Thursday, August 02, 2018

**RSGE**::: income tax due date extened

F.No. 225/242/2018/ITA.II
Government of India
Ministry of Finance
Department of Revenue
Central Board of Direct Taxes (ITA.II division)
North-Block, New Delhi, the 26th July, 2018
Order under Section 119 of the Income tax Act, 1961
For certain categories of taxpayers, the 'due-date' of filing income tax return for
assessment-year 2018-2019 is 31.07.2018. Upon consideration of the matter, the Central Board
of Direct Taxes, in exercise of its powers under section 119 of the Income-tax Act, 1961 ('Act'),
hereby, extends the 'due date' of filing income tax return, as prescribed in section 139(1) of the
Act, from 31st July, 2018 to 31st August, 2018.
Stapafesure
(R
ajeswar
Under-Secretary to the Government of India
Copy to:-
1. PS to F.M./OSD to FM/PS to MOS(F)
2. PS to Finance Secretary
3. Chairman (CBDT), All Members, CBDT
All Pr.CCSIT/CCSIT/Pr.DsGIT/DSGIT
5. All Joint Secretaries/CSIT, CBDT
6. Directors/Deputy Secretaries/Under Secretaries of Central Board of Direct Taxes
7. ADG(Systems)-4 with request to place the order on official website
8. Addl. CIT, Data Base Cell for placing it on irsofficers website
9. The Institute of Chartered Accountants of India, IP Estate, New Delhi-110003
10. All Chambers of Commerce
11. CIT (M&TP), Official Spokesperson of CBDT
12. ADG(PR,PP&OL) for placing on twitter handle of the department
Shabaap Surana
(Rajarajeswari R$10714Under-Secretary to the Government of India

ಕರ‍್ನಾಟಕ ಖಜಾನೆ ಸಂಹಿತೆ

Saturday, July 14, 2018

RSGE ::: ನಡೆದು ಬಂದ ಹಾದಿ

ನನಗೆ  ಸರ್ಕಾರಿ ಸುತ್ತೋಲೆ ಒಂದು ಬೇಕಿದೆ, ಹುಡುಕುವ ಬಗೆ ಹೇಗೆ?
ಕರ್ನಾಟಕ ಸೇವಾ ನಿಯಮಗಳಿಗೆ ಸಂಬಂದಿಸಿದ ಕೆಲವು ಮಾಹಿತಿಗಳು ಬೇಕಾಗಿದೆ, ಯಾರಲ್ಲಿ ಪಡೆದುಕೊಳ್ಳುವುದು?
ಕಾರ್ಯ ಸ್ಥಳದಲ್ಲಿ   ಕೆಲವು ಅನಾನುಕೂಲ ಉಂಟಾಗಿದೆ, ಯಾರ ಬಳಿ ಚರ್ಚಿಸುವುದು?
ಹೀಗೆ ಹತ್ತು ಹಲವು ಸವಾಲುಗಳನ್ನು ಎದುರಿಸುತ್ತಿದ್ದ ರಾಜ್ಯ ಸರ್ಕಾರಿ ಅಂಧ ನೌಕರರಿಗೆ ಅವುಗಳನ್ನು ಮೆಟ್ಟಿ ನಿಲ್ಲುವ ಮಾರ್ಗೋಪಾಯವನ್ನು ಕಂಡುಕೊಳ್ಳುವ ಅಗತ್ಯವಿತ್ತು. ಕಾರ್ಯಸ್ಥಳಗಳಲ್ಲಿ ತಾವು ಅನುಭವಿಸುತ್ತಿದ್ದ ಸಮಸ್ಯೆಗಳನ್ನು ಹಂಚಿಕೊಳ್ಳಲು ಮತ್ತು ಅವುಗಳನ್ನು ಪರಿಹರಿಸಿಕೊಳ್ಳಲು ವೇದಿಕೆಯೊಂದನ್ನು ಕಲ್ಪಿಸಿಕೊಳ್ಳುವ ಅವಶ್ಯಕತೆಯಿತ್ತು. ಈ ನಿಟ್ಟಿನಲ್ಲಿ ಧೃಡ ನಿರ್ದಾರ ಕೈಗೊಂಡ ಕೆಲವು ಸಮಾನ ಮನಸ್ಕ ಗೆಳೆಯರು, ವಾಟ್ಸ್ಯಾಪ್ ಗುಂಪೊಂದನ್ನು ರಚಿಸಿಕೊಳ್ಳುವ ಮೂಲಕ ಸ್ವಸಹಾಯ ಪದ್ದತಿಗೆ ನಾಂದಿ ಹಾಡಿದರು. ಹೀಗೆ ರಚಿತವಾದ ವಾಟ್ಸ್ಯಾಪ್  ಗುಂಪು ಜವಬ್ದಾರಿಯುತ ರಾಜ್ಯ ಸರ್ಕಾರಿ ನೌಕರರ ಗುಂಪು.
ಮಾಹಿತಿ ಮೂಲಕ ಸಬಲೀಕರಣ ಎಂಬ ಧ್ಯೇಯ ವಾಕ್ಯದೊಂದಿಗೆ ಪಯಣ ಆರಂಬಿಸಿ ಮಾಹಿತಿಗಳನ್ನು ಪರಸ್ಪರ ಹಂಚಿಕೊಳ್ಳುತ್ತಾ, ಅನುಮಾನಗಳನ್ನು ಪರಿಹರಿಸಿಕೊಂಡು ಚರ್ಚೆಗಳಲ್ಲಿ ನಿರುತರಾಗಿ ಸಾಗುತಿದ್ದ ಹಾದಿಯಲ್ಲಿ ತಿರುವೊಂದು ಬಂದೊದಗಿತು. 29 ಜನವರಿ 2017, ರಾಜ್ಯ ಸರ್ಕಾರವು ತನ್ನ ನೌಕರರ ವೇತನ ಪರಿಷ್ಕರಣೆ ಗಾಗಿ ವೇತನ ಆಯೋಗ ರಚಿಸುವ ಸುಳಿವು ನೀಡುತಿದ್ದಂತೆಯೆ ನಮ್ಮ ಆರ್ ಎಸ್ ಜಿ ಯಲ್ಲಿ ಅಂಧ ನೌಕರರು ವೇತನ ಆಯೋಗದಿಂದ  ಪಡೆಯಬಹುದಾದ ಪ್ರಯೋಜನಗಳ ಕುರಿತು ಮೂರುದಿನಗಳ ಅಭಿಪ್ರಾಯ ಅಭಿಯಾನ ಆರಂಬಿಸಿತು. ನಂತರ, ಹತ್ತು ಅಂಶಗಳನ್ನೊಳಗೊಂಡ ಪಟ್ಟಿಯನ್ನು ತಯಾರಿಸಿಕೊಂಡಿತು. ಆದರೆ, ಈ ನಮ್ಮ ಬೇಡಿಕೆಗಳನ್ನು ಆಯೋಗದ ಮುಂದೆ ಮಂಡಿಸುವ ಬಗೆ ಹೇಗೆ? ವಾಟ್ಸ್ಯಾಪ್ ಗಷ್ಟೆ  ಸೀಮಿತಗೊಂಡಿರುವ ತಂಡ ಒಂದಕ್ಕೆ ತನ್ನ ಅಭಿಪ್ರಾಯ ಮಂಡಿಸಲು ಆಯೋಗ ಅವಕಾಶ ನೀಡುವುದೇ ಹೀಗೆ ಹಲವಾರು ಪ್ರಶ್ನೆಗಳನ್ನು ಗುಂಪಿನ ಸದಸ್ಯರ ಮುಂದಿಟ್ಟಾಗ, ಅಂಧ ಸರ್ಕಾರಿ ನೌಕರರಿಗಾಗಿ ಪ್ರತ್ಯೇಕ ಸಂಘಟನೆಯನ್ನು ರಚಿಸಿಕೊಳ್ಳಬೇಕಾಗಿದೆ ಎಂಬ ಆಶಯವನ್ನು ಗುಂಪಿನ ನಿರ್ವಾಹಕ ತಂಡದ ಮುಂದಿಟ್ಟರು. ಹೀಗೆ, ರಾಜ್ಯ ಮಟ್ಟದ ಸಂಗಟನೆಯೊಂದನ್ನು ರಚಿಸುವ ಹೊಣೆ ಆರ್ ಎಸ್ ಜಿ ಹೆಗಲೇರಿತು. 12 ಮಾರ್ಚ್ 2017 ರಂದು ಮೈಸೂರಿನಲ್ಲಿ ಸಮಾವೇಶ ಆಯೋಜಿಸಿ, ಅದರಲ್ಲಿ ಪಾಲ್ಗೊಂಡಿದ್ದ ಅಂಧ ನೌಕರರ ಅಬಿಪ್ರಾಯ ಆಧರಿಸಿ, ಸಂಘಟನೆಯ ತಾತ್ಕಾಲಿಕ ಸಮಿತಿ ರಚಿಸಿತು. ಅಲ್ಲದೆ, ಸದಸ್ಯತ್ವ ಅಬಿಯಾನದಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ತನ್ನ ಜವಬ್ದಾರಿಯನ್ನು ಪೂರೈಸಿತು. ಮುಂದೆ, 12 ಅಕ್ಟೋಬರ್ 2017 ರಂದು ರಾಜ್ಯ ಸರ್ಕಾರಿ ಅಂಧ ನೌಕರ ಸಂಘಟನೆಯೊಡಗೂಡಿ ಆರನೆ ರಾಜ್ಯ ವೇತನ ಆಯೋಗದೆದುರು ನೌಕರರ ಬೇಡಿಕೆಗಳನ್ನು ಅತ್ಯುತ್ತಮವಾಗಿ ಪ್ರಸ್ತುತಪಡಿಸಿತು.
ನವ ಋತುವಿನ ಸ್ವಾಗತಕ್ಕೆ  ವಿಬಿನ್ನ ಮತ್ತು ವಿಶಿಷ್ಟ ಸಂಭ್ರಮಾಚರಣೆ
ಸಭಾಂಗಣ ಗಳಲ್ಲಿ, ತೆರೆದ ಸ್ಥಳಗಳಲ್ಲಿ ಸಾರ್ವಜನಿಕ ವೇದಿಕೆಯನ್ನೊಮ್ಮೆ ಊಹಿಸಿಕೊಳ್ಳಿ? ಕಿಕ್ಕಿರಿದು ಧಾವಿಸುವ ಜನಸಾಗರ, ವೇದಿಕೆಯನ್ನು ಅಲಂಕರಿಸುವ ಆಹ್ವಾನಿತ ರು, ಭಾಷಣ, ಚರ್ಚೆ ಸಾಂಸ್ಕ್ರತಿಕ ಚಟುವಟಿಕೆಗಳು ಇವೆಲ್ಲ ಸಾಮಾನ್ಯವಾಗಿ ನೆರವೇರುತ್ತವೆ. ಇಂತಹುದ್ದೆ ಒಂದು ವೇದಿಕೆ ವಾಟ್ಸ್ಯಾಪ್ ಗುಂಪಿನಲ್ಲಿ ಸೃಷ್ಟಿಸಿದರೆ ಹೌದು, ಇಂತಹದೊಂದು ಹೊಸ ಆಯಾಮಕ್ಕೆ ನಿಮ್ಮ ಜವಬ್ದಾರಿಯುತ ರಾಜ್ಯ ಸರ್ಕಾರಿ ನೌಕರರ ಗುಂಪು ಮುನ್ನುಡಿ ಬರೆಯಿತು. ಬ್ರೇಲ್ ಪಿತಾಮಹ ಲೂಯಿರವರ ಜನ್ಮದಿನವನ್ನು ಅಂದರ ಪಾಲಿನ ಹೊಸಾ ವರ್ಷ ಎಂಬ ಘೋಷಣೆಯೊಂದಿಗೆ ಲೂಯೀ ಬ್ರೇಲ್ರವರ 209 ನೆ ಜಯಂತಿಯನ್ನು ಆಯೋಜಿಸಿ ಸಂಭ್ರಮಿಸಿತು. ಈ ಕಾರ್ಯಕ್ರಮವು ಲೂಯೀರವರ ಜನ್ಮದಿನವಾದ ದಿನಾಂಕ 04/01/2018 ರಂದು  ಆರಂಭಗೊಂಡು, ಅವರು ಚಿರನಿದ್ರೆಗೆ ಜಾರಿದ ದಿನವಾದ ದಿನಾಂಕ 06/01/2018 ರಂದು ಸಮಾರೋಪಗೊಂಡಿತು. ಚರ್ಚಾ ಸ್ಪರ್ದೆ, , ಭಾಷಣಗಳೊಡನೆ ಸಾಂಸ್ಕ್ರತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಅಲ್ಲದೆ, ವೇದಿಕೆಯೊಂದರ ಕ್ರಮಬದ್ದ ಚಟುವಟಿಕೆಗಳು, ಸಮಯಪಾಲನೆ, ಉದ್ಘಾಟನೆ ಸಮಾರೋಪ ಸಮಾರಂಭದ ವರೆಗೆ ನೆರವೇರಿದ್ದು ಈ ಸಮಾರಂಬದ ವೈಶಿಷ್ಟ್ಯ

ಆಪ್ಲೈನ್ ಕಾರ್ಯಗಾರಗಳು:
ಕೇವಲ ವಾಟ್ಸ್ಯಾಪಿಗಷ್ಟೇ ಸೀಮಿತಗೊಳ್ಳದೆ, ತನ್ನ ಮುಖ್ಯ ದ್ಯೇಯ “”ಮಾಹಿತಿ ಮೂಲಕ ಸಬಲೀಕರಣ”” ಇದನ್ನು ಪೂರೈಸಿಕೊಳ್ಳಲು ಆಫ್ಲೈನ್ನಲ್ಲಿಯೂ ಸಹ ಕಾರ್ಯಗಾರಗಳನ್ನು ಏರ್ಪಡಿಸಿಕೊಂಡು ಬಂದಿದೆ. ಎನ್.ೆಪ್.ಬಿ ಮೈಸೂರು ಇವರ ಸಹಬಾಗಿತ್ವದಲ್ಲಿ ಅ್ಯಂಡ್ರೋಯಿಡ್ ಫೋನ್ ಬಳಕೆಯ ಕಾರ್ಯಗಾರ ಮತ್ತು ಐಟೀ ರಿಟರ್ನ್ಸ್ ಕಾರ್ಯಗಾರಗಳು ಇದಕ್ಕೆ ಸಾಕ್ಷಿಯಾಗಿವೆ.
ವಿಶೇಷ ದಿನಗಳಂದು ವಿಶಿಷ್ಟ ಆಚರಣೆಗಳು.
ಕೇವಲ ಮಾಹಿತಿ ವಿನಿಮಯ ಚರ್ಚೆಗಳಿಗಷ್ಟೆ ಸೀಮಿತಗೊಳ್ಳದೆ ಸಾಮಾಜಿಕ ಜಾಲತಾಣದಲ್ಲಿ ಹೊಸ ಆಯಾಮ ಒಂದಂನು ಆರಂಬಿಸುವ ನಿಟ್ಟಿನಲ್ಲಿ ಕೆಲವು ವಿಶೇಷ ದಿನಗಳಾದ, ವಿಶ್ವ ಮಹಿಳಾದಿನ, ಅಂತಹ ದಿನವನ್ನು ವಿಶಿಷ್ಟವಾಗಿ ಆಚರಿಸಿತು, 27 ಜುಲೈ ಅಂದು ಹೆಲೆನ್ ಕಲರ್ ರವರನ್ನು ಸ್ಮರಿಸುವ ಮೂಲಕ ಸ್ಪೂರ್ತಿಯ ಗಣಿಗೆ ನಮನಸಲ್ಲಿಸಿತು.
ಆರ್.ಎಸ್.ಜಿ.ಇ. ಯಾಪ್ ಈಗ ಪ್ಲೇಸ್ಸ್ಟೋರ್ನಲ್ಲಿ ಲಭ್ಯ
ವಾಟ್ಸ್ಯಾಪ್ ಗುಂಪಿನಲ್ಲಿ ಸದಸ್ಯತ್ವವು ನಿರ್ದಿಷ್ಟ  ಸಂಖ್ಯೆಯ ಮಿತಿಗೆ ಒಳಪಡುತ್ತದೆ. ಅಲ್ಲದೆ, ಪ್ರತಿಯೊಬ್ಬ ಸದಸ್ಯನು ಹೊಸದಾಗಿ ಸದಸ್ಯತ್ವ ಪಡೆದುಕೊಳ್ಳಲು ಈಗಾಗಲೆ ಸದಸ್ಯತ್ವ ಪಡೆದುಕೊಂಡಿರುವ ಸದಸ್ಯರ ಮೂಲಕ ಅಡ್ಮಿನ್ಗಳಿಗೆ ಮನವಿ ಸಲ್ಲಿಸಬೇಕಾಗುತ್ತದೆ. ಇದನ್ನು ತಪ್ಪಿಸಲು ಆರ್.ಎಸ್.ಜಿ. ಅ್ಯಪ್ ರಚಿಸಿದ್ದು, ಆಸಕ್ತರು ಇದನ್ನು ಪ್ಲೇ ಸ್ಟೋರ್‌ನಿಂದ ಪಡೆದುಕೊಳ್ಳಬಹುದಾಗಿದೆ.
ಗುಡಿಯೊಂದು ನಿರ್ಮಿಸಲು ಹಲವರ ಶ್ರಮ ಬೇಕು, ಅಂತೆಯೆ ವಾಟ್ಸ್ಯಾಪ್ ಗುಂಪೊಂದು ಸಾದನೆಯ ಶಿಖರವೇರಲು ಅದರ ಪ್ರತಿಒಬ್ಬ ಸದಸ್ಯನ ಕೊಡುಗೆ ಬೇಕು. ಆರ್.ಎಸ್.ಜಿಯ ಪ್ರತಿಯೊಬ್ಬ ಸದಸ್ಯರಿಗು ತಮ್ಮ ಭಾಗವಹಿಸುವಿಕೆಗಾಗಿ ಅಡ್ಮಿನ್ ತಂಡವು ವಂದಿಸುತ್ತದೆ.  ಎರಡು ವಸಂತಗಳನ್ನು ಪೂರೈಸಿರುವ ನಿಮ್ಮ ಆರ್ ಎಸ್ ಜಿ ಗುಂಪು ರಾಜ್ಯ ಸರ್ಕಾರಿ ನೌಕರರ ಅನುಕೂಲ, ಅಗತ್ಯತೆಗೆ ಅನುಗುಣವಾಗಿ, ಇನ್ನು ಹೆಚ್ಚಿನ ಶ್ರಮ ವಹಿಸಲು ನಿಮ್ಮೆಲ್ಲರ ಬೆಂಬಲ ಅತ್ಯಗತ್ಯ.

Wednesday, July 11, 2018

**RSGE**::: ವಾರ‍್ಶಿಕೋತ್ಸವ ಆಚರಿಸಲು ಸಲಹೆ ಕೋರಿ ಹೊರಡಿಸಿದ ಪ್ರಖಟಣೆ

ಆರ್. ಎಸ್. ಜಿ. ಇ. ವಿಶೇಷ ಪ್ರಕಟಣೆ:
ವಿಷಯ: ಗುಂಪಿನ ಎರಡನೆ ವಾರ್ಶಿಕೋತ್ಸವದ ಆಚರಣೆಯ ಕುರಿತು:
ಆತ್ಮೀಯ ಗುಂಪಿನ ಒಡನಾಡಿಗಳಿಗೆ ಅಡ್ಮಿನ್ ತಂಡದ ನಮಸ್ಕಾರಗಳು.
ಪ್ರಿಯ ಸ್ನೇಹಿತರೆ, ತಾವೆಲ್ಲರು ಕೂಡಿ ಬೆಳೆಸಿಕೊಂಡು ಬಂದಿರುವ ಈ ನಿಮ್ಮ ಗುಂಪು ಬರುವ ಜೂನ್ 12 ಗೆ ಎರಡನೆ ವರ್ಷವನ್ನು ಪರಿಣಾಮಕಾರಿಯಾಗಿ ಹಾಗೂ ಎಷಸ್ವಿಯಾಗಿ ಪೂರೈಸುತ್ತಿದೆ ಎಂದು ತಿಳಿಸಲು ನಿರ್ವಾಹಕ ತಂಡವು ಹರ್ಷಿಸುತ್ತದೆ.
ಈವರೆಗಿನ ಎಲ್ಲಾ ಕಾರ್ಯಕ್ರಮಗಳನ್ನು ಹಾಗೂ ಚಟುವಟಿಕೆಗಳನ್ನು  ತಮ್ಮ ಸಕ್ರೀಯ ಹಾಗೂ ಮನಃಪೂರ್ವಕ ಪಾಲ್ಗೊಳ್ಳುವಿಕೆಯ ಮೂಲಕ ಅವಿಸ್ಮರಣೀಯಗೊಳಿಸಿರುವ  ತಾವೂ, ಈ ಎರಡನೆ ವಾರ್ಷಿಕೋತ್ಸವದ ಸಂದರ್ಭವನ್ನು   ನೆನಪಿನ ಅಂಗಳದಲ್ಲಿ, ಜೀವನ ಗಟ್ಟದಲ್ಲಿ  ಚಿರಸ್ಥಾಯಿಗೊಳ್ಳುವಂತೆ ಆಚರಿಸಲು ಅಮೂಲ್ಯ ಸಲಹೆಗಳನ್ನು/ಅಭಿಪ್ರಾಯಗಳನ್ನು  ನೀಡಬೇಕೆಂದು ಈ ಮೂಲಕ ಆತ್ಮೀಯವಾಗಿ ಕೋರಲಾಗಿದೆ.
ಸ್ನೇಹಿತರೆ, ದಿನಾಂಕ 12-06-2016 ಕ್ಕು ಮುಂಚೆ, ಅಂದರೆ, ಈ ಗುಂಪಿನ ಆರಂಭದ ಪೂರ್ವ ದಿನಗಳಿಗೆ ಹೋಲಿಸಿದರೆ,
ಇಂದು ನಾವೆಲ್ಲರು ಮಾನಸಿಕವಾಗಿ/ಭಾವನಾತ್ಮಕವಾಗಿ ಬಹಳಷ್ಟು ಸಮೀಪಕ್ಕೆ ಬಂದಿದ್ದೇವೆ ಎಂಬುದು ಅಕ್ಷರ ಸಹ ವೇಧ್ಯವಾಗಿರುವ ಸಂಗತಿ.
ಯಾವ ಪ್ರಾಥಮಿಕ ಉದ್ದೇಷವನ್ನು ಇಟ್ಟುಕೊಂಡು ಸದರಿ ಗುಂಪು ಪ್ರಾರಂಬವಾಯಿತೋ, ಆ ಉದ್ದೇಷ ಬಹುಮಟ್ಟಿಗೆ ಇಂದು ಈಡೇರಿದೆ.
ಆದರೆ, ಗುಂಪಿನ ಪ್ರಧಾನ ಉದ್ದೇಷವಾದ ಸಭಲೀಕರಣದ ದಿಷೆಯಲ್ಲಿ  ನಾವೆಲ್ಲರು ಕ್ರಮಿಸಬೇಕಾಗಿರುವ ದಾರಿ ಬಹು ದೂರವು, ಅನಿರೀಕ್ಷಿತವು   ಹಾಗೂ ಸವಾಲುದಾಯಕವು ಾಗಿರಲಿದೆ.
ಈ ನಿಟ್ಟಿನಲ್ಲಿ ಒಗ್ಗೂಡಿ ಸಾಗುತ್ತಿರುವ ಪ್ರಯತ್ನಕ್ಕೆ ಮತ್ತಷ್ಟು ಭಲ ತುಂಬುವ, ಪರಸ್ಪರ ಮುಕ್ತ ಘ್ರಹಿಕೆಯ ಮೂಲಕ ನಮ್ಮೆಲ್ಲರ ನಡುವಿನ ಸಾಮಿಪ್ಯತೆಯನ್ನು ಹಾಗೂ ವಿಷ್ವಾಸವನ್ನು ಮತ್ತಷ್ಟು ವೃದ್ಧಿಗೊಳಿಸುವ ಹಾಗೂ ?ನಾವು? ಎಂಬ ಭಾವನೆಗೆ ಮತ್ತಷ್ಟು ಖಸಿವು ತುಂಬುವ ಕಾರ್ಯಕ್ಕೆ ಈ ಎರಡನೆ ವರ್ಷದ ಆಚರಣೆ ಸಾಕ್ಷಿಯಾಗಲಿ ಎಂಬುದು ನಮ್ಮ ಆಷಯ.
ಈ ಆಷಯಕ್ಕೆ ಪೂರಕವಾಗಿ, ಗುಂಪಿನ ಎರಡನೆ ವರ್ಷದ ವಾರ್ಷಿಕೋತ್ಸವದ ಆಚರಣೆಯ ವಿಧಾನ, ಸ್ವರೂಪದ ಕುರಿತು ಗುಂಪಿನ ಸರ್ವ ಸದಸ್ಯರು ದಿನಾಂಕ 29/04/2018 ರಿಂದ 01/05/2018 ರವರೆಗೆ ತಮ್ಮ ಅಮೂಲ್ಯ ಅಬಿಪ್ರಾಯಗಳನ್ನು ಹಂಚಿಕೊಳ್ಳಬೇಕಾಗಿ ಈ ಮೂಲಕ ಕೋರಲಾಗಿದೆ.
ಉದಾಹರಣೆಗೆ: ಕಾರ್ಯಕ್ರಮದ ಮಾದರಿ ಹೇಗಿರಬೇಕು? ಯಾವೆಲ್ಲ ಚಟುವಟಿಕೆಗಳನ್ನು ಕೈಗೊಂಡರೆ ಆತ್ಮೀಯತೆ ಹಾಗೂ ಸಮುಧಾಯಿಕ ಭಾವನೆಗಳನ್ನು ವೃದ್ಧಿಸಲು ಸಾಧ್ಯ? ಇತ್ಯಾದಿ.
ಗಮನಿಸಿ: ಮೇಲಿನ ಉದಾಹರಣೆಗಳು ಉದಾಹರಣೆಗಳೇ ವಿನಹ, ತಮ್ಮ ಸಲಹೆಗಳು ಅಷ್ಟಕ್ಕೆ ಸೀಮಿತವಾಗಬೇಕಿಲ್ಲ.
ತಮ್ಮೆಲ್ಲರ ಅಭಿಪ್ರಾಯಗಳ ಆಧಾರದ ಮೇಲೆ ಸಮಯ ಮತ್ತು ಸಂಪನ್ಮೂಲಗಳ ಲಭ್ಯತೆಯನ್ನು ಆಧರಿಸಿ ವಾರ್ಷಿಕೋತ್ಸವ ಕಾರ್ಯಕ್ರಮದ ರೂಪೂರೇಷೆಗಳನ್ನು ಸಿದ್ದಪಡಿಸಲು ನಿರ್ವಾಹಕ ತಂಡವು ಯತ್ನಿಸುತ್ತದೆ.
ಗಮನಿಸಬೇಕಾದ ಅಂಷಗಳು:
ಗುಂಪಿನ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವಾಗ ಗಮನಿಸಬೇಕಾದ ಅಂಶಗಳೆಂದರೆ:
1. ಸದರಿ ವಿಷಯಕ್ಕೆ ಸಂಬಂದಿಸಿದಂತೆ ಸಂದೇಷವನ್ನು ಕಳುಹಿಸುವಾಗ "ಗುಂಪಿನ ಎರಡನೆ ವಾರ್ಷಿಕೋತ್ಸವದ ಕುರಿತು" ಎಂದು ಉಲ್ಲೇಖಿಸುವುದು/ಹೇಳುವುದುಅವಷ್ಯ.
2. ಎಂದಿನಂತೆ ಸಮಾಲೋಚನೆಯು ವಿಷಯಾಧರಿತವಾಗಿರಬೇಕೆ ವಿನಹ ವ್ಯಕ್ತಿಗತವಾಗಿರುವಂತಿಲ್ಲ.
3. 3 ನಿಮಿಷಕ್ಕಿನ್ನ ಹೆಚ್ಚಿನ ಅವಧಿಯ ಧ್ವನಿ ಸಂದೇಷಕ್ಕೆ ನಂತರ ಕಿರು ಪಠ್ಯ ವಿವರಣೆ ನೀಡುವುದು ಅವಷ್ಯ.
4. ತಮ್ಮ ಸಲಹೆಗಳು/ಅಭಿಪ್ರಾಯಗಳೂ  ಸಾಧ್ಯವಾದಷ್ಟು ಪರಿಪೂರ್ಣತೆಯಿಂದ ಕೂಡಿರುವುದು ಅಪೇಕ್ಷಣೀಯ.
ತಮ್ಮೆಲ್ಲರ ಸಕ್ರೀಯ ಪಾಲ್ಗೊಳ್ಳುವಿಕೆಯ ನಿರೀಕ್ಷೆಯಲ್ಲಿ:
ಆರ್. ಎಸ್. ಜಿ. ಈ. ನಿರ್ವಾಹಕ ತಂಡ.

**RSGE**::: ಹೆಲ್ಲನ್ ಕೆಲ್ಲರ‍್ ಜೀವನದ ಕುರಿತ ವಿಡಿಯೋಗಳು ಮತ್ತು ಅಂದಿನ ನೋಟಿಫಿಕೇಶನ್



!ಆರ‍್ ಎಸ್ ಜಿ ಇ  ವಿಶೇಷ ಪ್ರಖಟಣೆ!
ಗುಂಪಿನ ಎಲ್ಲ ಸದಸ್ಯರಿಗು ಅಡ್ಮಿನ್ ತಂಡದ ನಮಸ್ಕಾರಗಳು.
ಪ್ರಿಯ ಸದಸ್ಯರೇ!
ಇಂದು ನಮ್ಮ ನಿಮ್ಮೆಲ್ಲರಿಗೂ  ಸ್ಪೂರ‍್ತಿದಾಯಕ ಆದರ‍್ಷ ಮಹಿಳೆ ಹೆಲನ್ ಕೆಲ್ಲರ‍್ ಅವರ 138 ನೆ ಜನ್ಮದಿನ.
ಈ ಶುಭ ಸಂಧರ‍್ಬದಲ್ಲಿ ಅವರನ್ನು ನೆನೆಯುತ್ತಾ,
ಜಗತ್ತಿನಲ್ಲಿ ಅಂಧರೂ ಸಹ ಗೌರವಕ್ಕೆ ಯೋಗ್ಯರು ಎಂದು ಪ್ರತಿಪಾದಿಸಿದ,
ಅಂದರಿಗೆ ಸದಾ ಚೈತನ್ಯದ ಚಿಲುಮೆಯಾಗಿದ್ದ ಹಾಗೂ ಇಂದು ಆಗಿರುವ ಹೆಲ್ಲನ್ ಕೆಲ್ಲರ‍್ ಅವರಿಗೆ ಆರ‍್ ಎಸ್ ಜಿ ಇ ತಂಡದ ಎಲ್ಲ ಸದಸ್ಯರ ಪರವಾಗಿ ಜನ್ಮದಿನದ ಶುಭಾಷಯಗಳು.
ಇವರು ಧೃಷ್ಟಿ ಮತ್ತು ಶ್ರವಣ ದೋಷ ಅಂಗವಿಖಲತೆಯಿಂದ ಬಳಲುತ್ತಿದ್ದರೂ ಸಹ ಅವರ ಜೀವನ ಮತ್ತು ಸಾಧನೆ, ನಮಗೆಲ್ಲ ದಾರಿದೀಪ.
ಅವರು ಜಗತ್ತಿನಲ್ಲಿ ಲಕ್ಷಾಂತರ ಅಂಧರ ಬಾಳಿಗೆ ಸ್ಪೂರ‍್ತಿಯ ಚಿಲುಮೆಯಾಗಿ  ಅವರಲ್ಲಿ ಧೈರ‍್ಯ ಹಾಗು ಸಾಧಿಸುವ ಛಲ ಮೂಡಿಸಿದ್ದಾರೆ.
ಇಂದು ನಾವೆಲ್ಲರೂ ಸಹ ನಮ್ಮ ದೈನಂದಿನ ಜೀವನದಲ್ಲಿ ಹಾಗೂ ಕಾರ‍್ಯಕ್ಷೇತ್ರದಲ್ಲಿ ಹಲವು ತೊಂದರೆ ಅಡತಡೆಗಳನ್ನು ಎದುರಿಸುತ್ತಿದ್ದೇವೆ.
ಆದರೇ ಇಂತಹ ಅಡೆತಡೆಗಳು ನಮಗೆ ಏನೇನು ಅಲ್ಲ.
ಏಕೆಂದರೆ ಅಂದಿನ ಕಾಲದಲ್ಲಿ ಧೃಷ್ಟಿ ಸವಾಲುಳ್ಳ ಹಾಗೂ ಷ್ರವಣದೋಷವುಳ್ಳ ವ್ಯಕ್ತಿಗಳಿಗೆ ಎಂತಹ ಸವಾಲುಗಳು ಅಡೆತಡೆಗಳಿದ್ದವೆಂಬುದು ನಮಗೆಲ್ಲ ತಿಳಿದಿರುವ ವಿಷಯವೇ ಅಲ್ಲವೇ?
ಇಂತಹ ಸಂದರ‍್ಭದಲ್ಲಿ ಹೆಲ್ಲನ್ ಕೆಲ್ಲರ‍್ ಅವರ ಜೀವನ, ಸಾಧನೆ, ಅವರು ಬದುಕಿರುವವರೆಗು ಅನುಸರಿಸಿದ  ಛಲ, ಧೃಢ ನಂಬಿಕೆ, ಸದಾಷಯಗಳು ನಮಗೆ ಸನ್ಮಾರ‍್ಗ ತೋರುವ ವಿಷಯಗಳೇ ಆಗಿವೆ.
ಹಾಗಾಗಿ ಈ ದಿನದಂದು ಅವರ ಜೀವನ, ಸಾಧನೆಯ ಬಗೆಗೆ ವಿಚಾರಗಳನ್ನು ಹಂಚಿಕೊಳ್ಳುವುದು ಸೂಕ್ತ.
ಅವರ ಕುರಿತ ಜೀವನಚರಿತ್ರೆ, ನುಡಿಗಳು, ಗೀತೆಗಳು, ಉತ್ತಮ ಬರಹಗಳು ಹಾಗೂ ನಿಮ್ಮ ಮನದಾಳದ ಮಾತುಗಳಿಗೆ ಅವಕಾಷ ಕಲ್ಪಿಸಲಾಗಿದೆ.
ವಂದನೆಗಳೊಂದಿಗೆ ಆರ‍್ ಎಸ್ ಜಿ ಇ ಅಡ್ಮಿನ್ ತಂಡ.

ಹೆಚ್ಚು ಓದಿದವು