Showing posts with label ಸುತ್ತೋಲೆಗಳು. Show all posts
Showing posts with label ಸುತ್ತೋಲೆಗಳು. Show all posts

Wednesday, March 27, 2019

ಸುತ್ತೋಲೆ ವಿಷಯ : ಸರ್ಕಾರಿ ಅಧಿಕಾರಿ / ನೌಕರರುಗಳ ವಿರುದ್ಧ ಶಿಸ್ತುಕ್ರಮ ಇಲಾಖಾ ವಿಚಾರಣೆಯ ಅವಶ್ಯಕ ಪರಿಪೂರ್ಣ ಪ್ರಸ್ತಾವನೆಗಳನ್ನು ವಿಳಂಬವಿಲ್ಲದೇ ಸಲ್ಲಿಸುವ ಬಗ್ಗೆ.

ಕರ್ನಾಟಕ ಸರ್ಕಾರ
ಸಂಖ್ಯೆ : ಸಿಆಸುಇ 76 ಸೇವಿ 2018
ಕರ್ನಾಟಕ ಸರ್ಕಾರದ ಸಚಿವಾಲಯ ,
ವಿಧಾನಸೌಧ . ಬೆಂಗಳೂರು , ದಿನಾಂಕ : 21 . 01 . 2019
ಸುತ್ತೋಲೆ
ವಿಷಯ : ಸರ್ಕಾರಿ ಅಧಿಕಾರಿ / ನೌಕರರುಗಳ ವಿರುದ್ಧ ಶಿಸ್ತುಕ್ರಮ ಇಲಾಖಾ ವಿಚಾರಣೆಯ
ಅವಶ್ಯಕ ಪರಿಪೂರ್ಣ ಪ್ರಸ್ತಾವನೆಗಳನ್ನು ವಿಳಂಬವಿಲ್ಲದೇ ಸಲ್ಲಿಸುವ ಬಗ್ಗೆ
ಮರು ಸೂಚನೆಗಳು , ಉಲ್ಲೇಖ : ( 1 ) ಅಧಿಕೃತ ಜ್ಞಾಪನ ಸಂಖ್ಯೆ : ಡಿಪಿಎಆರ್ 41 ಎಸ್‌ಡಿಇ 83 , ದಿನಾಂಕ : 16 . 08 . 1983 .
( 2 ) ಅಧಿಕೃತ ಜ್ಞಾಪನ ಸಂಖ್ಯೆ : ಡಿಪಿಎಆರ್‌ 33 ಎಸ್‌ಡಿಇ 83 , ದಿ : 24 . 05 . 1984 , ( 3 ) ಸುತ್ತೋಲೆ ಸಂಖ್ಯೆ : ಸಿಆಸುಇ 7 ನೇಣವಿ 96 , ದಿನಾಂಕ : 04 . 07 . 1996 , ( 4 ) ಸುತ್ತೋಲೆ ಸಂಖ್ಯೆ : ಸಿಆಸುಇ 04 ಸೇಇವಿ 96 , ದಿನಾಂಕ : 28 . 08 . 1996 , ( 5 ) ಸುತ್ತೋಲೆ ಸಂಖ್ಯೆ : ಸಿಆಸುಇ 09 ಸೇಣವಿ 98 , ದಿನಾಂಕ : 03 . 08 . 1998 , ( 6 ) ಸುತ್ತೋಲೆ ಸಂಖ್ಯೆ : ಸಿಆಸುಇ 47 ಸೇವಿ 2007 , ದಿನಾಂಕ : 23 . 03 . 2002 . ( 7 ) ಸುತ್ತೋಲೆ ಸಂಖ್ಯೆ : ಸಿಆಸುಇ 07 ಸೇವಿ 2003 , ದಿನಾಂಕ : 12 . 05 . 2003 , ( 8 ) ಸುತ್ತೋಲೆ ಸಂಖ್ಯೆ : ಸಿಆಸುಇ 1 ಸೇಇವಿ 2005 , ದಿನಾಂಕ : 09 . 02 . 2005 ,
ಸರ್ಕಾರಿ ನೌಕರನು ಸೇವೆಯಲ್ಲಿದ್ದಾಗ ಅವನ ಮೇಲೆ ಹೂಡಿದ ಯಾವುದೇ ಇಲಾಖಾ ತನಿಖೆಗಳ ಬಗ್ಗೆ ಅವನು ಸೇವೆಯಿಂದ ನಿವೃತ್ತಿಯಾದ ನಂತರ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 214 ( 2 ) ( ಬಿ ) ರ ಉಪಬಂಧಗಳಿಗೆ ಒಳಪಟ್ಟು ಇಲಾಖಾ ವಿಚಾರಣೆಯನ್ನು ಆರಂಭಿಸುವ ಮತ್ತು ಸೇವೆಯಲ್ಲಿದ್ದಾಗ ಅವನ ವಿರುದ್ಧ ಆರಂಭಿಸಿರುವ ಇಲಾಖಾ ವಿಚಾರಣೆಯನ್ನು ನಿಯಮ 214 ( 2 ) ( ಎ ) ರ ಉಪಬಂಧಗಳಿಗೆ ಒಳಪಟ್ಟು ಮುಂದುವರೆಸುವ ಅವಕಾಶವಿದೆ . ಇದರ ಹೊರತಾಗಿ ಕರ್ನಾಟಕ ನಾಗರಿಕ ಸೇವಾ ( ವರ್ಗೀಕರಣ , ನಿಯಂತ್ರಣ ಮತ್ತು ಮೇಲ್ಮನವಿ ) ನಿಯಮಗಳು , 1957ರಲ್ಲಿರುವ ನಿಯಮಗಳ ಪ್ರಕಾರ ಹೊಸದಾಗಿ ಇಲಾಖಾ ವಿಚಾರಣೆ ಪ್ರಾರಂಭಿಸುವುದಕ್ಕೆ ಮತ್ತು ಪ್ರಾರಂಭಿಸಿರುವ ಇಲಾಖಾ ವಿಚಾರಣೆಯನ್ನು ಮುಂದುವರೆಸುವುದಕ್ಕೆ ಅವಕಾಶವಿರುವುದಿಲ್ಲ . ಕಾರಣ ಕರ್ನಾಟಕ ನಾಗರಿಕ ಸೇವಾ ( ವರ್ಗೀಕರಣ , ನಿಯಂತ್ರಣ ಮತ್ತು ಮೇಲ್ಮನವಿ ) ನಿಯಮಗಳು ಅಂತಹ ನಿವೃತ್ತ ನೌಕರರಿಗೆ ಅನ್ವಯಿಸುವುದಿಲ್ಲ . ಸರ್ಕಾರಿ ನೌಕರನು ನಿವೃತ್ತಿಯಾದ ನಂತರ ಅವನ ಮೇಲೆ ಹೂಡಲಾಗಿದ್ದ ಇಲಾಖಾ ತನಿಖೆಗಳನ್ನು ಸರ್ಕಾರಕ್ಕೆ ಆರ್ಥಿಕ ಹಾನಿ ಉಂಟಾಗಿಲ್ಲವೆಂಬ ಕಾರಣ ನೀಡಿ ಅವುಗಳನ್ನು ಹಿಂದಕ್ಕೆ ತೆಗೆದುಕೊಳ್ಳುವ ಪ್ರಸ್ತಾವನೆಗಳು ಸರ್ಕಾರದ ಮುಂದೆ ಬಂದ ಸಂದರ್ಭದಲ್ಲಿ ಸರ್ಕಾರವು ಆ ಬಗ್ಗೆ ಪರಿಶೀಲಿಸಿ , ಉಲ್ಲೇಖ ( I ) ಮತ್ತು ( 2 ) ರ ಅಧಿಕೃತ ಜ್ಞಾಸನಗಳಲ್ಲಿ ನಿವೃತ್ತಿ ಆಗುವಂತಹ ಸರ್ಕಾರಿ ನೌಕರರ ಮೇಲೆ ಹೂಡಲಾಗಿರುವ ಇಲಾಖಾ ತನಿಖೆಗಳನ್ನು ಅವರು ನಿವೃತ್ತಿ ಆಗುವುದಕ್ಕೆ ಮುಂಚೆ ಇತ್ಯರ್ಥ ಮಾಡುವ ಕುರಿತು ಸೂಚನೆಗಳನ್ನು ನೀಡಿದೆ .
2 . ತದನಂತರದಲ್ಲಿ ನಿವೃತ್ತಿ ಹೊಂದಿದ ಆಪಾದಿತ ಅಧಿಕಾರಿ ವಿರುದ್ಧ ಇಲಾಖಾ ವಿಚಾರಣೆ ಪ್ರಾರಂಭಿಸಬೇಕಾದ ಪ್ರಕರಣವೊಂದರಲ್ಲಿ ಸಕಾಲದಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 214 ( ಬಿ ) ( ತ ) ರಲ್ಲಿ ನಿಗದಿಪಡಿಸಿದ ಕಾಲಮಿತಿಯೊಳಗೆ ವಿಚಾರಣೆಯನ್ನು ಪ್ರಾರಂಭಿಸಿಲ್ಲದ ಕಾರಣ ಆಪಾದಿತ ಅಧಿಕಾರಿಯ ಮೇಲೆ ಇಲಾಖಾ ವಿಚಾರಣೆ ಹೂಡಲು ಅಸಾಧ್ಯವಾದ ಪರಿಸ್ಥಿತಿ ಉಂಟಾದುದಲ್ಲದೇ ಆರೋಪಿ ಸರ್ಕಾರಿ ನೌಕರರು ನಿವೃತ್ತಿ ಹೊಂದುವ 2 - 3 ದಿನಗಳ ಮುಂಚೆ ಇಲ್ಲವೇ ಹಿಂದಿನ ದಿನ ಅವ ದುರ್ನಡತೆಗೆ ಸಂಬಂಧಿಸಿದ ವಿವರಗಳು ನೀಡಿ ಅವರ ಮೇಲೆ ಶಿಸ್ತಿನ ಕ್ರಮ ಆರಂಭಿಸಲು ಇಲಾಖೆಗಳು ಸರ್ಕಾರಕ್ಕೆ ಪ್ರಸ್ತಾವನೆಗಳನ್ನು ಕಳುಹಿಸುತ್ತಿರುವುದು ಸಹ ಸರ್ಕಾರದ ಗಮನಕ್ಕೆ ಬಂದ ಸಂದರ್ಭದಲ್ಲಿ ಸರ್ಕಾರವು ಉಲ್ಲೇಖ ( 4 ) ರ ಸುತ್ತೋಲೆಯಲ್ಲಿ ಸರ್ಕಾರಿ ನೌಕರನ ದುರ್ನಡತೆ ಗಮನಕ್ಕೆ ಬಂದ ತಕ್ಷಣ ಶಿಸ್ತಿನ ಪ್ರಾಧಿಕಾರಕ್ಕೆ ಅದನ್ನು ತಿಳಿಸಬೇಕು . ನಿವೃತ್ತಿ ಹೊಂದಲಿರುವ ನೌಕರರ ಪ್ರಕರಣದಲ್ಲಿ ಶಿಸ್ತಿನ ಪ್ರಾಧಿಕಾರಕ್ಕೆ ಅಂತಹ ಮಾಹಿತಿ ಸರ್ಕಾರಿ ನೌಕರನು ನಿವೃತ್ತಿ ಹೊಂದುವ ಕನಿಷ್ಠ 2 ಅಥವಾ 3 ತಿಂಗಳ ಪೂರ್ವದಲ್ಲಿ ನೀಡಿ , ಕರಡು ದೋಷಾರೋಪಣಾ ಪಟ್ಟಿ ಇತ್ಯಾದಿ , ಸಂಬಂಧಿಸಿದ ಕಾಗದ ಪತ್ರ ಮತ್ತು ದಾಖಲೆಗಳೊಡನೆ ಶಿಸ್ತುಪಾಧಿಕಾರಿಗಳಿಗೆ ಕಳುಹಿಸುವ ಬಗ್ಗೆ ಮತ್ತು ವಯೋನಿವೃತ್ತಿ ಅಂಚಿನಲ್ಲಿರುವ ಅಂತಹ ಆಪಾದಿತ ಸರ್ಕಾರಿ ನೌಕರರ ನಿವೃತ್ತಿ ದಿನಾಂಕವನ್ನು ಕಡ್ಡಾಯವಾಗಿ ನಮೂದಿಸುವ ಬಗ್ಗೆ ಸೂಚನೆಗಳನ್ನು ನೀಡಲಾಗಿದೆ . ಉಲ್ಲೇಖ ( 5 ) ರ ಸುತ್ತೋಲೆಯಲ್ಲಿ ನಿವೃತ್ತಿ ಹೊಂದಲಿರುವ ಅಧಿಕಾರಿಗಳ ವಿರುದ್ಧ ಶಿಸ್ತಿನ ಪ್ರಸ್ತಾವನೆಗಳನ್ನು ಸಂಬಂಧಿಸಿದ ಅಧಿಕಾರಿ ವಯೋ ನಿವೃತ್ತಿ ಹೊಂದುವ ಕನಿಷ್ಠ ಆರು ತಿಂಗಳ ಮುಂಚೆಯೇ ಕಳುಹಿಸಬೇಕೆಂದು ತಿಳಿಸಲಾಗಿದೆ .
3 . ಉಲ್ಲೇಖ ( 8 ) ರ ಸುತ್ತೋಲೆಯಲ್ಲಿ ನಿವೃತ್ತಿ ಅಂಚಿನಲ್ಲಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಪ್ರಕರಣಗಳನ್ನು ಕಳುಹಿಸುವಲ್ಲಿ ಇಲಾಖೆಗಳು ಯಾವುದೇ ವಿಳಂಬವನ್ನು ಮಾಡಬಾರದು , ಹೀಗೆ ಕೊನೆ ಗಳಿಗೆಯಲ್ಲಿ ಪ್ರಸ್ತಾವನೆಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಕಳುಹಿಸಿದಲ್ಲಿ ಮತ್ತು ಅಂತಹ ವಿಚಾರಣೆಯು ಕಾಲಮಿತಿಯನ್ನು ಮೀರಿದ್ದಾದಲ್ಲಿ ವಿಳಂಬಕ್ಕೆ ಜವಾಬ್ದಾರರಾದ ನೌಕರರು / ಅಧಿಕಾರಿಗಳನ್ನು ಗುರುತಿಸಿ ಅವರುಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ತಿಳಿಸಲಾಗಿದೆ .
4 , ಉಲ್ಲೇಖ ( 6 ) ರ ಸುತ್ತೋಲೆಯಲ್ಲಿ ಕರ್ನಾಟಕ ನಾಗರಿಕ ಸೇವಾ ( ವರ್ಗೀಕರಣ , ನಿಯಂತ್ರಣ ಮತ್ತು ಮೇಲ್ಮನವಿ ) ನಿಯಮಗಳು , 1957ರ ನಿಯಮಗಳ ಅಡಿಯಲ್ಲಿ ಆರಂಭಿಸುವ ಪ್ರತಿಯೊಂದು ಪ್ರಕರಣದಲ್ಲಿ ಆಪಾದಿತ ಸರ್ಕಾರಿ ನೌಕರನ ವಯೋ ನಿವೃತ್ತಿ ದಿನಾಂಕ ಸೇರಿದಂತೆ ಇತರೆ ವಿವರಗಳನ್ನು ಸಂಬಂಧಿಸಿದ ದಾಖಲೆಗಳೊಂದಿಗೆ ಯಾವಾಗಲೂ ಇಡತಕ್ಕದ್ದೆಂದು ಹಾಗೂ ಅದನ್ನು ಸಂಬಂಧಿಸಿದ ಪ್ರಾಧಿಕಾರಿಗಳಿಗೆ ಲಭ್ಯಮಾಡತಕ್ಕದ್ದೆಂದು ಹಾಗೂ ಈ ವಿವರಗಳನ್ನು ತಪ್ಪದೆ ಕಡತದ ಕವಚದ ಮೇಲೆ ದಪ್ಪ ಅಕ್ಷರದಲ್ಲಿ ಕೆಂಪು ಶಾಯಿಯಲ್ಲಿ ನಮೂದಿಸಬೇಕೆಂದು ಸೂಚನೆಗಳನ್ನು ನೀಡಲಾಗಿದೆ .
5 , ಈ ರೀತಿ ಸರ್ಕಾರವು ಕಾಲಕಾಲಕ್ಕೆ ಹೊರಡಿಸಿದ ಮೇಲ್ಕಂಡ ಸೂಚನೆಗಳಿದ್ದಾಗ್ಯೂ ಇತ್ತೀಚೆಗೆ ಆಡಳಿತ ಇಲಾಖೆಯೊಂದು ಆರೋಪಿತ ಸರ್ಕಾರಿ ನೌಕರನ ವಿರುದ್ಧ ಶಿಸ್ತು ಪ್ರಕರಣದ ಪೂರ್ಣ ಪ್ರಸ್ತಾವನೆಯನ್ನು ಶಿಸ್ತುಪ್ರಾಧಿಕಾರಕ್ಕೆ ಆ ಅಧಿಕಾರಿ ನಿವೃತ್ತಿ ಹೊಂದುವ ಒಂದು ವಾರದ ಮುಂಚೆ ಕಳುಹಿಸಿರುವುದರಿಂದ , ಅಂತಹ ಆರೋಪಿತ ಅಧಿಕಾರಿ ವಿರುದ್ಧ ಕ್ರಮ ಜರುಗಿಸಲು ಅವಕಾಶವಿಲ್ಲದಂತಾಗಿರುವ ವಿಷಯವು ಸರ್ಕಾರದ ಗಮನಕ್ಕೆ ಬಂದಿದೆ .
( 1 ) ಆದುದರಿಂದ , ನಿವೃತ್ತಿ ಹೊಂದಲಿರುವ ಅಧಿಕಾರಿ / ನೌಕರರ ವಿರುದ್ದದ ಶಿಸ್ತುಕ್ರಮದ ಪರಿಪೂರ್ಣ ಪ್ರಸ್ತಾವನೆ ಗಳನ್ನು ಆಡಳಿತ ಇಲಾಖೆಗಳು ಅಂತಹ ಅಧಿಕಾರಿ / ನೌಕರರು ನಿವೃತ್ತರಾಗುವ ಕನಿಷ್ಠ 30 ದಿನಗಳ ಮುಂಚೆ ಶಿಸ್ತುಪ್ರಾಧಿಕಾರಕ್ಕೆ ಸಲ್ಲಿಸತಕ್ಕದ್ದು .
> > 2) ಕಡತದ ಕವಚದ ಮೇಲೆ ದಪ್ಪ ಅಕ್ಷರಗಳಲ್ಲಿ ಕೆಂಪು ಶಾಹಿಯಲ್ಲಿ ಆಪಾದಿತ ಸರ್ಕಾರಿ ನೌಕರರ ವಯೋ ನಿವೃತ್ತಿ ದಿನಾಂಕ ನಮೂದಿಸತಕ್ಕದ್ದು .
( 3 ) ಮೇಲಿನ ಕಾಲಮಿತಿ ಮೀರಿದಾದಲ್ಲಿ ವಿಳಂಬಕ್ಕೆ ಜವಾಬ್ದಾರರಾದ ನೌಕರರ / ಅಧಿಕಾರಿಗಳನ್ನು ಗುರುತಿಸಿ , ಆದರುಗಳ ವಿರುದ್ಧ ಶಿಸ್ತು ಕ್ರಮ ಜರುಗಿಸತಕ್ಕದ್ದು . ಈ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು .
ಸವಿಲ್ಲಾ ( ಟಿ . ಎಂ . ವಿಜಯ್ ಭಾಸ್ಕರ್ ) ಸರ್ಕಾರದ ಮುಖ್ಯ ಕಾರ್ಯದರ್ಶಿ
ಅವರಿಗೆ : ಸಂಕಲನಕಾರರು , ಕರ್ನಾಟಕ ರಾಜ್ಯ ಪತ್ರ ಇವರಿಗೆ ಇದನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿ ಅದರ 200 ಪ್ರತಿಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ( ಸೇವಾ ನಿಯಮಗಳು ) , ವಿಧಾನಸೌಧ ಇಲ್ಲಿಗೆ ಕಳುಹಿಸಲು ಕೋರಿದೆ .
1 ) ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು , 2 ) ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು / ಪ್ರಧಾನ ಕಾರ್ಯದರ್ಶಿಗಳು / ಕಾರ್ಯದರ್ಶಿಗಳು . 3 ) ಎಲ್ಲಾ ಇಲಾಖಾ ಮುಖ್ಯಸ್ಥರು / ಜಿಲ್ಲಾಧಿಕಾರಿಗಳು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು , ಜಿಲ್ಲಾ
ಪಂಚಾಯತ್ , 4 ) ಸರ್ಕಾರದ ಎಲ್ಲಾ ವಿಶೇಷ / ಅಪರ / ಸಹ / ಉಪ ಕಾರ್ಯದರ್ಶಿಗಳು . 5 ) ಸರ್ಕಾರದ ಎಲ್ಲಾ ಅಧೀನ ಕಾರ್ಯದರ್ಶಿಗಳು . 6 ) ನಿರ್ದೇಶಕರು , ಕರ್ನಾಟಕ ಸರ್ಕಾರ ಸಚಿವಾಲಯ ತರಬೇತಿ ಸಂಸ್ಥೆ .

Thursday, June 14, 2018

**RSGE**::: ಸುತ್ತೋಲೆ: ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ:118(ಎ) ರಿತಿಯ ನಿವೃತ್ತಿ ಸಮಯದಲ್ಲಿ ಗಳಿಕೆ ರಜೆ ನಗದೀಕರಣದ ಬಗ್ಗೆ.



ಕರ್ನಾಟಕ ಸರ್ಕಾರ
ಸಂಖ್ಯೆ: ಎಫ್‌ಡಿ 2 ಸೇನಿಸೇ 2015
ಕರ್ನಾಟಕ ಸರ್ಕಾರದ ಸಚಿವಾಲಯ,
ವಿಧಾನಸೌಧ,
ಬೆಂಗಳೂರು, ದಿನಾಂಕ:04-12-2015
ಸುತ್ತೋಲೆ
ವಿಷಯ: ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ:118(ಎ) ರಿತಿಯ ನಿವೃತ್ತಿ
ಸಮಯದಲ್ಲಿ ಗಳಿಕೆ ರಜೆ ನಗದೀಕರಣದ ಬಗ್ಗೆ.
ಉಲ್ಲೇಖ: (1) ಸುತ್ತೋಲೆ ಸಂಖ್ಯೆ: ಎಫ್ಡಿ 1 ಎಸ್ ಆರ್ ಎಸ್ 2001, ದಿನಾಂಕ:08.08.2001,
(2) ಸರ್ಕಾರಿ ಆದೇಶ ಸಂಖ್ಯೆ: ಆಇ 8 ಎಸ್‌ಆರ್‌ಎ 2ರಿಂದಿ,ಬೆಂಗಳೂರು,
ದಿನಾಂಕ: 12.08.2003,
(3) ಮಹಾಲೇಖಪಾಲರ ಪತ್ರ ಸಂ.: GM/Genl/C-37/2014-15/277,
ದಿವಾಲಿಕ:27.03.2015,
*****
ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ;11(ಎಪ್ರಕಾರ ಒಬ್ಬ ಸರ್ಕಾರಿ
ನೌಕರನು ನಿವೃತ್ತನಾಗುವ ಸಮಯದಲ್ಲಿ ಗರಿಷ್ಟ 300 ದಿನಗಳ ಮಿತಿಗೊಳಪಟ್ಟು ಅವರ
ಖಾತೆಯಲ್ಲಿರುವ ಗಳಿಕೆ ರಜೆಗೆ ಸಮನಾದ ರಜಾ ಸಂಬಳದ ನಗದೀಕರಣ ಸೌಲಭ್ಯವನ್ನು ರಜೆ
ಮಂಜೂರು ಮಾಡುವ ಪ್ರಾಧಿಕಾರಿ ಮಂಜೂರು ಮಾಡುವ ಅವಕಾಶವಿದ್ದು, ಸರ್ಕಾರಿ
ನೌಕರನು ನಿವೃತ್ತಿಯಾಗುವ ದಿನಾಂಕದಂದು ಅವನ ಖಾತೆಯಲ್ಲಿನ ಗಳಿಕೆ ರಜೆಗೆ ಸಮನಾದ
ರಜಾ ಸಂಬಳದ ನಗದೀಕರಣ ಸೌಲಭ್ಯವನ್ನು 300 ದಿನಗಳ ಗರಿಷ್ಠ ಮಿತಿ ಮತ್ತು ಕರ್ನಾಟಕ
ನಾಗರಿಕ ಸೇವಾ ನಿಯಮಾವಳಿಗಳ ನಿಯಮ:18(ಎ) ರಲ್ಲಿನ ಇತರೆ ಷರತ್ತುಗಳಿಗೊಳಪಟ್ಟು
ಮಂಜೂರು ಮಾಡಿ ಸೂಕ್ತ ಆದೇಶವನ್ನು ಸಕ್ಷಮ ಪ್ರಾಧಿಕಾರಿಗಳು ಹೊರಡಿಸಬೇಕಾಗಿದೆ.
ಕ.ನಾ.ಸೇ.ನಿಯಮಾವಳಿಗಳ ನಿಯಮ 118-ಎ(2) ರ ವ್ಯಾಪ್ತಿಗೆ ಒಳಪಡಬಹುದಾದ
ಪ್ರಕರಣಗಳಲ್ಲಿ ಈ ಸೌಲಭ್ಯವನ್ನು ಸಕಾಲದಲ್ಲಿ ತಡೆಹಿಡಿಯಬೇಕಾಗುತ್ತದೆ. ಈ ಅಂಶಗಳನ್ನು
ಗಮನದಲ್ಲಿರಿಸಿ, ಸಕ್ಷಮ ರಜೆ ಮಂಜೂರಾತಿ - ಪ್ರಾಧಿಕಾರವು ಕ.ನಾ.ಸೇ.ನಿಯಮಾವಳಿ,
ನಿಯಮ 118ಎ(1)ರ ರೀತ್ಯ ಹೊರಡಿಸುವ ನಗದೀಕರಣ ಸೌಲಭ್ಯ ಮಂಜೂರಾತಿ ಆದೇಶದಲ್ಲಿ
ಸದರಿ ಸೌಲಭ್ಯವನ್ನು ಉಪನಿಯಮ(2) ರ ಅವಕಾಶವನ್ನು ಗಮನದಲ್ಲಿರಿಸಿ ಮಂಜೂರಾತಿ
ನೀಡಿರುವ ಕುರಿತು ಸ್ಪಷ್ಟವಾಗಿ ಉಲ್ಲೇಖಿಸಿ, ಸಂಬಂಧಿಸಿದ ಆದೇಶವನ್ನು ಹೊರಡಿಸತಕ್ಕದೆಂದು
ಉಲ್ಲೇಖ(1) ರಲ್ಲಿನ ಸುತ್ತೋಲೆಯಲ್ಲಿ ಸೂಚಿಸಲಾಗಿತ್ತು..
... 2)
ತದನಂತರದಲ್ಲಿ, ಕ.ನಾ.ಸೇ.ನಿಯಮಾವಳಿಗಳ ನಿಯಮ 119-ಎ ಅನ್ನು ಉಲ್ಲೇಖ(2)
ಆದೇಶದ ಮೇರೆಗೆ ಪರಿಷ್ಕರಿಸಿದ್ದು, ಈ ಮುಂಚಿನ ಉಪನಿಯಮ(2) ದಲ್ಲಿ ಅಡಕವಾಗಿದ್ದ
ಅವಕಾಶಗಳನ್ನು ಉಪನಿಯಮ(4) ರಡಿಯಲ್ಲಿ ಅಳವಡಿಸಲಾಗಿದೆ. ಮಹಾಲೇಖಪಾಲರು
ಉಲ್ಲೇಖ(3)ರಲ್ಲಿನ ಪತ್ರ ದಿನಾಂಕ:27.03.2015 ರಲ್ಲಿ ಸಕ್ಷಮ ಪ್ರಾಧಿಕಾರಿಗಳು ಹೊರಡಿಸುವ
ಸುತ್ತೋಲೆ/ಅಧಿಸೂಚನೆಗಳನ್ನು ಉಪನಿಯಮ(4) ರಲ್ಲಿನ ಅವಕಾಶಗಳನ್ನು ಉಲ್ಲೇಖಿಸಿ
ಹೊರಡಿಸುತ್ತಿಲ್ಲವೆಂದೂ, ಈ ಕಾರಣದಿಂದಾಗಿನ ವ್ಯವಹರಣೆಗಳಿಂದಾಗಿ, ಹೆಚ್ಚಿನ ಪ್ರಕರಣಗಳಲ್ಲಿ
ಸಂಬಂಧಿತ ಅಧಿಕಾರಿಗಳಿಗೆ ನಗದೀಕರಣ ಪ್ರಾಧೀಕರಿಸುವಲ್ಲಿ ವಿಳಂಬವಾಗುತ್ತಿದೆ ಎಂದು
ತಿಳಿಸುತ್ತಾ, ಪರಿಷ್ಕೃತ ಸೂಚನೆಗಳನ್ನು ನೀಡಬೇಕಾಗಿ ಕೋರಿದ್ದಾರೆ...
ಮೇಲೆ ವಿವರಿಸಿರುವ ಸಂದರ್ಭ ಮತ್ತು ಸನ್ನಿವೇಶದ ಹಿನ್ನೆಲೆಯಲ್ಲಿ, ಸಕ್ಷಮ ರಜೆ
ಮಂಜೂರಾತಿ ಪ್ರಾಧಿಕಾರವು ಕ.ನಾ.ಸೇ.ನಿಯಮಾವಳಿ, ನಿಯಮ 1181)ರ ರೀತ್ಯ ಅರ್ಹ
ನೌಕರರ ಪ್ರಕರಣಗಳಲ್ಲಿ ನಗದೀಕರಣ ಸೌಲಭ್ಯ ಮಂಜೂರಾತಿ ಆದೇಶವನ್ನು
ಹೊರಡಿಸುವಾಗ, ಸಂಬಂಧಿತ ಆದೇಶಗಳನ್ನು ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ
ನಿಯಮ 118-ಎ(4)ರ ಅವಕಾಶಗಳನ್ನು ಗಮನದಲ್ಲಿರಿಸಿ ಮಂಜೂರಾತಿ ನೀಡಲಾಗಿದೆ
ಎಂದು ಸ್ಪಷ್ಟವಾಗಿ ನಮೂದಿಸಿ ಹೊರಡಿಸತಕ್ಕದೆಂದು ತಿಳಿಸಲಾಗಿದೆ.
>> 
(ಜಿ.ಚ, ಹೇಮಣ್ಣ)
ಸರ್ಕಾರದ ಅಧೀನ ಕಾರ್ಯದರ್ಶಿ
ಆರ್ಥಿಕ ಇಲಾಖೆ(ಸೇವೆಗಳು-1)
ಸಂಕಲನಕಾರರು, ಕರ್ನಾಟಕ ರಾಜ್ಯಪತ್ರ, ಬೆಂಗಳೂರು ಮುಂದಿನ ಪ್ರಕಟನೆಯಲ್ಲಿ ಪ್ರರ್ಕವಿಸುವುದಕ್ಕಾಗಿ ಹಾಗೂ 50
ಪ್ರತಿಗಳನ್ನು ಆರ್ಥಿಕ ಇಲಾಖೆಗೆ ಸರಬರಾಜು ಮಾಡಲು,
ಇವರಿಗೆ
1, ಸರ್ಕಾರದ ಮುಖ್ಯ ಕಾರ್ಯದರ್ಶಿ | ಅಪರ ಮುಖ್ಯ ಕಾರ್ಯದರ್ಶಿಗಳು.
2, ಪ್ರಧಾನ ಮಹಾಲೇಖಪಾಲರು(A & E), ಪಿ.ಬಿ, ನಂ.6329/5369, ಪಾರ್ಕ್ ಹೌಸ್ ಕೋಡ್
ಬೆಂಗಳೂರು.
3. ಸರ್ಕಾರದ ಎಲ್ಲಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು/ ಕಾರ್ಯದರ್ಶಿಗಳು,
4 ರಿಜಿಸ್ಟ್ರಾರ್ ಜನರಲ್, ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು,
5. ರಿಜಿಸ್ಟ್ರಾರ್, ಕರ್ನಾಟಕ ಆಡಳಿತ ನ್ಯಾಯಮಂಡಳಿ, ಬೆಂಗಳೂರು.
6, ರಿಜಶ್ಟ್ರಾರ್ , ಕರ್ನಾಟಕ ಲೋಕಾಯುಕ್ತ, ಬೆಂಗಳೂರು.
ಪತ್ರದ ಮೂಲಕ
7, ಪ್ರಾದೇಶಿಕ ಆಯುಕ್ತರುಗಳು.
8. ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ, ಬೆಂಗಳೂರು,
9, ಕಾರ್ಯದರ್ಶಿ, ಕರ್ನಾಟಕ ವಿಧನ ಪರಿಷತ್ತು, ವಿಧಾನಸೌಧ, ಬೆಂಗಳೂರು.��

ಹೆಚ್ಚು ಓದಿದವು