆಗಳಲ್ಲಿನ
ಹುದ್ದೆಗಳಿಗೆ ಮೀಸಲಾತಿ ಆಧಾರದ ಮೇಲೆ ಪದೋನ್ನತಿ ಹೊಂದಿರುವ ಸರ್ಕಾರಿ ನೌಕರರಿಗೆ
ತತ್ಪರಿಣಾಮದ ಜ್ಯೇಷ್ಠತೆಯನ್ನು ವಿಸ್ತರಿಸುವ ಅಧಿನಿಯಮ 2017ನ್ನು ಜಾರಿಗೆ ತಂದಿರುತ್ತದೆ.
ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್​ನಲ್ಲಿ ರಿಟ್ ಅರ್ಜಿಗಳು ದಾಖಲಾಗಿದ್ದು ಸದರಿ
ಪ್ರಕರಣಗಳನ್ನು ಬಿ.ಕೆ. ಪವಿತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಕಿ ಇರುವ ಪ್ರಕರಣವನ್ನು
(ಸಂಖ್ಯೆ ಎಂಎ1151/2018) ಒಟ್ಟುಗೂಡಿಸಿ 27.7.2018ರಂದು ವಿಚಾರಣೆಗೆ ಬಂದಾಗ ಮುಂದಿನ
ನಿರ್ದೇಶನ ನೀಡುವವರೆಗೆ ಯಥಾಸ್ಥಿತಿ ಕಾಪಾಡಲು ಸೂಚನೆ ನೀಡಿತು. ಅದರಂತೆ ಮಾನ್ಯ
ಅಡ್ವೋಕೇಟ್ ಜನರಲ್ ಅವರು ಸರ್ಕಾರಕ್ಕೆ ಪತ್ರವನ್ನು ಬರೆದು ಯಥಾ ಸ್ಥಿತಿ ಕಾಪಾಡಲು
ತಿಳಿಸಿರುತ್ತಾರೆ. ಆದುದರಿಂದ ಸರ್ಕಾರವು ದಿನಾಂಕ 3.8.2018ರಂದು (ಸುತ್ತೋಲೆ ಸಂಖ್ಯೆ
ಸಿಆಸುಇ 380, ಸೇನೆನಿ 2018 ಭಾಗ -1) ಸರ್ಕಾರ ಸುತ್ತೋಲೆ ಹೊರಡಿಸಿ ಸರ್ಕಾರದಿಂದ ಮುಂದಿನ
ನಿರ್ದೇಶನ ನೀಡುವವರೆಗೆ ಯಾವುದೇ ಮುಂಬಡ್ತಿ/ಹಿಂಬಡ್ತಿ ಪ್ರಕ್ರಿಯೆ ಜರುಗಿಸದೆ ಯಥಾ ಸ್ಥಿತಿ
ಕಾಪಾಡಬೇಕೆಂದು ಸರ್ಕಾರದ ಎಲ್ಲಾ ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿ/ಇಲಾಖಾ ಮುಖ್ಯಸ್ಥರಿಗೆ
ಸೂಚನೆಗಳನ್ನು ನೀಡಿದೆ. ಈ ಸೂಚನೆಗಳನ್ನು ರಾಜ್ಯ ಸರ್ಕಾರದ ವ್ಯಾಪ್ತಿಗೊಳಪಡುವ ಎಲ್ಲಾ ಸಹಾಯಕ
ಸಂಸ್ಥೆಗಳು/ವಿಶ್ವವಿದ್ಯಾನಿಲಯಗಳು/ಸಾರ್ವಜನಿಕ ಉದ್ದಿಮೆ, ಆಯೋಗ, ನಿಗಮ ಮತ್ತು
ಸರ್ಕಾರದಿಂದ ಅನುದಾನ ಪಡೆಯುವ ಸಂಸ್ಥೆಗಳಿಗೂ ಅನ್ವಯಿಸಿ ಸೂಚಿಸಲಾಗಿದೆ. ಇದರಿಂದಾಗಿ ರಾಜ್ಯ
ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಪದೋನ್ನತಿ ಪಡೆಯಲು ಅರ್ಹರಿದ್ದ ನೌಕರರಿಗೂ
ಲಭ್ಯವಾಗುತ್ತಿಲ್ಲ. ಅಲ್ಲದೆ ಬಿ.ಕೆ. ಪವಿತ್ರ ಪ್ರಕರಣದಡಿಯಲ್ಲಿ
ಹಿಂಬಡ್ತಿ/ಮುಂಬಡ್ತಿಗೊಳಿಸಲು ಸ್ಥಗಿತತೆ ಉಂಟಾಗಿದೆ.

Monday, August 13, 2018

**RSGE**::: ಸರ್ಕಾರಿ ಕಾರ್ನರ್​, ದಿನದ ಪ್ರಶ್ನೆ

ನಾನು ಪ್ರಾಥಮಿಕ ಶಾಲಾ ಶಿಕ್ಷಕನಾಗಿದ್ದು, 20 ವರ್ಷ ಪೂರ್ಣಗೊಂಡಿದೆ. ವೈಯಕ್ತಿಕ ಕಾರಣಕ್ಕಾಗಿ ರಾಜೀನಾಮೆ ನೀಡಲು ಬಯಸಿದ್ದೇನೆ. ಈ ರಾಜೀನಾಮೆ ಸಲ್ಲಿಸುವುದು ಹೇಗೆ? ದಯವಿಟ್ಟು ತಿಳಿಸಿ.
| ತೀರ್ಥಪ್ಪ ತೋಟಗಾರ್ ರಾಯಚೂರು
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 285(2)ರ ಮೇರೆಗೆ ಸದರಿ ಹುದ್ದೆಗೆ ಸ್ವಯಂನಿವೃತ್ತಿ ಮೂಲಕ ರಾಜೀನಾಮೆ ನೀಡಲು ಮೂರು ತಿಂಗಳು ಮುಂಚಿತವಾಗಿ ನಿಮ್ಮ ಪತ್ರವನ್ನು ಸಲ್ಲಿಸಬೇಕಾಗುತ್ತದೆ. ಆಗ ನಿಮಗೆ ಪಿಂಚಣಿ ಸೌಲಭ್ಯಗಳು ಲಭ್ಯವಾಗುತ್ತವೆ. ಆದರೆ ನೀವು ಇಂತಹ ಯಾವುದೇ ಆರ್ಥಿಕ ಮತ್ತು ಸೇವಾ ಸೌಲಭ್ಯಗಳ ಬಗ್ಗೆ ಅಪೇಕ್ಷಿಸದಿದ್ದರೆ ಒಂದು ತಿಂಗಳ ಮುಂಚಿತವಾಗಿ ನಿಮ್ಮ ನೇಮಕಾತಿ ಪ್ರಾಧಿಕಾರಕ್ಕೆ ಖುದ್ದಾಗಿ ರಾಜೀನಾಮೆ ಪತ್ರ ಸಲ್ಲಿಸಿ ಅದರ ಅಂಗೀಕಾರವಾದ ನಂತರ ಕರ್ತವ್ಯದಿಂದ ಬಿಡುಗಡೆ ಹೊಂದಬೇಕಾಗುತ್ತದೆ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕವನ್ನು ನೋಡಬಹುದು.
ಪ್ರಶ್ನೆ ಕೇಳಿ ಪರಿಹಾರ ಪಡೆಯಿರಿ
ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ. ವಿಳಾಸ: ವಿಜಯವಾಣಿ ನಂ. 24, ಶ್ರೀ ಸಾಯಿರಾಂ ಟವರ್ಸ್, ಮೊದಲ ಮಹಡಿ, 5ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು-18, ದೂ: 8884432666, ಫ್ಯಾಕ್ಸ್: 080-26257464

**RSGE**::: ಸರ್ಕಾರಿ ಕಾರ್ನರ್​, ದಿನದ ಪ್ರಶ್ನೆ

ನಾನು 2018ರ ಜೂನ್ 6ರಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ ಕಿರಿಯ ಸಹಾಯಕನಾಗಿ ಕೆಲಸಕ್ಕೆ ಹಾಜರಾದೆ. ಈಗ ಏಳು ತಿಂಗಳು ಗರ್ಭಾವಸ್ಥೆಯಲ್ಲಿರುವ ನನಗೆ ಎಷ್ಟು ದಿನ ಹೆರಿಗೆರಜೆ ಲಭ್ಯವಾಗುತ್ತದೆ? ಈ ರಜೆಯನ್ನು ಸೇವೆಗೆ ಪರಿಗಣಿಸಲಾಗುತ್ತದೆಯೆ? ಈ ಅವಧಿಯಲ್ಲಿ ವೇತನ ನೀಡಲಾಗುತ್ತದೆಯೆ?
| ಹೆಚ್.ಬಿ. ಅಶ್ವಿನಿ ಚಾಮರಾಜನಗರ
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 135ರಂತೆ ಮಹಿಳಾ ಸರ್ಕಾರಿ ನೌಕರರು ಎರಡು ಜೀವಂತ ಮಕ್ಕಳನ್ನು ಪಡೆಯುವವರೆಗೆ ಪ್ರತಿ ಬಾರಿ 180 ದಿನಗಳ ಕಾಲ ಹೆರಿಗೆ ರಜೆಯನ್ನು ಪಡೆದುಕೊಳ್ಳಬಹುದು. ಈ ಅವಧಿಯಲ್ಲಿ ವೇತನ ನೀಡಲಾಗುತ್ತಿದ್ದು, ಸೇವಾವಧಿಯನ್ನು ಪರಿಗಣಿಸಲಾಗುತ್ತದೆ. ನೀವು ಪೂರ್ವಭಾವಿಯಾಗಿ ರಜೆ ಮಂಜೂರಾತಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿ ಈ ಪ್ರಸೂತಿ ರಜೆ ಬಳಸಿಕೊಳ್ಳಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕವನ್ನು ನೋಡಿ.
ಪ್ರಶ್ನೆ ಕೇಳಿ ಪರಿಹಾರ ಪಡೆಯಿರಿ
ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ. ವಿಳಾಸ: ವಿಜಯವಾಣಿ ನಂ. 24, ಶ್ರೀ ಸಾಯಿರಾಂ ಟವರ್ಸ್, ಮೊದಲ ಮಹಡಿ, 5ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು-18, ದೂ: 8884432666, ಫ್ಯಾಕ್ಸ್: 080-26257464,

**RSGE**::: ಸರ್ಕಾರಿ ಕಾರ್ನರ್​ ದಿನದ ಪ್ರಶ್ನೆ

ನಾನು 2013ರಲ್ಲಿ ಸರ್ಕಾರಿ ಸೇವೆಗೆ ಸೇರಿದೆ. ಎರಡು ಮಕ್ಕಳಾದ ಮೇಲೆ 2005ರಲ್ಲಿ ಸಂತಾನಶಕ್ತಿಹರಣ ಚಿಕಿತ್ಸೆಗೆ ಒಳಗಾಗಿದ್ದು ನಾನು ಈ ಕುಟುಂಬಯೋಜನೆಯ ವಿಶೇಷ ಭತ್ಯೆಯ ಸೌಲಭ್ಯ ಪಡೆಯಬಹುದೇ? ದಯವಿಟ್ಟು ತಿಳಿಸಿ.
| ಸುನಂದಾ ಹೊಕ್ರಾಣಿ ಹಾವೇರಿ
1.10.1985ರ ಸರ್ಕಾರಿ ಆದೇಶ ಸಂಖ್ಯೆ ಎಫ್​ಡಿ 27, ಎಸ್​ಆರ್​ಎಸ್ 85ರಂತೆ ಕುಟುಂಬಯೋಜನೆ ಅನುಸರಿಸುವ ಸರ್ಕಾರಿ ನೌಕರರನ್ನು ಉತ್ತೇಜಿಸಲು ಎರಡು ಜೀವಂತ ಮಕ್ಕಳನ್ನು ಹೊಂದಿರುವ ಸರ್ಕಾರಿ ನೌಕರನು ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರೆ ವೈಯಕ್ತಿಕ ವೇತನರೂಪದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಮುಂದಿನ ವೇತನ ಬಡ್ತಿಗೆ ಅನುಗುಣವಾಗಿ ವೈಯಕ್ತಿಕ ವೇತನರೂಪದಲ್ಲಿ ವಿಶೇಷ ವೇತನ ಬಡ್ತಿಯನ್ನು ನೀಡಲು ಸೂಚಿಸಲಾಗಿದೆ. ಆದರೆ ನೀವು ಸರ್ಕಾರಿ ಸೇವೆಗೆ ಸೇರುವ ಮೊದಲೇ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವುದರಿಂದ
ಈ ವಿಶೇಷ ಭತ್ಯೆ ಲಭ್ಯವಾಗುವುದಿಲ್ಲ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕವನ್ನು ನೋಡಬಹುದು.
ಪ್ರಶ್ನೆ ಕೇಳಿ ಪರಿಹಾರ ಪಡೆಯಿರಿ
ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ. ವಿಳಾಸ: ವಿಜಯವಾಣಿ ನಂ. 24, ಶ್ರೀ ಸಾಯಿರಾಂ ಟವರ್ಸ್, ಮೊದಲ ಮಹಡಿ, 5ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು-18, ದೂ: 8884432666, ಫ್ಯಾಕ್ಸ್: 080-26257464

Tuesday, August 07, 2018

**RSGE**::: ಸರ್ಕಾರಿ ಕಾರ್ನರ್ ದಿನದ ಪ್ರಶ್ನೆ

ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದ ನನ್ನ ಮಗಳು 2007ರಲ್ಲಿ ನಿಧನಳಾಗಿದ್ದು, ಅವಳ ಪತಿಗೆ ಕುಟುಂಬಪಿಂಚಣಿ ಲಭ್ಯವಾಗುತ್ತಿತ್ತು. 2010ರಲ್ಲಿ ಅವರೂ ಮರಣ ಹೊಂದಿರುವುದರಿಂದ ಅವರ ಎರಡೂ ಮಕ್ಕಳನ್ನು ನಾನೇ ನೋಡಿಕೊಳ್ಳುತ್ತಿದ್ದೇನೆ. ಅವರಲ್ಲಿ ಗಂಡು ಪ್ರಾಪ್ತವಯಸ್ಕನಾದ ಮೇಲೆ ಹೆಣ್ಣುಮಗುವಿಗೆ ಪಿಂಚಣಿ ನೀಡಲಾಗುತ್ತಿತ್ತು. ಹೆಣ್ಣುಮಗು ಪ್ರಾಪ್ತವಯಸ್ಕಳಾದ ಮೇಲೆ ಈ ಕುಟುಂಬಪಿಂಚಣಿ ರದ್ದುಗೊಂಡಿದೆ. ಇಂತಹ ಪ್ರಕರಣಗಳಿಗೆ ಪಿಂಚಣಿ ವಿಸ್ತರಿಸಿ ಮಂಜೂರಾತಿ ನೀಡಲು ನಿಯಮಗಳಿವೆಯ? ಸಲಹೆ ನೀಡಿ.
-ಸಿ. ಯಮುನಪ್ಪ ಬಳ್ಳಾರಿ
ಕರ್ನಾಟಕ ಸರ್ಕಾರಿ ನೌಕರರ (ಕುಟುಂಬ ನಿವೃತ್ತಿವೇತನ ) ನಿಯಮಾವಳಿ 2002ರ ನಿಯಮ 9ಡಿ(ಜಿ)ರ ಪ್ರಕಾರ ಅಪ್ರಾಪ್ತ ವಯಸ್ಸಿನ ಗಂಡುಮಗು 18 ವರ್ಷ ಹಾಗೂ ಹೆಣ್ಣುಮಗು 21 ವರ್ಷ ಆಗುವವರೆಗೆ ಈ ಕುಟುಂಬಪಿಂಚಣಿಯನ್ನು ಮಂಜೂರು ಮಾಡಲು ನಿಯಮಾವಳಿಯಲ್ಲಿ ಅವಕಾಶವಿದೆ. ಹೀಗಾಗಿ ನೀವು ಹೆಣ್ಣುಮಗುವಿಗೆ ಮತ್ತೆ ಮೂರು ವರ್ಷ ಕುಟುಂಬಪಿಂಚಣಿಯನ್ನು ವಿಸ್ತರಿಸಲು ಕೋರಿ ಅರ್ಜಿ ಸಲ್ಲಿಸಿ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕ ನೋಡಿ.

**RSGE**::: 2018-19ನೇ ಸಾಲಿನಲ್ಲಿ ಮಾಡುವ ಸರ್ಕಾರಿ ನೌಕರರ ವರ್ಗಾವಣೆಗಳ ಬಗ್ಗೆ

ಕರ್ನಾಟಕ ಸರ್ಕಾರದ ನಡವಳಿಗಳು
ವಿಷಯ: 2018-19ನೇ ಸಾಲಿನಲ್ಲಿ ಮಾಡುವ ಸರ್ಕಾರಿ ನೌಕರರ ವರ್ಗಾವಣೆಗಳ ಬಗ್ಗೆ
ಮಾರ್ಗಸೂಚಿಗಳು.
ಓದಲಾಗಿದೆ:-
1. ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 22 ಸೇನೌವ 2013, ಬೆಂಗಳೂರು ದಿನಾಂಕ: 07.06.2013.
2, ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 22 ಸೇನೌವ 2013, ಬೆಂಗಳೂರು ದಿನಾಂಕ: 14.06.2013,
3, ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 18 ಸೇನದ 2014, ಬೆಂಗಳೂರು ದಿನಾಂಕ: 05,02.2014
- 4 ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 17 ಸೇಘವ 2015, ಬೆಂಗಳೂರು ದಿನಾಂಕ: 27.04.2015,
5, ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 63 ಸೇನೌವ 2015, ಬೆಂಗಳೂರು ದಿನಾಂಕ: 01.10.2015,
6, ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 25 ಸೇಘವ 2015, ಬೆಂಗಳೂರು ದಿನಾಂಕ: 14.10.2015,
7 ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 2 ಸೇನೌವ 2017, ಬೆಂಗಳೂರು ದಿನಾಂಕ: 27.03.2017
8, ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 18 ಸೇನೌವ 2018, ಬೆಂಗಳೂರು ದಿನಾಂಕ: 23.06.2018,
ಪ್ರಸ್ತಾವನೆ:-
ಮೇಲೆ (1) ರಲ್ಲಿ ಓದಲಾದ ಸರ್ಕಾರದ ಆದೇಶದಲ್ಲಿ ಸರ್ಕಾರಿ ನೌಕರರ ವರ್ಗಾವಣೆ ಕುರಿತಂತೆ
ವಿಸ್ತ್ರತವಾದ ಮಾರ್ಗಸೂಚಿಗಳನ್ನು ನೀಡಲಾಗಿದೆ. ಈ ಮಾರ್ಗಸೂಚನೆಗಳಲ್ಲಿನ ಷರತ್ತುಗಳಿಗೊಳಪಟ್ಟು
- 2018-19ನೇ ಸಾಲಿನಲ್ಲಿ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಗಳನ್ನು ಸಂಬಂಧಿತ ವೃಂದದ
ಕಾರ್ಯನಿರತ ವೃಂದಬಲದ ( Working StrerIgth) ಶೇಕಡಾ 4ರಷಕ್ಕೆ ಸೀಮಿತಗೊಳE
ದಿನಾಂಕ: 31.07.2018 ರವರೆಗೆ ಮಾಡಬಹುದೆಂದು ಮೇಲೆ (8)ರಲ್ಲಿ ಓದಲಾದ ದಿನಾಂಕ: 23.06, 2018ರ
ಸರ್ಕಾರಿ ಆದೇಶದಲ್ಲಿ ಆದೇಶಿಸಲಾಗಿದೆ. ಪ್ರಸ್ತುತ ವರ್ಗಾವಣೆ ಅವಧಿಯನ್ನು ಮತ್ತೆ ವಿಸ್ತರಿಸುವುದು
- ಅವಶ್ಯವೆಂದು ಸರ್ಕಾರವು ಪರಿಗಣಿಸಿ ಈ ಕೆಳಕಂಡಂತೆ ಆದೇಶಿಸಿರುತ್ತದೆ.
ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 18 ಸೇನೌವ 2018 ಬೆಂಗಳೂರು, ದಿನಾಂಕ: 31.07.2018
ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳ ಹಿನ್ನೆಲೆಯಲ್ಲಿ ಮೇಲೆ (1) ರಿಂದ (8)ರವರೆಗೆ ಓದಲಾದ
ಸರ್ಕಾರಿ ಆದೇಶಗಳಲ್ಲಿ ನಮೂದಿಸಿರುವ ಷರತ್ತುಗಳೊಂದಿಗೆ 2018-19ನೇ ಸಾಲಿನ ಸರ್ಕಾರಿ ನೌಕರರ
ಸಾರ್ವತ್ರಿಕ ವರ್ಗಾವಣೆ ಅವಧಿಯನ್ನು ದಿನಾಂಕ: 10.08.2018 ರವರೆಗೆ ವಿಸ್ತರಿಸಿ ಆದೇಶಿಸಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ
ಮತ್ತು ಅವರ ಹೆಸರಿನಲ್ಲಿ
64 4.
2 - 02 FE
(ಗಾಯತ್ರಿ, ಎಂ.ಆರ್.)
ಸರ್ಕಾರದ ಅಧೀನ ಕಾರ್ಯದರ್ಶಿ
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ
- (ಸೇವಾ ನಿಯಮಗಳು-1)
LALSAB DODMANI STATE VP KSG (NPS) EA
ಇವರಿಗೆ:
ಪ್ರಕಟಿಸಿ ಅದರ
1962ನಕಾರರು, ಕರ್ನಾಟಕ ರಾಜಪತ ಇವರಿಗೆ - ಅದಮ, ರಾಜನತ್ರದಲ್ಲಿ
200 ಪ್ರತಿಗಳನ್ನು ಸರ್ಕಾರದ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ,

Monday, August 06, 2018

**RSGE**::: ನೌಕರರ ಕೆಜಿಐಡಿ ಮೊತ್ತ ತಿದ್ದುಪಡಿ

ನೌಕರರ ಕೆಜಿಐಡಿ ಮೊತ್ತ ತಿದ್ದುಪಡಿ
ಬೆಂಗಳೂರು: ಆರನೇ ರಾಜ್ಯ ವೇತನ ಆಯೋಗದ ಶಿಫಾರಸಿನ
ಅನುಷ್ಠಾನದ ಅನ್ವಯ ಏ.1ರಿಂದ ಜಾರಿಯಾಗುವ ಪರಿಷ್ಕೃತ
ವೇತನ ಶ್ರೇಣಿಗೆ ಅನುಗುಣವಾಗಿ ಸರ್ಕಾರಿ ನೌಕರರ ಮಾಸಿಕ
ವಿಮಾ ಕಂತಿನ ಕನಿಷ್ಠ ದರವನ್ನು ತಿದ್ದುಪಡಿ ಮಾಡಿ ಆರ್ಥಿಕ
ಇಲಾಖೆ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರಿ ನೌಕರರ ಅತಿ
ಕನಿಷ್ಠ ವೇತನ ಶ್ರೇಣಿಯಾದ 17,000-28,950 ರೂ.ಗೆ
1,440 ರೂ.ಗಳ ಕನಿಷ್ಠ ಮಾಸಿಕ ವಿಮಾನ ಕಂತಿನ ಮೊಬಲಗು
ನಿರ್ದಿಷ್ಟಪಡಿಸಿದ್ದರೆ, ಅತಿ ಗರಿಷ್ಠ ವೇತನ ಶ್ರೇಣಿಯಾದ
1,04,600-1,50,600 ರೂ.ಗಳಿಗೆ ಕನಿಷ್ಠ ಮೊಬಲಗು 7,980
ರೂ. ಗೊತ್ತುಪಡಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.

Thursday, August 02, 2018

**RSGE**::: ಸರ್ಕಾರಿ ನೌಕರನು ತಿಳಿದಿರಬೇಕಾದ ಸೇವಾ ನಿಯಮಾವಳಿಗಳು





ಸರ್ಕಾರಿ ನೌಕರನು ತಿಳಿದಿರಬೇಕಾದ
, ಸೇವಾ ನಿಯಮಾವಳಿಗಳು |
ಸಾಂದರ್ಭಿಕ ರಜೆ: 15 ದಿನಗಳು
(ಜನವರಿಯಿಂದ ಡಿಸೆಂಬರ್ ವರೆಗಿನ ಕ್ಯಾಲೆಂಡರ್ ವರ್ಷಗಳಲ್ಲಿ)
2. ಪರಿಮಿತ ರಜೆ : 2 ದಿನಗಳು
3. ವಿಶೇಷ ಸಾಂದರ್ಭಿಕ ರಜೆ:
1, ಕುಟುಂಬ ಯೋಜನಾ ಶಸ್ತ್ರಚಿಕಿತ್ಸೆಗಾಗಿ 7 ದಿನ
2, ವಂಕಿ ಅಳವಡಿಸಿಕೊಳ್ಳುವುದಕ್ಕೆ 1 ದಿನ
3. ಸರ್ಕಾರಿ ಜೀವ ವಿಮೆ ಮಾಡಿಸಲು 1 ದಿನ
4, ಇಲಾಖಾ ಪರೀಕ್ಷೆಗಾಗಿ ಅನುಮತಿ ರಜೆ
5. ನಾಸ್ ಪೆರಿಫೆರಲ್ಚಿಕಿತ್ಸೆಗಾಗಿ, ನಾಯಿ ಕಚ್ಚಿದ ಸಂದರ್ಭಕ್ಕಾಗಿ 14 ದಿನಗಳು
ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ಕ್ರೀಡೆಯ ಕ್ರೀಡಾಪಟುವಿನ
ಭಾಗವಹಿಸುವಿಕೆಗೆ 20 ದಿನ ರಜೆ
4. ಪ್ರಸವ ಕಾಲದ ರಜೆ:
1 180 ದಿನ (6 ತಿಂಗಳು) 2 ಮಕ್ಕಳಿಗೆ ಮಾತ್ರ.
ಮಹಿಳಾ ಉದ್ಯೋಗಿಗೆ ಹೆರಿಗೆ ಮತ್ತು ತಾಯಿ ಮಗುವಿನ ಆರೋಗ್ಯ ಆರೈಕೆಗಾಗಿ.
2, ಪೆಟರ್‌ನಟಿ ರಜೆ 15 ದಿನಗಳು
(1ನೇ ಮತ್ತು 2ನೇ ಮಗುವಿನ ಹೆರಿಗೆ ಸಮಯದಲ್ಲಿ ಪುರುಷರಿಗಾಗಿ)
5. ಗಳಿಕೆ ರಜೆ: 30 ದಿನ
1. ಒಂದು ಕ್ಯಾಲೆಂಡರ್ ವರ್ಷದಲ್ಲಿ ಜನವರಿ ಮತ್ತು ಜುಲೈ ಮಾಹೆಯಲ್ಲಿ ಕ್ರಮವಾಗಿ 15-15 ದಿನಗಳಂತೆ
ವರ್ಷಕ್ಕೊಮ್ಮೆ 30 ದಿನಗಳ ಗಳಿಕೆ ರಜೆ ಪಡೆಯಲು, ಸರ್ಕಾರಕ್ಕೆ ಒಪ್ಪಿಸಿ 1 ತಿಂಗಳ ಸಂಬಳ ಪಡೆಯಬಹುದು.
ಒಂದು ಬಾರಿಗೆ ಗರಿಷ್ಠ 120 ದಿನಗಳ ಗಳಿಕೆ ರಜೆಯನ್ನು ಉಪಯೋಗಿಸಬಹುದು.
4, ನಿವೃತ್ತಿ ಸಮಯದವರೆಗೆ ಗರಿಷ್ಠ 300 ದಿನಗಳ ಗಳಿಕೆ ರಜೆ ಕಾಯ್ದಿರಿಸಿ 300 ದಿನಗಳ ಸಂಬಳ ಪಡೆಯಬಹುದು.
6. ಅರ್ಧ ಸಂಬಳೆ ರಜೆ: 200 ದಿನ
(ಒಂದು ಕ್ಯಾಲೆಂಡರ್ ವರ್ಷದಲ್ಲಿ 20 ಅರ್ಧ ಸಂಬಳದ ರಜೆ)ಇದ್ದು
ಅದನ್ನು 10ದಿನದ ಪೂರ್ತಿ ರಜೆಯಾಗಿ ಬಳಸಬಹುದು.
7, ಶಿಶುಪಾಲನಾ ರಜೆ: 730 ದಿನಗಳು
(ಮಹಿಳಾ ಸರ್ಕಾರಿ ನೌಕರಳ ಅಂಗವಿಕಲ/ಬುದ್ಧಿಮಾಂದ್ಯ ಮಗುವು 18 ವರ್ಷಗಳಾಗುವ ತನಕ
ವರ್ಷದಲ್ಲಿ 15 ದಿನಗಳಂತೆ ಅವಧಿಯೊಳಗೆ ವೈಧ್ಯಕೀಯ ವೆಚ್ಛದ  ಬಿಲ್ಲುಗಳನ್ನು
ಬಳಸಬಹುದು,
10.  ವೇತನ ಜಾರಿ: # ೫)
1 ಏಪ್ರಿಲ್  ೨೦೧೨ ರೀಂದ ನೌಕರರಿಗೆ ಪದೊನ್ನತಿ ದೊರೆಯದಿದ್ದಲ್ಲಿ 10, 15, 20, 25 ಮತ್ತು 30 ವರ್ಶಗಳಿಗೆ ತೈಮ್ಬಾಂಡ್ ಪಡೆಯಬಹುದು.

12. ಕನ್ನಡ ಭಾಷಾ ಪರೀಕ್ಷೆ ಪಾರಾಗಿದ್ದಕ್ಕಾಗಿ ಒಂದು ಹೆಚ್ಚುವರಿ ವೇತನ ಬಡ್ತಿ:
11-01-1974ರಿಂದ 12.09.1987ರೊಳಗೆ ನೌಕರಿಯಲ್ಲಿ ಇದ್ದವರಿಗೆ ಮಾತ್ರಅ ಭ್ಯವಿದೆ,
13, ಹಿರಿಯ ನೌಕರರಿಗಿಂತ ಕಿರಿಯ ನೌಕರನ ವೇತನ ಹೆಚ್ಚಾಗಿದ್ದರೆ, ನೌಕರನ
ವೇತನ ಎತ್ತರಿಸಲಾಗುವುದು.
:
14, ಸೇವಾ ಪುಸ್ತಕ
- 1, ಸೇವಾ ಪುಸ್ತಕವನ್ನು ಸರ್ಕಾರಿ ವೆಚ್ಚದಲ್ಲಿ ದ್ವಿಪ್ರತಿಯಲ್ಲಿ ನಿರ್ವಹಿಸಿ ಒಂದು ಪ್ರತಿಯನ್ನು ಉಚಿತವಾಗಿ ನೌಕರರಿಗೆ ಒದಗಿಸಬೇಕು.(
ಸರ್ಕಾರಿ ಆದೇಶ ಸಂ. ಸಿಆಸುಇ/27/ ಆಸು 2012 ದಿನಾಂಕ
16.03.2012) (37ನೇ ಪುಟಕ್ಕೆ...)
- ನವೆಂಬರ್ 2017 35 |
3 ಬಾರಿ ಸೇವಾ ಅವಧಿಯಲ್ಲಿ 730 ದಿನ ಮೀರದಂತೆ ಉಪಯೋಗಿಸಬಹುದು.
8. ವೃತ್ತಿ ತೆರಿಗೆಯಿಂದ ವಿನಾಯಿತಿ:
1, ಒಂದು ಮಗು ಇರುವವರು, ಕುಟುಂಬ ಕಲ್ಯಾಣ ಶಸ್ತ್ರಚಿಕಿತ್ಸೆ ಮಾಡಿಕೊಂಡರೆ ವೃತ್ತಿ ತೆರಿಗೆಯಿಂದ ವಿನಾಯ್ತಿ ಬಯಸಬಹುದು.
ಅಂಗವಿಕಲ ನೌಕರರಿಗೂ ವಿನಾಯ್ತಿ ಇದೆ.

ಹೆಚ್ಚು ಓದಿದವು