Showing posts with label sirculars. Show all posts
Showing posts with label sirculars. Show all posts

Wednesday, March 27, 2019

ಸುತ್ತೋಲೆ ವಿಷಯ : ಸರ್ಕಾರಿ ಅಧಿಕಾರಿ / ನೌಕರರುಗಳ ವಿರುದ್ಧ ಶಿಸ್ತುಕ್ರಮ ಇಲಾಖಾ ವಿಚಾರಣೆಯ ಅವಶ್ಯಕ ಪರಿಪೂರ್ಣ ಪ್ರಸ್ತಾವನೆಗಳನ್ನು ವಿಳಂಬವಿಲ್ಲದೇ ಸಲ್ಲಿಸುವ ಬಗ್ಗೆ.

ಕರ್ನಾಟಕ ಸರ್ಕಾರ
ಸಂಖ್ಯೆ : ಸಿಆಸುಇ 76 ಸೇವಿ 2018
ಕರ್ನಾಟಕ ಸರ್ಕಾರದ ಸಚಿವಾಲಯ ,
ವಿಧಾನಸೌಧ . ಬೆಂಗಳೂರು , ದಿನಾಂಕ : 21 . 01 . 2019
ಸುತ್ತೋಲೆ
ವಿಷಯ : ಸರ್ಕಾರಿ ಅಧಿಕಾರಿ / ನೌಕರರುಗಳ ವಿರುದ್ಧ ಶಿಸ್ತುಕ್ರಮ ಇಲಾಖಾ ವಿಚಾರಣೆಯ
ಅವಶ್ಯಕ ಪರಿಪೂರ್ಣ ಪ್ರಸ್ತಾವನೆಗಳನ್ನು ವಿಳಂಬವಿಲ್ಲದೇ ಸಲ್ಲಿಸುವ ಬಗ್ಗೆ
ಮರು ಸೂಚನೆಗಳು , ಉಲ್ಲೇಖ : ( 1 ) ಅಧಿಕೃತ ಜ್ಞಾಪನ ಸಂಖ್ಯೆ : ಡಿಪಿಎಆರ್ 41 ಎಸ್‌ಡಿಇ 83 , ದಿನಾಂಕ : 16 . 08 . 1983 .
( 2 ) ಅಧಿಕೃತ ಜ್ಞಾಪನ ಸಂಖ್ಯೆ : ಡಿಪಿಎಆರ್‌ 33 ಎಸ್‌ಡಿಇ 83 , ದಿ : 24 . 05 . 1984 , ( 3 ) ಸುತ್ತೋಲೆ ಸಂಖ್ಯೆ : ಸಿಆಸುಇ 7 ನೇಣವಿ 96 , ದಿನಾಂಕ : 04 . 07 . 1996 , ( 4 ) ಸುತ್ತೋಲೆ ಸಂಖ್ಯೆ : ಸಿಆಸುಇ 04 ಸೇಇವಿ 96 , ದಿನಾಂಕ : 28 . 08 . 1996 , ( 5 ) ಸುತ್ತೋಲೆ ಸಂಖ್ಯೆ : ಸಿಆಸುಇ 09 ಸೇಣವಿ 98 , ದಿನಾಂಕ : 03 . 08 . 1998 , ( 6 ) ಸುತ್ತೋಲೆ ಸಂಖ್ಯೆ : ಸಿಆಸುಇ 47 ಸೇವಿ 2007 , ದಿನಾಂಕ : 23 . 03 . 2002 . ( 7 ) ಸುತ್ತೋಲೆ ಸಂಖ್ಯೆ : ಸಿಆಸುಇ 07 ಸೇವಿ 2003 , ದಿನಾಂಕ : 12 . 05 . 2003 , ( 8 ) ಸುತ್ತೋಲೆ ಸಂಖ್ಯೆ : ಸಿಆಸುಇ 1 ಸೇಇವಿ 2005 , ದಿನಾಂಕ : 09 . 02 . 2005 ,
ಸರ್ಕಾರಿ ನೌಕರನು ಸೇವೆಯಲ್ಲಿದ್ದಾಗ ಅವನ ಮೇಲೆ ಹೂಡಿದ ಯಾವುದೇ ಇಲಾಖಾ ತನಿಖೆಗಳ ಬಗ್ಗೆ ಅವನು ಸೇವೆಯಿಂದ ನಿವೃತ್ತಿಯಾದ ನಂತರ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 214 ( 2 ) ( ಬಿ ) ರ ಉಪಬಂಧಗಳಿಗೆ ಒಳಪಟ್ಟು ಇಲಾಖಾ ವಿಚಾರಣೆಯನ್ನು ಆರಂಭಿಸುವ ಮತ್ತು ಸೇವೆಯಲ್ಲಿದ್ದಾಗ ಅವನ ವಿರುದ್ಧ ಆರಂಭಿಸಿರುವ ಇಲಾಖಾ ವಿಚಾರಣೆಯನ್ನು ನಿಯಮ 214 ( 2 ) ( ಎ ) ರ ಉಪಬಂಧಗಳಿಗೆ ಒಳಪಟ್ಟು ಮುಂದುವರೆಸುವ ಅವಕಾಶವಿದೆ . ಇದರ ಹೊರತಾಗಿ ಕರ್ನಾಟಕ ನಾಗರಿಕ ಸೇವಾ ( ವರ್ಗೀಕರಣ , ನಿಯಂತ್ರಣ ಮತ್ತು ಮೇಲ್ಮನವಿ ) ನಿಯಮಗಳು , 1957ರಲ್ಲಿರುವ ನಿಯಮಗಳ ಪ್ರಕಾರ ಹೊಸದಾಗಿ ಇಲಾಖಾ ವಿಚಾರಣೆ ಪ್ರಾರಂಭಿಸುವುದಕ್ಕೆ ಮತ್ತು ಪ್ರಾರಂಭಿಸಿರುವ ಇಲಾಖಾ ವಿಚಾರಣೆಯನ್ನು ಮುಂದುವರೆಸುವುದಕ್ಕೆ ಅವಕಾಶವಿರುವುದಿಲ್ಲ . ಕಾರಣ ಕರ್ನಾಟಕ ನಾಗರಿಕ ಸೇವಾ ( ವರ್ಗೀಕರಣ , ನಿಯಂತ್ರಣ ಮತ್ತು ಮೇಲ್ಮನವಿ ) ನಿಯಮಗಳು ಅಂತಹ ನಿವೃತ್ತ ನೌಕರರಿಗೆ ಅನ್ವಯಿಸುವುದಿಲ್ಲ . ಸರ್ಕಾರಿ ನೌಕರನು ನಿವೃತ್ತಿಯಾದ ನಂತರ ಅವನ ಮೇಲೆ ಹೂಡಲಾಗಿದ್ದ ಇಲಾಖಾ ತನಿಖೆಗಳನ್ನು ಸರ್ಕಾರಕ್ಕೆ ಆರ್ಥಿಕ ಹಾನಿ ಉಂಟಾಗಿಲ್ಲವೆಂಬ ಕಾರಣ ನೀಡಿ ಅವುಗಳನ್ನು ಹಿಂದಕ್ಕೆ ತೆಗೆದುಕೊಳ್ಳುವ ಪ್ರಸ್ತಾವನೆಗಳು ಸರ್ಕಾರದ ಮುಂದೆ ಬಂದ ಸಂದರ್ಭದಲ್ಲಿ ಸರ್ಕಾರವು ಆ ಬಗ್ಗೆ ಪರಿಶೀಲಿಸಿ , ಉಲ್ಲೇಖ ( I ) ಮತ್ತು ( 2 ) ರ ಅಧಿಕೃತ ಜ್ಞಾಸನಗಳಲ್ಲಿ ನಿವೃತ್ತಿ ಆಗುವಂತಹ ಸರ್ಕಾರಿ ನೌಕರರ ಮೇಲೆ ಹೂಡಲಾಗಿರುವ ಇಲಾಖಾ ತನಿಖೆಗಳನ್ನು ಅವರು ನಿವೃತ್ತಿ ಆಗುವುದಕ್ಕೆ ಮುಂಚೆ ಇತ್ಯರ್ಥ ಮಾಡುವ ಕುರಿತು ಸೂಚನೆಗಳನ್ನು ನೀಡಿದೆ .
2 . ತದನಂತರದಲ್ಲಿ ನಿವೃತ್ತಿ ಹೊಂದಿದ ಆಪಾದಿತ ಅಧಿಕಾರಿ ವಿರುದ್ಧ ಇಲಾಖಾ ವಿಚಾರಣೆ ಪ್ರಾರಂಭಿಸಬೇಕಾದ ಪ್ರಕರಣವೊಂದರಲ್ಲಿ ಸಕಾಲದಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 214 ( ಬಿ ) ( ತ ) ರಲ್ಲಿ ನಿಗದಿಪಡಿಸಿದ ಕಾಲಮಿತಿಯೊಳಗೆ ವಿಚಾರಣೆಯನ್ನು ಪ್ರಾರಂಭಿಸಿಲ್ಲದ ಕಾರಣ ಆಪಾದಿತ ಅಧಿಕಾರಿಯ ಮೇಲೆ ಇಲಾಖಾ ವಿಚಾರಣೆ ಹೂಡಲು ಅಸಾಧ್ಯವಾದ ಪರಿಸ್ಥಿತಿ ಉಂಟಾದುದಲ್ಲದೇ ಆರೋಪಿ ಸರ್ಕಾರಿ ನೌಕರರು ನಿವೃತ್ತಿ ಹೊಂದುವ 2 - 3 ದಿನಗಳ ಮುಂಚೆ ಇಲ್ಲವೇ ಹಿಂದಿನ ದಿನ ಅವ ದುರ್ನಡತೆಗೆ ಸಂಬಂಧಿಸಿದ ವಿವರಗಳು ನೀಡಿ ಅವರ ಮೇಲೆ ಶಿಸ್ತಿನ ಕ್ರಮ ಆರಂಭಿಸಲು ಇಲಾಖೆಗಳು ಸರ್ಕಾರಕ್ಕೆ ಪ್ರಸ್ತಾವನೆಗಳನ್ನು ಕಳುಹಿಸುತ್ತಿರುವುದು ಸಹ ಸರ್ಕಾರದ ಗಮನಕ್ಕೆ ಬಂದ ಸಂದರ್ಭದಲ್ಲಿ ಸರ್ಕಾರವು ಉಲ್ಲೇಖ ( 4 ) ರ ಸುತ್ತೋಲೆಯಲ್ಲಿ ಸರ್ಕಾರಿ ನೌಕರನ ದುರ್ನಡತೆ ಗಮನಕ್ಕೆ ಬಂದ ತಕ್ಷಣ ಶಿಸ್ತಿನ ಪ್ರಾಧಿಕಾರಕ್ಕೆ ಅದನ್ನು ತಿಳಿಸಬೇಕು . ನಿವೃತ್ತಿ ಹೊಂದಲಿರುವ ನೌಕರರ ಪ್ರಕರಣದಲ್ಲಿ ಶಿಸ್ತಿನ ಪ್ರಾಧಿಕಾರಕ್ಕೆ ಅಂತಹ ಮಾಹಿತಿ ಸರ್ಕಾರಿ ನೌಕರನು ನಿವೃತ್ತಿ ಹೊಂದುವ ಕನಿಷ್ಠ 2 ಅಥವಾ 3 ತಿಂಗಳ ಪೂರ್ವದಲ್ಲಿ ನೀಡಿ , ಕರಡು ದೋಷಾರೋಪಣಾ ಪಟ್ಟಿ ಇತ್ಯಾದಿ , ಸಂಬಂಧಿಸಿದ ಕಾಗದ ಪತ್ರ ಮತ್ತು ದಾಖಲೆಗಳೊಡನೆ ಶಿಸ್ತುಪಾಧಿಕಾರಿಗಳಿಗೆ ಕಳುಹಿಸುವ ಬಗ್ಗೆ ಮತ್ತು ವಯೋನಿವೃತ್ತಿ ಅಂಚಿನಲ್ಲಿರುವ ಅಂತಹ ಆಪಾದಿತ ಸರ್ಕಾರಿ ನೌಕರರ ನಿವೃತ್ತಿ ದಿನಾಂಕವನ್ನು ಕಡ್ಡಾಯವಾಗಿ ನಮೂದಿಸುವ ಬಗ್ಗೆ ಸೂಚನೆಗಳನ್ನು ನೀಡಲಾಗಿದೆ . ಉಲ್ಲೇಖ ( 5 ) ರ ಸುತ್ತೋಲೆಯಲ್ಲಿ ನಿವೃತ್ತಿ ಹೊಂದಲಿರುವ ಅಧಿಕಾರಿಗಳ ವಿರುದ್ಧ ಶಿಸ್ತಿನ ಪ್ರಸ್ತಾವನೆಗಳನ್ನು ಸಂಬಂಧಿಸಿದ ಅಧಿಕಾರಿ ವಯೋ ನಿವೃತ್ತಿ ಹೊಂದುವ ಕನಿಷ್ಠ ಆರು ತಿಂಗಳ ಮುಂಚೆಯೇ ಕಳುಹಿಸಬೇಕೆಂದು ತಿಳಿಸಲಾಗಿದೆ .
3 . ಉಲ್ಲೇಖ ( 8 ) ರ ಸುತ್ತೋಲೆಯಲ್ಲಿ ನಿವೃತ್ತಿ ಅಂಚಿನಲ್ಲಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಪ್ರಕರಣಗಳನ್ನು ಕಳುಹಿಸುವಲ್ಲಿ ಇಲಾಖೆಗಳು ಯಾವುದೇ ವಿಳಂಬವನ್ನು ಮಾಡಬಾರದು , ಹೀಗೆ ಕೊನೆ ಗಳಿಗೆಯಲ್ಲಿ ಪ್ರಸ್ತಾವನೆಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಕಳುಹಿಸಿದಲ್ಲಿ ಮತ್ತು ಅಂತಹ ವಿಚಾರಣೆಯು ಕಾಲಮಿತಿಯನ್ನು ಮೀರಿದ್ದಾದಲ್ಲಿ ವಿಳಂಬಕ್ಕೆ ಜವಾಬ್ದಾರರಾದ ನೌಕರರು / ಅಧಿಕಾರಿಗಳನ್ನು ಗುರುತಿಸಿ ಅವರುಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ತಿಳಿಸಲಾಗಿದೆ .
4 , ಉಲ್ಲೇಖ ( 6 ) ರ ಸುತ್ತೋಲೆಯಲ್ಲಿ ಕರ್ನಾಟಕ ನಾಗರಿಕ ಸೇವಾ ( ವರ್ಗೀಕರಣ , ನಿಯಂತ್ರಣ ಮತ್ತು ಮೇಲ್ಮನವಿ ) ನಿಯಮಗಳು , 1957ರ ನಿಯಮಗಳ ಅಡಿಯಲ್ಲಿ ಆರಂಭಿಸುವ ಪ್ರತಿಯೊಂದು ಪ್ರಕರಣದಲ್ಲಿ ಆಪಾದಿತ ಸರ್ಕಾರಿ ನೌಕರನ ವಯೋ ನಿವೃತ್ತಿ ದಿನಾಂಕ ಸೇರಿದಂತೆ ಇತರೆ ವಿವರಗಳನ್ನು ಸಂಬಂಧಿಸಿದ ದಾಖಲೆಗಳೊಂದಿಗೆ ಯಾವಾಗಲೂ ಇಡತಕ್ಕದ್ದೆಂದು ಹಾಗೂ ಅದನ್ನು ಸಂಬಂಧಿಸಿದ ಪ್ರಾಧಿಕಾರಿಗಳಿಗೆ ಲಭ್ಯಮಾಡತಕ್ಕದ್ದೆಂದು ಹಾಗೂ ಈ ವಿವರಗಳನ್ನು ತಪ್ಪದೆ ಕಡತದ ಕವಚದ ಮೇಲೆ ದಪ್ಪ ಅಕ್ಷರದಲ್ಲಿ ಕೆಂಪು ಶಾಯಿಯಲ್ಲಿ ನಮೂದಿಸಬೇಕೆಂದು ಸೂಚನೆಗಳನ್ನು ನೀಡಲಾಗಿದೆ .
5 , ಈ ರೀತಿ ಸರ್ಕಾರವು ಕಾಲಕಾಲಕ್ಕೆ ಹೊರಡಿಸಿದ ಮೇಲ್ಕಂಡ ಸೂಚನೆಗಳಿದ್ದಾಗ್ಯೂ ಇತ್ತೀಚೆಗೆ ಆಡಳಿತ ಇಲಾಖೆಯೊಂದು ಆರೋಪಿತ ಸರ್ಕಾರಿ ನೌಕರನ ವಿರುದ್ಧ ಶಿಸ್ತು ಪ್ರಕರಣದ ಪೂರ್ಣ ಪ್ರಸ್ತಾವನೆಯನ್ನು ಶಿಸ್ತುಪ್ರಾಧಿಕಾರಕ್ಕೆ ಆ ಅಧಿಕಾರಿ ನಿವೃತ್ತಿ ಹೊಂದುವ ಒಂದು ವಾರದ ಮುಂಚೆ ಕಳುಹಿಸಿರುವುದರಿಂದ , ಅಂತಹ ಆರೋಪಿತ ಅಧಿಕಾರಿ ವಿರುದ್ಧ ಕ್ರಮ ಜರುಗಿಸಲು ಅವಕಾಶವಿಲ್ಲದಂತಾಗಿರುವ ವಿಷಯವು ಸರ್ಕಾರದ ಗಮನಕ್ಕೆ ಬಂದಿದೆ .
( 1 ) ಆದುದರಿಂದ , ನಿವೃತ್ತಿ ಹೊಂದಲಿರುವ ಅಧಿಕಾರಿ / ನೌಕರರ ವಿರುದ್ದದ ಶಿಸ್ತುಕ್ರಮದ ಪರಿಪೂರ್ಣ ಪ್ರಸ್ತಾವನೆ ಗಳನ್ನು ಆಡಳಿತ ಇಲಾಖೆಗಳು ಅಂತಹ ಅಧಿಕಾರಿ / ನೌಕರರು ನಿವೃತ್ತರಾಗುವ ಕನಿಷ್ಠ 30 ದಿನಗಳ ಮುಂಚೆ ಶಿಸ್ತುಪ್ರಾಧಿಕಾರಕ್ಕೆ ಸಲ್ಲಿಸತಕ್ಕದ್ದು .
> > 2) ಕಡತದ ಕವಚದ ಮೇಲೆ ದಪ್ಪ ಅಕ್ಷರಗಳಲ್ಲಿ ಕೆಂಪು ಶಾಹಿಯಲ್ಲಿ ಆಪಾದಿತ ಸರ್ಕಾರಿ ನೌಕರರ ವಯೋ ನಿವೃತ್ತಿ ದಿನಾಂಕ ನಮೂದಿಸತಕ್ಕದ್ದು .
( 3 ) ಮೇಲಿನ ಕಾಲಮಿತಿ ಮೀರಿದಾದಲ್ಲಿ ವಿಳಂಬಕ್ಕೆ ಜವಾಬ್ದಾರರಾದ ನೌಕರರ / ಅಧಿಕಾರಿಗಳನ್ನು ಗುರುತಿಸಿ , ಆದರುಗಳ ವಿರುದ್ಧ ಶಿಸ್ತು ಕ್ರಮ ಜರುಗಿಸತಕ್ಕದ್ದು . ಈ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು .
ಸವಿಲ್ಲಾ ( ಟಿ . ಎಂ . ವಿಜಯ್ ಭಾಸ್ಕರ್ ) ಸರ್ಕಾರದ ಮುಖ್ಯ ಕಾರ್ಯದರ್ಶಿ
ಅವರಿಗೆ : ಸಂಕಲನಕಾರರು , ಕರ್ನಾಟಕ ರಾಜ್ಯ ಪತ್ರ ಇವರಿಗೆ ಇದನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿ ಅದರ 200 ಪ್ರತಿಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ( ಸೇವಾ ನಿಯಮಗಳು ) , ವಿಧಾನಸೌಧ ಇಲ್ಲಿಗೆ ಕಳುಹಿಸಲು ಕೋರಿದೆ .
1 ) ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು , 2 ) ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು / ಪ್ರಧಾನ ಕಾರ್ಯದರ್ಶಿಗಳು / ಕಾರ್ಯದರ್ಶಿಗಳು . 3 ) ಎಲ್ಲಾ ಇಲಾಖಾ ಮುಖ್ಯಸ್ಥರು / ಜಿಲ್ಲಾಧಿಕಾರಿಗಳು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು , ಜಿಲ್ಲಾ
ಪಂಚಾಯತ್ , 4 ) ಸರ್ಕಾರದ ಎಲ್ಲಾ ವಿಶೇಷ / ಅಪರ / ಸಹ / ಉಪ ಕಾರ್ಯದರ್ಶಿಗಳು . 5 ) ಸರ್ಕಾರದ ಎಲ್ಲಾ ಅಧೀನ ಕಾರ್ಯದರ್ಶಿಗಳು . 6 ) ನಿರ್ದೇಶಕರು , ಕರ್ನಾಟಕ ಸರ್ಕಾರ ಸಚಿವಾಲಯ ತರಬೇತಿ ಸಂಸ್ಥೆ .

Thursday, August 16, 2018

**RSGE**::: ಆಗಸ್ಟ್ ೧೭ರ ರಜೆ ಕುರಿತ ಆದೇಶ

ಕರ್ನಾಟಕ ಸರ್ಕಾರ
ಸಂಖ್ಯೆ: ಸಿಆಸುಇ 36 ಹೆಚ್ಹೆಚ್ಎಲ್ 2018
ಕರ್ನಾಟಕ ಸರ್ಕಾರದ ಸಚಿವಾಲಯ,
ವಿಧಾನ ಸೌಧ,
ಬೆಂಗಳೂರು, ದಿನಾಂಕ: 16.08.2018
ಅಧಿಸೂಚನೆ
ಭಾರತದ ಮಾಜಿ ಪ್ರಧಾನ ಮಂತ್ರಿಗಳಾದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಇವರ
ನಿಧನಕ್ಕೆ ರಾಜ್ಯ ಸರ್ಕಾರವು ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ.
ಪ್ರಸ್ತುತ ರಾಜ್ಯದಲ್ಲಿ ಹಲವೆಡೆ ಭಾರಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಇರುವ ಕಾರಣ ತುರ್ತು
ಪರಿಸ್ಥಿತಿಯನ್ನು ನಿಭಾಯಿಸುವ ಮತ್ತು ಪರಿಹಾರ ಒದಗಿಸುವ ಕಾರ್ಯಾಚರಣೆಯಲ್ಲಿ ತೊಡಗಿರುವವರನ್ನು
ಹೊರತುಪಡಿಸಿ ಉಳಿದವರಿಗೆ ಅನ್ವಯಿಸುವಂತೆ ದಿವಂಗತರ ಗೌರವಾರ್ಥವಾಗಿ ದಿನಾಂಕ: 17.08.2018 ರಂದು
ಶುಕ್ರವಾರ ರಾಜ್ಯದಾದ್ಯಂತ ಸಾರ್ವಜನಿಕ ಸರ್ಕಾರಿ ಕಛೇರಿಗಳಿಗೆ ಮತ್ತು ಎಲ್ಲಾ ಶಾಲಾ ಕಾಲೇಜುಗಳಿಗೆ
(ಅನುದಾನ ಪಡೆಯುವ ಎಲ್ಲಾ ವಿದ್ಯಾ ಸಂಸ್ಥೆಗಳಿಗೂ ಸೇರಿದಂತೆ) ಹಾಗೂ ಸರ್ಕಾರಿ ಸ್ವಾಮ್ಯದ ಅಂಗ.
ಸಂಸ್ಥೆಗಳು ಒಳಗೊಂಡಂತೆ ರಜೆ ಘೋಷಿಸಿದೆ.
ದಿನಾಂಕ: 16.08.2018 ರಿಂದ 22.08.2018 ರವರೆಗೆ (ಎರಡೂ ದಿನಗಳು ಸೇರಿದಂತೆ) ಏಳು
ದಿನಗಳು ರಾಜ್ಯಾದ್ಯಾಂತ ಶೋಕವನ್ನು ಆಚರಿಸಲಾಗುವುದು. ಈ ಅವಧಿಯಲ್ಲಿ ಯಾವುದೇ ಸಾರ್ವಜನಿಕ
ಮನರಂಜನಾ ಕಾರ್ಯಕ್ರಮಗಳು ಇರುವುದಿಲ್ಲ. ನಿಯತವಾಗಿ ಹಾರಿಸಲ್ಪಡುವ ಕಟ್ಟಡಗಳ ಮೇಲೆ
ರಾಷ್ಟ್ರಧ್ವಜವನ್ನು ಅರ್ಧ ಮಟ್ಟದಲ್ಲಿ ಹಾರಿಸಲಾಗುವುದು.
ಸದರಿ ಆದೇಶವು ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ ಆಕ್ಟ್ 1881 ರ ಪ್ರಕಾರವು ಕೂಡಾ
ಸಾರ್ವಜನಿಕ ರಜೆಯೆಂದು ಘೋಷಿಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ
ಮತ್ತು ಅವರ ಹೆಸರಿನಲ್ಲಿ, ೧
&AMM
(ನವೀನ್ ಜನಸ್ಪು
ಸರ್ಕಾರದ ಅಧೀನ ಕಾರ್ಯದರ್ಶಿಗಳು,
ಸಿಆಸುಇ(ರಾಜ್ಯ ಶಿಷ್ಠಾಚಾರ)
ಇವರಿಗೆ:
1) ಮಹಾಲೇಖಪಾಲರು, ಕರ್ನಾಟಕ, ಬೆಂಗಳೂರು. |
2) ಮಾನ್ಯ ರಾಜ್ಯಪಾಲರ ಪ್ರಧಾನ ಕಾರ್ಯದರ್ಶಿಗಳು, ರಾಜ ಭವನ, ಬೆಂಗಳೂರು.
3) ಸರ್ಕಾರದ ಎಲ್ಲಾ ಪ್ರಧಾನ ಕಾರ್ಯದರ್ಶಿಗಳು/ಕಾರ್ಯದರ್ಶಿಗಳು.
4) ಮುಖ್ಯ ಮಾಹಿತಿ ಆಯುಕ್ತರು, ಮಾಹಿತಿ ಆಯೋಗ, ಬೆಂಗಳೂರು
5) ರಿಜಿಸ್ಟ್ರಾರ್ ಜನರಲ್, ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು.
6) ರಿಜಿಸ್ಟ್ರಾರ್, ಕರ್ನಾಟಕ ಲೋಕಾಯುಕ್ತ, ಬೆಂಗಳೂರು
7) ರಿಜಿಸಾರ್, ಕರ್ನಾಟಕ ಆಡಳಿತ ನ್ಯಾಯಮಂಡಳಿ, ಬೆಂಗಳೂರು

**RSGE**::: WIRELESS MESSAGE/CRASH FROM: HOME atal bihari vajipai

NEW DELHI
TO: CHIEF SECRETARIES OF ALL STATE GOVERNMENTS &ADMINISTRATORS OF
UNION TERRITORIES
REPEAT: SECRETARIES TO GOVERNORS/ LT. GOVERNORS OF ALL STATES
UNION TERRITORY ADMINSTRATIONS
DATED:16.08.2018
NO.3/3/2018-PUBLIC.
THE GOVERNMENT OF INDIA ANNOUNCE WITH PROFOUND SORROW THE
DEATH OF SHRI ATAL BIHARI VAJPAYEE, FORMER PRIME MINISTER OF INDIA
ON 16TH AUGUST 2018, AT AIIMS HOSPITAL, NEW DELHI.
2. AS A MARK OF RESPECT TO THE DEPARTED DIGNITARY, IT HAS BEEN
DECIDED THAT SEVEN DAYS OF STATE MOURNING WILL BE OBSERVED
THROUGHOUT INDIA FROM 16.08.2018 TO 22.08.2018 BOTH DAYS INCLUSIVE (
DURING THIS PERIOD THE NATIONAL FLAG WILL BE FLOWN AT HALF MAST
THROUGHOUT INDIA WHERE IT IS REGULARLY FLOWN AND THERE WILL BE NO
IT HAS
OFFICIAL ENTERTAINMENT DURING THE PERIOD OF STATE MOURNING
ALSO BEEN DECIDED THAT THE STATE FUNERAL WILL BE ACCORDED TO LATE
SHRI ATAL BIHARI VAJPAYEE (
3. NATIONAL FLAG SHALL ALSO FLY HALF MAST ON THE DAY OF FUNERAL
IN ALL INDIAN MISSIONS / HIGH COMMISSIONS OF INDIA ABROAD()
4.
REQUEST KINDLY TAKE ACTION ACCORDINGLY ()
صلہ
1678418
(SATPAL CHOUHAN)
ADDITIONAL SECRETARY TO THE GOVT. OF INDIA
MINISTRY OF HOME AFFAIRS
TEL: 011-2309 3178

Tuesday, August 07, 2018

**RSGE**::: 2018-19ನೇ ಸಾಲಿನಲ್ಲಿ ಮಾಡುವ ಸರ್ಕಾರಿ ನೌಕರರ ವರ್ಗಾವಣೆಗಳ ಬಗ್ಗೆ

ಕರ್ನಾಟಕ ಸರ್ಕಾರದ ನಡವಳಿಗಳು
ವಿಷಯ: 2018-19ನೇ ಸಾಲಿನಲ್ಲಿ ಮಾಡುವ ಸರ್ಕಾರಿ ನೌಕರರ ವರ್ಗಾವಣೆಗಳ ಬಗ್ಗೆ
ಮಾರ್ಗಸೂಚಿಗಳು.
ಓದಲಾಗಿದೆ:-
1. ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 22 ಸೇನೌವ 2013, ಬೆಂಗಳೂರು ದಿನಾಂಕ: 07.06.2013.
2, ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 22 ಸೇನೌವ 2013, ಬೆಂಗಳೂರು ದಿನಾಂಕ: 14.06.2013,
3, ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 18 ಸೇನದ 2014, ಬೆಂಗಳೂರು ದಿನಾಂಕ: 05,02.2014
- 4 ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 17 ಸೇಘವ 2015, ಬೆಂಗಳೂರು ದಿನಾಂಕ: 27.04.2015,
5, ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 63 ಸೇನೌವ 2015, ಬೆಂಗಳೂರು ದಿನಾಂಕ: 01.10.2015,
6, ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 25 ಸೇಘವ 2015, ಬೆಂಗಳೂರು ದಿನಾಂಕ: 14.10.2015,
7 ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 2 ಸೇನೌವ 2017, ಬೆಂಗಳೂರು ದಿನಾಂಕ: 27.03.2017
8, ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 18 ಸೇನೌವ 2018, ಬೆಂಗಳೂರು ದಿನಾಂಕ: 23.06.2018,
ಪ್ರಸ್ತಾವನೆ:-
ಮೇಲೆ (1) ರಲ್ಲಿ ಓದಲಾದ ಸರ್ಕಾರದ ಆದೇಶದಲ್ಲಿ ಸರ್ಕಾರಿ ನೌಕರರ ವರ್ಗಾವಣೆ ಕುರಿತಂತೆ
ವಿಸ್ತ್ರತವಾದ ಮಾರ್ಗಸೂಚಿಗಳನ್ನು ನೀಡಲಾಗಿದೆ. ಈ ಮಾರ್ಗಸೂಚನೆಗಳಲ್ಲಿನ ಷರತ್ತುಗಳಿಗೊಳಪಟ್ಟು
- 2018-19ನೇ ಸಾಲಿನಲ್ಲಿ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಗಳನ್ನು ಸಂಬಂಧಿತ ವೃಂದದ
ಕಾರ್ಯನಿರತ ವೃಂದಬಲದ ( Working StrerIgth) ಶೇಕಡಾ 4ರಷಕ್ಕೆ ಸೀಮಿತಗೊಳE
ದಿನಾಂಕ: 31.07.2018 ರವರೆಗೆ ಮಾಡಬಹುದೆಂದು ಮೇಲೆ (8)ರಲ್ಲಿ ಓದಲಾದ ದಿನಾಂಕ: 23.06, 2018ರ
ಸರ್ಕಾರಿ ಆದೇಶದಲ್ಲಿ ಆದೇಶಿಸಲಾಗಿದೆ. ಪ್ರಸ್ತುತ ವರ್ಗಾವಣೆ ಅವಧಿಯನ್ನು ಮತ್ತೆ ವಿಸ್ತರಿಸುವುದು
- ಅವಶ್ಯವೆಂದು ಸರ್ಕಾರವು ಪರಿಗಣಿಸಿ ಈ ಕೆಳಕಂಡಂತೆ ಆದೇಶಿಸಿರುತ್ತದೆ.
ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 18 ಸೇನೌವ 2018 ಬೆಂಗಳೂರು, ದಿನಾಂಕ: 31.07.2018
ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳ ಹಿನ್ನೆಲೆಯಲ್ಲಿ ಮೇಲೆ (1) ರಿಂದ (8)ರವರೆಗೆ ಓದಲಾದ
ಸರ್ಕಾರಿ ಆದೇಶಗಳಲ್ಲಿ ನಮೂದಿಸಿರುವ ಷರತ್ತುಗಳೊಂದಿಗೆ 2018-19ನೇ ಸಾಲಿನ ಸರ್ಕಾರಿ ನೌಕರರ
ಸಾರ್ವತ್ರಿಕ ವರ್ಗಾವಣೆ ಅವಧಿಯನ್ನು ದಿನಾಂಕ: 10.08.2018 ರವರೆಗೆ ವಿಸ್ತರಿಸಿ ಆದೇಶಿಸಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ
ಮತ್ತು ಅವರ ಹೆಸರಿನಲ್ಲಿ
64 4.
2 - 02 FE
(ಗಾಯತ್ರಿ, ಎಂ.ಆರ್.)
ಸರ್ಕಾರದ ಅಧೀನ ಕಾರ್ಯದರ್ಶಿ
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ
- (ಸೇವಾ ನಿಯಮಗಳು-1)
LALSAB DODMANI STATE VP KSG (NPS) EA
ಇವರಿಗೆ:
ಪ್ರಕಟಿಸಿ ಅದರ
1962ನಕಾರರು, ಕರ್ನಾಟಕ ರಾಜಪತ ಇವರಿಗೆ - ಅದಮ, ರಾಜನತ್ರದಲ್ಲಿ
200 ಪ್ರತಿಗಳನ್ನು ಸರ್ಕಾರದ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ,

Thursday, August 02, 2018

**RSGE**::: income tax due date extened

F.No. 225/242/2018/ITA.II
Government of India
Ministry of Finance
Department of Revenue
Central Board of Direct Taxes (ITA.II division)
North-Block, New Delhi, the 26th July, 2018
Order under Section 119 of the Income tax Act, 1961
For certain categories of taxpayers, the 'due-date' of filing income tax return for
assessment-year 2018-2019 is 31.07.2018. Upon consideration of the matter, the Central Board
of Direct Taxes, in exercise of its powers under section 119 of the Income-tax Act, 1961 ('Act'),
hereby, extends the 'due date' of filing income tax return, as prescribed in section 139(1) of the
Act, from 31st July, 2018 to 31st August, 2018.
Stapafesure
(R
ajeswar
Under-Secretary to the Government of India
Copy to:-
1. PS to F.M./OSD to FM/PS to MOS(F)
2. PS to Finance Secretary
3. Chairman (CBDT), All Members, CBDT
All Pr.CCSIT/CCSIT/Pr.DsGIT/DSGIT
5. All Joint Secretaries/CSIT, CBDT
6. Directors/Deputy Secretaries/Under Secretaries of Central Board of Direct Taxes
7. ADG(Systems)-4 with request to place the order on official website
8. Addl. CIT, Data Base Cell for placing it on irsofficers website
9. The Institute of Chartered Accountants of India, IP Estate, New Delhi-110003
10. All Chambers of Commerce
11. CIT (M&TP), Official Spokesperson of CBDT
12. ADG(PR,PP&OL) for placing on twitter handle of the department
Shabaap Surana
(Rajarajeswari R$10714Under-Secretary to the Government of India

Saturday, June 30, 2018

**RSGE**::: ವಿಷಯ: ದಿನಾಂಕ: 01.4.2006ರಂದು ಮತ್ತು ನಂತರ ಸರ್ಕಾರಿ ಸೇವೆಗೆ ನೇಮಕ ಹೊಂದಿರುವ ಹೊಸ ವ್ಯಾಖ್ಯಾನಿಸಿದ ಅಂಶದಾಯಿ ಪಿಂಚಣಿ ಕೊಡುಗೆ

ಕರ್ನಾಟಕ ಸರ್ಕಾರದ ನಡವಳಿಗಳು
ವಿಷಯ: ದಿನಾಂಕ: 01.4.2006ರಂದು ಮತ್ತು ನಂತರ ಸರ್ಕಾರಿ ಸೇವೆಗೆ ನೇಮಕ
ಹೊಂದಿರುವ ಹೊಸ ವ್ಯಾಖ್ಯಾನಿಸಿದ ಅಂಶದಾಯಿ ಪಿಂಚಣಿ ಕೊಡುಗೆ
ಯೋಜನೆಗೆ ಒಳಪಡುವ ಸರ್ಕಾರಿ ನೌಕರರಿಗೆ ನಿವೃತ್ತಿ ಮತ್ತು ಮರಣ
ಉಪದಾನ ಹಾಗೂ ಕುಟುಂಬ ಪಿಂಚಣಿ ಸೌಲಭ್ಯವನ್ನು ವಿಸ್ತರಿಸುವ ಬಗ್ಗೆ.
ಓದಲಾಗಿದೆ:
1) ಸರ್ಕಾರಿ ಆದೇಶ ಸಂಖ್ಯೆ: ಆಇ(ಸ್ಪೆಷಲ್) 04 ಪಿಇಟಿ 2005, ದಿನಾಂಕ: 31.03.2006,
2) ಸರ್ಕಾರಿ ಆದೇಶ ಸಂಖ್ಯೆ: ಆಇ 03 ಸೇನಿಸೇ 2010, ದಿನಾಂಕ: 12.10.2010
ಮತ್ತು 15.04.2011.
3) ಸರ್ಕಾರಿ ಆದೇಶ ಸಂಖ್ಯೆ: ಆಇ 06 ಎಸ್ ಆರ್ ಪಿ 2018, ದಿನಾಂಕ: 01.03.2018,
ಪ್ರಸ್ತಾವನೆ:-
ಮೇಲೆ ಓದಲಾದ ಸರ್ಕಾರಿ ಆದೇಶ (1)ರಲ್ಲಿ ದಿನಾಂಕ: 01.4.2006ರಂದು ಮತ್ತು
ನಂತರ ಸರ್ಕಾರಿ ಸೇವೆಗೆ ಸೇರುವ ನೌಕರರಿಗೆ ಹೊಸ ವ್ಯಾಖ್ಯಾನಿಸಿದ ಅಂಶದಾಯಿ ಪಿಂಚಣಿ
ಕೊಡುಗೆ ಯೋಜನೆಯನ್ನು ಕಡ್ಡಾಯಗೊಳಿಸಲಾಗಿದೆ.
ಮೇಲೆ ಓದಲಾದ ಸರ್ಕಾರಿ ಆದೇಶ (2)ರಲ್ಲಿ, ದಿನಾಂಕ: 01.04.2006ರಂದು ಮತ್ತು
ನಂತರ ಸರ್ಕಾರಿ ಸೇವೆಗೆ ಸೇರಿದ ಹೊಸ ವ್ಯಾಖ್ಯಾನಿಸಿದ ಅಂಶದಾಯಿ ಪಿಂಚಣಿ ಕೊಡುಗೆ
ಯೋಜನೆಯ ವ್ಯಾಪ್ತಿಗೆ ಬರುವ ರಾಜ್ಯ ಸರ್ಕಾರಿ ನೌಕರರು ಸೇವೆಯಲ್ಲಿದ್ದಾಗಲೇ ಮೃತಪಟ್ಟಲ್ಲಿ
ಅವರ ಕುಟುಂಬಕ್ಕೆ ಇಡಿಗಂಟಿನ ಪರಿಹಾರವನ್ನು ನೀಡಲು ಮಂಜೂರಾತಿ ನೀಡಲಾಗಿದೆ.
ಮೇಲೆ ಓದಲಾದ ಉಲ್ಲೇಖ (3)ರ ಸರ್ಕಾರಿ ಆದೇಶದಲ್ಲಿ, 6ನೇ ರಾಜ್ಯ ವೇತನ
ಆಯೋಗವು ಹೊಸ ವ್ಯಾಖ್ಯಾನಿಸಿದ ಅಂಶದಾಯಿ ಪಿಂಚಣಿ ಕೊಡುಗೆ ಯೋಜನೆಗೆ ಒಳಪಡುವ
ಸರ್ಕಾರಿ ನೌಕರರಿಗೆ ನಿವೃತ್ತಿ/ಮರಣ ಉಪದಾನ ಸೌಲಭ್ಯವನ್ನು ಹಳೆಯ ಪಿಂಚಣಿ ಯೋಜನೆಯ
ವ್ಯಾಪ್ತಿಗೆ ಒಳಪಡುವ ಸರ್ಕಾರಿ ನೌಕರರಿಗೆ ವಿಸ್ತರಿಸಿರುವ ರೀತಿಯಲ್ಲಿಯೇ ವಿಸ್ತರಿಸುವಂತೆ ಮತ್ತು
ಸೇವೆಯಲ್ಲಿರುವಾಗಲೇ ನಿಧನರಾಗುವ ಅಂತಹ ನೌಕರರ ಅವಲಂಬಿತ ಕುಟುಂಬಕ್ಕೆ ಕುಟುಂಬ
ಪಿಂಚಣಿ ಸೌಲಭ್ಯವನ್ನು ಪರಿಗಣಿಸುವಲ್ಲಿ ಮಾಡಿರುವ ಶಿಫಾರಸ್ಸುಗಳನ್ನು ಸರ್ಕಾರವು
ಒಪ್ಪಿರುವುದರಿಂದ, ಈ ಕೆಳಕಂಡ ಆದೇಶವನ್ನು ಹೊರಡಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಆಇ 34 ಪಿಇಎನ್ 2018, ಬೆಂಗಳೂರು, ದಿನಾಂಕ: 23.06.2018,
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ದಿನಾಂಕ: 01.04.2006ರಂದು
ಮತ್ತು ನಂತರ ಸರ್ಕಾರಿ ಸೇವೆಗೆ ಸೇರಿದ ಹೊಸ ವ್ಯಾಖ್ಯಾನಿಸಿದ ಅಂಶದಾಯಿ ಪಿಂಚಣಿ

**RSGE**::: ಎನ್.ಪಿ.ಎಸ್ ನೌಕರರಿಗೆ ನಿವೃತ್ತಿ/ಮರಣ ಉಪದಾನ ಹಾಗೂ ಕುಟುಂಬ ಪಿಂಚಣಿ ಸೌಲಭ್ಯವನ್ನು ವಿಸ್ತರಿಸುವ ಬಗ್ಗೆ ಹಾಗೂ ಭಾಗಶಃ ಎನ್.ಪಿ.ಎಸ್, ಮೊತ್ತವನ್ನು ಹಿಂಪಡೆಯುವ ಬಗ್ಗೆ

8ನೇ ಮಹಡಿ, ವಿಶ್ವೇಶ್ವರಯ್ಯ ಮುಖ್ಯ ಗೋಪುರ,
ದೂರವಾಣಿ : 080-22864180
ಡಾ| ಬಿ.ಆರ್. ಅಂಬೇಡ್ಕರ್ ವೀದಿ,
080-22866405
ಬೆಂಗಳೂರು - 560 001,
ಕರ್ನಾಟಕ ಸರ್ಕಾರ ಇ-ಮೇಲ್ : nps.kar@gmail.com
ಖಜಾನ ನಿರ್ದೇಶನಾಲಯ
ನೂತನ ಪಿಂಚಣಿ ಯೋಜನೆ ಘಟಕ
ಸಂ.:ಖ,ನಿ/ಎನ್.ಪಿ.ಎಸ್ /05/2016-17
ದಿನಾಂಕ : 28.06.2018,
ರಾಜ್ಯದ ಎಲ್ಲಾ ಖಜಾನಾಧಿಕಾರಿಗಳಿಗೆ,
ಮಾನ್ಯರೆ,
ವಿಷಯ:
ಸೌಲಭ್ಯವನ್ನು ವಿಸ್ತರಿಸುವ ಬಗ್ಗೆ ಹಾಗೂ ಭಾಗಶಃ ಎನ್.ಪಿ.ಎಸ್, ಮೊತ್ತವನ್ನು
ಹಿಂಪಡೆಯುವ ಬಗ್ಗೆ
ಉಲ್ಲೇಖ : 1, ಸರ್ಕಾರದ ಆದೇಶ ಸಂ : ಆಇ 34 ಪಿಇಎನ್ 2018, ಬೆಂಗಳೂರು,
ದಿನಾಂಕ : 23.06.2018,
2. ಸರ್ಕಾರದ ಆದೇಶ ಸಂ : FD (Spl) 69 PEN 2016, ದಿನಾಂಕ : 26.06.2018,
LAL SAB DODMANI
STATE VP KSG (NPS) EA
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ದಿನಾಂಕ : 01.04.2006 ರಂದು ಮತ್ತು ತದನಂತರ
ಸರ್ಕಾರಿ ಸೇವೆಗೆ ಸೇರಿದ ನೌಕರರಿಗೆ ನಿವೃತ್ತಿ ಮತ್ತು ಮರಣ ಉಪದಾನ ಹಾಗೂ ಕುಟುಂಬ ಪಿಂಚಣಿ
ಸೌಲಭ್ಯವನ್ನು ವಿಸ್ತರಿಸುವ ಬಗ್ಗೆ ಸರ್ಕಾರದಿಂದ ಉಲ್ಲೇಖ (1) ರಲ್ಲಿ ಆದೇಶವನ್ನು ಹೊರಡಿಸಲಾಗಿದೆ ಹಾಗೂ
ಎನ್.ಪಿ.ಎಸ್. ನೌಕರರು ಭಾಗಶಃ ಎನ್.ಪಿ.ಎಸ್, ಮೊತ್ತವನ್ನು ಹಿಂಪಡೆಯುವ ಕುರಿತು ಉಲ್ಲೇಖ (2) ರಲ್ಲಿ
ಆದೇಶವನ್ನು ಹೊರಡಿಸಲಾಗಿದ್ದು, ಸದರಿ ಆದೇಶಗಳ ಪ್ರತಿಯನ್ನು ಈ ಮೂಲಕ ಮಾಹಿತಿಗಾಗಿ ಒದಗಿಸುತ್ತಾ,
ಸದರಿ ಆದೇಶದಲ್ಲಿ ತಿಳಿಸಿರುವಂತ ಖಜಾನಾಧಿಕಾರಿಗಳು ಕ್ರಮ ಕೈಗೊಳ್ಳಲು ಹಾಗೂ ಖಜಾನೆಗಳ ವ್ಯಾಪ್ತಿಯಲ್ಲಿನ
ಡಿಡಿಓ ಗಳ ಗಮನಕ್ಕೆ ತರಲು ಸೂಚನಾ ಫಲಕದಲ್ಲಿ ಪ್ರಕಟಿಸಲು ತಿಳಿಸಿದೆ.
ತಮ್ಮ ನಂಬುಗೆಯ.
News -
ಖಜಾನೆ ನಿರ್ದೇಶನಾಲಯ
ಬೆಂಗಳೂರು
ಪ್ರತಿಯನ್ನು: -
ಉಪ ನಿರ್ದೇಶಕರು, ಖಜಾನೆ ಗಣಕಜಾಲ ಕೇಂದ್ರ ಬೆಂಗಳೂರು. (ಖಜಾನ ಗಣಕಜಾಲದಲ್ಲಿ
ಪ್ರಕಟಿಸಲು).
ಎನ್.ಪಿ.ಎಸ್ ನೌಕರರಿಗೆ ನಿವೃತ್ತಿ/ಮರಣ ಉಪದಾನ ಹಾಗೂ ಕುಟುಂಬ ಪಿಂಚಣಿ

**RSGE***::: ಎನ್ ಪಿ ಎಸ್ ಮುಂಗಡ ಶೇಖಡ 25ರಶ್ಟು ಹಣ ಪಡೆವ ಬಗ್ಗೆ.



ಬೆಂಗಳೂರು : ರಾಷ್ಟ್ರೀಯ ಪಿಂಚಣಿ ಯೋಜನೆಯಡಿ





(ಎನ್‌ಪಿಎಸ್) ಬರುವ ರಾಜ್ಯ ಸರ್ಕಾರಿ ನೌಕರರು ಇನ್ನು
ಮುಂದೆ ತಮ್ಮ ಮಕ್ಕಳ ಉನ್ನತ ಶಿಕ್ಷಣ, ಮದುವೆ, ಮನೆ
ನಿರ್ಮಾಣ ಸೇರಿದಂತೆ ಗಂಭೀರ ಕಾಯಿಲೆ, ಅಪಘಾತದಂತಹ
ಸಮಸ್ಯೆಗೊಳಗಾದ ವೇಳೆ ತಾವು ಪಾವತಿಸಿದ ಪಿಂಚಣಿ
ಮೊತ್ತದ ಶೇ.25ರಷ್ಟು ಹಣವನ್ನು ಮುಂಗಡವಾಗಿ
ಪಡೆದುಕೊಳ್ಳುವ ಅವಕಾಶವನ್ನು ಕಲ್ಪಿಸಿ ರಾಜ್ಯ ಸರ್ಕಾರ
ಆದೇಶ ಹೊರಡಿಸಿದೆ.
ಎನ್‌ಪಿಎಸ್‌ನಿಂದ ಸರ್ಕಾರಿ ನೌಕರರಿಗೆ ಯಾವುದೇ
ಉಪಯೋಗ ಆಗುತ್ತಿಲ್ಲ, ಇದನ್ನು ರದ್ದುಪಡಿಸಿ ಹಳೆಯ
ಪಿಂಚಣಿ ಯೋಜನೆ ಜಾರಿಗೆ ತರಬೇಕೆಂದು ಆಗ್ರಹಿಸಿ
ಹೋರಾಟ ನಡೆಸುತ್ತಿದ್ದ ಸರ್ಕಾರಿ ನೌಕರರಿಗೆ ಕೊಂಚ ಫಲ
ಸಿಕ್ಕಂತಾಗಿದೆ.
ಪಿಂಚಣಿ ಯೋಜನೆಗೆ ಭದ್ರತೆ ಒದಗಿಸುವ ಪಿಂಚಣಿ ನಿಧಿ
ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್‌ಡಿಎ)
2015ರ ಜನವರಿಯಲ್ಲಿ ಹೊರಡಿಸಿರುವ ಅಧಿಸೂಚನೆಯಲ್ಲಿ
ಹೊಸ ಪಿಂಚಣಿ ಯೋಜನೆಯಾದ ಎನ್‌ಪಿಎಸ್‌ನಡಿ ಬರುವ
ಸರ್ಕಾರಿ ನೌಕರರಿಗೆ ಕೆಲ ವಿಶೇಷ ಸಂದರ್ಭ ಹಾಗೂ
ಸಮಸ್ಯೆಗಳು ಎದುರಾದಾಗ ತಮ್ಮ ವೇತನದಲ್ಲಿ
ಕಡಿತವಾಗಿರುವ ಪಿಂಚಣಿ ಮೊತ್ತದ ಶೇ.25ರಷ್ಟು ಹಣವನ್ನು
ಮುಂಗಡವಾಗಿ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ.
ಇದರ ಆಧಾರದ ಮೇಲೆ ಸರ್ಕಾರದ ಖಜಾನೆ ನಿರ್ದೇಶಕರು
ಸಲ್ಲಿಸಿರುವ ಪ್ರಸ್ತಾವನೆಯನ್ನು ಒಪ್ಪಿ ರಾಜ್ಯ ಸರ್ಕಾರ
ಮಂಗಳವಾರ ಹೊಸ ಪಿಂಚಣಿ ಯೋಜನೆಯಡಿ ಬರುವ
ಸರ್ಕಾರಿ ನೌಕರರು ತಮ್ಮ ಇಡಿಗಂಟು ಪಿಂಚಣಿಯಲ್ಲಿ
ಶೇ.25ರಷ್ಟು ಹಣವನ್ನು ಮುಂಗಡ ಪಡೆಯಲು ಅವಕಾಶ
ಕಲ್ಪಿಸಿ ಹಣಕಾಸು ಇಲಾಖೆ (ಪಿಂಚಣಿ) ಜಂಟಿ ಕಾರ್ಯದರ್ಶಿ
ವೈ.ಕೆ. ಪ್ರಕಾಶ್ ಆದೇಶ ಹೊರಡಿಸಿದ್ದಾರೆ.
ಸೌಲಭ್ಯ ಯಾವಾಗ ಸಿಗುತ್ತೆ?: ಸರ್ಕಾರಿ ನೌಕರರು ತಮ್ಮ
ಮಕ್ಕಳ ಉನ್ನತ ಶಿಕ್ಷಣ, ಮದುವೆ ಕಾರ್ಯಗಳು, ಸ್ವಂತ ಮನೆ
ಕಟ್ಟಲು, ಕೊಳ್ಳಲು ಅಥವಾ ಪ್ಲಾಟ್ (ಸೈಟ್) ಖರೀದಿಸಲು
ಶೇ.25ರಷ್ಟು ಪಿಂಚಣಿ ಹಣ ಪಡೆಯಬಹುದಾಗಿದೆ. ಒಂದು
ವೇಳೆ ಈಗಾಗಲೇ ನೌಕರನ ಹೆಸರಲ್ಲಿ ಮನೆ, ಪ್ಲಾಟ್
ಹೊಂದಿದ್ದರೆ (ಪಿತ್ರಾರ್ಜಿತವಾಗಿ ಬಂದ ನಿವಾಸ
ಹೊರತುಪಡಿಸಿ) ಈ ಸೌಲಭ್ಯ ಸಿಗುವುದಿಲ್ಲ ಎಂದು
ಆದೇಶದಲ್ಲಿ ತಿಳಿಸಲಾಗಿದೆ.
ಸರ್ಕಾರಿ ನೌಕರ ತಾನು ಅಥವಾ ತನ್ನ ಕುಟುಂಬ ಸದಸ್ಯರಲ್ಲಿ
(ಪತ್ನಿ, ಮಕ್ಕಳು, ಪೋಷಕರು) ಯಾರಾದರೂ ಕ್ಯಾನ್ಸರ್, ಕಿಡ್ನಿ
ವೈಫಲ್ಯ, ಹೃದಯ ಶಸ್ತ್ರ ಚಿಕಿತ್ಸೆ, ಪಾಶ್ರವಾಯು, ಪ್ರಜ್ಞಾಹೀನ
ಸ್ಥಿತಿ, ಅಂಗಾಗ ಕಸಿ, ಶಾಶ್ವತ ದೃಷ್ಟಿದೋಷದಂತಹ ಗಂಭೀರ
ಕಾಯಿಲೆ ಆರೋಗ್ಯ ಸಮಸ್ಯೆ ಅಪಘಾತದಲ್ಲಿ ಗಂಭೀರ
ಗಾಯಗೊಂಡ ಸಂದರ್ಭದಲ್ಲಿ ಶೇ.25ರಷ್ಟುಪಿಂಚಣಿ
ಹಣವನ್ನು ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು.
ಅಷ್ಟೇ ಅಲ್ಲ, ನೌಕರರು ತಮ್ಮ ವೃತ್ತಿಗೆ ಸಂಬಂಧಿಸಿದ
ಕ್ಷೇತ್ರದಲ್ಲಿ ಕೌಶಲ್ಯಾಧಾರಿತ ಕೋರ್ಸು, ಪದವಿ, ಡಿಪ್ಲೊಮಾ,
ಸರ್ಟಿಫಿಕೇಟ್ ಕೋರ್ಸುಗಳಿಗೆ ಪ್ರವೇಶ ಪಡೆಯಲು ಕೂಡ
ಈ ಹಣ ಪಡೆದುಕೊಳ್ಳಬಹುದು ಎಂದು ಆದೇಶದಲ್ಲಿ
ತಿಳಿಸಲಾಗಿದೆ. ರೆಗ್ಯೂಲರ್ ಅಥವಾ ದೂರ ಶಿಕ್ಷಣ ಎರಡೂ
ರೀತಿಯಲ್ಲೂ ಅಧ್ಯಯನಕ್ಕೆ ಅವಕಾಶವಿದ್ದು, ಕೋರ್ಸುಗಳು
ಕನಿಷ್ಠ ಮೂರರಿಂದ ಅದಕ್ಕೂ ಹೆಚ್ಚು ತಿಂಗಳ
ಅಧ್ಯಯನದಿಂದ ಕೂಡಿರಬೇಕು. ಮಾನ್ಯತೆ ಪಡೆದ
ವಿಶ್ವವಿದ್ಯಾಲಯ, ಕಾಲೇಜು, ಯುಜಿಸಿಯಂತಹ ಅಧಿಕೃತ
ಸಂಸ್ಥೆಗಳಿಂದ ಅಂಗೀಕೃತವಾಗಿರಬೇಕು. ಅಧ್ಯಯನಕ್ಕೆ ತಮ್ಮ
ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆಯುವುದು
ಕಡ್ಡಾಯ.
ನಿಯಮಗಳೇನು?
ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್‌) 2006
ಏಪ್ರಿಲ್ 1ರಿಂದ ಸರ್ಕಾರಿ ಹುದ್ದೆಗಳಿಗೆ ನೇಮಕವಾಗಿ ಸೇವೆ
ಸಲ್ಲಿಸುತ್ತಿರುವವರಿಗೆ ಹಾಗೂ 2004ರ ಜನವರಿ 1ರಿಂದ
ಅಖಿಲ ಭಾರತ ಸೇವಾ ಹುದ್ದೆಗಳಿಗೆ ನೇಮಕವಾಗಿ ಸೇವೆ
ಸಲ್ಲಿಸುತ್ತಿರುವ ಕರ್ನಾಟಕ ಕೇಡರ್‌ನ ಅಧಿಕಾರಿಗಳು ಈ
ಸೌಲಭ್ಯ ಪಡೆಯಬಹುದು. ಪಿಂಚಣಿ ಮುಂಗಡ ಸೌಲಭ್ಯಕ್ಕೆ
ನೌಕರರು ಕನಿಷ್ಠ ಮೂರು ವರ್ಷ ಸೇವೆ ಪೂರೈಸಿರಬೇಕು.
ನೌಕರರು ವೃತ್ತಿಗೆ ಸೇರಿದ ದಿನದಿಂದ ಮುಂಗಡ ಪಿಂಚಣಿ
ಪಡೆಯಲು ಅರ್ಜಿ ಸಲ್ಲಿಸಿದ ದಿನದವರೆಗೆ ಪಾವತಿಸಿರುವ
ಪಿಂಚಣಿ ಮೊತ್ತದಲ್ಲಿ ಶೇ.25ರಷ್ಟನ್ನು ಮಾತ್ರ
ಪಡೆಯಬಹುದಾಗಿದೆ. ನೌಕರ ತನ್ನ ವೃತ್ತಿ ಅವಧಿಯಲ್ಲಿ
ಮೂರು ಬಾರಿ ಮಾತ್ರ ಈ ರೀತಿ ಮುಂಗಡ ಪಿಂಚಣಿ
ಪಡೆಯಬಹುದು. ಒಂದು ವೇಳೆ ಸರ್ಕಾರಿ ನೌಕರ ಗಂಭೀರ
ಕಾಯಿಲೆಯಿಂದ ಆಸ್ಪತ್ರೆಯಲ್ಲಿದ್ದರೆ ಆತನ ಪತ್ನಿ ಅಥವಾ
ಕುಟುಂಬದ ಇತರೆ ಸದಸ್ಯರು ಅರ್ಜಿ ಸಲ್ಲಿಸಲು
ಅವಕಾಶವಿದೆ.
ಈವರೆಗಿನ ಪಿಂಚಣಿ ಯೋಜನೆ ಏನಿತ್ತು?
ಎನ್‌ಪಿಎಸ್ ಯೋಜನೆಯಲ್ಲಿ ಸರ್ಕಾರಿ ನೌಕರರ ವೇತನದಲ್ಲಿ
ಪ್ರತಿ ತಿಂಗಳು ನಿಗದಿತ ಮೊತ್ತದ ಹಣ ನೌಕರನ ಪಿಂಚಣಿ
ಖಾತೆಗೆ ಜಮೆಯಾಗುತ್ತಿತ್ತು. ಅಷ್ಟೇ ಮೊತ್ತದ ಹಣವನ್ನು
ಸರ್ಕಾರ ಪಾವತಿಸುತ್ತಿತ್ತು. ಈ ಹಣವನ್ನು ಸೇವಾ ಅವಧಿಯ
ಮಧ್ಯದಲ್ಲಿ ಒಂದು ರುಪಾಯಿ ಸಹ ಮುಂಗಡವಾಗಿ
ಪಡೆಯಲು ಅವಕಾಶ ಇರಲಿಲ್ಲ. ಬದಲಿಗೆ ನೌಕರ ನಿವೃತ್ತಿ
ಹೊಂದಿದಾಗ, ಸ್ವಯಂ ನಿವೃತ್ತಿ ಅಥವಾ ರಾಜೀನಾಮೆ
ನೀಡಿದಾಗ ಅಥವಾ ಸೇವಾ ಅವಧಿಯಲ್ಲೇ ಮೃತಪಟ್ಟರೆ
ಆತನ ಕುಟುಂಬದವರು ಇಡಿಗಂಟು ರೂಪದಲ್ಲಿ ಒಟ್ಟು
ಹಣವನ್ನು ಪಡೆದುಕೊಳ್ಳಬಹುದಿತ್ತು. ಈಗ ಸೇವಾ
ಅವಧಿಯಲ್ಲೇ ಶೇ.25ರಷ್ಟು ಪಿಂಚಣಿಯನ್ನು ಮುಂಗಡವಾಗಿ
ಪಡೆಯಲು ಅವಕಾಶ ದೊರೆತಿದೆ.

Friday, June 29, 2018

ಸುತ್ತೋಲೆ: ವಿಷಯ: ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು, 1963ರಲ್ಲಿ ನಿಗದಿಪಡಿಸಿರುವ ಸರ್ಕಾರಿ ನೌಕರರ ಅವಲಂಬಿತ ತಂದೆ- ತಾಯಿಯವರ ಆದಾಯದ ಮಿತಿಯನ್ನು ಪರಿಷ್ಕರಿಸುವ ಬಗ್ಗೆ



ಕರ್ನಾಟಕ ಸರ್ಕಾರ
ಸಂಖ್ಯೆ: ಸಿಆಸುಇ 21 ಎಸ್ಎಂಆರ್ 2018
ಕರ್ನಾಟಕ ಸರ್ಕಾರದ ಸಚಿವಾಲಯ,
ವಿಧಾನಸೌಧ,
ಬೆಂಗಳೂರು, ದಿನಾಂಕ:22.06.2018
ಸುತ್ತೋಲೆ
ವಿಷಯ: ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು, 1963ರಲ್ಲಿ
ನಿಗದಿಪಡಿಸಿರುವ ಸರ್ಕಾರಿ ನೌಕರರ ಅವಲಂಬಿತ ತಂದೆ- ತಾಯಿಯವರ
ಆದಾಯದ ಮಿತಿಯನ್ನು ಪರಿಷ್ಕರಿಸುವ ಬಗ್ಗೆ,
ಉಲ್ಲೇಖ : (1) ಅಧಿಸೂಚನೆ ಸಂಖ್ಯೆ: ಸಿಆಸುಇ 2 ಎಸ್ಎಂಆರ್ 2015, ದಿನಾಂಕ:29.08.2017,
(2) ಸರ್ಕಾರಿ ಆದೇಶ ಸಂಖ್ಯೆ: ಆಇ (ವಿಶೇಷ) 8 ಪಿಇಎನ್ 2012, ದಿನಾಂಕ: 03.05.2012,
(3) ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 2 ಎಸ್ ಎಂಆರ್ 2015, ದಿನಾಂಕ:27.09.2017,
(4) ಸರ್ಕಾರಿ ಆದೇಶ ಸಂಖ್ಯೆ: ಆಇ 33 ಪಿಇಎನ್ 2018, ದಿನಾಂಕ: 24.04.2018,
ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು, 1963
ನಿಯಮ 2(1) (ii) ರಲ್ಲಿ ನಿಗಧಿಪಡಿಸಿರುವ ಷರತ್ತುಗಳನ್ನು ಪೂರೈಸುವ ರಾಜ್ಯ ಸರ್ಕಾರಿ
ನೌಕರರ ಅವಲಂಬಿತ ತಂದೆ-ತಾಯಿಯವರ ವೈದ್ಯಕೀಯ ವೆಚ್ಚ ಮರುಪಾವತಿಗೆ
ಅವಕಾಶವನ್ನು ಕಲ್ಪಿಸಲಾಗಿದೆ.
ಉಲ್ಲೇಖಿತ(1) ಅಧಿಸೂಚನೆಯಲ್ಲಿ, ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ
ಹಾಜರಾತಿ) ನಿಯಮಗಳು 1963 ನಿಯಮ 2(1) (i)ರಲ್ಲಿರುವ ಆದಾಯದ ಮಿತಿ
ಆರು ಸಾವಿರ ರೂಪಾಯಿಗಳುಎಂಬ ಪದಗಳ ಬದಲಿಗೆ "ರಾಜ್ಯ ಸರ್ಕಾರವು
ನಿಗಧಿಪಡಿಸಿದ ಕನಿಷ್ಠ ಮೂಲ ಪಿಂಚಣಿ ಹಾಗೂ ವೈದ್ಯಕೀಯ ವೆಚ್ಚ ಮರುಪಾವತಿಯನ್ನು
ಪರಿಗಣಿಸುವ ದಿನಾಂಕದಂದು ಕನಿಷ್ಟ ಮೂಲ ಪಿಂಚಣಿಗೆ ಲಭ್ಯವಾಗುವ ತುಟ್ಟಿಭತ್ಯೆಯನ್ನು
ಒಳಗೊಂಡ ಮೊತ್ತಎಂಬ ಪದಗಳನ್ನು ಪ್ರತಿಷ್ಟಾಪಿಸಿ ತಿದ್ದುಪಡಿ ಮಾಡಲಾಗಿದೆ.
ಉಲ್ಲೇಖಿತ (2) ಆದೇಶದಲ್ಲಿ ಆರ್ಥಿಕ ಇಲಾಖೆಯು ನಿಗದಿಪಡಿಸಿದ ನಿವತಿ
ವೇತನ ಸೌಲಭ್ಯದ ಪರಿಮಿತಿಯನ್ನು ಆಧರಿಸಿ, ಉಲ್ಲೇಖಿತ(3) ಆದೇಶದಲ್ಲಿ, ಸರ್ಕಾರಿ
ನೌಕರರ ಅವಲಂಬಿತ ತಂದೆ-ತಾಯಿಯ ವೈದ್ಯಕೀಯ ವೆಚ್ಚ ಮರುಪಾವತಿ ಪ್ರಕರಣಗಳ
ಪರಿಶೀಲನೆಯ ಸಂದರ್ಭದಲ್ಲಿ ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ)
(ತಿದ್ದುಪಡಿ) ನಿಯಮಗಳು, 2017ರನ್ವಯ ನಿಗದಿಪಡಿಸಿದ ಆದಾಯದ ಮಿತಿಯ
ಪರಿಗಣನೆಯನ್ನು ಸ್ಪಷ್ಟಿಕರಿಸಲಾಗಿದೆ. ಸಂದರ್ಭದಲ್ಲಿ, ರಾಜ್ಯದ ನಿವೃತ್ತ ಸರ್ಕಾರಿ
ನೌಕರರುಗಳಿಗೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳು ಮತ್ತು ಕರ್ನಾಟಕ
ನಾಗರೀಕ ಸೇವಾ(ಅಸಾಧಾರಣ ನಿವೃತ್ತಿ ವೇತನ) ನಿಯಮಾವಳಿಗಳು 2003 ರನ್ವಯ
ಲಭ್ಯವಾಗುವ ವಿವಿಧ ಬಗೆಯ ನಿವೃತ್ತಿ ವೇತನಗಳಿಗೆ ಆರ್ಥಿಕ ಇಲಾಖೆಯು
ನಿಗಧಿಪಡಿಸಿರುವ ಮಾಹೆಯಾನ ರೂ.4800/-ಗಳ ಕನಿಷ್ಠ ಮೊತ್ತವನ್ನು 'ರಾಜ್ಯ ಸರ್ಕಾರವು
ನಿಗಧಿಪಡಿಸಿದ ಕನಿಷ್ಟ ಮೂಲ ಪಿಂಚಣಿ' ಎಂದು ಪರಿಗಣಿಸಲಾಗಿರುತ್ತದೆ.

ಹೆಚ್ಚು ಓದಿದವು