Monday, August 27, 2018

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಕುಂದು ಕೊರತೆ ನಿವಾರಣಾ ಪ್ರಾಧಿಕಾರಗಳ ನೇಮಕಾತಿ ವಿಧಾನ) ನಿಯಮಗಳು, 2018:

 ಸದರಿ ನಿಯಮದ ಮೂಲ ಕಡತಕ್ಕಾಗಿ ಈ ಕೆಳಗಿನ ಕೊಂಡಿಯನ್ನು ಕ್ಲಿಕ್‌ಇಸಿ:

http://rdpr.kar.nic.in/document/not_753_07_08_18.PDF

ಯೂನಿಕೋಡ್ ಅಥವ ಅಕ್ಸೆಸಿಬಲ್ ಆವೃತ್ತಿಗಾಗಿ ಈ ಕೆಳಗಿನ ಕೊಂಡಿಗೆ ಭೇಟಿ ನೀಡಿ:

https://drive.google.com/open?id=1keSzZDrQ1I9X6Q2QJKiv2tJfbB-jD7r_
ಆರ್. ಎಸ್. ಜಿ. ಇ. ತಂಡ.

Thursday, August 23, 2018

ಅಧಿಕೃತ ಸಭೆಗಳಲ್ಲಿ ನೀಡುವ ಟೀ/ಕಾಫೀ/ಅಲ್ಪೋಪಹಾರದ ಸಲುವಾಗಿ ಮಾಡುವ ವೆಚ್ಚವನ್ನು ಸೆಳೆಯುವ ಕುರಿತು.

ಓದುಗರ ಗಮನಕ್ಕೆ:
ಸದರಿ ಮಾಹಿತಿಯನ್ನು ರಾಜ್ಯ ಸರಕಾರಿ ಅಂಧ ನೌಕರರು  ಸ್ಕ್ರೀನ್ ರೀಡರ್ಗಳೊಂದಿಗೆ ಓದಲು ಅನುವಾಗುವಂತೆ ಯೂನಿಕೋಡ್ಗೆ ಪರಿವರ್ತಿಸಿ ಒದಗಿಸಲಾಗಿದ್ದು, ಅಧೀಕೃತ ವ್ಯವಹಾರಗಳಿಗೆ ಮೂಲ ಕಡತವನ್ನು ಪರಿಗಣಿಸತಕ್ಕದ್ದು.

ಕರ್ನಾಟಕ ಸರ್ಕಾರ
ಸಂಖ್ಯೆ: ಆಇ ೦೧ ಟಿಸಿಇ ೨೦೧೮ ಕರ್ನಾಟಕ ಸರ್ಕಾರದ ಸಚಿವಾಲಯ
ವಿಧಾನ ಸೌಧ
ಬೆಂಗಳೂರು, ದಿನಾಂಕ:೨೮.೦೭.೨೦೧೮
ಸುತ್ತೋಲೆ
ವಿಷಯ:
ಅಧಿಕೃತ ಸಭೆಗಳಲ್ಲಿ ನೀಡುವ ಟೀ/ಕಾಫೀ/ಅಲ್ಪೋಪಹಾರದ ಸಲುವಾಗಿ ಮಾಡುವ ವೆಚ್ಚವನ್ನು ಸೆಳೆಯುವ ಕುರಿತು.
********

ಸಾಧಿಲ್ವಾರು ವೆಚ್ಚ ಕೈಪಿಡಿ ೧೯೫೮ರ ನಿಯಮ ೫೫ (೫೧)ರಲ್ಲಿ ಅಧಿಕೃತ ಸಭೆಗಳಲ್ಲಿ ನೀಡುವ ಟೀ/ಕಾಫೀ/ಅಲ್ಪೋಪಹಾರದ ಸಲುವಾಗಿ ವೆಚ್ಚವನ್ನು ಭರಿಸಲು ಅವಕಾಶ ಕಲ್ಪಿಸಲಾಗಿದೆ. ಈ ವೆಚ್ಚಗಳನ್ನು ಸಚಿವಾಲಯದ ಅಧಿಕಾರಿಗಳು ಲೆಕ್ಕಪತ್ರ ಶಾಖೆಯಲ್ಲಿನ ಇಂಪ್ರೆಸ್ಟ್/ಸಬ್‌ಇಂಪ್ರೆಸ್ಟ್ ಮೊತ್ತಗಳಲ್ಲಿ ಭರಿಸಬೇಕಾಗುತ್ತದೆ. ಇಲಾಖಾ ಮುಖ್ಯಸ್ಥರು ಹಾಗೂ ಇತರೆ ಅಧಿಕಾರಿಗಳು ತಮಗೆ ಈಗಾಗಲೇ ಮಂಜೂರಾಗಿರುವ ಖಾಯಂ ಮುಂಗಡದಿಂದ ಭರಿಸಬೇಕಾಗುತ್ತದೆ.

೨. ಖಾಯಂ ಮುಂಗಡದಿಂದ ಭರಿಸಿರುವ ವೆಚ್ಚಗಳನ್ನು ಮರುತುಂಬಿಸಿಕೊಳ್ಳುವ ವಿಧಾನವನ್ನು ಸಾ.ವೆ.ಕೈ. ನಿಯಮ ೨೩, ೨೪ ರಲ್ಲಿ ವಿವರಿಸಲಾಗಿದೆ. ಅದರಂತೆ, ಖಾಯಂ ಮುಂಗಡದಿಂದ ಭರಿಸಿರುವ ವೆಚ್ಚಗಳನ್ನು, ಸಾದಿಲ್ವಾರು ಬಿಲ್ಲುಗಳನ್ನು ಹಾಜರು ಪಡಿಸುವ ಮೂಲಕ ಮರು ತುಂಬಿಸಿ ಕೊಳ್ಳಬೇಕಾಗಿರುತ್ತದೆ. ರೂ.೧೦೦೦/-ಕ್ಕೆ ಒಳಪಟ್ಟ ಉಪ ವೋಚರ್‌ಗಳನ್ನು ಡಿಡಿಓ ರವರ ಕಚೇರಿಯಲ್ಲಿ ನಿರ್ವಹಿಸಬೇಕಾಗಿರುತ್ತದೆ. ಕರ್ನಾಟಕ ಆರ್ಥಿಕ ಸಂಹಿತೆ ಅನುಚ್ಛೇದ ೫೮(ಎ)(ಬಿ) ಮತ್ತು ಸಾದಿಲ್ವಾರು ವೆಚ್ಚ ಕೈಪಿಡಿ ನಿಯಮ ೪೧ರ ಪ್ರಕಾರ ರೂ.೧೦೦೦/-ಕ್ಕೆ ಮೀರಿದ ಉಪ ವೋಚರ್ ಗಳನ್ನು ಸೂಕ್ತವಾಗಿ ರದ್ದುಪಡಿಸಿ ಸಾದಿಲ್ವಾರು ಬಿಲ್ಲಿನೊಂದಿಗೆ ಲಗತ್ತಿಸಿ ಖಜಾನೆಗೆ ಸಲ್ಲಿಸಬೇಕಾಗಿರುತ್ತದೆ.

೩. ಸರ್ಕಾರದ ಆದೇಶ ಸಂಖ್ಯೆ ಆಇ ೨ ಟಿಸಿಇ ೨೦೧೨, ಬೆಂಗಳೂರು ದಿನಾಂಕ: ೧೫.೧೨.೨೦೧೨ ರಲ್ಲಿ ಸಾದಿಲ್ವಾರು ವೆಚ್ಚ ಕೈಪಿಡಿ ೧೯೫೮ರ ನಿಯಮ ೫೫(೫೧)ರ ಪ್ರಕಾರ ವಿವಿಧ ಅಧಿಕಾರಿಗಳಿಗೆ ಹಾಗೂ ರಾಜ್ಯ ಮಟ್ಟದ ಮತ್ತು ಜಿಲ್ಲಾ ಮಟ್ಟದ ಸಮಿತಿಗಳು ಅಧಿಕೃತ ಸಭೆಗಳಲ್ಲಿ ನೀಡುವ ಟೀ/ಕಾಫೀ/ಅಲ್ಪೋಪಹಾರದ ಸಲುವಾಗಿ ಮಾಡುವ ವೆಚ್ಚದ ಆರ್ಥಿಕ ಮಿತಿಯನ್ನು ಪರಿಷ್ಕರಿಸಿ ಆದೇಶಿಸಿದೆ. ಈ ಆರ್ಥಿಕ ಮಿತಿಯನ್ನು ಒಂದು ವμದ ಅವಧಿಗೆ ಮಾತ್ರ ನಿಗದಿಗೊಳಿಸಲಾಗಿದೆ.
 ೪. ಆದರೆ, ಕೆಲವೊಂದು ಅಧಿಕಾರಿಗಳು ಮೇಲ್ಕಂಡ ಆದೇಶದಲ್ಲಿ ನಿಗದಿ ಪಡಿಸಿರುವ ವಾರ್ಷಿಕ ವೆಚ್ಚದ ಮೊತ್ತವನ್ನು ಒಮ್ಮೆಗೆ ಒಟ್ಟಿಗೆ (ಟumಠಿsum) ಸ್ವೀಕರ್ತನ ರಸೀದಿ ಅಥವಾ ಸಾದಿಲ್ವಾರು ಬಿಲ್ಲಿನ ಮೂಲಕ ಸೆಳೆಯುವಾಗ ವೆಚ್ಚದ ಉಪ ವೋಚರ್‌ಗಳನ್ನು ಲಗತ್ತಿಸದೆ ಮುಂಗಡ ರಸೀದಿ (Pಡಿe-ಖeಛಿeiಠಿಣ) ಲಗತ್ತಿಸಿ ಸೆಳೆಯಲಾಗುತ್ತಿರುವುದನ್ನು ಖಜಾನೆ ಅಧಿಕಾರಿಗಳು ಸರ್ಕಾರದ ಗಮನಕ್ಕೆ ತಂದಿರುತ್ತಾರೆ. ಇದು ತಪ್ಪು ಪ್ರಕ್ರಿಯೆಯಾಗಿದ್ದು, ಕರ್ನಾಟಕ ಆರ್ಥಿಕ ಸಂಹಿತೆ ಮತ್ತು ಸಾದಿಲ್ವಾರು ವೆಚ್ಚ ಕೈಪಿಡಿ ನಿಯಮಗಳಿಗೆ ವಿರುದ್ಧವಾಗಿರುತ್ತದೆ. ಆದ್ದರಿಂದ ಪ್ರತಿ ಬಾರಿ ವೆಚ್ಚವನ್ನು ಭರಿಸಿದ ನಂತರ ಭರಿಸಿದ ವೆಚ್ಚವನ್ನು ಮಾತ್ರ ಉಪ ವೋಚರ್‌ಗಳೊಂದಿಗೆ ಸಾದಿಲ್ವಾರು ಬಿಲ್ಲಿನ (ಆ.ಅ) ಮೂಲಕ ಸೆಳೆಯಬೇಕಾಗಿರುತ್ತದೆ.
 ೫. ಒಂದು ವೇಳೆ ಅಧಿಕಾರಿಗಳು ವರ್ಗಾವಣೆ ನಿವೃತ್ತಿ ಮುಂತಾದ ಕಾರಣಗಳಿಂದ ಹುದ್ದೆಯನ್ನು ತೆರವುಗೊಳಿಸಿದ್ದಲ್ಲಿ ಹೊಸದಾಗಿ ಸದರಿ ಹುದ್ದೆಗೆ ನಿಯೋಜನೆಗೊಂಡ ಅಧಿಕಾರಿಗಳು ಪುನಃ ಸದರಿ ಮೊತ್ತವನ್ನು ಸೆಳೆಯುತ್ತಿರುವುದು ಸಹ ಗಮನಕ್ಕೆ ಬಂದಿರುತ್ತದೆ. ಇದು ಸಹ ನಿಯಮಗಳಿಗೆ ವಿರುದ್ಧವಾಗಿದ್ದು ನಿಗದಿಪಡಿಸಿರುವ ವಾರ್ಷಿಕ ಮಿತಿಯು ವೈಯಕ್ತಿಕವಾಗಿ ಪ್ರತಿಯೊಬ್ಬ ಅಧಿಕಾರಿಗಳ ಬದಲಿಗೆ ಆ ಹುದ್ದೆಯ ಕಚೇರಿಗೆ ಅನ್ವಯವಾಗುತ್ತದೆ. ಸದರಿ ಕಚೇರಿಯಲ್ಲಿ ಯಾವುದೇ ಕಾರಣಕ್ಕೂ ವಾರ್ಷಿಕ ಮಿತಿಯನ್ನು ಮೀರುವಂತಿಲ್ಲ.
೬. ಆದುದರಿಂದ ಅಧಿಕೃತ ಸಭೆಗಳಲ್ಲಿ ನೀಡುವ ಟೀ/ಕಾಫೀ/ಅಲ್ಪೋಪಹಾರಗಳ ವೆಚ್ಚಗಳನ್ನು ಒಮ್ಮೆಗೆ ಸೆಳೆಯದೆ ವೆಚ್ಚ ಭರಿಸಿದ ನಂತರ ಭರಿಸಿದ ವೆಚ್ಚವನ್ನು ಸಾದಿಲ್ವಾರು ಬಿಲ್ಲುಗಳ ಮೂಲಕ ಮಾತ್ರ ಸೆಳೆಯಲು ಸೂಚಿಸಲಾಗಿದೆ.
೭. ಈ ಕುರಿತು ಖಜಾನೆಗಳಲ್ಲಿ ಪರಿಶೀಲಿಸಲು ಅನುಕೂಲವಾಗುವಂತೆ ಸಂಬಂಧಿಸಿದ ಹಣ ಸೆಳೆಯುವ ಮತ್ತು ಬಟವಾಡೆ ಮಾಡುವ ಅಧಿಕಾರಿಯು ಈ ಸಂಬಂಧದ ಸಾದಿಲ್ವಾರು ಬಿಲ್ಲುಗಳಲ್ಲಿ ಈ ಕೆಳಕಂಡಂತೆ ಪ್ರಮಾಣ ಪತ್ರವನ್ನು ದಾಖಲಿಸಿ ದೃಢೀಕರಿಸಲು ಸಹ ಸೂಚಿಸಿದೆ.

ಅಧಿಕೃತ ಸಭೆಗಳಲ್ಲಿ ನೀಡುವ ಟೀ/ಕಾಫೀ/ಅಲ್ಪೋಪಹಾರಗಳ ಸಲುವಾಗಿ ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಮಾಡಿರುವ ಒಟ್ಟು ವೆಚ್ಚವು ಈ ಬಿಲ್ಲಿನಲ್ಲಿ ಸೆಳೆದಿರುವ ಮೊತ್ತವು ಸೇರಿದಂತೆ ___________ ರೂ. ಆಗಿದ್ದು, ಮಂಜೂರು ಮಾಡಿರುವ ವಾರ್ಷಿಕ ಆರ್ಥಿಕ ಮಿತಿಯೊಳಗೆ ಇರುತ್ತದೆ ಎಂದು ಪ್ರಮಾಣೀಕರಿಸಿದೆ.

(ಪವನ್‌ಕುಮಾರ್ ಮಾಲಪಾಟಿ)
ಸರ್ಕಾರದ ಉಪ ಕಾರ್ಯದರ್ಶಿ (ಆ ಮತ್ತು ಸಂ)
ಆರ್ಥಿಕ ಇಲಾಖೆ.
ಇವರಿಗೆ:-
೧. ನಿರ್ದೇಶಕರು, ಕರ್ನಾಟಕ ರಾಜ್ಯ ಪತ್ರ ಬೆಂಗಳೂರು ಇವರಿಗೆ ಮುಂದಿನ ಸಂಚಿಕೆಯಲ್ಲಿ ಪ್ರಕಟಿಸಲು ಕೋರಲಾಗಿದೆ.
೨. ಪ್ರಧಾನ ಮಹಾಲೇಖಪಾಲರು, ಲೆಕ್ಕಪತ್ರಗಳು ಮತ್ತು ಹಕ್ಕುಗಳು, ಕರ್ನಾಟಕ, ರೆಸಿಡೆನ್ಸಿ ರಸ್ತೆ, ಅಂಚೆ ಪೆಟ್ಟಿಗೆ ೫೩೨೬/೫೩೬೯. ಬೆಂಗಳೂರು.
೩. ಪ್ರಧಾನ ಮಹಾಲೇಖಪಾಲರು, (ಲೆಕ್ಕ ತನಿಖೆ-೧), ರೆಸಿಡೆನ್ಸಿ ರಸ್ತೆ, ಅಂಚೆ ಪೆಟ್ಟಿಗೆ ೫೩೨೯/೫೩೬೯, ಕರ್ನಾಟಕ ಬೆಂಗಳೂರು.
೪. ಪ್ರಧಾನ ಮಹಾಲೇಖಪಾಲರು, (ಲೆಕ್ಕ ತನಿಖೆ-೨), ರೆಸಿಡೆನ್ಸಿ ರಸ್ತೆ, ಅಂಚೆ ಪೆಟ್ಟಿಗೆ ೫೩೨೯/೫೩೬೯, ಕರ್ನಾಟಕ ಬೆಂಗಳೂರು.
೫. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು /ಪ್ರಧಾನ ಕಾರ್ಯದರ್ಶಿಗಳು/ಕಾರ್ಯದರ್ಶಿಗಳು.
೬. ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, (ಖಜಾನೆ-೨) ಮತ್ತು ಪದನಿಮಿತ್ತ ಖಜಾನೆ ಆಯುಕ್ತರು, ಆರ್ಥಿಕ ಇಲಾಖೆ ವಾಣಿಜ್ಯ ತೆರಿಗೆ ಕಟ್ಟಡ, ಗಾಂಧಿ ನಗರ ಬೆಂಗಳೂರು-೯.
೭. ಎಲ್ಲಾ ಇಲಾಖಾ ಮುಖ್ಯಸ್ಥರುಗಳು.
೮. ನಿರ್ದೇಶಕರು, ಖಜಾನೆ ಇಲಾಖೆ, ಬೆಂಗಳೂರು.
೯. ಎಲ್ಲಾ ಜಿಲ್ಲಾಧಿಕಾರಿಗಳು.
೧೦. ಎಲ್ಲಾ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ.
೧೧. ಆರ್ಥಿಕ ಇಲಾಖೆಯ ಸರ್ಕಾರದ ಜಂಟಿ ಕಾರ್ಯದರ್ಶಿಗಳು/ಉಪ ಕಾರ್ಯದರ್ಶಿಗಳು/ಅಧೀನ ಕಾರ್ಯದರ್ಶಿಗಳು/ ಶಾಖಾಧಿಕಾರಿಗಳು.
೧೨. ಎಲ್ಲಾ ಜಿಲ್ಲಾ ಖಜಾನೆಗಳಾಧಿಕಾರಿಗಳು.
೧೩. ಶಾಖಾ ರಕ್ಷಾ ಕಡತ/ಹೆಚ್ಚುವರಿ ಪತ್ರಿಗಳು.
























A Brief Overview of Public Records and their Maintenance:

Dear folks,
being the public officials, every moment we have to deal with "Public Records in order to discharge our duty.
Hence, it is of at most important to have knowledge about the legal definition and creation of Public Records, their classification-maintenance  and the definition
of the files.
For detailed information one can study the act and rules enacted by the state government, which is being mentioned at the end of this post.

1. What Constitutes the Public Records?
The public records” includes:
(i)    any document, manuscript and file;
(ii)    any microfilm, microfiche and facsimile copy of a document;
(iii)    any reproduction of image or images embodied in such microfilm, whether enlarged or not; and
(iv)    any other material produced by a computer or by any other device of any records creating agency.
2. Which are the records creating agencies?
 (i) in relation to the State Government, any Ministry, Department or office of the State Government; (ii) in relation to any statutory body or corporation wholly or substantially controlled or financed by the State Government or any commission or any committee constituted by the State Government, the offices of the said body, corporation, commission or committee;
3. Classification of Public Records:
The records shall be classified as A, B, C, D, the features of which are explained hereunder. The officer competent to approve such classification is also specified therein,-
(i)    ‘A’    class.-    To    be    preserved indefinitely. This class shall be allotted to
files in which important questions have been discussed or which contain orders establishing important precedents or general instructions or rulings of a permanent or important nature. These files shall be printed wherever necessary. Classification shall be approved by an officer not below the rank of a Deputy Secretary to Government or Head of the Department.
(ii)    ‘B’ class.- To be preserved for 30 years. This class shall be allotted to files of the same category as above but which are unlikely to be required for reference after a few decades. Classification shall be approved by an officer not below the rank of Under Secretary to Government or Group “A” officer .
(iii)    ‘C’ class.- To be preserved for 10 years. This class shall be allotted to files of secondary importance which are to be preserved for a very limited number of years. An Officer not below the rank of Section Officer or Group ‘B’ Officer shall approve this classification.
(iv)    ‘D’ class.- To be destroyed after one year in the end of the year in which the file was closed. This class shall consist of files, the contents of which are of a purely temporary nature and which need not be preserved for a long period. An Officer not below the rank of Section Officer shall approve this classification.
4. What does the File Means?
“File” means a collection of papers relating to the Public Records on a specific subject matter consisting of correspondence, notes and appendix thereto and assigned with a file number.
5. What is the meaning of the term Recording?
“Recording” means the process of closing a file after action on all issues considered thereon has been completed
Reference:
"THE KARNATAKA STATE PUBLIC RECORDS ACT, 2010" and "The Karnataka State Public Records Rules, 2013".
Brought you by RSGE [Responsible State Government Employees] WhatsApp group.

Thursday, August 16, 2018

**RSGE**::: ಆಗಸ್ಟ್ ೧೭ರ ರಜೆ ಕುರಿತ ಆದೇಶ

ಕರ್ನಾಟಕ ಸರ್ಕಾರ
ಸಂಖ್ಯೆ: ಸಿಆಸುಇ 36 ಹೆಚ್ಹೆಚ್ಎಲ್ 2018
ಕರ್ನಾಟಕ ಸರ್ಕಾರದ ಸಚಿವಾಲಯ,
ವಿಧಾನ ಸೌಧ,
ಬೆಂಗಳೂರು, ದಿನಾಂಕ: 16.08.2018
ಅಧಿಸೂಚನೆ
ಭಾರತದ ಮಾಜಿ ಪ್ರಧಾನ ಮಂತ್ರಿಗಳಾದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಇವರ
ನಿಧನಕ್ಕೆ ರಾಜ್ಯ ಸರ್ಕಾರವು ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ.
ಪ್ರಸ್ತುತ ರಾಜ್ಯದಲ್ಲಿ ಹಲವೆಡೆ ಭಾರಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಇರುವ ಕಾರಣ ತುರ್ತು
ಪರಿಸ್ಥಿತಿಯನ್ನು ನಿಭಾಯಿಸುವ ಮತ್ತು ಪರಿಹಾರ ಒದಗಿಸುವ ಕಾರ್ಯಾಚರಣೆಯಲ್ಲಿ ತೊಡಗಿರುವವರನ್ನು
ಹೊರತುಪಡಿಸಿ ಉಳಿದವರಿಗೆ ಅನ್ವಯಿಸುವಂತೆ ದಿವಂಗತರ ಗೌರವಾರ್ಥವಾಗಿ ದಿನಾಂಕ: 17.08.2018 ರಂದು
ಶುಕ್ರವಾರ ರಾಜ್ಯದಾದ್ಯಂತ ಸಾರ್ವಜನಿಕ ಸರ್ಕಾರಿ ಕಛೇರಿಗಳಿಗೆ ಮತ್ತು ಎಲ್ಲಾ ಶಾಲಾ ಕಾಲೇಜುಗಳಿಗೆ
(ಅನುದಾನ ಪಡೆಯುವ ಎಲ್ಲಾ ವಿದ್ಯಾ ಸಂಸ್ಥೆಗಳಿಗೂ ಸೇರಿದಂತೆ) ಹಾಗೂ ಸರ್ಕಾರಿ ಸ್ವಾಮ್ಯದ ಅಂಗ.
ಸಂಸ್ಥೆಗಳು ಒಳಗೊಂಡಂತೆ ರಜೆ ಘೋಷಿಸಿದೆ.
ದಿನಾಂಕ: 16.08.2018 ರಿಂದ 22.08.2018 ರವರೆಗೆ (ಎರಡೂ ದಿನಗಳು ಸೇರಿದಂತೆ) ಏಳು
ದಿನಗಳು ರಾಜ್ಯಾದ್ಯಾಂತ ಶೋಕವನ್ನು ಆಚರಿಸಲಾಗುವುದು. ಈ ಅವಧಿಯಲ್ಲಿ ಯಾವುದೇ ಸಾರ್ವಜನಿಕ
ಮನರಂಜನಾ ಕಾರ್ಯಕ್ರಮಗಳು ಇರುವುದಿಲ್ಲ. ನಿಯತವಾಗಿ ಹಾರಿಸಲ್ಪಡುವ ಕಟ್ಟಡಗಳ ಮೇಲೆ
ರಾಷ್ಟ್ರಧ್ವಜವನ್ನು ಅರ್ಧ ಮಟ್ಟದಲ್ಲಿ ಹಾರಿಸಲಾಗುವುದು.
ಸದರಿ ಆದೇಶವು ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ ಆಕ್ಟ್ 1881 ರ ಪ್ರಕಾರವು ಕೂಡಾ
ಸಾರ್ವಜನಿಕ ರಜೆಯೆಂದು ಘೋಷಿಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ
ಮತ್ತು ಅವರ ಹೆಸರಿನಲ್ಲಿ, ೧
&AMM
(ನವೀನ್ ಜನಸ್ಪು
ಸರ್ಕಾರದ ಅಧೀನ ಕಾರ್ಯದರ್ಶಿಗಳು,
ಸಿಆಸುಇ(ರಾಜ್ಯ ಶಿಷ್ಠಾಚಾರ)
ಇವರಿಗೆ:
1) ಮಹಾಲೇಖಪಾಲರು, ಕರ್ನಾಟಕ, ಬೆಂಗಳೂರು. |
2) ಮಾನ್ಯ ರಾಜ್ಯಪಾಲರ ಪ್ರಧಾನ ಕಾರ್ಯದರ್ಶಿಗಳು, ರಾಜ ಭವನ, ಬೆಂಗಳೂರು.
3) ಸರ್ಕಾರದ ಎಲ್ಲಾ ಪ್ರಧಾನ ಕಾರ್ಯದರ್ಶಿಗಳು/ಕಾರ್ಯದರ್ಶಿಗಳು.
4) ಮುಖ್ಯ ಮಾಹಿತಿ ಆಯುಕ್ತರು, ಮಾಹಿತಿ ಆಯೋಗ, ಬೆಂಗಳೂರು
5) ರಿಜಿಸ್ಟ್ರಾರ್ ಜನರಲ್, ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು.
6) ರಿಜಿಸ್ಟ್ರಾರ್, ಕರ್ನಾಟಕ ಲೋಕಾಯುಕ್ತ, ಬೆಂಗಳೂರು
7) ರಿಜಿಸಾರ್, ಕರ್ನಾಟಕ ಆಡಳಿತ ನ್ಯಾಯಮಂಡಳಿ, ಬೆಂಗಳೂರು

**RSGE**::: WIRELESS MESSAGE/CRASH FROM: HOME atal bihari vajipai

NEW DELHI
TO: CHIEF SECRETARIES OF ALL STATE GOVERNMENTS &ADMINISTRATORS OF
UNION TERRITORIES
REPEAT: SECRETARIES TO GOVERNORS/ LT. GOVERNORS OF ALL STATES
UNION TERRITORY ADMINSTRATIONS
DATED:16.08.2018
NO.3/3/2018-PUBLIC.
THE GOVERNMENT OF INDIA ANNOUNCE WITH PROFOUND SORROW THE
DEATH OF SHRI ATAL BIHARI VAJPAYEE, FORMER PRIME MINISTER OF INDIA
ON 16TH AUGUST 2018, AT AIIMS HOSPITAL, NEW DELHI.
2. AS A MARK OF RESPECT TO THE DEPARTED DIGNITARY, IT HAS BEEN
DECIDED THAT SEVEN DAYS OF STATE MOURNING WILL BE OBSERVED
THROUGHOUT INDIA FROM 16.08.2018 TO 22.08.2018 BOTH DAYS INCLUSIVE (
DURING THIS PERIOD THE NATIONAL FLAG WILL BE FLOWN AT HALF MAST
THROUGHOUT INDIA WHERE IT IS REGULARLY FLOWN AND THERE WILL BE NO
IT HAS
OFFICIAL ENTERTAINMENT DURING THE PERIOD OF STATE MOURNING
ALSO BEEN DECIDED THAT THE STATE FUNERAL WILL BE ACCORDED TO LATE
SHRI ATAL BIHARI VAJPAYEE (
3. NATIONAL FLAG SHALL ALSO FLY HALF MAST ON THE DAY OF FUNERAL
IN ALL INDIAN MISSIONS / HIGH COMMISSIONS OF INDIA ABROAD()
4.
REQUEST KINDLY TAKE ACTION ACCORDINGLY ()
صلہ
1678418
(SATPAL CHOUHAN)
ADDITIONAL SECRETARY TO THE GOVT. OF INDIA
MINISTRY OF HOME AFFAIRS
TEL: 011-2309 3178

**RSGE**::: ಮುಂಬಡ್ತಿ ಹಿಂಬಡ್ತಿಗೆ ಹಿನ್ನಡೆ, | ಲ.ರಾಘವೇಂದ್ರ, ಸೇವಾ ಕಾನೂನು ತಜ್ಞರು

ರಾಷ್ಟ್ರದಲ್ಲಿ ಪ್ರಥಮ ಬಾರಿಗೆ ರಾಜ್ಯ ಸಿವಿಲ್ ಸೇವೆಯಲ್ಲಿ ಪರಿಶಿಷ್ಟ ವರ್ಗ ಮತ್ತು
ಜಾತಿಯವರಿಗೆ ಸಾಕಷ್ಟು ಪ್ರಾತಿನಿದ್ಯವಿಲ್ಲವೆಂದು ರಾಜ್ಯ ಸರ್ಕಾರವು 1978ರಿಂದ
ಪದೋನ್ನತಿಯಲ್ಲಿ ಮೀಸಲಾತಿ ಕಲ್ಪಿಸಿಕೊಟ್ಟಿತು. ಇದರಲ್ಲಿ ಶೇ.15ರಷ್ಟು ಪರಿಶಿಷ್ಟ
ಜಾತಿಯವರಿಗೆ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ.3ರಷ್ಟು ಮೀಸಲಾತಿಯನ್ನು ಸಿವಿಲ್ ಸೇವೆಯ
‘ಎ’ ಗುಂಪಿನ ಹುದ್ದೆಯ ಕಿರಿಯ ಶ್ರೇಣಿಯವರಿಗೂ ಪದೋನ್ನತಿ ಕಲ್ಪಿಸಲಾಯಿತು. ಇದರ ಪರಿಣಾಮ
ಸಾವಿರಾರು ಮಂದಿ ಪರಿಶಿಷ್ಟ ಗುಂಪಿನವರು ಮೀಸಲಾತಿ ಪಡೆದು ಇನ್ನುಳಿದ ಸಾಮಾನ್ಯ ವರ್ಗದ
ನೌಕರರಿಗೆ ಸ್ವಾಭಾವಿಕ ನ್ಯಾಯ ದೊರಕಿಸಿಕೊಡುವಲ್ಲಿ ಸರ್ಕಾರ ವಿಫಲವಾಯಿತು. ಈ ವೈಫಲ್ಯದ
ಹಿನ್ನೆಲೆಯಲ್ಲಿ ಹಲವಾರು ಸರ್ಕಾರಿ ನೌಕರರು ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಹಾಗೂ ಸರ್ವೇಚ್ಛ
ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ಸಂವಿಧಾನದ ಅನುಚ್ಛೇದ 14 ಮತ್ತು 16ರಂತೆ
ಪ್ರಶ್ನಿಸಲ್ಪಟ್ಟಿತು. ಈ ಹಿನ್ನೆಲೆಯಲ್ಲಿ 2011ರಲ್ಲಿ ಶ್ರೀ ಬಿ.ಕೆ. ಪವಿತ್ರ ಅವರು
(ಸಿವಿಲ್ ಅಪೀಲು ಸಂಖ್ಯೆ 2368/2011) ಸರ್ವೇಚ್ಛ ನ್ಯಾಯಾಲಯದಲ್ಲಿ ಪರಿಶಿಷ್ಟ ಗುಂಪಿನ
ಪದೋನ್ನತಿ ಬಗ್ಗೆ ತತ್ಪರಿಣಾಮದ ಜ್ಯೇಷ್ಠತೆ ಪ್ರಶ್ನಿಸಿ ಪ್ರಕರಣ ದಾಖಲಿಸಿದರು. ಇದರ
ವಿಚಾರಣೆ ನಡೆದು ಮಾನ್ಯ ಸರ್ವೇಚ್ಛ ನ್ಯಾಯಾಲಯವು ದಿನಾಂಕ 9.2.2017ರಂದು ರಾಜ್ಯ ಸಿವಿಲ್
ಸೇವೆಗಳಲ್ಲಿನ ಎಲ್ಲ ವೃಂದಗಳ ಜ್ಯೇಷ್ಠತಾ ಪಟ್ಟಿಗಳನ್ನು ಪರಿಷ್ಕರಿಸಿ ಪದೋನ್ನತಿ ನೀಡಲು
ಸೂಚಿಸಿತು. ಇದರನ್ವಯ ರಾಜ್ಯ ಸರ್ಕಾರವು ಅನೇಕ ಸರ್ಕಾರಿ ಆದೇಶ/ಸುತ್ತೋಲೆಗಳನ್ನು ಹೊರಡಿಸಿ
ಜ್ಯೇಷ್ಠತಾ ಪಟ್ಟಿಯನ್ನು ಪರಿಷ್ಕರಿಸಲು ಸೂಚಿಸಿತ್ತು. ಇದರಿಂದಾಗಿ ಸಾಮಾನ್ಯ ವರ್ಗದ
ಸುಮಾರು ನಾಲ್ಕು ಸಾವಿರ ನೌಕರರು ಮುಂಬಡ್ತಿ ಪಡೆದರು. ಅಷ್ಟೇ ಪ್ರಮಾಣದಲ್ಲಿ ಪರಿಶಿಷ್ಟ
ಗುಂಪಿನವರು ಹಿಂಬಡ್ತಿ ಪಡೆದರು. ಇದರ ಪರಿಣಾಮ ರಾಜ್ಯ ಸರ್ಕಾರವು ವರ್ಲ್ಡ್ ಬ್ಯಾಂಕಿನ
ಹಿತದೃಷ್ಟಿಯಿಂದ 2017ರಲ್ಲಿ ಅಧಿನಿಯಮ ರಚಿಸಿತು. ಈ ಅಧಿನಿಯಮವು 2002ರಲ್ಲಿ ರಾಜ್ಯ
ಸರ್ಕಾರವು ಕರ್ನಾಟಕ ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿದ ಸರ್ಕಾರಿ ನೌಕರರ
ಜ್ಯೇಷ್ಠತೆಯ ನಿರ್ಧಾರಣೆ ಅಧಿನಿಯಮ ರಚಿಸಿತು. 2002ರ ಮತ್ತು 2017ರ ಅಧಿನಿಯಮದ ಪ್ರಕರಣ 3
ಮತ್ತು 4 ಒಂದೇ ಆಗಿದ್ದು ಅದನ್ನು ಸರ್ವೇಚ್ಛ ನ್ಯಾಯಾಲಯವು ಬಿ.ಕೆ. ಪವಿತ್ರ ಪ್ರಕರಣದಲ್ಲಿ
ಅಧಿಕಾರಾತೀತವೆಂದು ಘೊಷಿಸಿ ಅಸಿಂಧುಗೊಳಿಸಿತು. ಈ ರೀತಿ ಅಸಿಂಧುಗೊಂಡ ಪ್ರಕರಣವನ್ನೇ
ಮತ್ತೆ ಹೊಸ ಅಧಿನಿಯಮದಲ್ಲಿ ಅಳವಡಿಸಿಕೊಂಡಿರುವುದು ಸರ್ವೇಚ್ಛ ನ್ಯಾಯಾಲಯದ ತೀರ್ಪಿಗೆ
ವ್ಯತಿರಿಕ್ತವಾಗಿದೆ. 2017ರ ಅಧಿನಿಯಮದ ಪ್ರಕರಣ 2(ಡಿ)ಯಲ್ಲಿ ಹಿಂಬಾಕಿ ಹುದ್ದೆಗಳನ್ನು
ಪದೋನ್ನತಿಗೆ ಸೇರಿಸಲಾಗಿದೆ. ಪ್ರಕರಣ 5ರಲ್ಲಿ ಪುನರಾವಲೋಕನಕ್ಕಾಗಿ ಅವಕಾಶ ಕಲ್ಪಿಸಿ
ರಾಜ್ಯ ಸಿವಿಲ್ ಸೇವೆಗಳಿಗೆ ಸೇರಿದ ಹುದ್ದೆಗಳಿಗೆ ಇರುವ ಎಲ್ಲಾ ಪದೋನ್ನತಿಗಳು ಮೀಸಲಾತಿ
ಆದೇಶಗಳ ವ್ಯಾಪ್ತಿಯೊಳಗೆ ಮತ್ತು ನೇಮಕಾತಿ ವಿಧಾನಕ್ಕೆ ಹಾಗೂ ಜ್ಯೇಷ್ಠತೆಗೆ ಸಂಬಂಧಿಸಿದ
ಇತರ ನಿಯಮಗಳಿಗೆ ಅನುಸಾರವಾಗಿ ಇರತಕ್ಕದ್ದು. ನೇಮಕಾತಿ ಪ್ರಾಧಿಕಾರವು ಪದೋನ್ನತಿಗಳು
ಕ್ರಮಾನುಸಾರವಾಗಿ ಮಾಡಲಾಗುತ್ತಿರುವುದನ್ನು ಖಚಿತಪಡಿಸಿಕೊಳ್ಳಲು ವ್ಯಕ್ತಿತ್ವದಲ್ಲಿರುವ
ಜ್ಯೇಷ್ಠತಾ ಪಟ್ಟಿಗಳನ್ನು ಪುನರಾವಲೋಕಿಸತಕ್ಕದ್ದು ಮತ್ತು ಪುನರಚಿಸತಕ್ಕದ್ದು ಎಂದು
ಸೂಚಿಸಿದೆ. ಇದು ಸಹ ಸರ್ವೇಚ್ಛ ನ್ಯಾಯಾಲಯದ ತೀರ್ಪನ್ನು ಜಾರಿಗೆ ತರುವಲ್ಲಿ
ಗೊಂದಲವನ್ನುಂಟು ಮಾಡಿದೆ. ಇದೇ ಪ್ರಕರಣದ ಪರಂತುಕದಲ್ಲಿ ಪುನರಾವಲೋಕನದ ನಂತರ ಪರಿಶಿಷ್ಟ
ಗುಂಪಿನ ಸರ್ಕಾರಿ ನೌಕರರನ್ನು ಮೀಸಲಾತಿ ಮತ್ತು ಬ್ಯಾಕ್​ಲಾಗ್ ಖಾಲಿ ಸ್ಥಾನಗಳಿಗಿಂತ
ಹೆಚ್ಚಾಗಿ ಅಥವಾ ಮೀಸಲಾತಿ ಕಲ್ಪಿಸಿರುವ ಮೀಸಲಾತಿಗೆ ಪ್ರತಿಯಾಗಿ ಪದೋನ್ನತಿ ನೀಡಿರುವುದು
ಕಂಡು ಬಂದರೆ ಕಾಲಕಾಲಕ್ಕೆ ಹೊರಡಿಸಿದ ಮೀಸಲಾತಿಗೆ ಆದೇಶಕ್ಕನುಸಾರವಾಗಿ ಇರುವ ರೋಸ್ಟರ್
ಬಿಂದುಗಳಿಗೆ ಸಂಬಂಧಿಸಿದಂತೆ ಸೂಕ್ತ ಅರ್ಹತೆ ದಿನಾಂಕಗಳನ್ನು ನಮೂದಿಸಿ
ಸರಿಹೊಂದಿಸತಕ್ಕದ್ದು. ಈಗಾಗಲೇ ಪರಿಶಿಷ್ಟ ಗುಂಪಿನ ವ್ಯಕ್ತಿಗಳು ಪದೋನ್ನತಿ ಹೊಂದಿದ್ದು
ರೋಸ್ಟರ್ ಬಿಂದುಗಳಿಗೆ ಪ್ರತಿಯಾಗಿ ಸರಿಹೊಂದಿಸಲು ಸಾಧ್ಯವಾಗದಿದ್ದರೆ ಪ್ರಸ್ತುತ ಅವರು
ಕಾರ್ಯನಿರ್ವಹಿಸುತ್ತಿರುವ ವೃಂದದಲ್ಲಿ ಅವರು ಪದೋನ್ನತಿ ಪಡೆಯುವ ದಿನಾಂಕದವರೆಗೆ
ಸಂಖ್ಯಾತೀತ ಹುದ್ದೆಗಳಾಗಿ ಮುಂದುವರಿಸತಕ್ಕದ್ದು ಎಂದು ತಿಳಿಸಲಾಗಿದೆ.

5ನೇ ಪ್ರಕರಣವು 3 ಮತ್ತು 4ನೇ ಪ್ರಕರಣಗಳಅನುಷ್ಠಾನದ ಬಗ್ಗೆ ಗೊಂದಲವನ್ನುಂಟು ಮಾಡುತ್ತದೆ.
ಮತ್ತು ರಾಜ್ಯ ಸರ್ಕಾರದಲ್ಲಿ ಈಗಾಗಲೇ ಪರಿಶಿಷ್ಟ ಗುಂಪಿನ 20,000ಕ್ಕಿಂತಲೂ ಹೆಚ್ಚು ನೌಕರರು
ಪದೋನ್ನತಿ ಪಡೆದಿದ್ದು, ಅವರ ಅಕ್ರಮ ಪದೋನ್ನತಿಯನ್ನು ಸಕ್ರಮಗೊಳಿಸಿದಂತಾಗುತ್ತದೆ. ಇದು
ಸಹ ಬಿ.ಕೆ. ಪವಿತ್ರ ಪ್ರಕರಣದ ಆದೇಶಕ್ಕೆ ವಿರುದ್ಧವಾಗಿದೆ.

ಇದೇ ಅಧಿನಿಯಮದ ಪ್ರಕರಣ 9ರಲ್ಲಿ ಈ ಅಧಿನಿಯಮದ ಉಪಬಂಧಗಳಡಿಯಲ್ಲಿ ಸಿಂಧುತ್ವವನ್ನು
ಪ್ರಶ್ನಿಸಲಾಗುತ್ತದೆ. ಈ ಅಧಿನಿಯಮದ 3 ಮತ್ತು 5ನೇ ಪ್ರಕರಣಗಳಿಗೆ ವ್ಯತಿರಿಕ್ತವಾಗಿ ಯಾವುದೇ
ನ್ಯಾಯಾಲಯದ ಅಥವಾ ಇತರ ಪ್ರಾಧಿಕಾರದ ಯಾವುದೇ ತೀರ್ಪು ಅಥವಾ ಆದೇಶದಡಿ ಏನೇ ಒಳಗೊಂಡಿದ್ದರೂ ಈ
ಅಧಿನಿಯಮಕ್ಕೂ ಪ್ರಕಟಣೆ ಪೂರ್ವದಲ್ಲಿ 3 ಮತ್ತು 4 ಪ್ರಕರಣದ ಅನುಸಾರವಾಗಿ ನೀಡಿದ
ಪದೋನ್ನತಿಗಳ ಸಂಬಂಧದಲ್ಲಿ 27.4.1978ನೇ ದಿನಾಂಕದಂದು ಕೈಗೊಂಡ ಕ್ರಮವಾಗಿದೆ ಎಂದು
ಅರ್ಥೈಸಲಾಗಿರುವ ಎಲ್ಲಾ ನಡವಳಿಗಳು ಸಿಂಧುವಾಗಿದೆ ಎಂದು ಸೂಚಿಸಲಾಗಿದೆ. ಪ್ರಕರಣ 9(ಎ)ರಲ್ಲಿ
ಈ ಅಧಿನಿಯಮದ ಉಪಬಂಧಗಳಿಗೆ ವ್ಯತಿರಿಕ್ತವಾಗಿ ಯಾವುದೇ ದಾವೆ ಅಥವಾ ಇತರೆ ನಡವಳಿಗಳನ್ನು ಅಂತಹ
ಬಡ್ತಿಗಳ ಪುನರೀಕ್ಷಣೆಗಾಗಿ ಯಾವುದೇ ನ್ಯಾಯಾಲಯದಲ್ಲಿ ಅಥವಾ ಯಾವುದೇ ಪ್ರಾಧಿಕಾರದ ಮುಂದೆ
ನಿರ್ವಹಿಸತಕ್ಕದ್ದಲ್ಲ ಅಥವಾ ಮುಂದುವರಿಸತಕ್ಕದ್ದಲ್ಲ ಮತ್ತು ಪ್ರಕರಣ 9(ಬಿ)ರಂತೆ ಈ
ಅಧಿನಿಯಮದ ಉಪಬಂಧಗಳಿಗೆ ವಿರುದ್ಧವಾಗಿ ಯಾವುದೇ ಅಂತಹ ಮೊಕದ್ದಮೆಗಳನ್ನು ಪುನರೀಕ್ಷಿಸಲು
ನಿರ್ದೇಶಿಸಿ ಯಾವುದೇ ಡಿಕ್ರಿ ಅಥವಾ ಆದೇಶವನ್ನು  ಯಾವುದೇ ನ್ಯಾಯಾಲಯವು
ಹೊರಡಿಸತಕ್ಕದ್ದಲ್ಲವೆಂದು ತಿಳಿಸಲಾಗಿದೆ. ಈ 9ನೇ ಪ್ರಕರಣವು ಸಂವಿಧಾನದ ಮೂಲಭೂತ
ಹಕ್ಕುಗಳಿಗೆ ಧಕ್ಕೆಯನ್ನುಂಟು ಮಾಡುವಂತಿದೆ. ಬಾಧಿತ ವ್ಯಕ್ತಿಗಳು ಯಾವುದೇ ನ್ಯಾಯಾಲಯದಲ್ಲಿ
ತನಗಾದ ಸ್ವಾಭಾವಿಕ ಅನ್ಯಾಯವನ್ನು ಸರಿಪಡಿಸಿಕೊಳ್ಳಲು ದಾವೆ ಹೂಡತಕ್ಕದ್ದಲ್ಲ ಎನ್ನುವುದು
ಸಂವಿಧಾನ ಬಾಹಿರವಾಗುತ್ತದೆ. ಈ ಅಧಿನಿಯಮದಲ್ಲಿ ನ್ಯಾಯಾಂಗ ವ್ಯವಸ್ಥೆಯೇ ಬೇಡ ಎನ್ನುವಂತೆ
ಪ್ರಕರಣ 9ನ್ನು ಅಳವಡಿಸಿರವುದು ಮೂಲಭೂತ ಹಕ್ಕಿಗೆ ಚ್ಯುತಿಬಂದಂತಾಗುತ್ತದೆ.

ಸರ್ಕಾರವು ದಿನಾಂಕ 23.6.2018ರಿಂದ ಕರ್ನಾಟಕ (ರಾಜ್ಯದ ಸಿವಿಲ್ ಸೇವೆಗಳಲ್ಲಿನ
ಹುದ್ದೆಗಳಿಗೆ ಮೀಸಲಾತಿ ಆಧಾರದ ಮೇಲೆ ಪದೋನ್ನತಿ ಹೊಂದಿರುವ ಸರ್ಕಾರಿ ನೌಕರರಿಗೆ
ತತ್ಪರಿಣಾಮದ ಜ್ಯೇಷ್ಠತೆಯನ್ನು ವಿಸ್ತರಿಸುವ ಅಧಿನಿಯಮ 2017ನ್ನು ಜಾರಿಗೆ ತಂದಿರುತ್ತದೆ.
ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್​ನಲ್ಲಿ ರಿಟ್ ಅರ್ಜಿಗಳು ದಾಖಲಾಗಿದ್ದು ಸದರಿ
ಪ್ರಕರಣಗಳನ್ನು ಬಿ.ಕೆ. ಪವಿತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಕಿ ಇರುವ ಪ್ರಕರಣವನ್ನು
(ಸಂಖ್ಯೆ ಎಂಎ1151/2018) ಒಟ್ಟುಗೂಡಿಸಿ 27.7.2018ರಂದು ವಿಚಾರಣೆಗೆ ಬಂದಾಗ ಮುಂದಿನ
ನಿರ್ದೇಶನ ನೀಡುವವರೆಗೆ ಯಥಾಸ್ಥಿತಿ ಕಾಪಾಡಲು ಸೂಚನೆ ನೀಡಿತು. ಅದರಂತೆ ಮಾನ್ಯ
ಅಡ್ವೋಕೇಟ್ ಜನರಲ್ ಅವರು ಸರ್ಕಾರಕ್ಕೆ ಪತ್ರವನ್ನು ಬರೆದು ಯಥಾ ಸ್ಥಿತಿ ಕಾಪಾಡಲು
ತಿಳಿಸಿರುತ್ತಾರೆ. ಆದುದರಿಂದ ಸರ್ಕಾರವು ದಿನಾಂಕ 3.8.2018ರಂದು (ಸುತ್ತೋಲೆ ಸಂಖ್ಯೆ
ಸಿಆಸುಇ 380, ಸೇನೆನಿ 2018 ಭಾಗ -1) ಸರ್ಕಾರ ಸುತ್ತೋಲೆ ಹೊರಡಿಸಿ ಸರ್ಕಾರದಿಂದ ಮುಂದಿನ
ನಿರ್ದೇಶನ ನೀಡುವವರೆಗೆ ಯಾವುದೇ ಮುಂಬಡ್ತಿ/ಹಿಂಬಡ್ತಿ ಪ್ರಕ್ರಿಯೆ ಜರುಗಿಸದೆ ಯಥಾ ಸ್ಥಿತಿ
ಕಾಪಾಡಬೇಕೆಂದು ಸರ್ಕಾರದ ಎಲ್ಲಾ ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿ/ಇಲಾಖಾ ಮುಖ್ಯಸ್ಥರಿಗೆ
ಸೂಚನೆಗಳನ್ನು ನೀಡಿದೆ. ಈ ಸೂಚನೆಗಳನ್ನು ರಾಜ್ಯ ಸರ್ಕಾರದ ವ್ಯಾಪ್ತಿಗೊಳಪಡುವ ಎಲ್ಲಾ ಸಹಾಯಕ
ಸಂಸ್ಥೆಗಳು/ವಿಶ್ವವಿದ್ಯಾನಿಲಯಗಳು/ಸಾರ್ವಜನಿಕ ಉದ್ದಿಮೆ, ಆಯೋಗ, ನಿಗಮ ಮತ್ತು
ಸರ್ಕಾರದಿಂದ ಅನುದಾನ ಪಡೆಯುವ ಸಂಸ್ಥೆಗಳಿಗೂ ಅನ್ವಯಿಸಿ ಸೂಚಿಸಲಾಗಿದೆ. ಇದರಿಂದಾಗಿ ರಾಜ್ಯ
ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಪದೋನ್ನತಿ ಪಡೆಯಲು ಅರ್ಹರಿದ್ದ ನೌಕರರಿಗೂ
ಲಭ್ಯವಾಗುತ್ತಿಲ್ಲ. ಅಲ್ಲದೆ ಬಿ.ಕೆ. ಪವಿತ್ರ ಪ್ರಕರಣದಡಿಯಲ್ಲಿ
ಹಿಂಬಡ್ತಿ/ಮುಂಬಡ್ತಿಗೊಳಿಸಲು ಸ್ಥಗಿತತೆ ಉಂಟಾಗಿದೆ.

Monday, August 13, 2018

**RSGE**::: *👇🏽👇🏽ಸರ್ಕಾರಿ ನೌಕರ ತಿಳಿದಿರಬೇಕಾದ ಪ್ರಮುಖ ಅಂಶಗಳು*

[[ಶಿವು ಯಾದವಾಡ]]
👉🏽👉🏽ಇಲಾಖೆ ವಿಚಾರಣೆ ನಡೆಸುವಾಗ ಮನಬಂದಂತೆ ವಿಚಾರಣಾಧಿಕಾರಿಗಳು ವಿಚಾರಣೆ ನಡೆಸುವ ಹಾಗಿಲ್ಲ...
AIR 1973 SC 2701
👉🏽👉🏽ಮಾಹಿತಿ ಹಕ್ಕು ಅಡಿ ಸರಕಾರೀ ನೌಕರರ ಮೇಲಿನ ಶಿಸ್ತು ಪ್ರಕರಣಗಳ ಮಾಹಿತಿಯನ್ನು ನೀಡಲು SC SLP [CIVIL] NO 27734 /2012 3/10/2012 ಅವಕಾಶವಿಲ್ಲ
👉🏽👉🏽ಬೇನಾಮಿ ಅಥವಾ ಮೂಕರ್ಜಿ ಆಧಾರದ ಮೇಲೆ ನೌಕರರಿಗೆ ನೋಟಿಸ್ ನೀಡುವಂತಿಲ್ಲ ವಿಚಾರಣೆ ಮಾಡುವಂತಿಲ್ಲ.
AIR 1964 SC 364 ಸುಪ್ರೀಂಕೋರ್ಟ್
👉🏽👉🏽ಮಾಹಿತಿ ಹಕ್ಕು ಕಲಂ ೮[೧]ಜೆ ಪ್ರಕಾರ ಅರ್ಜಿದಾರರ ಅರ್ಜಿ ಸಾರ್ವಜನಿಕ ಹಿತಾಸಕ್ತಿಯಿಂದ  ಕೂಡಿದೆ ಅಥವಾ ಇಲ್ಲಾ ಎಂದು ನಿರ್ಧರಿಸುವ ಅಧಿಕಾರ ಸಾ ಮಾ ಅ ಅವರಿಗಿದೆ.
👉🏽👉🏽ನೌಕರರ ವಯಕ್ತಿಕ ಮಾಹಿತಿ ಬಹುಮೊತ್ತದ ಸಾರ್ವಜನಿಕ ಹಿತದ ಹೊರತು ಕೊಡಲು ಬರುವುದಿಲ್ಲ.. SC/2007/30796/_2007 DATED 31-08-2017 CIVIL APPEAL 22 /2009
👉🏽👉🏽ಕರ್ನಾಟಕ ಹೈ ಕೋರ್ಟ್ W.P.NO 10663/2006 [GM/RES] 0/07/2008 ಪ್ರಕಾರ ವಯಕ್ತಿಕ ಮಾಹಿತಿ ಬಹು ವಿಸ್ತರಿತ ಸಾರ್ವಜನಿಕ ಹಿತವಿಲ್ಲದ ಧಾಖಲೆ ನೀಡುವಂತಿಲ್ಲ.
👉🏽👉🏽ಆರೋಪಿತ ನೌಕರ ಆರೋಪ ಒಪ್ಪುವ ಅಥವಾ ನಿರಾಕರಿಸುವ ರಕ್ಷಣಾ ಹೇಳಿಕೆ ನೀಡದ ಹೊರತು ವಿಚಾರಣಾಧಿಕಾರಿ ನೇಮಕ ಮಾಡುವಂತಿಲ್ಲ. 1992 [1] SLR 769 KAR HC
👉🏽👉🏽HC ಕರ್ನಾಟಕ W.P.NO 4133/2012 [ [GM-RES] 27/05/2013 ತೀರ್ಪು ಪ್ರಕಾರ ಕಡತಗಳಲ್ಲಿ ಲಭ್ಯವಿರುವ ಮಾಹಿತಿ ಮಾತ್ರ ಮಾಹಿತಿ ಹಕ್ಕಿನಲ್ಲಿ ಪಡೆಯಬಹುದು.
👉🏽👉🏽ಮಾಹಿತಿ ಹಕ್ಕು ಅಡಿ ಒಂದು ವಿಷಯಕ್ಕೆ ಸಂಬಂಧಿಸಿ ಒಂದು ಅರ್ಜಿಯಲ್ಲಿ  ಮಾಹಿತಿ ಕೇಳಬಹುದು.. 
DPAR/14/RTI/2008-- 17/03/2008
👉🏽👉🏽 ಇಲಾಖೆ ವಿಚಾರಣೆ ನಡೆಸುವಾಗ ಮನಬಂದಂತೆ ವಿಚಾರಣಾಧಿಕಾರಿಗಳು ವಿಚಾರಣೆ ನಡೆಸುವ ಹಾಗಿಲ್ಲ...
AIR 1973 SC 2701
👉🏽👉🏽ಮಾಹಿತಿ ಹಕ್ಕು ಅಡಿ ಸರಕಾರೀ ನೌಕರರ ಮೇಲಿನ ಶಿಸ್ತು ಪ್ರಕರಣಗಳ ಮಾಹಿತಿಯನ್ನು ನೀಡಲು SC SLP [CIVIL] NO 27734 /2012 3/10/2012 ಅವಕಾಶವಿಲ್ಲ
👉🏽👉🏽ಬೇನಾಮಿ ಅಥವಾ ಮೂಕರ್ಜಿ ಆಧಾರದ ಮೇಲೆ ನೌಕರರಿಗೆ ನೋಟಿಸ್ ನೀಡುವಂತಿಲ್ಲ ವಿಚಾರಣೆ ಮಾಡುವಂತಿಲ್ಲ.
AIR 1964 SC 364 ಸುಪ್ರೀಂಕೋರ್ಟ್
👉🏽👉🏽ಮಾಹಿತಿ ಹಕ್ಕು ಕಲಂ ೮[೧]ಜೆ ಪ್ರಕಾರ ಅರ್ಜಿದಾರರ ಅರ್ಜಿ ಸಾರ್ವಜನಿಕ ಹಿತಾಸಕ್ತಿಯಿಂದ  ಕೂಡಿದೆ ಅಥವಾ ಇಲ್ಲಾ ಎಂದು ನಿರ್ಧರಿಸುವ ಅಧಿಕಾರ ಸಾ ಮಾ ಅ ಅವರಿಗಿದೆ.
👉🏽👉🏽 ನೌಕರರ ವಯಕ್ತಿಕ ಮಾಹಿತಿ ಬಹುಮೊತ್ತದ ಸಾರ್ವಜನಿಕ ಹಿತದ ಹೊರತು ಕೊಡಲು ಬರುವುದಿಲ್ಲ.. SC/2007/30796/_2007 DATED 31-08-2017 CIVIL APPEAL 22 /2009
👉🏽👉🏽 ಕರ್ನಾಟಕ ಹೈ ಕೋರ್ಟ್ W.P.NO 10663/2006 [GM/RES] 0/07/2008 ಪ್ರಕಾರ ವಯಕ್ತಿಕ ಮಾಹಿತಿ ಬಹು ವಿಸ್ತರಿತ ಸಾರ್ವಜನಿಕ ಹಿತವಿಲ್ಲದ ಧಾಖಲೆ ನೀಡುವಂತಿಲ್ಲ.
👉🏽👉🏽ಆರೋಪಿತ ನೌಕರ ಆರೋಪ ಒಪ್ಪುವ ಅಥವಾ ನಿರಾಕರಿಸುವ ರಕ್ಷಣಾ ಹೇಳಿಕೆ ನೀಡದ ಹೊರತು ವಿಚಾರಣಾಧಿಕಾರಿ ನೇಮಕ ಮಾಡುವಂತಿಲ್ಲ. 1992 [1] SLR 769 KAR HC
👉🏽👉🏽 HC ಕರ್ನಾಟಕ W.P.NO 4133/2012 [ [GM-RES] 27/05/2013 ತೀರ್ಪು ಪ್ರಕಾರ ಕಡತಗಳಲ್ಲಿ ಲಭ್ಯವಿರುವ ಮಾಹಿತಿ ಮಾತ್ರ ಮಾಹಿತಿ ಹಕ್ಕಿನಲ್ಲಿ ಪಡೆಯಬಹುದು.
👉🏽👉🏽ಮಾಹಿತಿ ಹಕ್ಕು ಅಡಿ ಒಂದು ವಿಷಯಕ್ಕೆ ಸಂಬಂಧಿಸಿ ಒಂದು ಅರ್ಜಿಯಲ್ಲಿ  ಮಾಹಿತಿ ಕೇಳಬಹುದು.. 
DPAR/14/RTI/2008-- 17/03/2008
👉🏽👉🏽ಸರಕಾರೀ ನೌಕರರ ಸೇವಾ ವಿವರಗಳನ್ನು ಮತ್ತು ಕುಟುಂಬ ಸದಸ್ಯರ ವಿವರಗಳನ್ನು ಮಾಹಿತಿ ಹಕ್ಕು ಕಲಂ ೮[೧]ಜೆ  ಪ್ರಕಾರ ಕೇಳಲು ಬರುವುದಿಲ್ಲ. KIC 66 APL 2006
👉🏽👉🏽 ಪತ್ರಿಕೆ ವರದಿ ಆಧರಿಸಿ ವಿಚಾರಣೆ ಅಧಿಕಾರಿಗಳು ಆಪಾದಿತ ನೌಕರನ ಮೇಲಿನ ಆರೋಪದ ಬಗ್ಗೆ ತೀರ್ಪು  ಬರೆಯುವ ಹಾಗಿಲ್ಲ 
AIR 1999 SC 3571 suprem court
👉🏽👉🏽ಸರಕಾರಿ ನೌಕರರ ಸೇವಾ ಪುಸ್ತಕವನ್ನು ಮಾಹಿತಿ ಹಕ್ಕು ಅರ್ಜಿಗೆ  ಬಹಿರಂಗ ಮಾಡುವಂತಿಲ್ಲ.KIC/13045/PTN/
2010--9/8/2010
{{ಉಪಯುಕ್ತ ಮಾಹಿತಿ ಶೇರ್ ಮಾಡಿ ಶಿವು ಯಾದವಾಡ}}

**RSGE**::: ಸರ್ಕಾರಿ ಕಾರ್ನರ್​, ದಿನದ ಪ್ರಶ್ನೆ

ನಾನು ಪ್ರಾಥಮಿಕ ಶಾಲಾ ಶಿಕ್ಷಕನಾಗಿದ್ದು, 20 ವರ್ಷ ಪೂರ್ಣಗೊಂಡಿದೆ. ವೈಯಕ್ತಿಕ ಕಾರಣಕ್ಕಾಗಿ ರಾಜೀನಾಮೆ ನೀಡಲು ಬಯಸಿದ್ದೇನೆ. ಈ ರಾಜೀನಾಮೆ ಸಲ್ಲಿಸುವುದು ಹೇಗೆ? ದಯವಿಟ್ಟು ತಿಳಿಸಿ.
| ತೀರ್ಥಪ್ಪ ತೋಟಗಾರ್ ರಾಯಚೂರು
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 285(2)ರ ಮೇರೆಗೆ ಸದರಿ ಹುದ್ದೆಗೆ ಸ್ವಯಂನಿವೃತ್ತಿ ಮೂಲಕ ರಾಜೀನಾಮೆ ನೀಡಲು ಮೂರು ತಿಂಗಳು ಮುಂಚಿತವಾಗಿ ನಿಮ್ಮ ಪತ್ರವನ್ನು ಸಲ್ಲಿಸಬೇಕಾಗುತ್ತದೆ. ಆಗ ನಿಮಗೆ ಪಿಂಚಣಿ ಸೌಲಭ್ಯಗಳು ಲಭ್ಯವಾಗುತ್ತವೆ. ಆದರೆ ನೀವು ಇಂತಹ ಯಾವುದೇ ಆರ್ಥಿಕ ಮತ್ತು ಸೇವಾ ಸೌಲಭ್ಯಗಳ ಬಗ್ಗೆ ಅಪೇಕ್ಷಿಸದಿದ್ದರೆ ಒಂದು ತಿಂಗಳ ಮುಂಚಿತವಾಗಿ ನಿಮ್ಮ ನೇಮಕಾತಿ ಪ್ರಾಧಿಕಾರಕ್ಕೆ ಖುದ್ದಾಗಿ ರಾಜೀನಾಮೆ ಪತ್ರ ಸಲ್ಲಿಸಿ ಅದರ ಅಂಗೀಕಾರವಾದ ನಂತರ ಕರ್ತವ್ಯದಿಂದ ಬಿಡುಗಡೆ ಹೊಂದಬೇಕಾಗುತ್ತದೆ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕವನ್ನು ನೋಡಬಹುದು.
ಪ್ರಶ್ನೆ ಕೇಳಿ ಪರಿಹಾರ ಪಡೆಯಿರಿ
ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ. ವಿಳಾಸ: ವಿಜಯವಾಣಿ ನಂ. 24, ಶ್ರೀ ಸಾಯಿರಾಂ ಟವರ್ಸ್, ಮೊದಲ ಮಹಡಿ, 5ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು-18, ದೂ: 8884432666, ಫ್ಯಾಕ್ಸ್: 080-26257464

**RSGE**::: ಸರ್ಕಾರಿ ಕಾರ್ನರ್​, ದಿನದ ಪ್ರಶ್ನೆ

ನಾನು 2018ರ ಜೂನ್ 6ರಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ ಕಿರಿಯ ಸಹಾಯಕನಾಗಿ ಕೆಲಸಕ್ಕೆ ಹಾಜರಾದೆ. ಈಗ ಏಳು ತಿಂಗಳು ಗರ್ಭಾವಸ್ಥೆಯಲ್ಲಿರುವ ನನಗೆ ಎಷ್ಟು ದಿನ ಹೆರಿಗೆರಜೆ ಲಭ್ಯವಾಗುತ್ತದೆ? ಈ ರಜೆಯನ್ನು ಸೇವೆಗೆ ಪರಿಗಣಿಸಲಾಗುತ್ತದೆಯೆ? ಈ ಅವಧಿಯಲ್ಲಿ ವೇತನ ನೀಡಲಾಗುತ್ತದೆಯೆ?
| ಹೆಚ್.ಬಿ. ಅಶ್ವಿನಿ ಚಾಮರಾಜನಗರ
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 135ರಂತೆ ಮಹಿಳಾ ಸರ್ಕಾರಿ ನೌಕರರು ಎರಡು ಜೀವಂತ ಮಕ್ಕಳನ್ನು ಪಡೆಯುವವರೆಗೆ ಪ್ರತಿ ಬಾರಿ 180 ದಿನಗಳ ಕಾಲ ಹೆರಿಗೆ ರಜೆಯನ್ನು ಪಡೆದುಕೊಳ್ಳಬಹುದು. ಈ ಅವಧಿಯಲ್ಲಿ ವೇತನ ನೀಡಲಾಗುತ್ತಿದ್ದು, ಸೇವಾವಧಿಯನ್ನು ಪರಿಗಣಿಸಲಾಗುತ್ತದೆ. ನೀವು ಪೂರ್ವಭಾವಿಯಾಗಿ ರಜೆ ಮಂಜೂರಾತಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿ ಈ ಪ್ರಸೂತಿ ರಜೆ ಬಳಸಿಕೊಳ್ಳಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕವನ್ನು ನೋಡಿ.
ಪ್ರಶ್ನೆ ಕೇಳಿ ಪರಿಹಾರ ಪಡೆಯಿರಿ
ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ. ವಿಳಾಸ: ವಿಜಯವಾಣಿ ನಂ. 24, ಶ್ರೀ ಸಾಯಿರಾಂ ಟವರ್ಸ್, ಮೊದಲ ಮಹಡಿ, 5ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು-18, ದೂ: 8884432666, ಫ್ಯಾಕ್ಸ್: 080-26257464,

**RSGE**::: ಸರ್ಕಾರಿ ಕಾರ್ನರ್​ ದಿನದ ಪ್ರಶ್ನೆ

ನಾನು 2013ರಲ್ಲಿ ಸರ್ಕಾರಿ ಸೇವೆಗೆ ಸೇರಿದೆ. ಎರಡು ಮಕ್ಕಳಾದ ಮೇಲೆ 2005ರಲ್ಲಿ ಸಂತಾನಶಕ್ತಿಹರಣ ಚಿಕಿತ್ಸೆಗೆ ಒಳಗಾಗಿದ್ದು ನಾನು ಈ ಕುಟುಂಬಯೋಜನೆಯ ವಿಶೇಷ ಭತ್ಯೆಯ ಸೌಲಭ್ಯ ಪಡೆಯಬಹುದೇ? ದಯವಿಟ್ಟು ತಿಳಿಸಿ.
| ಸುನಂದಾ ಹೊಕ್ರಾಣಿ ಹಾವೇರಿ
1.10.1985ರ ಸರ್ಕಾರಿ ಆದೇಶ ಸಂಖ್ಯೆ ಎಫ್​ಡಿ 27, ಎಸ್​ಆರ್​ಎಸ್ 85ರಂತೆ ಕುಟುಂಬಯೋಜನೆ ಅನುಸರಿಸುವ ಸರ್ಕಾರಿ ನೌಕರರನ್ನು ಉತ್ತೇಜಿಸಲು ಎರಡು ಜೀವಂತ ಮಕ್ಕಳನ್ನು ಹೊಂದಿರುವ ಸರ್ಕಾರಿ ನೌಕರನು ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರೆ ವೈಯಕ್ತಿಕ ವೇತನರೂಪದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಮುಂದಿನ ವೇತನ ಬಡ್ತಿಗೆ ಅನುಗುಣವಾಗಿ ವೈಯಕ್ತಿಕ ವೇತನರೂಪದಲ್ಲಿ ವಿಶೇಷ ವೇತನ ಬಡ್ತಿಯನ್ನು ನೀಡಲು ಸೂಚಿಸಲಾಗಿದೆ. ಆದರೆ ನೀವು ಸರ್ಕಾರಿ ಸೇವೆಗೆ ಸೇರುವ ಮೊದಲೇ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವುದರಿಂದ
ಈ ವಿಶೇಷ ಭತ್ಯೆ ಲಭ್ಯವಾಗುವುದಿಲ್ಲ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕವನ್ನು ನೋಡಬಹುದು.
ಪ್ರಶ್ನೆ ಕೇಳಿ ಪರಿಹಾರ ಪಡೆಯಿರಿ
ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ. ವಿಳಾಸ: ವಿಜಯವಾಣಿ ನಂ. 24, ಶ್ರೀ ಸಾಯಿರಾಂ ಟವರ್ಸ್, ಮೊದಲ ಮಹಡಿ, 5ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು-18, ದೂ: 8884432666, ಫ್ಯಾಕ್ಸ್: 080-26257464

Thursday, August 09, 2018

**RSGE**::: ಸರ್ಕಾರಿ ಕಾರ್ನರ್ ದಿನದ ಪ್ರಶ್ನೆ

ನಾನು ಸರ್ಕಾರಿ ಸೇವೆಯಲ್ಲಿ ಒಟ್ಟು 244 ದಿನ ಗೈರುಹಾಜರಾಗಿ ಇಲಾಖಾ ಮುಖ್ಯಸ್ಥರಿಂದ ವಜಾಗೊಂಡಿದ್ದೇನೆ. 14 ವರ್ಷ 8 ತಿಂಗಳು ಸೇವೆ ಸಲ್ಲಿಸಿದ್ದು, ಸೇವೆಯಲ್ಲಿದ್ದಾಗ ಸ್ವಯಂನಿವೃತ್ತಿ ಹೊಂದಲು ಸಾಧ್ಯವಾಗಲಿಲ್ಲ. ಇಲಾಖಾ ಮುಖ್ಯಸ್ಥರಾಗಲೀ, ಅವರಿಗೂ ಮೇಲ್ಪಟ್ಟ ಅಧಿಕಾರಿಗಳಾಗಲೀ ನನ್ನನ್ನು ಕಡ್ಡಾಯ ನಿವೃತ್ತಿ ಮಾಡಬಹುದೆ?
| ಕೆ.ಸಿ. ಮಂಜುನಾಥ ಶಿವಮೊಗ್ಗ
ಕರ್ನಾಟಕ ಸರ್ಕಾರಿ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 108ರ ಪ್ರಕಾರ ಸರ್ಕಾರಿ ನೌಕರನು ನಾಲ್ಕು ತಿಂಗಳು ಅಥವಾ ಅದಕ್ಕೂ ಹೆಚ್ಚು ಅವಧಿಯವರೆಗೆ ಕರ್ತವ್ಯದಿಂದ ಗೈರುಹಾಜರಾದರೆ ಕರ್ನಾಟಕ ಸರ್ಕಾರಿ ಸೇವಾ (ಸಿಸಿಎ) ನಿಯಮಾವಳಿ 1957ರಲ್ಲಿ ವಿಧಿಸಲಾದ ಕಾರ್ಯವಿಧಾನವನ್ನು ಅನುಸರಿಸಿದ ನಂತರ ವಜಾ ಮಾಡಬಹುದು. ಆದರೆ ನೀವು 15 ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿದ್ದು, ನಿಯಮ 285(2)ರ ಮೇರೆಗೆ ಸ್ವಯಂನಿವೃತ್ತಿ ಹೊಂದಲು ಅರ್ಹರಲ್ಲ. ಅಲ್ಲದೆ ನೀವು ನಿಯಮ 285ರ ಮೇರೆಗೆ ಕಡ್ಡಾಯ ನಿವೃತ್ತಿಗೊಳಿಸಲೂ ಅರ್ಹರಲ್ಲ. ಆದರೆ ವೈದ್ಯಕೀಯ ಆಧಾರದ ಮೇಲೆ ಗೈರುಹಾಜರಾಗಿದ್ದರೆ ಮೇಲ್ಮನವಿ ಪ್ರಾಧಿಕಾರಕ್ಕೆ ಮೂರು ತಿಂಗಳೊಳಗಾಗಿ ಮೇಲ್ಮನವಿ ಸಲ್ಲಿಸಬೇಕು.
ಪ್ರಶ್ನೆ ಕೇಳಿ ಪರಿಹಾರ ಪಡೆಯಿರಿ
ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ. ವಿಳಾಸ: ವಿಜಯವಾಣಿ ನಂ. 24, ಶ್ರೀ ಸಾಯಿರಾಂ ಟವರ್ಸ್, ಮೊದಲ ಮಹಡಿ, 5ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು-18, ದೂ: 8884432666, ಫ್ಯಾಕ್ಸ್: 080-26257464, ಇಮೇಲ್: sarakaricorner@gmail.com

**RSGE**::: ಸರ್ಕಾರಿ ಕಾರ್ನರ್ ದಿನದ ಪ್ರಶ್ನೆ

ನಾನು ಅನುಕಂಪದ ಮೇರೆಗೆ 2016ರಲ್ಲಿ ಕೃಷ್ಣ ಜಲಭಾಗ್ಯ ನಿಗಮಕ್ಕೆ ಪ್ರಥಮ ದರ್ಜೆ ಸಹಾಯಕನಾಗಿ ನೇಮಕಾತಿ ಹೊಂದಿದ್ದೇನೆ. ಪ್ರಥಮದರ್ಜೆ ಸಹಾಯಕ ಹುದ್ದೆಯಿಂದ ಕನ್ನಡ ಉಪನ್ಯಾಸಕ ಹುದ್ದೆಗೆ ಶಿಕ್ಷಣ ಇಲಾಖೆಯಲ್ಲಿ ನೇಮಕಾತಿ ಹೊಂದಲು ಅವಕಾಶವಿದೆಯೇ? ಸೂಕ್ತ ಪರಿಹಾರ ತಿಳಿಸಿ.
| ಶರಣಪ್ಪ ಶಹಾಪುರ, ಯಾದಗಿರಿ
ಪದವಿಪೂರ್ವ ಶಿಕ್ಷಣ ಇಲಾಖೆಯ ಕನ್ನಡ ಉಪನ್ಯಾಸಕ ಹುದ್ದೆಗೆ ನೇರ ನೇಮಕಾತಿ ಹಾಗೂ ಪ್ರೌಢಶಾಲಾ ಸಹಶಿಕ್ಷಕರ ಹುದ್ದೆಯಿಂದ ಪದೋನ್ನತಿಯ ಮೂಲಕ ನೇಮಕಾತಿ ಹೊಂದಲು ಅವಕಾಶವಿದೆ. ಆದರೆ ಪ್ರಥಮದರ್ಜೆ ಸಹಾಯಕ ಹುದ್ದೆಯಿಂದ ಉಪನ್ಯಾಸಕ ಹುದ್ದೆಗೆ ನೇಮಕಾತಿ ಹೊಂದಲು ಅವಕಾಶವಿಲ್ಲ. ಆದುದರಿಂದ ನೀವು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಕನ್ನಡ ಉಪನ್ಯಾಸಕ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಆಯ್ಕೆಯಾಗಿ ನೇಮಕಾತಿ ಹೊಂದಬಹುದು.
ಪ್ರಶ್ನೆ ಕೇಳಿ ಪರಿಹಾರ ಪಡೆಯಿರಿ
ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ. ವಿಳಾಸ: ವಿಜಯವಾಣಿ ನಂ. 24, ಶ್ರೀ ಸಾಯಿರಾಂ ಟವರ್ಸ್, ಮೊದಲ ಮಹಡಿ, 5ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು-18, ದೂ: 8884432666, ಫ್ಯಾಕ್ಸ್: 080-26257464,

**RSGE**::: ಸರ್ಕಾರಿ ಕಾರ್ನರ್ ದಿನದ ಪ್ರಶ್ನೆ

ಸರ್ಕಾರಿ ಪ್ರೌಢಶಾಲಾ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ನನ್ನ ಅತ್ತಿಗೆ 2017ರ ಮೇ 21ಕ್ಕೆ 10 ವರ್ಷ ಪೂರ್ಣಗೊಳಿಸಿದ್ದಾರೆ. ಈ 10 ವರ್ಷದ ಕಾಲಮಿತಿ ಬಡ್ತಿಗೆ ಇಲಾಖಾ ಪರೀಕ್ಷೆ ಕಡ್ಡಾಯವೇ? ಒಂದುವೇಳೆ ಇಲಾಖಾ ಪರೀಕ್ಷೆ ತೇರ್ಗಡೆಗೊಂಡರೆ ಯಾವಾಗ ದೊರಕುತ್ತದೆ?
-ಪವನ್ ದೇಸಾಯಿ ಮಸ್ಕಿ ರಾಯಚೂರು
ಕರ್ನಾಟಕ ಸರ್ಕಾರಿ ಸೇವಾ (ಕನ್ನಡ ಭಾಷೆ ಮತ್ತು ಸೇವಾ ಪರೀಕ್ಷೆಗಳು) ನಿಯಮಾವಳಿಯ 1974ರ ನಿಯಮ 3ರ ಮೇರೆಗೆ ಪ್ರತಿಯೊಬ್ಬ ಸರ್ಕಾರಿ ನೌಕರನು ಮೇಲಿನ ಹುದ್ದೆಗೆ ಪದೋನ್ನತಿ ಪಡೆಯಲು ಇಲಾಖಾ ಪರೀಕ್ಷೆ ತೇರ್ಗಡೆಯಾಗುವುದು ಕಡ್ಡಾಯ. ಅದೇ ರೀತಿ ಕರ್ನಾಟಕ ಸರ್ಕಾರಿ ಸೇವಾ (ಕಾಲಮಿತಿ ಬಡ್ತಿ) ನಿಯಮಗಳು 1983ರ ನಿಯಮ 3ರ ಮೇರೆಗೆ ಈ ಕಾಲಮಿತಿ ಬಡ್ತಿ ಪಡೆಯಲು ಪದೋನ್ನತಿಗೆ ಅರ್ಹತಾದಾಯಕವಾದ ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆಯಾಗುವುದು ಕಡ್ಡಾಯ. ಆದುದರಿಂದ ನಿಮ್ಮ ಅತ್ತಿಗೆಗೆ ಅವರ ಇಲಾಖಾ ಪರೀಕ್ಷೆ ನಡೆದ ದಿನಾಂಕದಿಂದ 10 ವರ್ಷದ ಕಾಲಮಿತಿ ಬಡ್ತಿ ಲಭ್ಯವಾಗುತ್ತದೆ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕವನ್ನು ನೋಡಬಹುದು.

Tuesday, August 07, 2018

**RSGE**::: ಸರ್ಕಾರಿ ಕಾರ್ನರ್ ದಿನದ ಪ್ರಶ್ನೆ

ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದ ನನ್ನ ಮಗಳು 2007ರಲ್ಲಿ ನಿಧನಳಾಗಿದ್ದು, ಅವಳ ಪತಿಗೆ ಕುಟುಂಬಪಿಂಚಣಿ ಲಭ್ಯವಾಗುತ್ತಿತ್ತು. 2010ರಲ್ಲಿ ಅವರೂ ಮರಣ ಹೊಂದಿರುವುದರಿಂದ ಅವರ ಎರಡೂ ಮಕ್ಕಳನ್ನು ನಾನೇ ನೋಡಿಕೊಳ್ಳುತ್ತಿದ್ದೇನೆ. ಅವರಲ್ಲಿ ಗಂಡು ಪ್ರಾಪ್ತವಯಸ್ಕನಾದ ಮೇಲೆ ಹೆಣ್ಣುಮಗುವಿಗೆ ಪಿಂಚಣಿ ನೀಡಲಾಗುತ್ತಿತ್ತು. ಹೆಣ್ಣುಮಗು ಪ್ರಾಪ್ತವಯಸ್ಕಳಾದ ಮೇಲೆ ಈ ಕುಟುಂಬಪಿಂಚಣಿ ರದ್ದುಗೊಂಡಿದೆ. ಇಂತಹ ಪ್ರಕರಣಗಳಿಗೆ ಪಿಂಚಣಿ ವಿಸ್ತರಿಸಿ ಮಂಜೂರಾತಿ ನೀಡಲು ನಿಯಮಗಳಿವೆಯ? ಸಲಹೆ ನೀಡಿ.
-ಸಿ. ಯಮುನಪ್ಪ ಬಳ್ಳಾರಿ
ಕರ್ನಾಟಕ ಸರ್ಕಾರಿ ನೌಕರರ (ಕುಟುಂಬ ನಿವೃತ್ತಿವೇತನ ) ನಿಯಮಾವಳಿ 2002ರ ನಿಯಮ 9ಡಿ(ಜಿ)ರ ಪ್ರಕಾರ ಅಪ್ರಾಪ್ತ ವಯಸ್ಸಿನ ಗಂಡುಮಗು 18 ವರ್ಷ ಹಾಗೂ ಹೆಣ್ಣುಮಗು 21 ವರ್ಷ ಆಗುವವರೆಗೆ ಈ ಕುಟುಂಬಪಿಂಚಣಿಯನ್ನು ಮಂಜೂರು ಮಾಡಲು ನಿಯಮಾವಳಿಯಲ್ಲಿ ಅವಕಾಶವಿದೆ. ಹೀಗಾಗಿ ನೀವು ಹೆಣ್ಣುಮಗುವಿಗೆ ಮತ್ತೆ ಮೂರು ವರ್ಷ ಕುಟುಂಬಪಿಂಚಣಿಯನ್ನು ವಿಸ್ತರಿಸಲು ಕೋರಿ ಅರ್ಜಿ ಸಲ್ಲಿಸಿ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕ ನೋಡಿ.

**RSGE**::: 2018-19ನೇ ಸಾಲಿನಲ್ಲಿ ಮಾಡುವ ಸರ್ಕಾರಿ ನೌಕರರ ವರ್ಗಾವಣೆಗಳ ಬಗ್ಗೆ

ಕರ್ನಾಟಕ ಸರ್ಕಾರದ ನಡವಳಿಗಳು
ವಿಷಯ: 2018-19ನೇ ಸಾಲಿನಲ್ಲಿ ಮಾಡುವ ಸರ್ಕಾರಿ ನೌಕರರ ವರ್ಗಾವಣೆಗಳ ಬಗ್ಗೆ
ಮಾರ್ಗಸೂಚಿಗಳು.
ಓದಲಾಗಿದೆ:-
1. ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 22 ಸೇನೌವ 2013, ಬೆಂಗಳೂರು ದಿನಾಂಕ: 07.06.2013.
2, ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 22 ಸೇನೌವ 2013, ಬೆಂಗಳೂರು ದಿನಾಂಕ: 14.06.2013,
3, ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 18 ಸೇನದ 2014, ಬೆಂಗಳೂರು ದಿನಾಂಕ: 05,02.2014
- 4 ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 17 ಸೇಘವ 2015, ಬೆಂಗಳೂರು ದಿನಾಂಕ: 27.04.2015,
5, ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 63 ಸೇನೌವ 2015, ಬೆಂಗಳೂರು ದಿನಾಂಕ: 01.10.2015,
6, ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 25 ಸೇಘವ 2015, ಬೆಂಗಳೂರು ದಿನಾಂಕ: 14.10.2015,
7 ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 2 ಸೇನೌವ 2017, ಬೆಂಗಳೂರು ದಿನಾಂಕ: 27.03.2017
8, ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 18 ಸೇನೌವ 2018, ಬೆಂಗಳೂರು ದಿನಾಂಕ: 23.06.2018,
ಪ್ರಸ್ತಾವನೆ:-
ಮೇಲೆ (1) ರಲ್ಲಿ ಓದಲಾದ ಸರ್ಕಾರದ ಆದೇಶದಲ್ಲಿ ಸರ್ಕಾರಿ ನೌಕರರ ವರ್ಗಾವಣೆ ಕುರಿತಂತೆ
ವಿಸ್ತ್ರತವಾದ ಮಾರ್ಗಸೂಚಿಗಳನ್ನು ನೀಡಲಾಗಿದೆ. ಈ ಮಾರ್ಗಸೂಚನೆಗಳಲ್ಲಿನ ಷರತ್ತುಗಳಿಗೊಳಪಟ್ಟು
- 2018-19ನೇ ಸಾಲಿನಲ್ಲಿ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಗಳನ್ನು ಸಂಬಂಧಿತ ವೃಂದದ
ಕಾರ್ಯನಿರತ ವೃಂದಬಲದ ( Working StrerIgth) ಶೇಕಡಾ 4ರಷಕ್ಕೆ ಸೀಮಿತಗೊಳE
ದಿನಾಂಕ: 31.07.2018 ರವರೆಗೆ ಮಾಡಬಹುದೆಂದು ಮೇಲೆ (8)ರಲ್ಲಿ ಓದಲಾದ ದಿನಾಂಕ: 23.06, 2018ರ
ಸರ್ಕಾರಿ ಆದೇಶದಲ್ಲಿ ಆದೇಶಿಸಲಾಗಿದೆ. ಪ್ರಸ್ತುತ ವರ್ಗಾವಣೆ ಅವಧಿಯನ್ನು ಮತ್ತೆ ವಿಸ್ತರಿಸುವುದು
- ಅವಶ್ಯವೆಂದು ಸರ್ಕಾರವು ಪರಿಗಣಿಸಿ ಈ ಕೆಳಕಂಡಂತೆ ಆದೇಶಿಸಿರುತ್ತದೆ.
ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 18 ಸೇನೌವ 2018 ಬೆಂಗಳೂರು, ದಿನಾಂಕ: 31.07.2018
ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳ ಹಿನ್ನೆಲೆಯಲ್ಲಿ ಮೇಲೆ (1) ರಿಂದ (8)ರವರೆಗೆ ಓದಲಾದ
ಸರ್ಕಾರಿ ಆದೇಶಗಳಲ್ಲಿ ನಮೂದಿಸಿರುವ ಷರತ್ತುಗಳೊಂದಿಗೆ 2018-19ನೇ ಸಾಲಿನ ಸರ್ಕಾರಿ ನೌಕರರ
ಸಾರ್ವತ್ರಿಕ ವರ್ಗಾವಣೆ ಅವಧಿಯನ್ನು ದಿನಾಂಕ: 10.08.2018 ರವರೆಗೆ ವಿಸ್ತರಿಸಿ ಆದೇಶಿಸಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ
ಮತ್ತು ಅವರ ಹೆಸರಿನಲ್ಲಿ
64 4.
2 - 02 FE
(ಗಾಯತ್ರಿ, ಎಂ.ಆರ್.)
ಸರ್ಕಾರದ ಅಧೀನ ಕಾರ್ಯದರ್ಶಿ
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ
- (ಸೇವಾ ನಿಯಮಗಳು-1)
LALSAB DODMANI STATE VP KSG (NPS) EA
ಇವರಿಗೆ:
ಪ್ರಕಟಿಸಿ ಅದರ
1962ನಕಾರರು, ಕರ್ನಾಟಕ ರಾಜಪತ ಇವರಿಗೆ - ಅದಮ, ರಾಜನತ್ರದಲ್ಲಿ
200 ಪ್ರತಿಗಳನ್ನು ಸರ್ಕಾರದ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ,

Monday, August 06, 2018

**RSGE**::: ನೌಕರರ ಕೆಜಿಐಡಿ ಮೊತ್ತ ತಿದ್ದುಪಡಿ

ನೌಕರರ ಕೆಜಿಐಡಿ ಮೊತ್ತ ತಿದ್ದುಪಡಿ
ಬೆಂಗಳೂರು: ಆರನೇ ರಾಜ್ಯ ವೇತನ ಆಯೋಗದ ಶಿಫಾರಸಿನ
ಅನುಷ್ಠಾನದ ಅನ್ವಯ ಏ.1ರಿಂದ ಜಾರಿಯಾಗುವ ಪರಿಷ್ಕೃತ
ವೇತನ ಶ್ರೇಣಿಗೆ ಅನುಗುಣವಾಗಿ ಸರ್ಕಾರಿ ನೌಕರರ ಮಾಸಿಕ
ವಿಮಾ ಕಂತಿನ ಕನಿಷ್ಠ ದರವನ್ನು ತಿದ್ದುಪಡಿ ಮಾಡಿ ಆರ್ಥಿಕ
ಇಲಾಖೆ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರಿ ನೌಕರರ ಅತಿ
ಕನಿಷ್ಠ ವೇತನ ಶ್ರೇಣಿಯಾದ 17,000-28,950 ರೂ.ಗೆ
1,440 ರೂ.ಗಳ ಕನಿಷ್ಠ ಮಾಸಿಕ ವಿಮಾನ ಕಂತಿನ ಮೊಬಲಗು
ನಿರ್ದಿಷ್ಟಪಡಿಸಿದ್ದರೆ, ಅತಿ ಗರಿಷ್ಠ ವೇತನ ಶ್ರೇಣಿಯಾದ
1,04,600-1,50,600 ರೂ.ಗಳಿಗೆ ಕನಿಷ್ಠ ಮೊಬಲಗು 7,980
ರೂ. ಗೊತ್ತುಪಡಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.

Thursday, August 02, 2018

**RSGE**::: ಸರ್ಕಾರಿ ನೌಕರನು ತಿಳಿದಿರಬೇಕಾದ ಸೇವಾ ನಿಯಮಾವಳಿಗಳು





ಸರ್ಕಾರಿ ನೌಕರನು ತಿಳಿದಿರಬೇಕಾದ
, ಸೇವಾ ನಿಯಮಾವಳಿಗಳು |
ಸಾಂದರ್ಭಿಕ ರಜೆ: 15 ದಿನಗಳು
(ಜನವರಿಯಿಂದ ಡಿಸೆಂಬರ್ ವರೆಗಿನ ಕ್ಯಾಲೆಂಡರ್ ವರ್ಷಗಳಲ್ಲಿ)
2. ಪರಿಮಿತ ರಜೆ : 2 ದಿನಗಳು
3. ವಿಶೇಷ ಸಾಂದರ್ಭಿಕ ರಜೆ:
1, ಕುಟುಂಬ ಯೋಜನಾ ಶಸ್ತ್ರಚಿಕಿತ್ಸೆಗಾಗಿ 7 ದಿನ
2, ವಂಕಿ ಅಳವಡಿಸಿಕೊಳ್ಳುವುದಕ್ಕೆ 1 ದಿನ
3. ಸರ್ಕಾರಿ ಜೀವ ವಿಮೆ ಮಾಡಿಸಲು 1 ದಿನ
4, ಇಲಾಖಾ ಪರೀಕ್ಷೆಗಾಗಿ ಅನುಮತಿ ರಜೆ
5. ನಾಸ್ ಪೆರಿಫೆರಲ್ಚಿಕಿತ್ಸೆಗಾಗಿ, ನಾಯಿ ಕಚ್ಚಿದ ಸಂದರ್ಭಕ್ಕಾಗಿ 14 ದಿನಗಳು
ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ಕ್ರೀಡೆಯ ಕ್ರೀಡಾಪಟುವಿನ
ಭಾಗವಹಿಸುವಿಕೆಗೆ 20 ದಿನ ರಜೆ
4. ಪ್ರಸವ ಕಾಲದ ರಜೆ:
1 180 ದಿನ (6 ತಿಂಗಳು) 2 ಮಕ್ಕಳಿಗೆ ಮಾತ್ರ.
ಮಹಿಳಾ ಉದ್ಯೋಗಿಗೆ ಹೆರಿಗೆ ಮತ್ತು ತಾಯಿ ಮಗುವಿನ ಆರೋಗ್ಯ ಆರೈಕೆಗಾಗಿ.
2, ಪೆಟರ್‌ನಟಿ ರಜೆ 15 ದಿನಗಳು
(1ನೇ ಮತ್ತು 2ನೇ ಮಗುವಿನ ಹೆರಿಗೆ ಸಮಯದಲ್ಲಿ ಪುರುಷರಿಗಾಗಿ)
5. ಗಳಿಕೆ ರಜೆ: 30 ದಿನ
1. ಒಂದು ಕ್ಯಾಲೆಂಡರ್ ವರ್ಷದಲ್ಲಿ ಜನವರಿ ಮತ್ತು ಜುಲೈ ಮಾಹೆಯಲ್ಲಿ ಕ್ರಮವಾಗಿ 15-15 ದಿನಗಳಂತೆ
ವರ್ಷಕ್ಕೊಮ್ಮೆ 30 ದಿನಗಳ ಗಳಿಕೆ ರಜೆ ಪಡೆಯಲು, ಸರ್ಕಾರಕ್ಕೆ ಒಪ್ಪಿಸಿ 1 ತಿಂಗಳ ಸಂಬಳ ಪಡೆಯಬಹುದು.
ಒಂದು ಬಾರಿಗೆ ಗರಿಷ್ಠ 120 ದಿನಗಳ ಗಳಿಕೆ ರಜೆಯನ್ನು ಉಪಯೋಗಿಸಬಹುದು.
4, ನಿವೃತ್ತಿ ಸಮಯದವರೆಗೆ ಗರಿಷ್ಠ 300 ದಿನಗಳ ಗಳಿಕೆ ರಜೆ ಕಾಯ್ದಿರಿಸಿ 300 ದಿನಗಳ ಸಂಬಳ ಪಡೆಯಬಹುದು.
6. ಅರ್ಧ ಸಂಬಳೆ ರಜೆ: 200 ದಿನ
(ಒಂದು ಕ್ಯಾಲೆಂಡರ್ ವರ್ಷದಲ್ಲಿ 20 ಅರ್ಧ ಸಂಬಳದ ರಜೆ)ಇದ್ದು
ಅದನ್ನು 10ದಿನದ ಪೂರ್ತಿ ರಜೆಯಾಗಿ ಬಳಸಬಹುದು.
7, ಶಿಶುಪಾಲನಾ ರಜೆ: 730 ದಿನಗಳು
(ಮಹಿಳಾ ಸರ್ಕಾರಿ ನೌಕರಳ ಅಂಗವಿಕಲ/ಬುದ್ಧಿಮಾಂದ್ಯ ಮಗುವು 18 ವರ್ಷಗಳಾಗುವ ತನಕ
ವರ್ಷದಲ್ಲಿ 15 ದಿನಗಳಂತೆ ಅವಧಿಯೊಳಗೆ ವೈಧ್ಯಕೀಯ ವೆಚ್ಛದ  ಬಿಲ್ಲುಗಳನ್ನು
ಬಳಸಬಹುದು,
10.  ವೇತನ ಜಾರಿ: # ೫)
1 ಏಪ್ರಿಲ್  ೨೦೧೨ ರೀಂದ ನೌಕರರಿಗೆ ಪದೊನ್ನತಿ ದೊರೆಯದಿದ್ದಲ್ಲಿ 10, 15, 20, 25 ಮತ್ತು 30 ವರ್ಶಗಳಿಗೆ ತೈಮ್ಬಾಂಡ್ ಪಡೆಯಬಹುದು.

12. ಕನ್ನಡ ಭಾಷಾ ಪರೀಕ್ಷೆ ಪಾರಾಗಿದ್ದಕ್ಕಾಗಿ ಒಂದು ಹೆಚ್ಚುವರಿ ವೇತನ ಬಡ್ತಿ:
11-01-1974ರಿಂದ 12.09.1987ರೊಳಗೆ ನೌಕರಿಯಲ್ಲಿ ಇದ್ದವರಿಗೆ ಮಾತ್ರಅ ಭ್ಯವಿದೆ,
13, ಹಿರಿಯ ನೌಕರರಿಗಿಂತ ಕಿರಿಯ ನೌಕರನ ವೇತನ ಹೆಚ್ಚಾಗಿದ್ದರೆ, ನೌಕರನ
ವೇತನ ಎತ್ತರಿಸಲಾಗುವುದು.
:
14, ಸೇವಾ ಪುಸ್ತಕ
- 1, ಸೇವಾ ಪುಸ್ತಕವನ್ನು ಸರ್ಕಾರಿ ವೆಚ್ಚದಲ್ಲಿ ದ್ವಿಪ್ರತಿಯಲ್ಲಿ ನಿರ್ವಹಿಸಿ ಒಂದು ಪ್ರತಿಯನ್ನು ಉಚಿತವಾಗಿ ನೌಕರರಿಗೆ ಒದಗಿಸಬೇಕು.(
ಸರ್ಕಾರಿ ಆದೇಶ ಸಂ. ಸಿಆಸುಇ/27/ ಆಸು 2012 ದಿನಾಂಕ
16.03.2012) (37ನೇ ಪುಟಕ್ಕೆ...)
- ನವೆಂಬರ್ 2017 35 |
3 ಬಾರಿ ಸೇವಾ ಅವಧಿಯಲ್ಲಿ 730 ದಿನ ಮೀರದಂತೆ ಉಪಯೋಗಿಸಬಹುದು.
8. ವೃತ್ತಿ ತೆರಿಗೆಯಿಂದ ವಿನಾಯಿತಿ:
1, ಒಂದು ಮಗು ಇರುವವರು, ಕುಟುಂಬ ಕಲ್ಯಾಣ ಶಸ್ತ್ರಚಿಕಿತ್ಸೆ ಮಾಡಿಕೊಂಡರೆ ವೃತ್ತಿ ತೆರಿಗೆಯಿಂದ ವಿನಾಯ್ತಿ ಬಯಸಬಹುದು.
ಅಂಗವಿಕಲ ನೌಕರರಿಗೂ ವಿನಾಯ್ತಿ ಇದೆ.

ಹೆಚ್ಚು ಓದಿದವು