Responsible State Government Employees (R S G E) ಈ ಬ್ಲಾಗ್ ಮೂಲಕ ಕರ್ನಾಟಕ ರಾಜ್ಯ ಸರ್ಕಾರಿ ಅಂಧ ನೌಕರರಿಗಾಗಿ ಸೇವಾ ವಿಷಯಗಳು ಮತ್ತು ಕಛೇರಿಗಳಲ್ಲಿ ಅನುಭವಿಸುವ ತೊಂದರೆಗಳಿಗೆ ಪರಿಹಾರೋಪಾಯವನ್ನು ತಿಳಿಸಲಾಗುವುದು. ಕಾಯ್ದೆಗಳು, ನಿಯಮಗಳು, ಸುತ್ತೊಲೆಗಳು ಮತ್ತು ಅಂಧ ನೌಕರರ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಪೂರಕ ಅಧ್ಯಯನ ಸಾಮಗ್ರಿಗಳನ್ನು ಇಲ್ಲಿರಿಸಲು ಪ್ರಯತ್ನಿಸಲಾಗುವುದು. ಹೆಚ್ಚಿನ ವಿವರಗಳಿಗೆ: RSGE ನಿರ್ವಾಹಕರಲ್ಲೊಬ್ಬರಾದ R.C ಶಿವಕುಮಾರ್ ರವರ ೯೦೬೦೭೨೦೯೩೭ ಮೊಬೈಲ್ ಸಂಖ್ಯೆಗೆ ಕರೆಮಾಡಿ.
Monday, May 20, 2019
!Information Towards Comunity! ಸರಣಿ ಕಾರ್ಯಕ್ರಮದ ವಿಶೇಷ ಪ್ರಖಟಣೆ
Wednesday, March 27, 2019
ಸುತ್ತೋಲೆ ವಿಷಯ : ಸರ್ಕಾರಿ ಅಧಿಕಾರಿ / ನೌಕರರುಗಳ ವಿರುದ್ಧ ಶಿಸ್ತುಕ್ರಮ ಇಲಾಖಾ ವಿಚಾರಣೆಯ ಅವಶ್ಯಕ ಪರಿಪೂರ್ಣ ಪ್ರಸ್ತಾವನೆಗಳನ್ನು ವಿಳಂಬವಿಲ್ಲದೇ ಸಲ್ಲಿಸುವ ಬಗ್ಗೆ.
ಕರ್ನಾಟಕ ಸರ್ಕಾರ
ಸಂಖ್ಯೆ : ಸಿಆಸುಇ 76 ಸೇವಿ 2018
ಕರ್ನಾಟಕ ಸರ್ಕಾರದ ಸಚಿವಾಲಯ ,
ವಿಧಾನಸೌಧ . ಬೆಂಗಳೂರು , ದಿನಾಂಕ : 21 . 01 . 2019
ಸುತ್ತೋಲೆ
ವಿಷಯ : ಸರ್ಕಾರಿ ಅಧಿಕಾರಿ / ನೌಕರರುಗಳ ವಿರುದ್ಧ ಶಿಸ್ತುಕ್ರಮ ಇಲಾಖಾ ವಿಚಾರಣೆಯ
ಅವಶ್ಯಕ ಪರಿಪೂರ್ಣ ಪ್ರಸ್ತಾವನೆಗಳನ್ನು ವಿಳಂಬವಿಲ್ಲದೇ ಸಲ್ಲಿಸುವ ಬಗ್ಗೆ
ಮರು ಸೂಚನೆಗಳು , ಉಲ್ಲೇಖ : ( 1 ) ಅಧಿಕೃತ ಜ್ಞಾಪನ ಸಂಖ್ಯೆ : ಡಿಪಿಎಆರ್ 41 ಎಸ್ಡಿಇ 83 , ದಿನಾಂಕ : 16 . 08 . 1983 .
( 2 ) ಅಧಿಕೃತ ಜ್ಞಾಪನ ಸಂಖ್ಯೆ : ಡಿಪಿಎಆರ್ 33 ಎಸ್ಡಿಇ 83 , ದಿ : 24 . 05 . 1984 , ( 3 ) ಸುತ್ತೋಲೆ ಸಂಖ್ಯೆ : ಸಿಆಸುಇ 7 ನೇಣವಿ 96 , ದಿನಾಂಕ : 04 . 07 . 1996 , ( 4 ) ಸುತ್ತೋಲೆ ಸಂಖ್ಯೆ : ಸಿಆಸುಇ 04 ಸೇಇವಿ 96 , ದಿನಾಂಕ : 28 . 08 . 1996 , ( 5 ) ಸುತ್ತೋಲೆ ಸಂಖ್ಯೆ : ಸಿಆಸುಇ 09 ಸೇಣವಿ 98 , ದಿನಾಂಕ : 03 . 08 . 1998 , ( 6 ) ಸುತ್ತೋಲೆ ಸಂಖ್ಯೆ : ಸಿಆಸುಇ 47 ಸೇವಿ 2007 , ದಿನಾಂಕ : 23 . 03 . 2002 . ( 7 ) ಸುತ್ತೋಲೆ ಸಂಖ್ಯೆ : ಸಿಆಸುಇ 07 ಸೇವಿ 2003 , ದಿನಾಂಕ : 12 . 05 . 2003 , ( 8 ) ಸುತ್ತೋಲೆ ಸಂಖ್ಯೆ : ಸಿಆಸುಇ 1 ಸೇಇವಿ 2005 , ದಿನಾಂಕ : 09 . 02 . 2005 ,
ಸರ್ಕಾರಿ ನೌಕರನು ಸೇವೆಯಲ್ಲಿದ್ದಾಗ ಅವನ ಮೇಲೆ ಹೂಡಿದ ಯಾವುದೇ ಇಲಾಖಾ ತನಿಖೆಗಳ ಬಗ್ಗೆ ಅವನು ಸೇವೆಯಿಂದ ನಿವೃತ್ತಿಯಾದ ನಂತರ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 214 ( 2 ) ( ಬಿ ) ರ ಉಪಬಂಧಗಳಿಗೆ ಒಳಪಟ್ಟು ಇಲಾಖಾ ವಿಚಾರಣೆಯನ್ನು ಆರಂಭಿಸುವ ಮತ್ತು ಸೇವೆಯಲ್ಲಿದ್ದಾಗ ಅವನ ವಿರುದ್ಧ ಆರಂಭಿಸಿರುವ ಇಲಾಖಾ ವಿಚಾರಣೆಯನ್ನು ನಿಯಮ 214 ( 2 ) ( ಎ ) ರ ಉಪಬಂಧಗಳಿಗೆ ಒಳಪಟ್ಟು ಮುಂದುವರೆಸುವ ಅವಕಾಶವಿದೆ . ಇದರ ಹೊರತಾಗಿ ಕರ್ನಾಟಕ ನಾಗರಿಕ ಸೇವಾ ( ವರ್ಗೀಕರಣ , ನಿಯಂತ್ರಣ ಮತ್ತು ಮೇಲ್ಮನವಿ ) ನಿಯಮಗಳು , 1957ರಲ್ಲಿರುವ ನಿಯಮಗಳ ಪ್ರಕಾರ ಹೊಸದಾಗಿ ಇಲಾಖಾ ವಿಚಾರಣೆ ಪ್ರಾರಂಭಿಸುವುದಕ್ಕೆ ಮತ್ತು ಪ್ರಾರಂಭಿಸಿರುವ ಇಲಾಖಾ ವಿಚಾರಣೆಯನ್ನು ಮುಂದುವರೆಸುವುದಕ್ಕೆ ಅವಕಾಶವಿರುವುದಿಲ್ಲ . ಕಾರಣ ಕರ್ನಾಟಕ ನಾಗರಿಕ ಸೇವಾ ( ವರ್ಗೀಕರಣ , ನಿಯಂತ್ರಣ ಮತ್ತು ಮೇಲ್ಮನವಿ ) ನಿಯಮಗಳು ಅಂತಹ ನಿವೃತ್ತ ನೌಕರರಿಗೆ ಅನ್ವಯಿಸುವುದಿಲ್ಲ . ಸರ್ಕಾರಿ ನೌಕರನು ನಿವೃತ್ತಿಯಾದ ನಂತರ ಅವನ ಮೇಲೆ ಹೂಡಲಾಗಿದ್ದ ಇಲಾಖಾ ತನಿಖೆಗಳನ್ನು ಸರ್ಕಾರಕ್ಕೆ ಆರ್ಥಿಕ ಹಾನಿ ಉಂಟಾಗಿಲ್ಲವೆಂಬ ಕಾರಣ ನೀಡಿ ಅವುಗಳನ್ನು ಹಿಂದಕ್ಕೆ ತೆಗೆದುಕೊಳ್ಳುವ ಪ್ರಸ್ತಾವನೆಗಳು ಸರ್ಕಾರದ ಮುಂದೆ ಬಂದ ಸಂದರ್ಭದಲ್ಲಿ ಸರ್ಕಾರವು ಆ ಬಗ್ಗೆ ಪರಿಶೀಲಿಸಿ , ಉಲ್ಲೇಖ ( I ) ಮತ್ತು ( 2 ) ರ ಅಧಿಕೃತ ಜ್ಞಾಸನಗಳಲ್ಲಿ ನಿವೃತ್ತಿ ಆಗುವಂತಹ ಸರ್ಕಾರಿ ನೌಕರರ ಮೇಲೆ ಹೂಡಲಾಗಿರುವ ಇಲಾಖಾ ತನಿಖೆಗಳನ್ನು ಅವರು ನಿವೃತ್ತಿ ಆಗುವುದಕ್ಕೆ ಮುಂಚೆ ಇತ್ಯರ್ಥ ಮಾಡುವ ಕುರಿತು ಸೂಚನೆಗಳನ್ನು ನೀಡಿದೆ .
2 . ತದನಂತರದಲ್ಲಿ ನಿವೃತ್ತಿ ಹೊಂದಿದ ಆಪಾದಿತ ಅಧಿಕಾರಿ ವಿರುದ್ಧ ಇಲಾಖಾ ವಿಚಾರಣೆ ಪ್ರಾರಂಭಿಸಬೇಕಾದ ಪ್ರಕರಣವೊಂದರಲ್ಲಿ ಸಕಾಲದಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 214 ( ಬಿ ) ( ತ ) ರಲ್ಲಿ ನಿಗದಿಪಡಿಸಿದ ಕಾಲಮಿತಿಯೊಳಗೆ ವಿಚಾರಣೆಯನ್ನು ಪ್ರಾರಂಭಿಸಿಲ್ಲದ ಕಾರಣ ಆಪಾದಿತ ಅಧಿಕಾರಿಯ ಮೇಲೆ ಇಲಾಖಾ ವಿಚಾರಣೆ ಹೂಡಲು ಅಸಾಧ್ಯವಾದ ಪರಿಸ್ಥಿತಿ ಉಂಟಾದುದಲ್ಲದೇ ಆರೋಪಿ ಸರ್ಕಾರಿ ನೌಕರರು ನಿವೃತ್ತಿ ಹೊಂದುವ 2 - 3 ದಿನಗಳ ಮುಂಚೆ ಇಲ್ಲವೇ ಹಿಂದಿನ ದಿನ ಅವ ದುರ್ನಡತೆಗೆ ಸಂಬಂಧಿಸಿದ ವಿವರಗಳು ನೀಡಿ ಅವರ ಮೇಲೆ ಶಿಸ್ತಿನ ಕ್ರಮ ಆರಂಭಿಸಲು ಇಲಾಖೆಗಳು ಸರ್ಕಾರಕ್ಕೆ ಪ್ರಸ್ತಾವನೆಗಳನ್ನು ಕಳುಹಿಸುತ್ತಿರುವುದು ಸಹ ಸರ್ಕಾರದ ಗಮನಕ್ಕೆ ಬಂದ ಸಂದರ್ಭದಲ್ಲಿ ಸರ್ಕಾರವು ಉಲ್ಲೇಖ ( 4 ) ರ ಸುತ್ತೋಲೆಯಲ್ಲಿ ಸರ್ಕಾರಿ ನೌಕರನ ದುರ್ನಡತೆ ಗಮನಕ್ಕೆ ಬಂದ ತಕ್ಷಣ ಶಿಸ್ತಿನ ಪ್ರಾಧಿಕಾರಕ್ಕೆ ಅದನ್ನು ತಿಳಿಸಬೇಕು . ನಿವೃತ್ತಿ ಹೊಂದಲಿರುವ ನೌಕರರ ಪ್ರಕರಣದಲ್ಲಿ ಶಿಸ್ತಿನ ಪ್ರಾಧಿಕಾರಕ್ಕೆ ಅಂತಹ ಮಾಹಿತಿ ಸರ್ಕಾರಿ ನೌಕರನು ನಿವೃತ್ತಿ ಹೊಂದುವ ಕನಿಷ್ಠ 2 ಅಥವಾ 3 ತಿಂಗಳ ಪೂರ್ವದಲ್ಲಿ ನೀಡಿ , ಕರಡು ದೋಷಾರೋಪಣಾ ಪಟ್ಟಿ ಇತ್ಯಾದಿ , ಸಂಬಂಧಿಸಿದ ಕಾಗದ ಪತ್ರ ಮತ್ತು ದಾಖಲೆಗಳೊಡನೆ ಶಿಸ್ತುಪಾಧಿಕಾರಿಗಳಿಗೆ ಕಳುಹಿಸುವ ಬಗ್ಗೆ ಮತ್ತು ವಯೋನಿವೃತ್ತಿ ಅಂಚಿನಲ್ಲಿರುವ ಅಂತಹ ಆಪಾದಿತ ಸರ್ಕಾರಿ ನೌಕರರ ನಿವೃತ್ತಿ ದಿನಾಂಕವನ್ನು ಕಡ್ಡಾಯವಾಗಿ ನಮೂದಿಸುವ ಬಗ್ಗೆ ಸೂಚನೆಗಳನ್ನು ನೀಡಲಾಗಿದೆ . ಉಲ್ಲೇಖ ( 5 ) ರ ಸುತ್ತೋಲೆಯಲ್ಲಿ ನಿವೃತ್ತಿ ಹೊಂದಲಿರುವ ಅಧಿಕಾರಿಗಳ ವಿರುದ್ಧ ಶಿಸ್ತಿನ ಪ್ರಸ್ತಾವನೆಗಳನ್ನು ಸಂಬಂಧಿಸಿದ ಅಧಿಕಾರಿ ವಯೋ ನಿವೃತ್ತಿ ಹೊಂದುವ ಕನಿಷ್ಠ ಆರು ತಿಂಗಳ ಮುಂಚೆಯೇ ಕಳುಹಿಸಬೇಕೆಂದು ತಿಳಿಸಲಾಗಿದೆ .
3 . ಉಲ್ಲೇಖ ( 8 ) ರ ಸುತ್ತೋಲೆಯಲ್ಲಿ ನಿವೃತ್ತಿ ಅಂಚಿನಲ್ಲಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಪ್ರಕರಣಗಳನ್ನು ಕಳುಹಿಸುವಲ್ಲಿ ಇಲಾಖೆಗಳು ಯಾವುದೇ ವಿಳಂಬವನ್ನು ಮಾಡಬಾರದು , ಹೀಗೆ ಕೊನೆ ಗಳಿಗೆಯಲ್ಲಿ ಪ್ರಸ್ತಾವನೆಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಕಳುಹಿಸಿದಲ್ಲಿ ಮತ್ತು ಅಂತಹ ವಿಚಾರಣೆಯು ಕಾಲಮಿತಿಯನ್ನು ಮೀರಿದ್ದಾದಲ್ಲಿ ವಿಳಂಬಕ್ಕೆ ಜವಾಬ್ದಾರರಾದ ನೌಕರರು / ಅಧಿಕಾರಿಗಳನ್ನು ಗುರುತಿಸಿ ಅವರುಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ತಿಳಿಸಲಾಗಿದೆ .
4 , ಉಲ್ಲೇಖ ( 6 ) ರ ಸುತ್ತೋಲೆಯಲ್ಲಿ ಕರ್ನಾಟಕ ನಾಗರಿಕ ಸೇವಾ ( ವರ್ಗೀಕರಣ , ನಿಯಂತ್ರಣ ಮತ್ತು ಮೇಲ್ಮನವಿ ) ನಿಯಮಗಳು , 1957ರ ನಿಯಮಗಳ ಅಡಿಯಲ್ಲಿ ಆರಂಭಿಸುವ ಪ್ರತಿಯೊಂದು ಪ್ರಕರಣದಲ್ಲಿ ಆಪಾದಿತ ಸರ್ಕಾರಿ ನೌಕರನ ವಯೋ ನಿವೃತ್ತಿ ದಿನಾಂಕ ಸೇರಿದಂತೆ ಇತರೆ ವಿವರಗಳನ್ನು ಸಂಬಂಧಿಸಿದ ದಾಖಲೆಗಳೊಂದಿಗೆ ಯಾವಾಗಲೂ ಇಡತಕ್ಕದ್ದೆಂದು ಹಾಗೂ ಅದನ್ನು ಸಂಬಂಧಿಸಿದ ಪ್ರಾಧಿಕಾರಿಗಳಿಗೆ ಲಭ್ಯಮಾಡತಕ್ಕದ್ದೆಂದು ಹಾಗೂ ಈ ವಿವರಗಳನ್ನು ತಪ್ಪದೆ ಕಡತದ ಕವಚದ ಮೇಲೆ ದಪ್ಪ ಅಕ್ಷರದಲ್ಲಿ ಕೆಂಪು ಶಾಯಿಯಲ್ಲಿ ನಮೂದಿಸಬೇಕೆಂದು ಸೂಚನೆಗಳನ್ನು ನೀಡಲಾಗಿದೆ .
5 , ಈ ರೀತಿ ಸರ್ಕಾರವು ಕಾಲಕಾಲಕ್ಕೆ ಹೊರಡಿಸಿದ ಮೇಲ್ಕಂಡ ಸೂಚನೆಗಳಿದ್ದಾಗ್ಯೂ ಇತ್ತೀಚೆಗೆ ಆಡಳಿತ ಇಲಾಖೆಯೊಂದು ಆರೋಪಿತ ಸರ್ಕಾರಿ ನೌಕರನ ವಿರುದ್ಧ ಶಿಸ್ತು ಪ್ರಕರಣದ ಪೂರ್ಣ ಪ್ರಸ್ತಾವನೆಯನ್ನು ಶಿಸ್ತುಪ್ರಾಧಿಕಾರಕ್ಕೆ ಆ ಅಧಿಕಾರಿ ನಿವೃತ್ತಿ ಹೊಂದುವ ಒಂದು ವಾರದ ಮುಂಚೆ ಕಳುಹಿಸಿರುವುದರಿಂದ , ಅಂತಹ ಆರೋಪಿತ ಅಧಿಕಾರಿ ವಿರುದ್ಧ ಕ್ರಮ ಜರುಗಿಸಲು ಅವಕಾಶವಿಲ್ಲದಂತಾಗಿರುವ ವಿಷಯವು ಸರ್ಕಾರದ ಗಮನಕ್ಕೆ ಬಂದಿದೆ .
( 1 ) ಆದುದರಿಂದ , ನಿವೃತ್ತಿ ಹೊಂದಲಿರುವ ಅಧಿಕಾರಿ / ನೌಕರರ ವಿರುದ್ದದ ಶಿಸ್ತುಕ್ರಮದ ಪರಿಪೂರ್ಣ ಪ್ರಸ್ತಾವನೆ ಗಳನ್ನು ಆಡಳಿತ ಇಲಾಖೆಗಳು ಅಂತಹ ಅಧಿಕಾರಿ / ನೌಕರರು ನಿವೃತ್ತರಾಗುವ ಕನಿಷ್ಠ 30 ದಿನಗಳ ಮುಂಚೆ ಶಿಸ್ತುಪ್ರಾಧಿಕಾರಕ್ಕೆ ಸಲ್ಲಿಸತಕ್ಕದ್ದು .
> > 2) ಕಡತದ ಕವಚದ ಮೇಲೆ ದಪ್ಪ ಅಕ್ಷರಗಳಲ್ಲಿ ಕೆಂಪು ಶಾಹಿಯಲ್ಲಿ ಆಪಾದಿತ ಸರ್ಕಾರಿ ನೌಕರರ ವಯೋ ನಿವೃತ್ತಿ ದಿನಾಂಕ ನಮೂದಿಸತಕ್ಕದ್ದು .
( 3 ) ಮೇಲಿನ ಕಾಲಮಿತಿ ಮೀರಿದಾದಲ್ಲಿ ವಿಳಂಬಕ್ಕೆ ಜವಾಬ್ದಾರರಾದ ನೌಕರರ / ಅಧಿಕಾರಿಗಳನ್ನು ಗುರುತಿಸಿ , ಆದರುಗಳ ವಿರುದ್ಧ ಶಿಸ್ತು ಕ್ರಮ ಜರುಗಿಸತಕ್ಕದ್ದು . ಈ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು .
ಸವಿಲ್ಲಾ ( ಟಿ . ಎಂ . ವಿಜಯ್ ಭಾಸ್ಕರ್ ) ಸರ್ಕಾರದ ಮುಖ್ಯ ಕಾರ್ಯದರ್ಶಿ
ಅವರಿಗೆ : ಸಂಕಲನಕಾರರು , ಕರ್ನಾಟಕ ರಾಜ್ಯ ಪತ್ರ ಇವರಿಗೆ ಇದನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿ ಅದರ 200 ಪ್ರತಿಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ( ಸೇವಾ ನಿಯಮಗಳು ) , ವಿಧಾನಸೌಧ ಇಲ್ಲಿಗೆ ಕಳುಹಿಸಲು ಕೋರಿದೆ .
1 ) ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು , 2 ) ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು / ಪ್ರಧಾನ ಕಾರ್ಯದರ್ಶಿಗಳು / ಕಾರ್ಯದರ್ಶಿಗಳು . 3 ) ಎಲ್ಲಾ ಇಲಾಖಾ ಮುಖ್ಯಸ್ಥರು / ಜಿಲ್ಲಾಧಿಕಾರಿಗಳು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು , ಜಿಲ್ಲಾ
ಪಂಚಾಯತ್ , 4 ) ಸರ್ಕಾರದ ಎಲ್ಲಾ ವಿಶೇಷ / ಅಪರ / ಸಹ / ಉಪ ಕಾರ್ಯದರ್ಶಿಗಳು . 5 ) ಸರ್ಕಾರದ ಎಲ್ಲಾ ಅಧೀನ ಕಾರ್ಯದರ್ಶಿಗಳು . 6 ) ನಿರ್ದೇಶಕರು , ಕರ್ನಾಟಕ ಸರ್ಕಾರ ಸಚಿವಾಲಯ ತರಬೇತಿ ಸಂಸ್ಥೆ .
ಸಂಖ್ಯೆ : ಸಿಆಸುಇ 76 ಸೇವಿ 2018
ಕರ್ನಾಟಕ ಸರ್ಕಾರದ ಸಚಿವಾಲಯ ,
ವಿಧಾನಸೌಧ . ಬೆಂಗಳೂರು , ದಿನಾಂಕ : 21 . 01 . 2019
ಸುತ್ತೋಲೆ
ವಿಷಯ : ಸರ್ಕಾರಿ ಅಧಿಕಾರಿ / ನೌಕರರುಗಳ ವಿರುದ್ಧ ಶಿಸ್ತುಕ್ರಮ ಇಲಾಖಾ ವಿಚಾರಣೆಯ
ಅವಶ್ಯಕ ಪರಿಪೂರ್ಣ ಪ್ರಸ್ತಾವನೆಗಳನ್ನು ವಿಳಂಬವಿಲ್ಲದೇ ಸಲ್ಲಿಸುವ ಬಗ್ಗೆ
ಮರು ಸೂಚನೆಗಳು , ಉಲ್ಲೇಖ : ( 1 ) ಅಧಿಕೃತ ಜ್ಞಾಪನ ಸಂಖ್ಯೆ : ಡಿಪಿಎಆರ್ 41 ಎಸ್ಡಿಇ 83 , ದಿನಾಂಕ : 16 . 08 . 1983 .
( 2 ) ಅಧಿಕೃತ ಜ್ಞಾಪನ ಸಂಖ್ಯೆ : ಡಿಪಿಎಆರ್ 33 ಎಸ್ಡಿಇ 83 , ದಿ : 24 . 05 . 1984 , ( 3 ) ಸುತ್ತೋಲೆ ಸಂಖ್ಯೆ : ಸಿಆಸುಇ 7 ನೇಣವಿ 96 , ದಿನಾಂಕ : 04 . 07 . 1996 , ( 4 ) ಸುತ್ತೋಲೆ ಸಂಖ್ಯೆ : ಸಿಆಸುಇ 04 ಸೇಇವಿ 96 , ದಿನಾಂಕ : 28 . 08 . 1996 , ( 5 ) ಸುತ್ತೋಲೆ ಸಂಖ್ಯೆ : ಸಿಆಸುಇ 09 ಸೇಣವಿ 98 , ದಿನಾಂಕ : 03 . 08 . 1998 , ( 6 ) ಸುತ್ತೋಲೆ ಸಂಖ್ಯೆ : ಸಿಆಸುಇ 47 ಸೇವಿ 2007 , ದಿನಾಂಕ : 23 . 03 . 2002 . ( 7 ) ಸುತ್ತೋಲೆ ಸಂಖ್ಯೆ : ಸಿಆಸುಇ 07 ಸೇವಿ 2003 , ದಿನಾಂಕ : 12 . 05 . 2003 , ( 8 ) ಸುತ್ತೋಲೆ ಸಂಖ್ಯೆ : ಸಿಆಸುಇ 1 ಸೇಇವಿ 2005 , ದಿನಾಂಕ : 09 . 02 . 2005 ,
ಸರ್ಕಾರಿ ನೌಕರನು ಸೇವೆಯಲ್ಲಿದ್ದಾಗ ಅವನ ಮೇಲೆ ಹೂಡಿದ ಯಾವುದೇ ಇಲಾಖಾ ತನಿಖೆಗಳ ಬಗ್ಗೆ ಅವನು ಸೇವೆಯಿಂದ ನಿವೃತ್ತಿಯಾದ ನಂತರ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 214 ( 2 ) ( ಬಿ ) ರ ಉಪಬಂಧಗಳಿಗೆ ಒಳಪಟ್ಟು ಇಲಾಖಾ ವಿಚಾರಣೆಯನ್ನು ಆರಂಭಿಸುವ ಮತ್ತು ಸೇವೆಯಲ್ಲಿದ್ದಾಗ ಅವನ ವಿರುದ್ಧ ಆರಂಭಿಸಿರುವ ಇಲಾಖಾ ವಿಚಾರಣೆಯನ್ನು ನಿಯಮ 214 ( 2 ) ( ಎ ) ರ ಉಪಬಂಧಗಳಿಗೆ ಒಳಪಟ್ಟು ಮುಂದುವರೆಸುವ ಅವಕಾಶವಿದೆ . ಇದರ ಹೊರತಾಗಿ ಕರ್ನಾಟಕ ನಾಗರಿಕ ಸೇವಾ ( ವರ್ಗೀಕರಣ , ನಿಯಂತ್ರಣ ಮತ್ತು ಮೇಲ್ಮನವಿ ) ನಿಯಮಗಳು , 1957ರಲ್ಲಿರುವ ನಿಯಮಗಳ ಪ್ರಕಾರ ಹೊಸದಾಗಿ ಇಲಾಖಾ ವಿಚಾರಣೆ ಪ್ರಾರಂಭಿಸುವುದಕ್ಕೆ ಮತ್ತು ಪ್ರಾರಂಭಿಸಿರುವ ಇಲಾಖಾ ವಿಚಾರಣೆಯನ್ನು ಮುಂದುವರೆಸುವುದಕ್ಕೆ ಅವಕಾಶವಿರುವುದಿಲ್ಲ . ಕಾರಣ ಕರ್ನಾಟಕ ನಾಗರಿಕ ಸೇವಾ ( ವರ್ಗೀಕರಣ , ನಿಯಂತ್ರಣ ಮತ್ತು ಮೇಲ್ಮನವಿ ) ನಿಯಮಗಳು ಅಂತಹ ನಿವೃತ್ತ ನೌಕರರಿಗೆ ಅನ್ವಯಿಸುವುದಿಲ್ಲ . ಸರ್ಕಾರಿ ನೌಕರನು ನಿವೃತ್ತಿಯಾದ ನಂತರ ಅವನ ಮೇಲೆ ಹೂಡಲಾಗಿದ್ದ ಇಲಾಖಾ ತನಿಖೆಗಳನ್ನು ಸರ್ಕಾರಕ್ಕೆ ಆರ್ಥಿಕ ಹಾನಿ ಉಂಟಾಗಿಲ್ಲವೆಂಬ ಕಾರಣ ನೀಡಿ ಅವುಗಳನ್ನು ಹಿಂದಕ್ಕೆ ತೆಗೆದುಕೊಳ್ಳುವ ಪ್ರಸ್ತಾವನೆಗಳು ಸರ್ಕಾರದ ಮುಂದೆ ಬಂದ ಸಂದರ್ಭದಲ್ಲಿ ಸರ್ಕಾರವು ಆ ಬಗ್ಗೆ ಪರಿಶೀಲಿಸಿ , ಉಲ್ಲೇಖ ( I ) ಮತ್ತು ( 2 ) ರ ಅಧಿಕೃತ ಜ್ಞಾಸನಗಳಲ್ಲಿ ನಿವೃತ್ತಿ ಆಗುವಂತಹ ಸರ್ಕಾರಿ ನೌಕರರ ಮೇಲೆ ಹೂಡಲಾಗಿರುವ ಇಲಾಖಾ ತನಿಖೆಗಳನ್ನು ಅವರು ನಿವೃತ್ತಿ ಆಗುವುದಕ್ಕೆ ಮುಂಚೆ ಇತ್ಯರ್ಥ ಮಾಡುವ ಕುರಿತು ಸೂಚನೆಗಳನ್ನು ನೀಡಿದೆ .
2 . ತದನಂತರದಲ್ಲಿ ನಿವೃತ್ತಿ ಹೊಂದಿದ ಆಪಾದಿತ ಅಧಿಕಾರಿ ವಿರುದ್ಧ ಇಲಾಖಾ ವಿಚಾರಣೆ ಪ್ರಾರಂಭಿಸಬೇಕಾದ ಪ್ರಕರಣವೊಂದರಲ್ಲಿ ಸಕಾಲದಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 214 ( ಬಿ ) ( ತ ) ರಲ್ಲಿ ನಿಗದಿಪಡಿಸಿದ ಕಾಲಮಿತಿಯೊಳಗೆ ವಿಚಾರಣೆಯನ್ನು ಪ್ರಾರಂಭಿಸಿಲ್ಲದ ಕಾರಣ ಆಪಾದಿತ ಅಧಿಕಾರಿಯ ಮೇಲೆ ಇಲಾಖಾ ವಿಚಾರಣೆ ಹೂಡಲು ಅಸಾಧ್ಯವಾದ ಪರಿಸ್ಥಿತಿ ಉಂಟಾದುದಲ್ಲದೇ ಆರೋಪಿ ಸರ್ಕಾರಿ ನೌಕರರು ನಿವೃತ್ತಿ ಹೊಂದುವ 2 - 3 ದಿನಗಳ ಮುಂಚೆ ಇಲ್ಲವೇ ಹಿಂದಿನ ದಿನ ಅವ ದುರ್ನಡತೆಗೆ ಸಂಬಂಧಿಸಿದ ವಿವರಗಳು ನೀಡಿ ಅವರ ಮೇಲೆ ಶಿಸ್ತಿನ ಕ್ರಮ ಆರಂಭಿಸಲು ಇಲಾಖೆಗಳು ಸರ್ಕಾರಕ್ಕೆ ಪ್ರಸ್ತಾವನೆಗಳನ್ನು ಕಳುಹಿಸುತ್ತಿರುವುದು ಸಹ ಸರ್ಕಾರದ ಗಮನಕ್ಕೆ ಬಂದ ಸಂದರ್ಭದಲ್ಲಿ ಸರ್ಕಾರವು ಉಲ್ಲೇಖ ( 4 ) ರ ಸುತ್ತೋಲೆಯಲ್ಲಿ ಸರ್ಕಾರಿ ನೌಕರನ ದುರ್ನಡತೆ ಗಮನಕ್ಕೆ ಬಂದ ತಕ್ಷಣ ಶಿಸ್ತಿನ ಪ್ರಾಧಿಕಾರಕ್ಕೆ ಅದನ್ನು ತಿಳಿಸಬೇಕು . ನಿವೃತ್ತಿ ಹೊಂದಲಿರುವ ನೌಕರರ ಪ್ರಕರಣದಲ್ಲಿ ಶಿಸ್ತಿನ ಪ್ರಾಧಿಕಾರಕ್ಕೆ ಅಂತಹ ಮಾಹಿತಿ ಸರ್ಕಾರಿ ನೌಕರನು ನಿವೃತ್ತಿ ಹೊಂದುವ ಕನಿಷ್ಠ 2 ಅಥವಾ 3 ತಿಂಗಳ ಪೂರ್ವದಲ್ಲಿ ನೀಡಿ , ಕರಡು ದೋಷಾರೋಪಣಾ ಪಟ್ಟಿ ಇತ್ಯಾದಿ , ಸಂಬಂಧಿಸಿದ ಕಾಗದ ಪತ್ರ ಮತ್ತು ದಾಖಲೆಗಳೊಡನೆ ಶಿಸ್ತುಪಾಧಿಕಾರಿಗಳಿಗೆ ಕಳುಹಿಸುವ ಬಗ್ಗೆ ಮತ್ತು ವಯೋನಿವೃತ್ತಿ ಅಂಚಿನಲ್ಲಿರುವ ಅಂತಹ ಆಪಾದಿತ ಸರ್ಕಾರಿ ನೌಕರರ ನಿವೃತ್ತಿ ದಿನಾಂಕವನ್ನು ಕಡ್ಡಾಯವಾಗಿ ನಮೂದಿಸುವ ಬಗ್ಗೆ ಸೂಚನೆಗಳನ್ನು ನೀಡಲಾಗಿದೆ . ಉಲ್ಲೇಖ ( 5 ) ರ ಸುತ್ತೋಲೆಯಲ್ಲಿ ನಿವೃತ್ತಿ ಹೊಂದಲಿರುವ ಅಧಿಕಾರಿಗಳ ವಿರುದ್ಧ ಶಿಸ್ತಿನ ಪ್ರಸ್ತಾವನೆಗಳನ್ನು ಸಂಬಂಧಿಸಿದ ಅಧಿಕಾರಿ ವಯೋ ನಿವೃತ್ತಿ ಹೊಂದುವ ಕನಿಷ್ಠ ಆರು ತಿಂಗಳ ಮುಂಚೆಯೇ ಕಳುಹಿಸಬೇಕೆಂದು ತಿಳಿಸಲಾಗಿದೆ .
3 . ಉಲ್ಲೇಖ ( 8 ) ರ ಸುತ್ತೋಲೆಯಲ್ಲಿ ನಿವೃತ್ತಿ ಅಂಚಿನಲ್ಲಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಪ್ರಕರಣಗಳನ್ನು ಕಳುಹಿಸುವಲ್ಲಿ ಇಲಾಖೆಗಳು ಯಾವುದೇ ವಿಳಂಬವನ್ನು ಮಾಡಬಾರದು , ಹೀಗೆ ಕೊನೆ ಗಳಿಗೆಯಲ್ಲಿ ಪ್ರಸ್ತಾವನೆಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಕಳುಹಿಸಿದಲ್ಲಿ ಮತ್ತು ಅಂತಹ ವಿಚಾರಣೆಯು ಕಾಲಮಿತಿಯನ್ನು ಮೀರಿದ್ದಾದಲ್ಲಿ ವಿಳಂಬಕ್ಕೆ ಜವಾಬ್ದಾರರಾದ ನೌಕರರು / ಅಧಿಕಾರಿಗಳನ್ನು ಗುರುತಿಸಿ ಅವರುಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ತಿಳಿಸಲಾಗಿದೆ .
4 , ಉಲ್ಲೇಖ ( 6 ) ರ ಸುತ್ತೋಲೆಯಲ್ಲಿ ಕರ್ನಾಟಕ ನಾಗರಿಕ ಸೇವಾ ( ವರ್ಗೀಕರಣ , ನಿಯಂತ್ರಣ ಮತ್ತು ಮೇಲ್ಮನವಿ ) ನಿಯಮಗಳು , 1957ರ ನಿಯಮಗಳ ಅಡಿಯಲ್ಲಿ ಆರಂಭಿಸುವ ಪ್ರತಿಯೊಂದು ಪ್ರಕರಣದಲ್ಲಿ ಆಪಾದಿತ ಸರ್ಕಾರಿ ನೌಕರನ ವಯೋ ನಿವೃತ್ತಿ ದಿನಾಂಕ ಸೇರಿದಂತೆ ಇತರೆ ವಿವರಗಳನ್ನು ಸಂಬಂಧಿಸಿದ ದಾಖಲೆಗಳೊಂದಿಗೆ ಯಾವಾಗಲೂ ಇಡತಕ್ಕದ್ದೆಂದು ಹಾಗೂ ಅದನ್ನು ಸಂಬಂಧಿಸಿದ ಪ್ರಾಧಿಕಾರಿಗಳಿಗೆ ಲಭ್ಯಮಾಡತಕ್ಕದ್ದೆಂದು ಹಾಗೂ ಈ ವಿವರಗಳನ್ನು ತಪ್ಪದೆ ಕಡತದ ಕವಚದ ಮೇಲೆ ದಪ್ಪ ಅಕ್ಷರದಲ್ಲಿ ಕೆಂಪು ಶಾಯಿಯಲ್ಲಿ ನಮೂದಿಸಬೇಕೆಂದು ಸೂಚನೆಗಳನ್ನು ನೀಡಲಾಗಿದೆ .
5 , ಈ ರೀತಿ ಸರ್ಕಾರವು ಕಾಲಕಾಲಕ್ಕೆ ಹೊರಡಿಸಿದ ಮೇಲ್ಕಂಡ ಸೂಚನೆಗಳಿದ್ದಾಗ್ಯೂ ಇತ್ತೀಚೆಗೆ ಆಡಳಿತ ಇಲಾಖೆಯೊಂದು ಆರೋಪಿತ ಸರ್ಕಾರಿ ನೌಕರನ ವಿರುದ್ಧ ಶಿಸ್ತು ಪ್ರಕರಣದ ಪೂರ್ಣ ಪ್ರಸ್ತಾವನೆಯನ್ನು ಶಿಸ್ತುಪ್ರಾಧಿಕಾರಕ್ಕೆ ಆ ಅಧಿಕಾರಿ ನಿವೃತ್ತಿ ಹೊಂದುವ ಒಂದು ವಾರದ ಮುಂಚೆ ಕಳುಹಿಸಿರುವುದರಿಂದ , ಅಂತಹ ಆರೋಪಿತ ಅಧಿಕಾರಿ ವಿರುದ್ಧ ಕ್ರಮ ಜರುಗಿಸಲು ಅವಕಾಶವಿಲ್ಲದಂತಾಗಿರುವ ವಿಷಯವು ಸರ್ಕಾರದ ಗಮನಕ್ಕೆ ಬಂದಿದೆ .
( 1 ) ಆದುದರಿಂದ , ನಿವೃತ್ತಿ ಹೊಂದಲಿರುವ ಅಧಿಕಾರಿ / ನೌಕರರ ವಿರುದ್ದದ ಶಿಸ್ತುಕ್ರಮದ ಪರಿಪೂರ್ಣ ಪ್ರಸ್ತಾವನೆ ಗಳನ್ನು ಆಡಳಿತ ಇಲಾಖೆಗಳು ಅಂತಹ ಅಧಿಕಾರಿ / ನೌಕರರು ನಿವೃತ್ತರಾಗುವ ಕನಿಷ್ಠ 30 ದಿನಗಳ ಮುಂಚೆ ಶಿಸ್ತುಪ್ರಾಧಿಕಾರಕ್ಕೆ ಸಲ್ಲಿಸತಕ್ಕದ್ದು .
> > 2) ಕಡತದ ಕವಚದ ಮೇಲೆ ದಪ್ಪ ಅಕ್ಷರಗಳಲ್ಲಿ ಕೆಂಪು ಶಾಹಿಯಲ್ಲಿ ಆಪಾದಿತ ಸರ್ಕಾರಿ ನೌಕರರ ವಯೋ ನಿವೃತ್ತಿ ದಿನಾಂಕ ನಮೂದಿಸತಕ್ಕದ್ದು .
( 3 ) ಮೇಲಿನ ಕಾಲಮಿತಿ ಮೀರಿದಾದಲ್ಲಿ ವಿಳಂಬಕ್ಕೆ ಜವಾಬ್ದಾರರಾದ ನೌಕರರ / ಅಧಿಕಾರಿಗಳನ್ನು ಗುರುತಿಸಿ , ಆದರುಗಳ ವಿರುದ್ಧ ಶಿಸ್ತು ಕ್ರಮ ಜರುಗಿಸತಕ್ಕದ್ದು . ಈ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು .
ಸವಿಲ್ಲಾ ( ಟಿ . ಎಂ . ವಿಜಯ್ ಭಾಸ್ಕರ್ ) ಸರ್ಕಾರದ ಮುಖ್ಯ ಕಾರ್ಯದರ್ಶಿ
ಅವರಿಗೆ : ಸಂಕಲನಕಾರರು , ಕರ್ನಾಟಕ ರಾಜ್ಯ ಪತ್ರ ಇವರಿಗೆ ಇದನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿ ಅದರ 200 ಪ್ರತಿಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ( ಸೇವಾ ನಿಯಮಗಳು ) , ವಿಧಾನಸೌಧ ಇಲ್ಲಿಗೆ ಕಳುಹಿಸಲು ಕೋರಿದೆ .
1 ) ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು , 2 ) ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು / ಪ್ರಧಾನ ಕಾರ್ಯದರ್ಶಿಗಳು / ಕಾರ್ಯದರ್ಶಿಗಳು . 3 ) ಎಲ್ಲಾ ಇಲಾಖಾ ಮುಖ್ಯಸ್ಥರು / ಜಿಲ್ಲಾಧಿಕಾರಿಗಳು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು , ಜಿಲ್ಲಾ
ಪಂಚಾಯತ್ , 4 ) ಸರ್ಕಾರದ ಎಲ್ಲಾ ವಿಶೇಷ / ಅಪರ / ಸಹ / ಉಪ ಕಾರ್ಯದರ್ಶಿಗಳು . 5 ) ಸರ್ಕಾರದ ಎಲ್ಲಾ ಅಧೀನ ಕಾರ್ಯದರ್ಶಿಗಳು . 6 ) ನಿರ್ದೇಶಕರು , ಕರ್ನಾಟಕ ಸರ್ಕಾರ ಸಚಿವಾಲಯ ತರಬೇತಿ ಸಂಸ್ಥೆ .
ದಿನಕ್ಕೊಂದು ಸುದ್ದಿ *ಪರೀಕ್ಷಾ ರಜೆ ಪ್ರಸೂತಿ ರಜೆ*
ಪರೀಕ್ಷಾ ರಜೆ (Examination Leave): ನಿಗದಿಪಡಿಸಿದ ಇಲಾಖಾ ಪರೀಕ್ಷೆಯ ಸಂಬಂಧದಲ್ಲಿ ಪರೀಕ್ಷೆಗೆ ಹಾಜರಾಗಲು ಆತನ ಸೇವಾವಧಿಯಲ್ಲಿ 2 ಬಾರಿ ಮಾತ್ರ ಅನುಮತಿ ನೀಡಲಾಗುವುದು ಆದರೆ ರಾಜ್ಯ ಲೆಕ್ಕಪತ್ರ ಇಲಾಖೆಯ ಎಸ್ಎಎಸ್ ಹಾಗೂ ಖಜಾನೆ ಇಲಾಖೆಯ ಟ್ರೆಝುರಿ ಹೆಡ್ ಅಕೌಂಟಂಟ್ ಪರೀಕ್ಷೆಗೆ ಹಾಜರಾಗಲು 3 ಬಾರಿ ಅನುಮತಿ ನೀಡಲಾಗುವುದು. ಈ ಸಂದರ್ಭಗಳಲ್ಲಿ ಪರೀಕ್ಷೆ ದಿನ ಮತ್ತು ಪ್ರಯಾಣದ ದಿನಗಳಿಗೆ ರಜೆ ನೀಡಲಾಗುವುದು.
ಪ್ರಸೂತಿ ರಜೆ (Maternity Leave): ಎರಡು ಅಥವಾ ಹೆಚ್ಚು ಜೀವಂತ ಮಕ್ಕಳನ್ನು ಹೊಂದಿರದ ವಿವಾಹಿತ ಸರ್ಕಾರಿ ನೌಕರಳಿಗೆ ಪ್ರಸೂತಿ ರಜೆಯನ್ನು ಅದರ ಆರಂಭದ ದಿನಾಂಕದಿಂದ 180 ದಿನಗಳು ನೀಡಬಹುದು. ಈ ಅವಧಿಯಲ್ಲಿ ಅವಳು ರಜೆಯ ಮೇಲೆ ಹೋಗುವ ನಿಕಟಪೂರ್ವದಲ್ಲಿ ಆಕೆ ಪಡೆಯುತ್ತಿದ್ದ ವೇತನಕ್ಕೆ ಸಮನಾದ ರಜಾವೇತನವನ್ನು ನೀಡಲಾಗುವುಗು. (ಕ.ಸ.ಸೇ.ನಿ. 135(1).
ಇದನ್ನು ವೊಕೆಷನ್ ರಜೆ ಅಥವಾ ಇನ್ನಾವುದೇ ರೀತಿಯ ರಜೆಯೊಂದಿಗೆ ಸೇರಿಸಬಹುದು. ವೈದ್ಯಕೀಯ ಪ್ರಮಾಣಪತ್ರವನ್ನು ಹಾಜರುಪಡಿಸದೆ ಇದ್ದರೂ 60 ದಿನಗಳಿಗೆ ಮೀರದಂತೆ ರಜೆಯನ್ನು ಮಂಜೂರು ಮಾಡಬಹುದು (ಕ.ಸ.ಸೇ.ವಿ. 135 (4ಎ) ಪ್ರಸೂತಿ ರಜೆಯನ್ನು ಯಾವುದೇ ರಜೆಯ ಲೆಕ್ಕದಿಂದ ಕಳೆಯತಕ್ಕದ್ದಲ್ಲ. (ಕ.ಸ.ಸೇ.ವಿ. 135 (4ಬಿ).
ಗರ್ಭಸ್ರಾವ ಅಥವಾ ಗರ್ಭಪಾತ ರಜೆ (Medical Termination Leave): ವೈದ್ಯಕೀಯ ಪರ್ಯವಸಾನ ಅಧಿನಿಯಮ 71ರ ಮೇರೆಗೆ ಪ್ರೇರಣೆಯಿಂದ ಮಾಡಿಸಿಕೊಂಡ ಗರ್ಭಪಾತವು ಸೇರಿದಂತೆ ಗರ್ಭಸ್ರಾವ ಅಥವಾ ಗರ್ಭಪಾತವಾದಾಗ ವೈದ್ಯಕೀಯ ಪ್ರಮಾಣ ಪತ್ರದ ಆಧಾರದಿಂದ 2 ಅಥವಾ ಹೆಚ್ಚು ಜೀವಂತ ಮಕ್ಕಳನ್ನು ಹೊಂದಿರದ ವಿವಾಹಿತ ಸರ್ಕಾರಿ ನೌಕರಳಿಗೆ 6 ವಾರಗಳಿಗೆ ಮೀರದಂತೆ ಮಂಜೂರು ಮಾಡಬಹುದು. (ಕ.ಸ.ಸೇ.ವಿ. 135 (2ಎ, ಬಿ, 3)
ಮಗುವನ್ನು ದತ್ತು ತೆಗೆದುಕೊಂಡಾಗ ಮಹಿಳಾ ಸರ್ಕಾರಿ ನೌಕರಳಿಗೆ ರಜೆ Leave to female Govt. Servant on adoption of child): ಎರಡು ಜೀವಂತ ಮಕ್ಕಳನ್ನು ಹೊಂದಿರದ ಮಹಿಳಾ ಸರ್ಕಾರಿ ನೌಕರಳು ಮಗುವೊಂದನ್ನು ದತ್ತು ತೆಗೆದುಕೊಂಡಾಗ ಒಂದು ವರ್ಷದ ಅಥವಾ ದತ್ತಕ ಮಗುವಿಗೆ ಒಂದು ವರ್ಷ ವಯಸ್ಸಾಗುವವರೆಗೆ ಇವುಗಳಲ್ಲಿ ಯಾವುದು ಕಡಿಮೆಯೊ ಆವರೆಗೆ ದೊರೆಯಬಹುದಾದ ಮತ್ತು ಅನುಮತಿಸಬಹುದಾದ ರಜೆಯನ್ನು (60 ದಿನಗಳನ್ನು ಮೀರದಂತೆ, ವೈದ್ಯಕೀಯ ಪ್ರಮಾಣಪತ್ರವನ್ನು ಹಾಜರುಪಡಿಸದೆ ಪರಿವರ್ತಿತ ರಜೆ ಮತ್ತು ಗಳಿಸದ ರಜೆ ಸೇರಿದಂತೆ) ಮಂಜೂರು ಮಾಡಬಹುದು. (ಕ.ಸ.ಸೇ.ವಿ. 135ಎ).
ಪಿತೃತ್ವ ರಜೆ (Paternity Leave): ಎರಡು ಅಥವಾ ಹೆಚ್ಚಿಗೆ ಜೀವಂತ ಮಕ್ಕಳಿಲ್ಲದ ಸರ್ಕಾರಿ ನೌಕರನ ಪತ್ನಿಯ ಹೆರಿಗೆ ಸಂದರ್ಭದಲ್ಲಿ ಹೆರಿಗೆ ದಿನಾಂಕದಿಂದ ಪ್ರಾರಂಭವಾಗುವಂತೆ 15 ದಿನಗಳ ಮೆಟರ್ನಿಟಿ ರಜೆಯನ್ನು ಮಂಜೂರು ಮಾಡಬಹುದು. ಇದನ್ನು ಯಾವುದೇ ರಜಾ ಲೆಕ್ಕದಿಂದ ಕಳೆಯತಕ್ಕದ್ದಲ್ಲ ಹಾಗೂ ಸಾಂರ್ದಭಿಕ ರಜೆ ಹೊರತು ಉಳಿದ ಯಾವುದೇ ರಜೆಯೊಂದಿಗೆ ಸಂಯೋಜಿಸಿಕೊಳ್ಳಬಹುದು. ಈ ರಜೆ ಅವಧಿಯಲ್ಲಿ ರಜೆಗೆ ಹೋಗುವ ನಿಕಟ ಪೂರ್ವದಲ್ಲಿದ್ದಂತೆ ವೇತನವು ಪ್ರಾಪ್ತವಾಗುತ್ತದೆ. ಈ ರಜೆಯನ್ನು ನಗದೀಕರಿಸಿಕೊಳ್ಳಲು ಅಥವಾ ಗಳಿಕೆ ರಜೆಯೊಂದಿಗೆ ಸೇರಿಸಿಕೊಳ್ಳಲು ಆಗುವುದಿಲ್ಲ. ಸಾಮಾನ್ಯವಾಗಿ ಈ ರಜೆಯನ್ನು ನಿರಾಕರಿಸುವಂತಿಲ್ಲ (ಕ.ಸ.ಸೇ.ವಿ. 135 (ಬಿ
ಸರ್ಕಾರಿ ನೌಕರ ತನ್ನ ಕಚೇರಿ ಕೆಲಸದ ನಿರ್ವಹಣೆ ವೇಳೆ ಅಂಗವಿಕಲನಾದರೆ(ಕಾಯಂ ಅಥವಾ ತಾತ್ಕಾಲಿಕ ನೌಕರ)ಅಂಗವೈಕಲ್ಯ ವಿಶೇಷ ರಜೆ ಮಂಜೂರು ಮಾಡಬಹುದು. ವೈಕಲ್ಯ ಸಂಭವಿಸಲು ಕಾರಣವಾದ ಘಟನೆ ನಡೆದ ಮೂರು ತಿಂಗಳ ತರುವಾಯ ವೈಕಲ್ಯ ಕಾಣಿಸಿಕೊಂಡಾಗ ಇದರ ಕಾರಣವು ಸರ್ಕಾರಕ್ಕೆ ಮನದಟ್ಟಾದರೆ ರಜೆಗೆ ಅನುಮತಿ ನೀಡಬಹುದು. ಅಧಿಕೃತ ಮೆಡಿಕಲ್ ಅಟೆಂಡರ್ಗಳು ಅಗತ್ಯವೆಂದು ಪ್ರಮಾಣೀಕರಿಸಿದ ಅವಧಿಗೆ ರಜೆ ಮಂಜೂರು ಮಾಡಬಹುದು. ಆದರೆ ಇದು 24 ತಿಂಗಳನ್ನು ಮೀರತಕ್ಕದ್ದಲ್ಲ. ಇದನ್ನು ಯಾವುದೇ ಇತರ ರಜೆಯೊಂದಿಗೆ ಸೇರಿಸಬಹುದು. ಈ ರಜೆಯನ್ನು ನಿವೃತ್ತಿಗೆ ಸಂಬಂಧಪಟ್ಟಂತೆ ಕರ್ತವ್ಯದ ದಿನಗಳೆಂದು ಪರಿಗಣಿಸಲಾಗುವುದು. ಈ ರಜೆಯ ಯಾವುದೇ ಅವಧಿಯ ಮೊದಲ 120 ದಿನಗಳಿಗೆ ಗಳಿಕೆ ರಜೆಯಲ್ಲಿದ್ದಾಗ ಪಡೆಯುವ ರಜಾವೇತನಕ್ಕೆ ಸಮನಾದ ವೇತನ ದೊರೆಯುವುದು.
ವಿಶೇಷ ರಜೆ: ಪಶು ವೈದ್ಯಕೀಯ ಇಲಾಖೆಯ ಲೈವ್ಸ್ಟಾಕ್ ಫಾರ್ಮ್ಗಳ ತಾತ್ಕಾಲಿಕ ನೌಕರರು ಕರ್ತವ್ಯ ನಿರ್ವಹಿಸುವಾಗ ಗಾಯಗಳಾಗಿ ಕೆಲಸ ಮಾಡಲು ಅಸಮರ್ಥರಾದರೆ (ನಿರ್ಲಕ್ಷತೆಯಿಂದಲ್ಲದೆ) ಕರ್ನಾಟಕ ಪಶು ಸಂಗೋಪನ ನಿರ್ದೇಶಕರು, ಜಿಲ್ಲಾ ವೈದ್ಯಾಧಿಕಾರಿ ಪ್ರಮಾಣಪತ್ರದ ಆಧಾರದ ಮೇಲೆ ಭತ್ಯೆ ಸಹಿತ ರಜೆಯನ್ನು 30 ದಿನಗಳವರೆಗೆ ವಿಶೇಷ ರಜೆ ನೀಡಬಹುದು. ಸ.ಸೇ.ವಿ. 138.
ವೈದ್ಯ ಇಲಾಖೆಯಲ್ಲಿ ರೇಡಿಯಂ ಸಂಪರ್ಕವಿರುವ ಸರ್ಕಾರಿ ನೌಕರನಿಗೆ ಪ್ರತಿ 6 ತಿಂಗಳಿಗೊಮ್ಮೆ 15 ದಿನಗಳಿಗೆ ಮೀರದಂತ ರಜೆ ಮಂಜೂರು ಮಾಡಬಹುದು. ಈ ಅವಧಿಯು ಅರ್ಧ ವೇತನದ ರಜೆಗೆ ಗಣನೆಗೆ ಬರುವುದು. ಆದರೆ ಗಳಿಕೆ ರಜೆಗೆ ಗಣನೆಗೆ ಬರುವುದಿಲ್ಲ. ಈ ರಜೆಯ ಅವಧಿಯಲ್ಲಿ ಗಳಿಕೆ ರಜೆಯ ಕಾಲದಲ್ಲಿ ದೊರೆಯುವಂತೆ ರಜಾ ಭತ್ಯೆಗಳು ದೊರೆಯುವುದು. (ಕ.ಸ.ಸೇ.ವಿ. 139).
ಅರಣ್ಯ ಇಲಾಖೆಯ ಕೆಲವು ಆಯ್ದ ರೇಂಜುಗಳಲ್ಲಿ ಕೆಲಸ ಮಾಡುತ್ತಿರುವ ರೇಂಜರ್, ಫಾರೆಸ್ಟರ್, ಅರಣ್ಯ ರಕ್ಷಕ ಮತ್ತು ಗುಮಾಸ್ತರಿಗೆ ಗಳಿಕೆ ರಜೆ ಜತೆಗೆ ಆರೋಗ್ಯ ಸುಧಾರಣೆಗೆ ಸ್ಥಳ ಬದಲಾಯಿಸಲು ಪ್ರತಿ ವರ್ಷವು ಒಂದು ತಿಂಗಳು ಪೂರ್ಣ ವೇತನ ಸಹಿತ ವಿಶೇಷ ಸ್ಥಳದ ರಜೆ ನೀಡಬಹುದು.
ಅನಧಿಕೃತ ಗೈರು ಹಾಜರಿ: ಸರ್ಕಾರಿ ನೌಕರನು ಸಕ್ಷಮ ಪ್ರಾಧಿಕಾರಿಯ ಮಂಜೂರಾತಿಯಿಲ್ಲದೆ ಕರ್ತವ್ಯಕ್ಕೆ ಗೈರಾಗುವಂತಿಲ್ಲ, ಆದರೆ ನೌಕರನು ತನ್ನ ನಿಯಂತ್ರಣಕ್ಕೆ ಮೀರಿದ ಕಾರಣದಿಂದ ಸಕ್ಷಮ ಪ್ರಾಧಿಕಾರದ ಮಂಜೂರಾತಿಯಿಲ್ಲದೆ ಗೈರಾದ ಬಗ್ಗೆ ತಿಳಿಸಿದಾಗ ಅದನ್ನು ಪರಿಶೀಲಿಸಿ ತೃಪ್ತಿಕರವಾಗಿದೆ ಎಂದು ಪರಿಗಣಿಸಿ ಗೈರು ಅವಧಿಯನ್ನು ನೌಕರನ ಹಕ್ಕಿನಲ್ಲಿರುವ ಯಾವುದಾದರೂ ರಜೆಯನ್ನಾಗಿ ಪರಿವರ್ತಿಸಬಹುದು. ಸಕ್ಷಮ ಪ್ರಾಧಿಕಾರಿಯು ನೌಕರನ ಗೈರಿನ ಕಾರಣ ಒಪ್ಪಿಕೊಳ್ಳದಿದ್ದಲ್ಲಿ ಗೈರು ಅವಧಿಯನ್ನು ಅನಧಿಕೃತ ಗೈರು ಹಾಜರಿ ಎಂದು ಆದೇಶಿಸಬಹುದು. ಇಂತಹ ಅವಧಿಯಲ್ಲಿ ನೌಕರನಿಗೆ ಯಾವುದೇ ವೇತನ ಭತ್ಯೆಗಳು ಲಭ್ಯವಾಗುವುದಿಲ್ಲ.
ಸರ್ಕಾರಿ ನೌಕರನು ಸಕ್ಷಮ ಪ್ರಾಧಿಕಾರದ ಅನುಮತಿ ಪಡೆದು ರಜೆ ಬಳಸಿಕೊಂಡು, ರಜಾ ಅವಧಿ ಮುಗಿದ ನಂತರ ಕೂಡಲೆ ಕರ್ತವ್ಯಕ್ಕೆ ಹಾಜರಾಗಿದ್ದಾಗಲೂ ಅವಧಿ ಮೀರಿದ ಗೈರು ಹಾಜರಿ ಪ್ರಕರಣ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲೂ ಈ ಮೇಲಿನಂತೆಯೇ ಕ್ರಮ ತೆಗೆದುಕೊಳ್ಳಬಹುದು.
ಕಚೇರಿ ವೇಳೆಯನ್ನು ಎರಡು ಬಾಗಗಳಾಗಿ ವಿಂಗಡಿಸಿರುವಾಗ ಯಾವುದೇ ಒಂದು ಭಾಗದ ಅನಧಿಕೃತ ಗೈರಿಗೆ ಅರ್ಧ ದಿನದ ವೇತನ ಭತ್ಯೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಕಚೇರಿ ಪ್ರಾರಂಭದ ವೇಳೆಯೊಳಗೆ ಹಾಜರಾಗಬೇಕು, ಹತ್ತು ನಿಮಿಷ ತಡವಾದರೆ ಮಾತ್ರ ಸಾಂರ್ದಭಿಕ ವಿನಾಯಿತಿ ಇರುತ್ತದೆ. ಹತ್ತು ನಿಮಿಷಗಳ ನಂತರ ಮಧ್ಯಾಹ್ನ 2 ಗಂಟೆ ಒಳಗೆ ಕಚೇರಿಗೆ ಹಾಜರಾದಾಗ ನೌಕರನು 1/2 ದಿನದ ಸಾಂರ್ದಭಿಕ ರಜೆ ಕಳೆದುಕೊಳ್ಳುತ್ತಾನೆ. ನೌಕರನ ಹಕ್ಕಿನಲ್ಲಿ ಸಾಂರ್ದಭಿಕ ರಜೆ ಇಲ್ಲದಿದ್ದರೆ ಹಕ್ಕಿನಲ್ಲಿರುವ ಒಂದು ದಿನದ ಗಳಿಕೆ ರಜೆ ಅಥವಾ ಇತರೆ ರಜೆ ಕಳೆದುಕೊಳ್ಳಬೇಕಾಗುತ್ತದೆ. (ಕ.ಸ.ಸೇ.ನಿ. 106ಎ)
ಮುಷ್ಕರದ ಕಾರಣದಿಂದ ಕರ್ತವ್ಯಕ್ಕೆ ಗೈರಾದ ಸರ್ಕಾರಿ ನೌಕರನು ಯಾವುದೇ ರಜೆಗೆ ಹಕ್ಕು ಹೊಂದಿರುವುದಿಲ್ಲ, ಹಾಗೂ ತನ್ನ ಲೆಕ್ಕದಲ್ಲಿರುವ ಎಲ್ಲಾ ಬಗೆಯ ರಜೆ ಕಳೆದುಕೊಳ್ಳುತ್ತಾನೆ.(ಕ.ಸ.ಸೇ.ನಿ. 106, ಬಿ
ಪ್ರಸೂತಿ ರಜೆ (Maternity Leave): ಎರಡು ಅಥವಾ ಹೆಚ್ಚು ಜೀವಂತ ಮಕ್ಕಳನ್ನು ಹೊಂದಿರದ ವಿವಾಹಿತ ಸರ್ಕಾರಿ ನೌಕರಳಿಗೆ ಪ್ರಸೂತಿ ರಜೆಯನ್ನು ಅದರ ಆರಂಭದ ದಿನಾಂಕದಿಂದ 180 ದಿನಗಳು ನೀಡಬಹುದು. ಈ ಅವಧಿಯಲ್ಲಿ ಅವಳು ರಜೆಯ ಮೇಲೆ ಹೋಗುವ ನಿಕಟಪೂರ್ವದಲ್ಲಿ ಆಕೆ ಪಡೆಯುತ್ತಿದ್ದ ವೇತನಕ್ಕೆ ಸಮನಾದ ರಜಾವೇತನವನ್ನು ನೀಡಲಾಗುವುಗು. (ಕ.ಸ.ಸೇ.ನಿ. 135(1).
ಇದನ್ನು ವೊಕೆಷನ್ ರಜೆ ಅಥವಾ ಇನ್ನಾವುದೇ ರೀತಿಯ ರಜೆಯೊಂದಿಗೆ ಸೇರಿಸಬಹುದು. ವೈದ್ಯಕೀಯ ಪ್ರಮಾಣಪತ್ರವನ್ನು ಹಾಜರುಪಡಿಸದೆ ಇದ್ದರೂ 60 ದಿನಗಳಿಗೆ ಮೀರದಂತೆ ರಜೆಯನ್ನು ಮಂಜೂರು ಮಾಡಬಹುದು (ಕ.ಸ.ಸೇ.ವಿ. 135 (4ಎ) ಪ್ರಸೂತಿ ರಜೆಯನ್ನು ಯಾವುದೇ ರಜೆಯ ಲೆಕ್ಕದಿಂದ ಕಳೆಯತಕ್ಕದ್ದಲ್ಲ. (ಕ.ಸ.ಸೇ.ವಿ. 135 (4ಬಿ).
ಗರ್ಭಸ್ರಾವ ಅಥವಾ ಗರ್ಭಪಾತ ರಜೆ (Medical Termination Leave): ವೈದ್ಯಕೀಯ ಪರ್ಯವಸಾನ ಅಧಿನಿಯಮ 71ರ ಮೇರೆಗೆ ಪ್ರೇರಣೆಯಿಂದ ಮಾಡಿಸಿಕೊಂಡ ಗರ್ಭಪಾತವು ಸೇರಿದಂತೆ ಗರ್ಭಸ್ರಾವ ಅಥವಾ ಗರ್ಭಪಾತವಾದಾಗ ವೈದ್ಯಕೀಯ ಪ್ರಮಾಣ ಪತ್ರದ ಆಧಾರದಿಂದ 2 ಅಥವಾ ಹೆಚ್ಚು ಜೀವಂತ ಮಕ್ಕಳನ್ನು ಹೊಂದಿರದ ವಿವಾಹಿತ ಸರ್ಕಾರಿ ನೌಕರಳಿಗೆ 6 ವಾರಗಳಿಗೆ ಮೀರದಂತೆ ಮಂಜೂರು ಮಾಡಬಹುದು. (ಕ.ಸ.ಸೇ.ವಿ. 135 (2ಎ, ಬಿ, 3)
ಮಗುವನ್ನು ದತ್ತು ತೆಗೆದುಕೊಂಡಾಗ ಮಹಿಳಾ ಸರ್ಕಾರಿ ನೌಕರಳಿಗೆ ರಜೆ Leave to female Govt. Servant on adoption of child): ಎರಡು ಜೀವಂತ ಮಕ್ಕಳನ್ನು ಹೊಂದಿರದ ಮಹಿಳಾ ಸರ್ಕಾರಿ ನೌಕರಳು ಮಗುವೊಂದನ್ನು ದತ್ತು ತೆಗೆದುಕೊಂಡಾಗ ಒಂದು ವರ್ಷದ ಅಥವಾ ದತ್ತಕ ಮಗುವಿಗೆ ಒಂದು ವರ್ಷ ವಯಸ್ಸಾಗುವವರೆಗೆ ಇವುಗಳಲ್ಲಿ ಯಾವುದು ಕಡಿಮೆಯೊ ಆವರೆಗೆ ದೊರೆಯಬಹುದಾದ ಮತ್ತು ಅನುಮತಿಸಬಹುದಾದ ರಜೆಯನ್ನು (60 ದಿನಗಳನ್ನು ಮೀರದಂತೆ, ವೈದ್ಯಕೀಯ ಪ್ರಮಾಣಪತ್ರವನ್ನು ಹಾಜರುಪಡಿಸದೆ ಪರಿವರ್ತಿತ ರಜೆ ಮತ್ತು ಗಳಿಸದ ರಜೆ ಸೇರಿದಂತೆ) ಮಂಜೂರು ಮಾಡಬಹುದು. (ಕ.ಸ.ಸೇ.ವಿ. 135ಎ).
ಪಿತೃತ್ವ ರಜೆ (Paternity Leave): ಎರಡು ಅಥವಾ ಹೆಚ್ಚಿಗೆ ಜೀವಂತ ಮಕ್ಕಳಿಲ್ಲದ ಸರ್ಕಾರಿ ನೌಕರನ ಪತ್ನಿಯ ಹೆರಿಗೆ ಸಂದರ್ಭದಲ್ಲಿ ಹೆರಿಗೆ ದಿನಾಂಕದಿಂದ ಪ್ರಾರಂಭವಾಗುವಂತೆ 15 ದಿನಗಳ ಮೆಟರ್ನಿಟಿ ರಜೆಯನ್ನು ಮಂಜೂರು ಮಾಡಬಹುದು. ಇದನ್ನು ಯಾವುದೇ ರಜಾ ಲೆಕ್ಕದಿಂದ ಕಳೆಯತಕ್ಕದ್ದಲ್ಲ ಹಾಗೂ ಸಾಂರ್ದಭಿಕ ರಜೆ ಹೊರತು ಉಳಿದ ಯಾವುದೇ ರಜೆಯೊಂದಿಗೆ ಸಂಯೋಜಿಸಿಕೊಳ್ಳಬಹುದು. ಈ ರಜೆ ಅವಧಿಯಲ್ಲಿ ರಜೆಗೆ ಹೋಗುವ ನಿಕಟ ಪೂರ್ವದಲ್ಲಿದ್ದಂತೆ ವೇತನವು ಪ್ರಾಪ್ತವಾಗುತ್ತದೆ. ಈ ರಜೆಯನ್ನು ನಗದೀಕರಿಸಿಕೊಳ್ಳಲು ಅಥವಾ ಗಳಿಕೆ ರಜೆಯೊಂದಿಗೆ ಸೇರಿಸಿಕೊಳ್ಳಲು ಆಗುವುದಿಲ್ಲ. ಸಾಮಾನ್ಯವಾಗಿ ಈ ರಜೆಯನ್ನು ನಿರಾಕರಿಸುವಂತಿಲ್ಲ (ಕ.ಸ.ಸೇ.ವಿ. 135 (ಬಿ
ಸರ್ಕಾರಿ ನೌಕರ ತನ್ನ ಕಚೇರಿ ಕೆಲಸದ ನಿರ್ವಹಣೆ ವೇಳೆ ಅಂಗವಿಕಲನಾದರೆ(ಕಾಯಂ ಅಥವಾ ತಾತ್ಕಾಲಿಕ ನೌಕರ)ಅಂಗವೈಕಲ್ಯ ವಿಶೇಷ ರಜೆ ಮಂಜೂರು ಮಾಡಬಹುದು. ವೈಕಲ್ಯ ಸಂಭವಿಸಲು ಕಾರಣವಾದ ಘಟನೆ ನಡೆದ ಮೂರು ತಿಂಗಳ ತರುವಾಯ ವೈಕಲ್ಯ ಕಾಣಿಸಿಕೊಂಡಾಗ ಇದರ ಕಾರಣವು ಸರ್ಕಾರಕ್ಕೆ ಮನದಟ್ಟಾದರೆ ರಜೆಗೆ ಅನುಮತಿ ನೀಡಬಹುದು. ಅಧಿಕೃತ ಮೆಡಿಕಲ್ ಅಟೆಂಡರ್ಗಳು ಅಗತ್ಯವೆಂದು ಪ್ರಮಾಣೀಕರಿಸಿದ ಅವಧಿಗೆ ರಜೆ ಮಂಜೂರು ಮಾಡಬಹುದು. ಆದರೆ ಇದು 24 ತಿಂಗಳನ್ನು ಮೀರತಕ್ಕದ್ದಲ್ಲ. ಇದನ್ನು ಯಾವುದೇ ಇತರ ರಜೆಯೊಂದಿಗೆ ಸೇರಿಸಬಹುದು. ಈ ರಜೆಯನ್ನು ನಿವೃತ್ತಿಗೆ ಸಂಬಂಧಪಟ್ಟಂತೆ ಕರ್ತವ್ಯದ ದಿನಗಳೆಂದು ಪರಿಗಣಿಸಲಾಗುವುದು. ಈ ರಜೆಯ ಯಾವುದೇ ಅವಧಿಯ ಮೊದಲ 120 ದಿನಗಳಿಗೆ ಗಳಿಕೆ ರಜೆಯಲ್ಲಿದ್ದಾಗ ಪಡೆಯುವ ರಜಾವೇತನಕ್ಕೆ ಸಮನಾದ ವೇತನ ದೊರೆಯುವುದು.
ವಿಶೇಷ ರಜೆ: ಪಶು ವೈದ್ಯಕೀಯ ಇಲಾಖೆಯ ಲೈವ್ಸ್ಟಾಕ್ ಫಾರ್ಮ್ಗಳ ತಾತ್ಕಾಲಿಕ ನೌಕರರು ಕರ್ತವ್ಯ ನಿರ್ವಹಿಸುವಾಗ ಗಾಯಗಳಾಗಿ ಕೆಲಸ ಮಾಡಲು ಅಸಮರ್ಥರಾದರೆ (ನಿರ್ಲಕ್ಷತೆಯಿಂದಲ್ಲದೆ) ಕರ್ನಾಟಕ ಪಶು ಸಂಗೋಪನ ನಿರ್ದೇಶಕರು, ಜಿಲ್ಲಾ ವೈದ್ಯಾಧಿಕಾರಿ ಪ್ರಮಾಣಪತ್ರದ ಆಧಾರದ ಮೇಲೆ ಭತ್ಯೆ ಸಹಿತ ರಜೆಯನ್ನು 30 ದಿನಗಳವರೆಗೆ ವಿಶೇಷ ರಜೆ ನೀಡಬಹುದು. ಸ.ಸೇ.ವಿ. 138.
ವೈದ್ಯ ಇಲಾಖೆಯಲ್ಲಿ ರೇಡಿಯಂ ಸಂಪರ್ಕವಿರುವ ಸರ್ಕಾರಿ ನೌಕರನಿಗೆ ಪ್ರತಿ 6 ತಿಂಗಳಿಗೊಮ್ಮೆ 15 ದಿನಗಳಿಗೆ ಮೀರದಂತ ರಜೆ ಮಂಜೂರು ಮಾಡಬಹುದು. ಈ ಅವಧಿಯು ಅರ್ಧ ವೇತನದ ರಜೆಗೆ ಗಣನೆಗೆ ಬರುವುದು. ಆದರೆ ಗಳಿಕೆ ರಜೆಗೆ ಗಣನೆಗೆ ಬರುವುದಿಲ್ಲ. ಈ ರಜೆಯ ಅವಧಿಯಲ್ಲಿ ಗಳಿಕೆ ರಜೆಯ ಕಾಲದಲ್ಲಿ ದೊರೆಯುವಂತೆ ರಜಾ ಭತ್ಯೆಗಳು ದೊರೆಯುವುದು. (ಕ.ಸ.ಸೇ.ವಿ. 139).
ಅರಣ್ಯ ಇಲಾಖೆಯ ಕೆಲವು ಆಯ್ದ ರೇಂಜುಗಳಲ್ಲಿ ಕೆಲಸ ಮಾಡುತ್ತಿರುವ ರೇಂಜರ್, ಫಾರೆಸ್ಟರ್, ಅರಣ್ಯ ರಕ್ಷಕ ಮತ್ತು ಗುಮಾಸ್ತರಿಗೆ ಗಳಿಕೆ ರಜೆ ಜತೆಗೆ ಆರೋಗ್ಯ ಸುಧಾರಣೆಗೆ ಸ್ಥಳ ಬದಲಾಯಿಸಲು ಪ್ರತಿ ವರ್ಷವು ಒಂದು ತಿಂಗಳು ಪೂರ್ಣ ವೇತನ ಸಹಿತ ವಿಶೇಷ ಸ್ಥಳದ ರಜೆ ನೀಡಬಹುದು.
ಅನಧಿಕೃತ ಗೈರು ಹಾಜರಿ: ಸರ್ಕಾರಿ ನೌಕರನು ಸಕ್ಷಮ ಪ್ರಾಧಿಕಾರಿಯ ಮಂಜೂರಾತಿಯಿಲ್ಲದೆ ಕರ್ತವ್ಯಕ್ಕೆ ಗೈರಾಗುವಂತಿಲ್ಲ, ಆದರೆ ನೌಕರನು ತನ್ನ ನಿಯಂತ್ರಣಕ್ಕೆ ಮೀರಿದ ಕಾರಣದಿಂದ ಸಕ್ಷಮ ಪ್ರಾಧಿಕಾರದ ಮಂಜೂರಾತಿಯಿಲ್ಲದೆ ಗೈರಾದ ಬಗ್ಗೆ ತಿಳಿಸಿದಾಗ ಅದನ್ನು ಪರಿಶೀಲಿಸಿ ತೃಪ್ತಿಕರವಾಗಿದೆ ಎಂದು ಪರಿಗಣಿಸಿ ಗೈರು ಅವಧಿಯನ್ನು ನೌಕರನ ಹಕ್ಕಿನಲ್ಲಿರುವ ಯಾವುದಾದರೂ ರಜೆಯನ್ನಾಗಿ ಪರಿವರ್ತಿಸಬಹುದು. ಸಕ್ಷಮ ಪ್ರಾಧಿಕಾರಿಯು ನೌಕರನ ಗೈರಿನ ಕಾರಣ ಒಪ್ಪಿಕೊಳ್ಳದಿದ್ದಲ್ಲಿ ಗೈರು ಅವಧಿಯನ್ನು ಅನಧಿಕೃತ ಗೈರು ಹಾಜರಿ ಎಂದು ಆದೇಶಿಸಬಹುದು. ಇಂತಹ ಅವಧಿಯಲ್ಲಿ ನೌಕರನಿಗೆ ಯಾವುದೇ ವೇತನ ಭತ್ಯೆಗಳು ಲಭ್ಯವಾಗುವುದಿಲ್ಲ.
ಸರ್ಕಾರಿ ನೌಕರನು ಸಕ್ಷಮ ಪ್ರಾಧಿಕಾರದ ಅನುಮತಿ ಪಡೆದು ರಜೆ ಬಳಸಿಕೊಂಡು, ರಜಾ ಅವಧಿ ಮುಗಿದ ನಂತರ ಕೂಡಲೆ ಕರ್ತವ್ಯಕ್ಕೆ ಹಾಜರಾಗಿದ್ದಾಗಲೂ ಅವಧಿ ಮೀರಿದ ಗೈರು ಹಾಜರಿ ಪ್ರಕರಣ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲೂ ಈ ಮೇಲಿನಂತೆಯೇ ಕ್ರಮ ತೆಗೆದುಕೊಳ್ಳಬಹುದು.
ಕಚೇರಿ ವೇಳೆಯನ್ನು ಎರಡು ಬಾಗಗಳಾಗಿ ವಿಂಗಡಿಸಿರುವಾಗ ಯಾವುದೇ ಒಂದು ಭಾಗದ ಅನಧಿಕೃತ ಗೈರಿಗೆ ಅರ್ಧ ದಿನದ ವೇತನ ಭತ್ಯೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಕಚೇರಿ ಪ್ರಾರಂಭದ ವೇಳೆಯೊಳಗೆ ಹಾಜರಾಗಬೇಕು, ಹತ್ತು ನಿಮಿಷ ತಡವಾದರೆ ಮಾತ್ರ ಸಾಂರ್ದಭಿಕ ವಿನಾಯಿತಿ ಇರುತ್ತದೆ. ಹತ್ತು ನಿಮಿಷಗಳ ನಂತರ ಮಧ್ಯಾಹ್ನ 2 ಗಂಟೆ ಒಳಗೆ ಕಚೇರಿಗೆ ಹಾಜರಾದಾಗ ನೌಕರನು 1/2 ದಿನದ ಸಾಂರ್ದಭಿಕ ರಜೆ ಕಳೆದುಕೊಳ್ಳುತ್ತಾನೆ. ನೌಕರನ ಹಕ್ಕಿನಲ್ಲಿ ಸಾಂರ್ದಭಿಕ ರಜೆ ಇಲ್ಲದಿದ್ದರೆ ಹಕ್ಕಿನಲ್ಲಿರುವ ಒಂದು ದಿನದ ಗಳಿಕೆ ರಜೆ ಅಥವಾ ಇತರೆ ರಜೆ ಕಳೆದುಕೊಳ್ಳಬೇಕಾಗುತ್ತದೆ. (ಕ.ಸ.ಸೇ.ನಿ. 106ಎ)
ಮುಷ್ಕರದ ಕಾರಣದಿಂದ ಕರ್ತವ್ಯಕ್ಕೆ ಗೈರಾದ ಸರ್ಕಾರಿ ನೌಕರನು ಯಾವುದೇ ರಜೆಗೆ ಹಕ್ಕು ಹೊಂದಿರುವುದಿಲ್ಲ, ಹಾಗೂ ತನ್ನ ಲೆಕ್ಕದಲ್ಲಿರುವ ಎಲ್ಲಾ ಬಗೆಯ ರಜೆ ಕಳೆದುಕೊಳ್ಳುತ್ತಾನೆ.(ಕ.ಸ.ಸೇ.ನಿ. 106, ಬಿ
ದಿನಕ್ಕೊಂದು ಮಾಹಿತಿ *ಸೇವಾ ದಾಖಲೆ ನಿರ್ವಹಣೆ ನಿಯಮಗಳು*
ಗೆಜೆಟೆಡ್ ಮತ್ತು ನಾನ್ ಗೆಜೆಟೆಡ್ ನೌಕರರ ಸೇವಾ ದಾಖಲು ಮಾಡುವುದರಿಂದ ನಿವೃತ್ತಿ ವೇತನದ ದಾಖಲೆ ತಯಾರಿಸಲು ಮತ್ತು ನಿವೃತ್ತಿ ವೇತನ ಲೆಕ್ಕ ಮಾಡಲು ಸಹಾಯವಾಗುತ್ತದೆ. ಗೆಜೆಟೆಡ್ ಅಧಿಕಾರಿಯ ಸೇವಾ ಪುಸ್ತಕವನ್ನು ಮಹಾಲೇಖಪಾಲರೂ, ನಾನ್ ಗೆಜೆಟೆಡ್ ನೌಕರರ ಸೇವಾ ಪುಸ್ತಕವನ್ನು ಕಚೇರಿ ಮುಖ್ಯಸ್ಥರು ತಯಾರಿಸಬೇಕು.
ಪ್ರತಿ ಸರ್ಕಾರಿ ನೌಕರನು ಕೆಲಸಕ್ಕೆ ಸೇರುವ ಮೊದಲು ಸರ್ಕಾರಿ ಖರ್ಚಿನಲ್ಲಿ ನಮೂನೆ 1ರಿಂದ ಸೇವಾ ಪುಸ್ತಕದಲ್ಲಿ ಕೆಳಕಂಡ ಅಂಶಗಳನ್ನು ಎಚ್ಚರಿಕೆಯಿಂದ ಬರೆಯಬೇಕಿದೆ.
1. ಸರ್ಕಾರಿ ನೌಕರನು ಮೊದಲು ಕೆಲಸಕ್ಕೆ ಹಾಜರಾದ ದಿನಾಂಕವನ್ನು ಬೆಳಗ್ಗೆ, ಮಧ್ಯಾಹ್ನವೇ ಸಮಸಹಿತ ಸೇವಾ ಪುಸ್ತಕದಲ್ಲಿ ಬರೆಯಬೇಕು.
2. ಸೇವಾ ಪುಸ್ತಕ ಕಚೇರಿ ಮುಖ್ಯಸ್ಥನ ಸುಪರ್ದಿನಲ್ಲಿರತಕ್ಕದ್ದು ಮತ್ತು ವರ್ಗವಾದಾಗ ಒಂದು ಕಚೇರಿಯಿಂದ ಇನ್ನೊಂದು ಕಚೇರಿಗೆ ಪೂರ್ತಿ ವಿವರಗಳೊಡನೆ ಕಳುಹಿಸುವುದು.
3. ಎಲ್ಲಾ ತರಹದ ಕಾರ್ಯನಿರ್ವಹಣೆ, ಬಡ್ತಿ ಮತ್ತು ಹಂಗಾಮಿ ಬಡ್ತಿಗಳನ್ನು ನಮೂದಿಸಬೇಕು.
4. ಪರೀಕ್ಷಾರ್ಥವಾಗಿ ನಿಗದಿಪಡಿಸಿದ ಸಮಯವನ್ನು ತೃಪ್ತಿಕರವಾಗಿ ಮಾಡಿದ್ದಾನೆಂಬುದನ್ನು ನಮೂದಿಸಬೇಕು.
5. ಸಂಬಳ ಬಡ್ತಿ ವರ್ಗಾವಣೆ ಮತ್ತು ರಜೆ ಬರೆಯಬೇಕು.
6. ಸೇವಾ ಪುಸ್ತಕದಲ್ಲಿ ದಾಖಲಿಸಿದ ಬರಹವನ್ನು ಕಚೇರಿ ಮುಖ್ಯಸ್ಥ ತನ್ನ ಸಹಿಯ ಮೂಲಕ ದೃಢಪಡಿಸಬೇಕು. ಸರ್ಕಾರಿ ನೌಕರನೇ ಮುಖ್ಯಸ್ಥನಾದಲ್ಲಿ ಆತನ ಮೇಲಧಿಕಾರಿಯು ದೃಢೀಕರಿಸಬೇಕು.
7. ಪ್ರತಿಯೊಂದು ದಾಖಲೆಯನ್ನು ಇಲಾಖಾ ಆದೇಶ ಪೇ ಬಿಲ್ ಮತ್ತು ರಜೆ ಪಟ್ಟಿಗಳಿಂದ ಪರೀಕ್ಷಿಸತಕ್ಕದ್ದು.
8. ಕಚೇರಿಯ ಗೆಜೆಟೆಡ್ ಸಹಾಯಕರಿಗೆ ಈ ದೃಡೀಕರಿಸುವುದನ್ನು ವಹಿಸಬಹುದು.
9. ತಿದ್ದುಪಡಿ ಮತ್ತು ಮೇಲ್ಬರವಣಿಗೆಗಳನ್ನು ಬರೆದುದನ್ನು ಸಹಿ ಮೂಲಕ ದೃಢೀಕರಿಸತಕ್ಕದ್ದು.
10. ಇಲಾಖಾ ಪರೀಕ್ಷೆಗಳಲ್ಲಿ ಸರ್ಕಾರಿ ನೌಕರನು ತೇರ್ಗಡೆಯಾಗಿದ್ದರೆ ಸೇವಾ ಪುಸ್ತಕದಲ್ಲೂ ನಮೂದಿಸಬೇಕು. ತೇರ್ಗಡೆಯಾದವರ ರಿ.ನಂಬರ್ ಪ್ರಕಟಿಸಿದ ಗೆಜೆಟ್ನ ದಿನಾಂಕ ಬರೆಯಬೇಕು.
11. ತಾತ್ಕಾಲಿಕ, ಕಾಯಂ ಸೇವೆಗಳನ್ನು ನಿವೃತ್ತಿ ಸೇವೆಗೆ ತೆಗೆದá-ಕೊಳ್ಳಲು ನಿರ್ಧರಿಸಲು ಆಡಿಟ್ ಕಚೇರಿಯವರಿಗೆ ಸಹಾಯವಾಗá-ವಂಥ ವಿವರಗಳನ್ನು ಕಚೇರಿ ಮುಖ್ಯಸ್ಥ ಒದಗಿಸಬೇಕು.
12. ಸರ್ಕಾರಿ ನೌಕರನನ್ನು ಕೆಳದರ್ಜೆಗೆ ಇಳಿಸಿದಾಗ, ವಜಾ ಮಾಡಿದಾಗ ಇನ್ನಿತರ ಶಿಕ್ಷೆ ವಿಧಿಸಿದಾಗ ಸೂಕ್ಷ್ಮವಿವರ ನಮೂದಿಸಬೇಕು. ಇವುಗಳ ಆದೇಶಗಳನ್ನು ಸೇವಾ ಪುಸ್ತಕದಲ್ಲಿ ಲಗತ್ತಿಸಲಾಗá-ವುದು.
13. ಕಡ್ಡಾಯ ನಿವೃತ್ತಿ ತೆಗೆದು ಹಾಕá-ವುದು ಅಥವಾ ವಜಾ ಮಾಡá-ವಂತೆ ನಿವೃತ್ತಿಯ ಗಣನೆಗೆ ಬರುವ ವಿಷಯಗಳು ಹಿಂದಿನ ಸೇವಾ ಅವಧಿಯಲ್ಲಿದ್ದವೇ ಅಥವಾ ಇಲ್ಲವೆ ಎಂಬá-ದನ್ನು ಸ್ಪಷ್ಟವಾಗಿ ಸೇವಾ ಪುಸ್ತಕದಲ್ಲಿ ತಿಳಿಸತಕ್ಕದ್ದು.
14. ರಜೆಯ ಲೆಕ್ಕಗಳನ್ನು ಕಚೇರಿಯ ಮುಖ್ಯಸ್ಥ ಸಹಿಯೊಂದಿಗೆ ದೃಢೀಕರಿಸಬೇಕು.
15. ಹೊಸ ಪೇಸ್ಕೇಲ್, ರಜೆ ನಿಯಮ, ನಿವೃತ್ತಿ ನಿಯಮ ಅಥವಾ ಇನ್ನಿತರೆ ಷರತ್ತುಗಳ ಒಪ್ಪಿಗೆಗಳನ್ನು ಲಗತ್ತಿಸತಕ್ಕದ್ದು.
16. ಹುಟ್ಟಿದ ದಿನಾಂಕಕ್ಕೆ ಸಂಬಂಧಿಸಿದ ಪತ್ರಗಳಿಂದ ಪರಿಶೀಲಿಸಿದ ದೃಢೀಕರಣ ಪತ್ರ ಪಡೆಯಬೇಕು.
17. ಗುರುತಿಗೋಸ್ಕರ ಬೆರಳಚ್ಚು ಮತ್ತು ವ್ಯಕ್ತಿಯ ಚಿಹ್ನೆ – ವಿವರ ನಮೂದಿಸಬೇಕು.
18. ವರ್ಷಕ್ಕೆ ಒಂದು ಸಲ ಕಚೇರಿ ಮುಖ್ಯಸ್ಥ ನೌಕರನಿಗೆ ಸೇವಾ ಪುಸ್ತಕ, ವಿವರಗಳನ್ನು ಪರಿಶೀಲಿಸಲು ನೀಡಬೇಕು.
19. ಸರ್ಕಾರಿ ನೌಕರನ ನಿವೃತ್ತಿ, ರಾಜೀನಾಮೆ ಅಥವಾ ಸೇವೆಯಿಂದ ಕೊನೆಗೊಳಿಸಿದಾಗ ಸೇವಾ ಪುಸ್ತಕವನ್ನು ವಾಪಸ್ಸು ಕೊಡಲಾಗದು.
20. ಸರ್ಕಾರಿ ನೌಕರರನ್ನು ಸೇವೆಯಿಂದ ತೆಗೆದಾಗ ಅಥವಾ ವಜಾ ಮಾಡಿದಾಗ 5 ವರ್ಷದವರೆಗೆ ಸೇವಾ ಪುಸ್ತಕ ಇಟ್ಟಿರಬೇಕು.
21. ಸೇವಾ ಪುಸ್ತಕವನ್ನು ಕಚೇರಿ ಮುಖ್ಯಸ್ಥ ಅಥವಾ ಇತರೆ ಅಧಿಕೃತ ಅಧಿಕಾರಿಯು ವರ್ಷದ ಪರಿಶೀಲಿಸಬೇಕು.
22. ಸರ್ಕಾರಿ ನೌಕರನ 25ವರ್ಷ ಪೂರ್ಣ ಸೇವೆಗೊಳಿಸಿದ ನಂತರ ಮಹಾಲೇಖಪಾಲ (ಎ.ಜಿ.)ರಿಂದ ಪುಸ್ತಕ ಪರಿಶೀಲಿಸಬೇಕು.
23. ಕಚೇರಿ ಮುಖ್ಯಸ್ಥನು ಸೇವಾ ಪುಸ್ತಕದ ಎರಡನೇ ಪ್ರತಿ ತಯಾರಿಸಿ ಎಲ್ಲಾ ವಿವರ ದೃಢೀಕರಿಸಿ ನೌಕರನೇ ಎರಡನೇ ಪ್ರತಿ ತಯಾರಿಸಲು ಬರುವ ತೊಂದರೆ ತಪ್ಪಿಸಬಹುದು.
24. ಸರ್ಕಾರಿ ನೌಕರನು ಸೇವೆಗೆ ಸೇರಿ ಒಂದು ತಿಂಗಳಿಗೆ ಕಚೇರಿ ಮುಖ್ಯಸ್ಥನಿಗೆ ತನ್ನ ಕುಟುಂಬ ಸದಸ್ಯರ ವಿವರಗಳನ್ನು ಕ.ಸ.ಸೇ. (ಕು.ನಿ.) ನಿಯಮ 7ರಲ್ಲಿ ಸೂಚಿಸಿರುವಂತೆ ಒದಗಿಸಬೇಕು.
ಪ್ರತಿ ಸರ್ಕಾರಿ ನೌಕರನು ಕೆಲಸಕ್ಕೆ ಸೇರುವ ಮೊದಲು ಸರ್ಕಾರಿ ಖರ್ಚಿನಲ್ಲಿ ನಮೂನೆ 1ರಿಂದ ಸೇವಾ ಪುಸ್ತಕದಲ್ಲಿ ಕೆಳಕಂಡ ಅಂಶಗಳನ್ನು ಎಚ್ಚರಿಕೆಯಿಂದ ಬರೆಯಬೇಕಿದೆ.
1. ಸರ್ಕಾರಿ ನೌಕರನು ಮೊದಲು ಕೆಲಸಕ್ಕೆ ಹಾಜರಾದ ದಿನಾಂಕವನ್ನು ಬೆಳಗ್ಗೆ, ಮಧ್ಯಾಹ್ನವೇ ಸಮಸಹಿತ ಸೇವಾ ಪುಸ್ತಕದಲ್ಲಿ ಬರೆಯಬೇಕು.
2. ಸೇವಾ ಪುಸ್ತಕ ಕಚೇರಿ ಮುಖ್ಯಸ್ಥನ ಸುಪರ್ದಿನಲ್ಲಿರತಕ್ಕದ್ದು ಮತ್ತು ವರ್ಗವಾದಾಗ ಒಂದು ಕಚೇರಿಯಿಂದ ಇನ್ನೊಂದು ಕಚೇರಿಗೆ ಪೂರ್ತಿ ವಿವರಗಳೊಡನೆ ಕಳುಹಿಸುವುದು.
3. ಎಲ್ಲಾ ತರಹದ ಕಾರ್ಯನಿರ್ವಹಣೆ, ಬಡ್ತಿ ಮತ್ತು ಹಂಗಾಮಿ ಬಡ್ತಿಗಳನ್ನು ನಮೂದಿಸಬೇಕು.
4. ಪರೀಕ್ಷಾರ್ಥವಾಗಿ ನಿಗದಿಪಡಿಸಿದ ಸಮಯವನ್ನು ತೃಪ್ತಿಕರವಾಗಿ ಮಾಡಿದ್ದಾನೆಂಬುದನ್ನು ನಮೂದಿಸಬೇಕು.
5. ಸಂಬಳ ಬಡ್ತಿ ವರ್ಗಾವಣೆ ಮತ್ತು ರಜೆ ಬರೆಯಬೇಕು.
6. ಸೇವಾ ಪುಸ್ತಕದಲ್ಲಿ ದಾಖಲಿಸಿದ ಬರಹವನ್ನು ಕಚೇರಿ ಮುಖ್ಯಸ್ಥ ತನ್ನ ಸಹಿಯ ಮೂಲಕ ದೃಢಪಡಿಸಬೇಕು. ಸರ್ಕಾರಿ ನೌಕರನೇ ಮುಖ್ಯಸ್ಥನಾದಲ್ಲಿ ಆತನ ಮೇಲಧಿಕಾರಿಯು ದೃಢೀಕರಿಸಬೇಕು.
7. ಪ್ರತಿಯೊಂದು ದಾಖಲೆಯನ್ನು ಇಲಾಖಾ ಆದೇಶ ಪೇ ಬಿಲ್ ಮತ್ತು ರಜೆ ಪಟ್ಟಿಗಳಿಂದ ಪರೀಕ್ಷಿಸತಕ್ಕದ್ದು.
8. ಕಚೇರಿಯ ಗೆಜೆಟೆಡ್ ಸಹಾಯಕರಿಗೆ ಈ ದೃಡೀಕರಿಸುವುದನ್ನು ವಹಿಸಬಹುದು.
9. ತಿದ್ದುಪಡಿ ಮತ್ತು ಮೇಲ್ಬರವಣಿಗೆಗಳನ್ನು ಬರೆದುದನ್ನು ಸಹಿ ಮೂಲಕ ದೃಢೀಕರಿಸತಕ್ಕದ್ದು.
10. ಇಲಾಖಾ ಪರೀಕ್ಷೆಗಳಲ್ಲಿ ಸರ್ಕಾರಿ ನೌಕರನು ತೇರ್ಗಡೆಯಾಗಿದ್ದರೆ ಸೇವಾ ಪುಸ್ತಕದಲ್ಲೂ ನಮೂದಿಸಬೇಕು. ತೇರ್ಗಡೆಯಾದವರ ರಿ.ನಂಬರ್ ಪ್ರಕಟಿಸಿದ ಗೆಜೆಟ್ನ ದಿನಾಂಕ ಬರೆಯಬೇಕು.
11. ತಾತ್ಕಾಲಿಕ, ಕಾಯಂ ಸೇವೆಗಳನ್ನು ನಿವೃತ್ತಿ ಸೇವೆಗೆ ತೆಗೆದá-ಕೊಳ್ಳಲು ನಿರ್ಧರಿಸಲು ಆಡಿಟ್ ಕಚೇರಿಯವರಿಗೆ ಸಹಾಯವಾಗá-ವಂಥ ವಿವರಗಳನ್ನು ಕಚೇರಿ ಮುಖ್ಯಸ್ಥ ಒದಗಿಸಬೇಕು.
12. ಸರ್ಕಾರಿ ನೌಕರನನ್ನು ಕೆಳದರ್ಜೆಗೆ ಇಳಿಸಿದಾಗ, ವಜಾ ಮಾಡಿದಾಗ ಇನ್ನಿತರ ಶಿಕ್ಷೆ ವಿಧಿಸಿದಾಗ ಸೂಕ್ಷ್ಮವಿವರ ನಮೂದಿಸಬೇಕು. ಇವುಗಳ ಆದೇಶಗಳನ್ನು ಸೇವಾ ಪುಸ್ತಕದಲ್ಲಿ ಲಗತ್ತಿಸಲಾಗá-ವುದು.
13. ಕಡ್ಡಾಯ ನಿವೃತ್ತಿ ತೆಗೆದು ಹಾಕá-ವುದು ಅಥವಾ ವಜಾ ಮಾಡá-ವಂತೆ ನಿವೃತ್ತಿಯ ಗಣನೆಗೆ ಬರುವ ವಿಷಯಗಳು ಹಿಂದಿನ ಸೇವಾ ಅವಧಿಯಲ್ಲಿದ್ದವೇ ಅಥವಾ ಇಲ್ಲವೆ ಎಂಬá-ದನ್ನು ಸ್ಪಷ್ಟವಾಗಿ ಸೇವಾ ಪುಸ್ತಕದಲ್ಲಿ ತಿಳಿಸತಕ್ಕದ್ದು.
14. ರಜೆಯ ಲೆಕ್ಕಗಳನ್ನು ಕಚೇರಿಯ ಮುಖ್ಯಸ್ಥ ಸಹಿಯೊಂದಿಗೆ ದೃಢೀಕರಿಸಬೇಕು.
15. ಹೊಸ ಪೇಸ್ಕೇಲ್, ರಜೆ ನಿಯಮ, ನಿವೃತ್ತಿ ನಿಯಮ ಅಥವಾ ಇನ್ನಿತರೆ ಷರತ್ತುಗಳ ಒಪ್ಪಿಗೆಗಳನ್ನು ಲಗತ್ತಿಸತಕ್ಕದ್ದು.
16. ಹುಟ್ಟಿದ ದಿನಾಂಕಕ್ಕೆ ಸಂಬಂಧಿಸಿದ ಪತ್ರಗಳಿಂದ ಪರಿಶೀಲಿಸಿದ ದೃಢೀಕರಣ ಪತ್ರ ಪಡೆಯಬೇಕು.
17. ಗುರುತಿಗೋಸ್ಕರ ಬೆರಳಚ್ಚು ಮತ್ತು ವ್ಯಕ್ತಿಯ ಚಿಹ್ನೆ – ವಿವರ ನಮೂದಿಸಬೇಕು.
18. ವರ್ಷಕ್ಕೆ ಒಂದು ಸಲ ಕಚೇರಿ ಮುಖ್ಯಸ್ಥ ನೌಕರನಿಗೆ ಸೇವಾ ಪುಸ್ತಕ, ವಿವರಗಳನ್ನು ಪರಿಶೀಲಿಸಲು ನೀಡಬೇಕು.
19. ಸರ್ಕಾರಿ ನೌಕರನ ನಿವೃತ್ತಿ, ರಾಜೀನಾಮೆ ಅಥವಾ ಸೇವೆಯಿಂದ ಕೊನೆಗೊಳಿಸಿದಾಗ ಸೇವಾ ಪುಸ್ತಕವನ್ನು ವಾಪಸ್ಸು ಕೊಡಲಾಗದು.
20. ಸರ್ಕಾರಿ ನೌಕರರನ್ನು ಸೇವೆಯಿಂದ ತೆಗೆದಾಗ ಅಥವಾ ವಜಾ ಮಾಡಿದಾಗ 5 ವರ್ಷದವರೆಗೆ ಸೇವಾ ಪುಸ್ತಕ ಇಟ್ಟಿರಬೇಕು.
21. ಸೇವಾ ಪುಸ್ತಕವನ್ನು ಕಚೇರಿ ಮುಖ್ಯಸ್ಥ ಅಥವಾ ಇತರೆ ಅಧಿಕೃತ ಅಧಿಕಾರಿಯು ವರ್ಷದ ಪರಿಶೀಲಿಸಬೇಕು.
22. ಸರ್ಕಾರಿ ನೌಕರನ 25ವರ್ಷ ಪೂರ್ಣ ಸೇವೆಗೊಳಿಸಿದ ನಂತರ ಮಹಾಲೇಖಪಾಲ (ಎ.ಜಿ.)ರಿಂದ ಪುಸ್ತಕ ಪರಿಶೀಲಿಸಬೇಕು.
23. ಕಚೇರಿ ಮುಖ್ಯಸ್ಥನು ಸೇವಾ ಪುಸ್ತಕದ ಎರಡನೇ ಪ್ರತಿ ತಯಾರಿಸಿ ಎಲ್ಲಾ ವಿವರ ದೃಢೀಕರಿಸಿ ನೌಕರನೇ ಎರಡನೇ ಪ್ರತಿ ತಯಾರಿಸಲು ಬರುವ ತೊಂದರೆ ತಪ್ಪಿಸಬಹುದು.
24. ಸರ್ಕಾರಿ ನೌಕರನು ಸೇವೆಗೆ ಸೇರಿ ಒಂದು ತಿಂಗಳಿಗೆ ಕಚೇರಿ ಮುಖ್ಯಸ್ಥನಿಗೆ ತನ್ನ ಕುಟುಂಬ ಸದಸ್ಯರ ವಿವರಗಳನ್ನು ಕ.ಸ.ಸೇ. (ಕು.ನಿ.) ನಿಯಮ 7ರಲ್ಲಿ ಸೂಚಿಸಿರುವಂತೆ ಒದಗಿಸಬೇಕು.
ದಿನಕ್ಕೊಂದು ಮಾಹಿತಿ *ಅರ್ಧವೇತನ ರಜೆಯ ನಿಯಮಗಳು*
ಬಿಡುವಿರುವ ಇಲಾಖೆಯ ಸರ್ಕಾರಿ ನೌಕರನು ಯಾವುದೇ ವರ್ಷದಲ್ಲಿ ಬಿಡುವನ್ನು ಭಾಗಶಃ ಬಳಸಿಕೊಂಡ ಪಕ್ಷದಲ್ಲಿ ಆ ವರ್ಷದ ಬಿಡುವಿನಲ್ಲಿ ಆತ ಬಳಸಿಕೊಳ್ಳದಿರುವ ಬಿಡುವಿನ ದಿವಸಗಳಷ್ಟಕ್ಕೆ 30 ದಿವಸಗಳ ಅಂತಹ ಅನುಪಾತದಲ್ಲಿ ಗಳಿಕೆ ರಜೆಯನ್ನು ಪಡೆಯಲು ಹಕ್ಕುಳ್ಳವನಾಗಿರುತ್ತಾನೆ. ಆದರೆ ಕಾಯಂ ಸೇವೆ ಅಥವಾ ಅರೆ ಕಾಯಂ ಸೇವೆಯಲ್ಲಿಲ್ಲದ ಸರ್ಕಾರಿ ನೌಕರನಿಗೆ ಸೇವೆಯ ಮೊದಲನೆ ವರ್ಷಕ್ಕೆ ಸಂಬಂಧಿಸಿದಂತೆ ಇದು ಅನ್ವಯಿಸುವುದಿಲ್ಲ
ಉದಾ: ಒಂದು ವರ್ಷದಲ್ಲಿ 120 ದಿನಗಳ ಬಿಡುವಿರುವ ಇಲಾಖೆಯ ಒಬ್ಬ ಸರ್ಕಾರಿ ನೌಕರನನ್ನು ಬಿಡುವಿನ ದಿನಗಳಾದ 8.5.2005 ರಿಂದ 27.5.2005 ರವರೆಗೆ 20 ದಿನಗಳು ದಾಸ್ತಾನು ಪರಿಶೀಲನಾ ಕಾರ್ಯಕ್ಕಾಗಿ ನಿಯೋಜಿಸಿದೆ. ಈ ಅವಧಿಯಲ್ಲಿ ಅವರಿಗೆ ಲಭ್ಯವಾಗುವ ಹೆಚ್ಚುವರಿ ಗಳಿಕೆ ರಜೆಯನ್ನು ಲೆಕ್ಕಾಚಾರ ಮಾಡಿ.
ಹೆಚ್ಚುವರಿ ಗಳಿಕೆ ರಜೆ = (30(ಉಪಯೋಗಿಸದ ಬಿಡುವು) / (ವರ್ಷದ ಒಟ್ಟು ಬಿಡುವಿನ ಅವಧಿ)
= (3020) /120 = 5 ದಿನಗಳು (ಕ.ಸ.ಸೇ.ನಿ. 113(3-ಎ) ಬಿಡುವಿರುವ ಇಲಾಖೆಯ ಸರ್ಕಾರಿ ನೌಕರನು ಯಾವುದೇ ವರ್ಷದಲ್ಲಿ ಯಾವುದೇ ಬಿಡುವನ್ನು ಉಪಯೋಗಿಸಿಕೊಳ್ಳದೇ ಇದ್ದರೆ ಆ ವರ್ಷಕ್ಕೆ ಸಂಬಂಧಪಟ್ಟಂತೆ ಕ.ಸ.ಸೇ.ನಿ. 112 ರಂತೆ ಗಳಿಕೆ ರಜೆಯನ್ನು ಅನುಮತಿಸಲಾಗುತ್ತದೆ.
(ಕ.ಸ.ಸೇ.ನಿ. 113(3ಬಿ)) ಬಿಡುವಿರುವ ಇಲಾಖೆಯಿಂದ ಬಿಡುವಿರದ ಇಲಾಖೆಗೆ ವರ್ಗಾವಣೆಯಾದಾಗ ಸರ್ಕಾರಿ ನೌಕರನು ಅಂತಹ ವರ್ಗಾವಣೆಯ ಹಿಂದಿನ ಅರ್ಧ ಕ್ಯಾಲೆಂಡರ್ ವರ್ಷದಿಂದ ವರ್ಗಾವಣೆಯ ದಿನಾಂಕದವರೆಗೆ ಪೂರ್ಣಗೊಂಡ ಪ್ರತಿಯೊಂದು ತಿಂಗಳಿಗೆ 5/6 ದಿನದ ದರದಲ್ಲಿ ಗಳಿಕೆ ರಜೆ ಲೆಕ್ಕ ಹಾಕಲಾಗುವುದು. ವರ್ಗಾವಣೆಯಾದ ದಿನಾಂಕದಿಂದ ಅವನು ಬಿಡುವಿಲ್ಲದ ಇಲಾಖಾ ನೌಕರನಿಗೆ ಅನ್ವಯವಾಗುವ ಗಳಿಕೆ ರಜೆಯನ್ನು ಪಡೆಯಲು ಹಕ್ಕುಳ್ಳವನಾಗಿರುತ್ತಾನೆ.
(ಕ.ಸ.ಸೇ.ನಿ. 113(6ಎ)) ವರ್ಗಾವಣೆಯಾದ ದಿನಾಂಕದಿಂದ ಅರ್ಧ ಕ್ಯಾಲೆಂಡರ್ ವರ್ಷದ ಕೊನೆಯವರೆಗೆ ಅವನ ಸೇವೆಯು ಪೂರ್ತಿಗೊಂಡ ಪ್ರತಿಯೊಂದು ತಿಂಗಳಿಗೆ 5/6 ದಿನದ ದರದಲ್ಲಿ ಗಳಿಕೆ ರಜೆಯನ್ನು ಲೆಕ್ಕಹಾಕಲಾಗುವುದು.
(ಕ.ಸ.ಸೇ.ನಿ. 113(7ಎ)) 6. ಅರ್ಧ ವೇತನ ರಜೆ (ಏಚ್ಝ್ಛ ಕಚಢ ಔಛಿಚಡಛಿ): ಪ್ರತಿಯೊಂದು ಕ್ಯಾಲೆಂಡರ್ ವರ್ಷದ ಜನವರಿ ಮತ್ತು ಜುಲೈ ತಿಂಗಳ ಮೊದಲ ದಿನಾಂಕದಂದು ಪ್ರತಿ ಅರ್ಧವರ್ಷಕ್ಕೆ 10 ದಿನಗಳಂತೆ 2 ಕಂತುಗಳಲ್ಲಿ ಮುಂಚಿತವಾಗಿ ಜಮೆ ಮಾಡಬೇಕು. ಇದು 1.7.95 ರಿಂದ ಜಾರಿಗೆ ಬಂದಿದೆ. ಅರ್ಧ ವೇತನ ರಜೆಯು ಬಿಡುವಿರುವ ಇಲಾಖೆಯ ಸರ್ಕಾರಿ ನೌಕರರಿಗೆ ಅನ್ವಯಿಸುವುದಿಲ್ಲ.
ಸರ್ಕಾರಿ ನೌಕರನು ಯಾವುದೇ ಅರ್ಧ ವರ್ಷದಲ್ಲಿ ಯಾವುದೇ ಅಸಾಧಾರಣ ರಜೆ, ಗೈರುಹಾಜರಿ ಅವಧಿ, ಅಮಾನತ್ತಿನ ಅವಧಿ, ಲೆಕ್ಕಕ್ಕಿಲ್ಲದ ಅವಧಿ ಅಥವಾ ಕರ್ತವ್ಯವಲ್ಲದ ಅವಧಿಯೆಂದು ತೀರ್ವನಿಸಿದಾಗ ಈ ಅವಧಿಯ 1/18 ಭಾಗವನ್ನು, 10 ದಿನಗಳ ಗರಿಷ್ಠ ಮಿತಿಗೊಳಪಟ್ಟು ಕಡಿಮೆ ಮಾಡಬೇಕು.
ಸರ್ಕಾರಿ ನೌಕರನು ನೇಮಕಗೊಂಡ ಪ್ರತಿಪೂರ್ಣ ಕ್ಯಾಲೆಂಡರ್ ತಿಂಗಳಿಗೆ 5/3 ದಿನಗಳ ದರದಲ್ಲಿ ಅರ್ಧ ವೇತನ ರಜೆಯನ್ನು ಜಮೆ ಮಾಡಬೇಕು(ಕ.ಸ.ಸೇ.ನಿ. 112 (2ಎ)
ಸರ್ಕಾರಿ ನೌಕರನು ನಿವೃತ್ತಿ ಅಥವಾ ರಾಜೀನಾಮೆ ನೀಡಿದಾಗ ಸೇವೆಯು ಪೂರ್ಣಗೊಂಡ ಪ್ರತಿ ಕ್ಯಾಲೆಂಡರ್ ತಿಂಗಳಿಗೆ 5/3 ದಿನಗಳ ದರದಲ್ಲಿ ಅರ್ಧವೇತನ ರಜೆಯನ್ನು ಜಮೆ ಮಾಡಬೇಕು(ಕ.ಸ.ಸೇ.ನಿ. 114(2ಬಿ).
ಸರ್ಕಾರಿ ನೌಕರನನ್ನು ಸೇವೆಯಿಂದ ವಜಾ ಮಾಡಿದಾಗ ಅಥವಾ ತೆಗೆದು ಹಾಕಿದಾಗ ಅಥವಾ ಸೇವೆಯಲ್ಲಿರುವಾಗಲೇ ಮೃತನಾದಾಗ ಆ ಕ್ಯಾಲೆಂಡರ್ ತಿಂಗಳಿನ ಹಿಂದಿನ ಕೊನೆಯವರೆಗೆ ಪೂರ್ಣಗೊಂಡ ಪ್ರತಿ ತಿಂಗಳಿಗೆ 5/3 ದಿನಗಳ ದರದಲ್ಲಿ ಅರ್ಧ ವೇತನ ರಜೆಯನ್ನು ಜಮೆ ಮಾಡಬೇಕು.
ಉದಾ: ಒಂದು ವರ್ಷದಲ್ಲಿ 120 ದಿನಗಳ ಬಿಡುವಿರುವ ಇಲಾಖೆಯ ಒಬ್ಬ ಸರ್ಕಾರಿ ನೌಕರನನ್ನು ಬಿಡುವಿನ ದಿನಗಳಾದ 8.5.2005 ರಿಂದ 27.5.2005 ರವರೆಗೆ 20 ದಿನಗಳು ದಾಸ್ತಾನು ಪರಿಶೀಲನಾ ಕಾರ್ಯಕ್ಕಾಗಿ ನಿಯೋಜಿಸಿದೆ. ಈ ಅವಧಿಯಲ್ಲಿ ಅವರಿಗೆ ಲಭ್ಯವಾಗುವ ಹೆಚ್ಚುವರಿ ಗಳಿಕೆ ರಜೆಯನ್ನು ಲೆಕ್ಕಾಚಾರ ಮಾಡಿ.
ಹೆಚ್ಚುವರಿ ಗಳಿಕೆ ರಜೆ = (30(ಉಪಯೋಗಿಸದ ಬಿಡುವು) / (ವರ್ಷದ ಒಟ್ಟು ಬಿಡುವಿನ ಅವಧಿ)
= (3020) /120 = 5 ದಿನಗಳು (ಕ.ಸ.ಸೇ.ನಿ. 113(3-ಎ) ಬಿಡುವಿರುವ ಇಲಾಖೆಯ ಸರ್ಕಾರಿ ನೌಕರನು ಯಾವುದೇ ವರ್ಷದಲ್ಲಿ ಯಾವುದೇ ಬಿಡುವನ್ನು ಉಪಯೋಗಿಸಿಕೊಳ್ಳದೇ ಇದ್ದರೆ ಆ ವರ್ಷಕ್ಕೆ ಸಂಬಂಧಪಟ್ಟಂತೆ ಕ.ಸ.ಸೇ.ನಿ. 112 ರಂತೆ ಗಳಿಕೆ ರಜೆಯನ್ನು ಅನುಮತಿಸಲಾಗುತ್ತದೆ.
(ಕ.ಸ.ಸೇ.ನಿ. 113(3ಬಿ)) ಬಿಡುವಿರುವ ಇಲಾಖೆಯಿಂದ ಬಿಡುವಿರದ ಇಲಾಖೆಗೆ ವರ್ಗಾವಣೆಯಾದಾಗ ಸರ್ಕಾರಿ ನೌಕರನು ಅಂತಹ ವರ್ಗಾವಣೆಯ ಹಿಂದಿನ ಅರ್ಧ ಕ್ಯಾಲೆಂಡರ್ ವರ್ಷದಿಂದ ವರ್ಗಾವಣೆಯ ದಿನಾಂಕದವರೆಗೆ ಪೂರ್ಣಗೊಂಡ ಪ್ರತಿಯೊಂದು ತಿಂಗಳಿಗೆ 5/6 ದಿನದ ದರದಲ್ಲಿ ಗಳಿಕೆ ರಜೆ ಲೆಕ್ಕ ಹಾಕಲಾಗುವುದು. ವರ್ಗಾವಣೆಯಾದ ದಿನಾಂಕದಿಂದ ಅವನು ಬಿಡುವಿಲ್ಲದ ಇಲಾಖಾ ನೌಕರನಿಗೆ ಅನ್ವಯವಾಗುವ ಗಳಿಕೆ ರಜೆಯನ್ನು ಪಡೆಯಲು ಹಕ್ಕುಳ್ಳವನಾಗಿರುತ್ತಾನೆ.
(ಕ.ಸ.ಸೇ.ನಿ. 113(6ಎ)) ವರ್ಗಾವಣೆಯಾದ ದಿನಾಂಕದಿಂದ ಅರ್ಧ ಕ್ಯಾಲೆಂಡರ್ ವರ್ಷದ ಕೊನೆಯವರೆಗೆ ಅವನ ಸೇವೆಯು ಪೂರ್ತಿಗೊಂಡ ಪ್ರತಿಯೊಂದು ತಿಂಗಳಿಗೆ 5/6 ದಿನದ ದರದಲ್ಲಿ ಗಳಿಕೆ ರಜೆಯನ್ನು ಲೆಕ್ಕಹಾಕಲಾಗುವುದು.
(ಕ.ಸ.ಸೇ.ನಿ. 113(7ಎ)) 6. ಅರ್ಧ ವೇತನ ರಜೆ (ಏಚ್ಝ್ಛ ಕಚಢ ಔಛಿಚಡಛಿ): ಪ್ರತಿಯೊಂದು ಕ್ಯಾಲೆಂಡರ್ ವರ್ಷದ ಜನವರಿ ಮತ್ತು ಜುಲೈ ತಿಂಗಳ ಮೊದಲ ದಿನಾಂಕದಂದು ಪ್ರತಿ ಅರ್ಧವರ್ಷಕ್ಕೆ 10 ದಿನಗಳಂತೆ 2 ಕಂತುಗಳಲ್ಲಿ ಮುಂಚಿತವಾಗಿ ಜಮೆ ಮಾಡಬೇಕು. ಇದು 1.7.95 ರಿಂದ ಜಾರಿಗೆ ಬಂದಿದೆ. ಅರ್ಧ ವೇತನ ರಜೆಯು ಬಿಡುವಿರುವ ಇಲಾಖೆಯ ಸರ್ಕಾರಿ ನೌಕರರಿಗೆ ಅನ್ವಯಿಸುವುದಿಲ್ಲ.
ಸರ್ಕಾರಿ ನೌಕರನು ಯಾವುದೇ ಅರ್ಧ ವರ್ಷದಲ್ಲಿ ಯಾವುದೇ ಅಸಾಧಾರಣ ರಜೆ, ಗೈರುಹಾಜರಿ ಅವಧಿ, ಅಮಾನತ್ತಿನ ಅವಧಿ, ಲೆಕ್ಕಕ್ಕಿಲ್ಲದ ಅವಧಿ ಅಥವಾ ಕರ್ತವ್ಯವಲ್ಲದ ಅವಧಿಯೆಂದು ತೀರ್ವನಿಸಿದಾಗ ಈ ಅವಧಿಯ 1/18 ಭಾಗವನ್ನು, 10 ದಿನಗಳ ಗರಿಷ್ಠ ಮಿತಿಗೊಳಪಟ್ಟು ಕಡಿಮೆ ಮಾಡಬೇಕು.
ಸರ್ಕಾರಿ ನೌಕರನು ನೇಮಕಗೊಂಡ ಪ್ರತಿಪೂರ್ಣ ಕ್ಯಾಲೆಂಡರ್ ತಿಂಗಳಿಗೆ 5/3 ದಿನಗಳ ದರದಲ್ಲಿ ಅರ್ಧ ವೇತನ ರಜೆಯನ್ನು ಜಮೆ ಮಾಡಬೇಕು(ಕ.ಸ.ಸೇ.ನಿ. 112 (2ಎ)
ಸರ್ಕಾರಿ ನೌಕರನು ನಿವೃತ್ತಿ ಅಥವಾ ರಾಜೀನಾಮೆ ನೀಡಿದಾಗ ಸೇವೆಯು ಪೂರ್ಣಗೊಂಡ ಪ್ರತಿ ಕ್ಯಾಲೆಂಡರ್ ತಿಂಗಳಿಗೆ 5/3 ದಿನಗಳ ದರದಲ್ಲಿ ಅರ್ಧವೇತನ ರಜೆಯನ್ನು ಜಮೆ ಮಾಡಬೇಕು(ಕ.ಸ.ಸೇ.ನಿ. 114(2ಬಿ).
ಸರ್ಕಾರಿ ನೌಕರನನ್ನು ಸೇವೆಯಿಂದ ವಜಾ ಮಾಡಿದಾಗ ಅಥವಾ ತೆಗೆದು ಹಾಕಿದಾಗ ಅಥವಾ ಸೇವೆಯಲ್ಲಿರುವಾಗಲೇ ಮೃತನಾದಾಗ ಆ ಕ್ಯಾಲೆಂಡರ್ ತಿಂಗಳಿನ ಹಿಂದಿನ ಕೊನೆಯವರೆಗೆ ಪೂರ್ಣಗೊಂಡ ಪ್ರತಿ ತಿಂಗಳಿಗೆ 5/3 ದಿನಗಳ ದರದಲ್ಲಿ ಅರ್ಧ ವೇತನ ರಜೆಯನ್ನು ಜಮೆ ಮಾಡಬೇಕು.
Subscribe to:
Posts (Atom)
ಹೆಚ್ಚು ಓದಿದವು
-
ಕಾಟಕ ಾಜದ ಪಚತದರುವ ಪವಗಾರ ಾಗಳ ವರ CATEGORY WISE CASTE LIST of KARNATAKA State Government Order No.SWD 225 BCA 2...
-
ರಜಾ ನಿಯಮಗಳು ( ಕೆ.ಸಿ.ಎಸ್.ಆರ್.ನಿಯಮ105 ರಿಂದ 206) ಸರ್ಕಾರಿ ನೌಕರರು ಈ ಕೆಳಕಂಡ ನಿಬಂಧನೆಗೆ ಒಳಪಟ್ಟು ರಜ ಸೌಲಭ್ಯ ಪಡೆಯಬಹುದು. - ಸಕ್ಷಮ ಪ್ರಾಧಿ...
-
1[ANNEXURE - “C” Rules Regulating Encashment of Earned Leave Surrendered (See Rule 118 of Karnataka Civil Services Rules) 1. For the purpos...
-
ಕರ್ನಾಟಕ ಸರ್ಕಾರ ಸಂಖ್ಯೆ : ಸಿಆಸುಇ 4 ಸೇಣವಿ 99 - ಕರ್ನಾಟಕ ಸರ್ಕಾರದ ಸಚಿವಾಲಯ , ಎಧಾನಸೌಧ , ಬೆಂಗಳೂರು , ದಿನಾಂಕ : 31 - 1 - 1989 ಅಧಿಕೃತ ಜ್ಞಾಪನ ವಿಷಯ : ಅನಧ...
-
1[ANNEXURE - B RULES REGULATING THE GRANT OF CASUAL LEAVE IN RESPECT OF KARNATAKA GOVERNMENT SERVANTS WITH EFFECT FROM 1ST JANUARY 1959 (GO...
-
Government of Karnataka Department of Treasuries Version 1.0 1 General FAQs on Bill Preparation & Submission 1. Mention the types of Bi...
-
THE KARNATAKA FINANCIAL CODE, 1958 NOTIFICATION No. FD I COD 58, dated 1st April 1958 In exercise of the powers conferred by clause (2) ...
-
Page number 1 GOVERNMENT OF KARNATRAKA Kamataka Government Secretariat . No . RDP 427 GPK 2017 . M . S Building Bangalore , Dated : - 21...
-
ಕರ್ನಾಟಕ ಸರ್ಕಾರ ಸಂಖ್ಯೆ : ಸಿಆಸುಇ 76 ಸೇವಿ 2018 ಕರ್ನಾಟಕ ಸರ್ಕಾರದ ಸಚಿವಾಲಯ , ವಿಧಾನಸೌಧ . ಬೆಂಗಳೂರು , ದಿನಾಂಕ : 21 . 01 . 2019 ಸುತ್ತೋಲೆ ವಿಷಯ : ಸರ್ಕಾರಿ...
-
ಕರ್ನಾಟಕ ಸರ್ಕಾರ ಸಂಖ್ಯೆ : ಸಿಆಸುಇ 21 ಎಸ್ಎಂಆರ್ 2018 ಕರ್ನಾಟಕ ಸರ್ಕಾರದ ಸಚಿವಾಲಯ , ವಿಧಾನಸೌಧ , ಬೆಂಗಳೂರು , ದಿನಾಂಕ :22.06.2018 ಸುತ್...