Sunday, September 30, 2018

**RSGE**::: ಹುದ್ದೆ ಕಡಿತ, ನೇಮಕಾತಿ ಸ್ಥಗಿತ?,

ಸರ್ಕಾರದಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಮುಖ್ಯ ಕಾರ್ಯದರ್ಶಿ ಇಲಾಖಾವಾರು ಮಾಹಿತಿ ಕೇಳಿದ ಬೆನ್ನ ಹಿಂದೆಯೇ, ಹುದ್ದೆಗಳ ಕಡಿತ ಮಾಡಬೇಕು, ಹೊಸ ನೇಮಕಾತಿ ಮಾಡಬಾರದೆಂಬ ಶಿಫಾರಸು ಮಾಡಲು ಹಣಕಾಸು ಇಲಾಖೆ ಸಜ್ಜಾಗಿದೆ.
ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಆಯೋಗ ಆಡಳಿತ ಸುಧಾರಣೆಗೆ ಸಂಬಂಧಿಸಿ ತನ್ನ ಎರಡನೇ ವರದಿಯಲ್ಲಿರುವ ಅಂಶಗಳನ್ನು ಆಧರಿಸಿ ಸಚಿವ ಸಂಪುಟಕ್ಕೆ ಕಡತ ಮಂಡಿಸಲು ಸಿದ್ಧತೆ ನಡೆಸಿದೆ ಎಂದು ಸರ್ಕಾರದ ಉನ್ನತ ಮೂಲಗಳು ಖಚಿತಪಡಿಸಿವೆ. ಸರ್ಕಾರದಲ್ಲಿ ಸಾಕಷ್ಟು ಸಿಬ್ಬಂದಿ ಇಲ್ಲದೆ ಆಡಳಿತದ ಗುಣಮಟ್ಟ ದಿನೇದಿನೆ ಕುಸಿಯುತ್ತಿದೆ. ವೇತನ ಪರಿಷ್ಕರಣೆ ಆಯೋಗ ಸಾಧ್ಯವಾದಷ್ಟು ಹುದ್ದೆಗಳನ್ನು ನೇಮಕಾತಿ ಮಾಡುವ ಅಗತ್ಯವನ್ನು ಪ್ರತಿಪಾದಿಸಿತ್ತು. ಅದರ ಆಧಾರದಲ್ಲೇ ಮುಖ್ಯ ಕಾರ್ಯದರ್ಶಿ ಅವರು ಇಲಾಖಾವಾರು ಮಾಹಿತಿ ಕೋರಿದ್ದರು.
2ನೇ ವರದಿ ಶಿಫಾರಸು
ಸರ್ಕಾರಿ ನೌಕರರ ಸಿಎಲ್ 12 ರಿಂದ 8ಕ್ಕೆ ಇಳಿಸಬೇಕು. ನಾಲ್ಕನೇ ಶನಿವಾರ ರಜೆ ನೀಡಬೇಕು.
ವಿವಿಧ ಜಯಂತಿಗಳಿಗೆ ನೀಡುವ ರಜೆ ರದ್ದು ಮಾಡಬೇಕು.
ಕ್ಷೇತ್ರ ಇಲಾಖೆಗಳ ಸಿಬ್ಬಂದಿ ಸಚಿವಾಲಯಕ್ಕೆ ನಿಯೋಜನೆ ಮೇಲೆ ಬರಲು ಅವಕಾಶ.
ಎಸ್​ಒಗಳಿಗೆ ಬಡ್ತಿ ನೀಡಲು ಪದವಿ ಕಡ್ಡಾಯ ಮಾಡಬೇಕು.
ಸಚಿವಾಲಯದಲ್ಲಿ ಕಿರಿಯ ಸಹಾಯಕರು ಹಾಗೂ ಟೈಪಿಸ್ಟ್ ಹುದ್ದೆಯನ್ನು ಸಂಪೂರ್ಣ ರದ್ದು ಮಾಡಬೇಕು.
ನೌಕರರ ವಿರೋಧ
ಸಚಿವಾಲಯ ನೌಕರರ ಸಂಘ ಸೇರಿ ವಿವಿಧ ನೌಕರರ ಸಂಘಟನೆಗಳು ಈ ವರದಿ ಜಾರಿಗೆ ವಿರೋಧ ವ್ಯಕ್ತಪಡಿಸಿವೆ. ಈಗಾಗಲೇ ಸಿಬ್ಬಂದಿ ಸಂಖ್ಯೆ ಕಡಿಮೆ ಇರುವುದರಿಂದ ನೇಮಕಾತಿ ಮಾಡಬೇಕು. ಯಾವುದೇ ಹುದ್ದೆ ರದ್ದು ಮಾಡಬಾರದು, ರಜೆಗಳ ಸಂಖ್ಯೆ ಕಡಿತ ಬೇಡ. ಉಪ ಕಾರ್ಯದರ್ಶಿಗಳಿಗೆ ಕೆಎಎಸ್ ಅಧಿಕಾರಿಗಳಿಗೆ ಸರಿಸಮಾನ ವೇತನ ನೀಡಬೇಕು. ವೇತನ ಪರಿಷ್ಕರಣೆ ಸಂದರ್ಭದಲ್ಲಿ ಆಗಿರುವ ಅನ್ಯಾಯ ಸರಿಪಡಿಸಬೇಕು. ಎನ್​ಪಿಎಸ್ ಸಂಪೂರ್ಣ ರದ್ದು ಮಾಡಿ, ಹಳೆಯ ಪಿಂಚಣಿ ಯೋಜನೆ ಜಾರಿಗೆ ತರಬೇಕು ಎಂಬುದು ನೌಕರರ ಬೇಡಿಕೆಗಳಾಗಿವೆ.
ವೇತನ ಪರಿಷ್ಕರಣೆ ಆಯೋಗದ ಎರಡನೇ ವರದಿ ನೌಕರರ ವಿರೋಧಿಯಾಗಿದೆ. ಸರ್ಕಾರ ಏನಾದರೂ ಈ ವರದಿ ಜಾರಿಗೆ ಮುಂದಾದರೆ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ. ಯಾವುದೇ ಕಾರಣಕ್ಕೂ ಜಾರಿಗೆ ತರಲು ಬಿಡುವುದಿಲ್ಲ.
| ಸಿ. ಗುರುಸ್ವಾಮಿ, ಅಧ್ಯಕ್ಷ ಸಚಿವಾಲಯ ನೌಕರರ ಸಂಘ

Monday, September 24, 2018

**RSGE::: ಇನ್ಶೂರೆನ್ಸ್ ಪ್ರೀಮಿಯಂ ಯಾವಾಗ ದುಬಾರಿಯಾಗುತ್ತೆ ಗೊತ್ತಾ?,

ಸಿ.ಎಸ್. ಸುಧೀರ್
# ನನಗೆ 37 ವರ್ಷ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಸದ್ಯದಲ್ಲೇ ಒಂದು ಲೈಫ್ ಇನ್ಶೂರೆನ್ಸ್ ಪಾಲಿಸಿ ಖರೀದಿಸಲು ನಿರ್ಧರಿಸಿದ್ದೇನೆ. ಪಾಲಿಸಿಗಳ ಬಗ್ಗೆ ವಿಚಾರಿಸಿದಾಗ ಪ್ರೀಮಿಯಂ ಸ್ವಲ್ಪ ಹೆಚ್ಚಿಗೆ ಇದೆ ಅನಿಸಿತು. ನನ್ನ ವಯಸ್ಸಿನ ವ್ಯಕ್ತಿಗೆ ಸಾಮಾನ್ಯವಾಗಿ ಪ್ರೀಮಿಯಂ ಎಷ್ಟಿರಬಹುದು? ನಾನು ವಾರ್ಷಿಕವಾಗಿ 18 ಲಕ್ಷ ರೂ. ಸಂಬಳ ಪಡೆಯುತ್ತಿದ್ದು, ಇಬ್ಬರು ಅವಲಂಬಿತರಿದ್ದಾರೆ. ದಯವಿಟ್ಟು ಸೂಕ್ತ ಮಾಹಿತಿ ನೀಡಿ.
– ಪ್ರಶಾಂತ್, ಬೆಂಗಳೂರು
ಇನ್ಶೂರೆನ್ಸ್ ಪಡೆದುಕೊಳ್ಳುವ ವ್ಯಕ್ತಿಯ ವಯಸ್ಸು ಮತ್ತು ಎಷ್ಟು ಅವಧಿಗೆ ಇನ್ಶೂರೆನ್ಸ್ ಪಡೆಯಲಾಗುತ್ತಿದೆ ಎನ್ನುವುದರ ಮೇಲೆ ಪ್ರೀಮಿಯಂ ನಿಗದಿಯಾಗುತ್ತದೆ. ಸಾಮಾನ್ಯವಾಗಿ ಇನ್ಶೂರೆನ್ಸ್ ಪಡೆದುಕೊಳ್ಳುವ ವ್ಯಕ್ತಿಗೆ ವಯಸ್ಸಾಗಿದ್ದು, ಹೆಚ್ಚು ಅವಧಿಗೆ ಇನ್ಶೂರೆನ್ಸ್ ಪಡೆಯುತ್ತಿದ್ದರೆ ಪ್ರೀಮಿಯಂ ದುಬಾರಿಯಾಗುತ್ತದೆ. ಇದರ ಜತೆಗೆ, ಇನ್ಶೂರೆನ್ಸ್ ಪಡೆದುಕೊಳ್ಳುವ ವ್ಯಕ್ತಿ ಧೂಮಪಾನ ಮಾಡುತ್ತಿದ್ದರೂ ಪ್ರೀಮಿಯಂ ಜಾಸ್ತಿಯಾಗುತ್ತದೆ.
ಇನ್ಶೂರೆನ್ಸ್ ಪ್ರೀಮಿಯಂ ದುಬಾರಿ ಅನಿಸುತ್ತಿದೆ ಎಂದು ಹೇಳುವುದನ್ನು ನೋಡಿದಾಗ ಹೂಡಿಕೆ ಆಧಾರಿತ ಲೈಫ್ ಇನ್ಶೂರೆನ್ಸ್ ಖರೀದಿಗೆ ನೀವು ಚಿಂತನೆ ಮಾಡುತ್ತಿದ್ದೀರಿ ಎನಿಸುತ್ತದೆ. ಸಾಮಾನ್ಯವಾಗಿ ಹೂಡಿಕೆ ಆಧಾರಿತ ಮನಿ ಬ್ಯಾಕ್ ಪಾಲಿಸಿಗಳಲ್ಲಿ ಇನ್ಶೂರೆನ್ಸ್ ಮೊತ್ತದ ಜತೆಗೆ ಹೂಡಿಕೆಯ ಮೊತ್ತವೂ ಸೇರಿರುವುದರಿಂದ ಪ್ರೀಮಿಯಂ ಹೆಚ್ಚಿಗೆ ಇದ್ದೇ ಇರುತ್ತದೆ. ಆದರೆ ಟಮ್ರ್ ಲೈಫ್ ಇನ್ಶೂರೆನ್ಸ್​ನಲ್ಲಿ ಹಾಗಾಗುವುದಿಲ್ಲ. ಇಲ್ಲಿ ಇನ್ಶೂರೆನ್ಸ್ ಕಂಪನಿಗಳು ಇನ್ಶೂರೆನ್ಸ್ ಮೊತ್ತಕ್ಕೆ ತಕ್ಕಂತೆ ಪ್ರೀಮಿಯಂ ಅನ್ನು ಮಾತ್ರ ಪಡೆದುಕೊಳ್ಳುತ್ತವೆ. ಉದಾಹರಣೆಗೆ ಹೇಳುವುದಾದರೆ, ನಿಮ್ಮ ವಯಸ್ಸಿಗೆ ಅನುಗುಣವಾಗಿ ಲೆಕ್ಕ ಹಾಕಿ ನೋಡಿದಾಗ, ನಿಮಗೆ 1 ಕೋಟಿ ಮೊತ್ತದ ಟಮ್ರ್ ಲೈಫ್ ಇನ್ಶೂರೆನ್ಸ್​ಗೆ
11 ರಿಂದ 12 ಸಾವಿರ ರೂ. ವಾರ್ಷಿಕ ಪ್ರೀಮಿಯಂ ಬರುತ್ತದೆ. ಟಮ್ರ್ ಲೈಫ್ ಇನ್ಶೂರೆನ್ಸ್​ನಲ್ಲಿ ಮೆಚ್ಯೂರಿಟಿ ಅನ್ನೋ ಅಂಶ ಇಲ್ಲ. ವ್ಯಕ್ತಿಯ ಮರಣದ ನಂತರದಲ್ಲೂ ಕುಟುಂಬಕ್ಕೆ ಆರ್ಥಿಕ ಭದ್ರತೆ ನೀಡುವ ವಿಮೆಯೇ ಟಮ್ರ್ ಲೈಫ್ ಇನ್ಶೂರೆನ್ಸ್ ಪಾಲಿಸಿ. ಇದು ಪ್ರತಿ ಕುಟುಂಬದ ಪಾಲಿನ ಆಪತ್ಬಾಂಧವ. ಪಾಲಿಸಿದಾರರು ಆಕಸ್ಮಿಕ ಸಾವಿನ ವಿರುದ್ಧ ಪಡೆಯುವ ವಿಮೆ ರಕ್ಷಣೆ ಸೌಲಭ್ಯವನ್ನು ಟಮ್ರ್ ಇನ್ಶೂರೆನ್ಸ್ ಯೋಜನೆಯು ಒಳಗೊಂಡಿರುತ್ತದೆ. ಒಂದು ವೇಳೆ, ಪಾಲಿಸಿ ಅವಧಿಯಲ್ಲಿ ಪಾಲಿಸಿದಾರನು ಮೃತಪಟ್ಟರೆ, ಗರಿಷ್ಠ ಮೊತ್ತದ ವಿಮಾ ಸುರಕ್ಷತೆಯನ್ನು ಇದು ಖಾತರಿಪಡಿಸುತ್ತದೆ. ಟಮ್ರ್ ಇನ್ಶೂರೆನ್ಸ್ ಅತ್ಯಂತ ಅಗ್ಗ ಮತ್ತು ಉತ್ತಮ ಜೀವ ವಿಮೆ. ನಿಮ್ಮ ವಾರ್ಷಿಕ ಆದಾಯವನ್ನು ಪರಿಗಣಿಸಿ ನೋಡಿದಾಗ ನೀವು ಕನಿಷ್ಠ 2 ಕೋಟಿ ರೂ. ಮೊತ್ತದ ಟಮ್ರ್ ಲೈಫ್ ಪಾಲಿಸಿ ಪಡೆದುಕೊಂಡು ಉಳಿದ ಹಣವನ್ನು ಹೆಚ್ಚು ಲಾಭ ತಂದುಕೊಡುವ ಕಡೆ ಹೂಡಿಕೆ ಮಾಡುವುದು ಉತ್ತಮವೆನಿಸುತ್ತದೆ.
# ಮಂಗಳೂರಿನಲ್ಲಿ 57 ಲಕ್ಷ ರೂ. ನೀಡಿ ಒಂದು ಫ್ಲ್ಯಾಟ್ ಖರೀದಿಸಲು ಮುಂದಾಗಿದ್ದೇನೆ. ಫ್ಲ್ಯಾಟ್ ಮೌಲ್ಯ 50 ಲಕ್ಷ ರೂ.ಗಿಂತ ಜಾಸ್ತಿ ಇದ್ದರೆ ಶೇ. 1ರಷ್ಟು ಟಿಡಿಎಸ್ (ಮೂಲದಲ್ಲೇ ತೆರಿಗೆ ಕಡಿತ) ಪಾವತಿಸಬೇಕು ಎಂಬ ನಿಯಮವಿದೆಯೇ? ಟಿಡಿಎಸ್ ಒಟ್ಟು ಖರೀದಿ ಮೌಲ್ಯದ (57 ಲಕ್ಷ ರೂ.) ಭಾಗವೇ ಆಗಿರುವುದೇ ಅಥವಾ ಪ್ರತ್ಯೇಕವೇ? ಸೂಕ್ತ ಮಾಹಿತಿ ನೀಡಿ.
–  ರವಿರಾಜ್ ಶೆಟ್ಟಿ, ಮಂಗಳೂರು
ಯಾವುದೇ ಫ್ಲ್ಯಾಟ್ ಖರೀದಿಸುವಾಗ ಅದರ ಮೌಲ್ಯ 50 ಲಕ್ಷ ರೂ.ಗಿಂತ ಹೆಚ್ಚಿದ್ದರೆ ಶೇ. 1ರಷ್ಟು ಟಿಡಿಎಸ್ ಪಾವತಿಸಬೇಕಾಗುತ್ತದೆ. ಟಿಡಿಎಸ್ ಅಂದ್ರೆ ಮೂಲದಲ್ಲೇ ತೆರಿಗೆ ಕಡಿತ ಮಾಡುವುದು ಎಂದರ್ಥ. ನೀವು ತಿಳಿಸಿರುವಂತೆ 57 ಲಕ್ಷ ರೂ. ಮೌಲ್ಯದ ಫ್ಲ್ಯಾಟ್ ಖರೀದಿಸಲು ಮುಂದಾದರೆ 57 ಸಾವಿರ ರೂ.ಗಳನ್ನು ಟಿಡಿಎಸ್ ಆಗಿ ಪಾವತಿಸಬೇಕಾಗುತ್ತದೆ. ನೀವು ಫ್ಲ್ಯಾಟ್ ಮಾಲೀಕರಿಗೆ ನೀಡುವ 57 ಲಕ್ಷ ರೂ.ನಲ್ಲೇ ಟಿಡಿಎಸ್ ನ ಭಾಗವೂ ಒಳಗೊಂಡಿರುತ್ತದೆ. 57 ಲಕ್ಷದಲ್ಲಿ ಟಿಡಿಎಸ್ ಮೊತ್ತವಾದ 57 ಸಾವಿರವನ್ನು ಆದಾಯ ತೆರಿಗೆ ಇಲಾಖೆಗೆ ಪಾವತಿಸಿ ಅದರ ಚಲನ್ ಅನ್ನು ಫ್ಲ್ಯಾಟ್ ಮಾಲೀಕರಿಗೆ ನೀಡಬೇಕಾಗುತ್ತದೆ. ನೀವು ಟಿಡಿಎಸ್ ಪಾವತಿಸಿದ್ದರೆ ಮಾತ್ರ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಆಸ್ತಿ ರಿಜಿಸ್ಟ್ರೇಷನ್ ಮಾಡಲು ಅವಕಾಶ ನೀಡಲಾಗುತ್ತದೆ. ಫ್ಲ್ಯಾಟ್​ನ ಖರೀದಿದಾರ, ಮಾರಾಟಗಾರ ವಿಳಾಸ ಹಾಗೂ ಫ್ಲ್ಯಾಟ್​ನ ಮೌಲ್ಯವನ್ನು ಫಾರಂ 26ಕ್ಯೂಬಿಯಲ್ಲಿ ನಮೂದಿಸಿ ಟಿಡಿಎಸ್ ಪಾವತಿ ಮಾಡಬಹುದು. ಡಿಡಿಡಿ.ಠಿಜ್ಞಿಠಛ್ಝ.ಟಞ
# ಮನೆ ನವೀಕರಣ (ರೆನೋವೇಷನ್) ಮಾಡಲು ಹಣವಿಲ್ಲ. ಪರ್ಸನಲ್ ಲೋನ್ ಪಡೆದು ಮನೆ ಕಟ್ಟುವ ಆಲೋಚನೆ ಮಾಡಿದ್ದೇನೆ. ಇದು ಸರಿಯಾದ ನಿರ್ಧಾರವೇ?
– ರವಿಕುಮಾರ್, ಕೋಲಾರ
ಮನೆ ನವೀಕರಣಕ್ಕೆ ಅಂತಲೇ ಹೋಮ್ ರೆನೋವೇಷನ್ ಲೋನ್ ಅಂತ ಕೊಡ್ತಾರೆ. ಇದು ಪರ್ಸನಲ್ ಲೋನ್​ನ ಒಂದು ಭಾಗವೇ ಆಗಿದೆ. ಈ ಹೊಮ್ ರೆನೋವೇಷನ್ ಅಡಿಯಲ್ಲಿ ಅರ್ಜಿ ಸಲ್ಲಿಸಿ ಸಾಲ ಪಡೆದರೆ ಬಡ್ಡಿದರ ಕಡಿಮೆ ಇರುತ್ತದೆ. ಆದರೆ, ಬರೀ ಪರ್ಸನಲ್ ಲೋನ್ ಅಂತ ಅರ್ಜಿ ಸಲ್ಲಿಸಿ ಸಾಲ ಪಡೆದರೆ ಬಡ್ಡಿದರ ಹೆಚ್ಚಿರುತ್ತದೆ. ಮನೆಯ ಪೇಂಟಿಂಗ್​ನಿಂದ ಹಿಡಿದು ಕಟ್ಟಡ ವಿಸ್ತರಣೆ ಮಾಡುವುದಕ್ಕೂ ಈ ಲೋನ್ ಅವಕಾಶ ಕಲ್ಪಿಸುತ್ತದೆ. ಕೆಲ ಬ್ಯಾಂಕ್​ಗಳು 20 ಲಕ್ಷದಿಂದ 30 ಲಕ್ಷದವರೆಗೂ ರೆನೋವೇಷನ್ ಲೋನ್ ನೀಡುತ್ತವೆ. ಬಡ್ಡಿದರ ಒಂದೊಂದು ಬ್ಯಾಂಕ್​ನಲ್ಲಿ ಒಂದೊಂದು ರೀತಿ ಇದ್ದು, ಶೇ.8.5ರಿಂದ ಶೇ.14ವರೆಗೂ ಇದೆ. ನಿಮ್ಮ ಅಗತ್ಯಗಳು ಮತ್ತು ಬಡ್ಡಿದರವನ್ನು ಆಧರಿಸಿ ಸೂಕ್ತ ಬ್ಯಾಂಕ್ ಆಯ್ಕೆ ಮಾಡಿ ಹೋಮ್ ರೆನೋವೇಷನ್ ಲೋನ್ ಪಡೆಯುವುದು ಉತ್ತಮ ನಿರ್ಧಾರ.
# ಎರಡು ವರ್ಷಗಳ ಹಿಂದೆ ಕಾರ್ ಲೋನ್ ತೆಗೆದುಕೊಂಡಿದ್ದೆ. ಮೂರು ತಿಂಗಳ ಹಿಂದಷ್ಟೇ ಆ ಲೋನ್ ಕ್ಲೋಸ್ ಮಾಡಿದೆ. ನನ್ನ ಕಾರಿಗೆ ಕಾಂಪ್ರಹೆನ್ಸಿವ್ (ಕಂಪ್ಲೀಟ್ ಕವರೇಜ್) ಇನ್ಶೂರೆನ್ಸ್ ಮಾಡಿಸಿದ್ದೆ. ಇತ್ತೀಚೆಗಷ್ಟೇ ಅಗ್ನಿ ಅವಘಡ ದಲ್ಲಿ ನನ್ನ ಕಾರು ಸಂಪೂರ್ಣವಾಗಿ ಸುಟ್ಟು  ಭಸ್ಮವಾಯಿತು. ನನಗೆ ಈಗ ವಿಮೆ ಪರಿಹಾರ ಸಿಗುತ್ತದೋ ಇಲ್ಲವೋ ಎಂಬ ಚಿಂತೆಯಾಗಿದೆ. ಸೂಕ್ತ ಸಲಹೆ ನೀಡಿ.
– ಹರೀಶ್, ಕನಕಪುರ
ನೀವು ಕಾಂಪ್ರಹೆನ್ಸಿವ್ ಇನ್ಶೂರೆನ್ಸ್ ಮಾಡಿಸಿದ್ದು, ನಿಮ್ಮ ಕಾರು ನಿಜವಾಗಿಯೂ ಅಗ್ನಿ ಅವಘಡದಲ್ಲಿ ಸುಟ್ಟು ಭಸ್ಮವಾಗಿದ್ದ ಪಕ್ಷದಲ್ಲಿ ಖಂಡಿತವಾಗಿಯೂ ನಿಮಗೆ ಇನ್ಶೂರೆನ್ಸ್ ಕವರೇಜ್ ಸಿಗುತ್ತದೆ. ಕಾರ್ ಇನ್ಶೂರೆನ್ಸ್​ನಲ್ಲಿ ಥರ್ಢ್ ಪಾರ್ಟಿ ಇನ್ಶೂರೆನ್ಸ್ ಮತ್ತು ಕಾಂಪ್ರಹೆನ್ಸಿವ್ ಇನ್ಶೂರೆನ್ಸ್ ಎಂಬ ಎರಡು ಮಾದರಿಗಳಿವೆ. ಥರ್ಡ್ ಪಾರ್ಟಿ ಇನ್ಶೂರೆನ್ಸ್​ನಲ್ಲಿ ನೀವು ಅಪಘಾತ ಮಾಡಿದ ವಾಹನಕ್ಕಷ್ಟೇ ಇನ್ಶೂರೆನ್ಸ್ ಕವರೇಜ್ ಸಿಗುತ್ತದೆ. ಆದರೆ ಕಾಂಪ್ರಹೆನ್ಸಿವ್ ಇನ್ಶೂರೆನ್ಸ್​ನಲ್ಲಿ ನಿಮ್ಮ ವಾಹನಕ್ಕೆ ಮತ್ತು ನೀವು ಅಪಘಾತ ಮಾಡಿದ ವಾಹನಕ್ಕೆ ಇನ್ಶೂರೆನ್ಸ್ ಕವರೇಜ್ ಇರುತ್ತದೆ. ಈ ಕೆಳಗಿನ ಸಂದರ್ಭಗಳಲ್ಲಿ ನಿಮಗೆ ಕಾಂಪ್ರಹೆನ್ಸಿವ್ ಇನ್ಶೂರೆನ್ಸ್ ಕವರೇಜ್ ಸಿಗುತ್ತದೆ.
ಪ್ರಕೃತಿ ವಿಕೋಪಗಳಿಂದ ವಾಹನಕ್ಕೆ ಹಾನಿ
ಕಳ್ಳತನ
ಅಗ್ನಿ ಅವಘಡ
ದಾಂಧಲೆಯಾದಾಗ
ಪ್ರಾಣಿಗಳಿಂದಾದ ಹಾನಿ
ಮರಗಳು ಬಿದ್ದು ಹಾನಿಯಾದಾಗ
ಕಾನೂನು ಸುವ್ಯವಸ್ಥೆ ಸರಿಯಿರದೆ ವಾಹನಕ್ಕೆ ಹಾನಿಯಾದಾಗ
ನೀವೂ ಪ್ರಶ್ನೆ ಕೇಳಬಹುದು
ಮನಿ ಮಾತು ಅಂಕಣದಲ್ಲಿ ಆರ್ಥಿಕ ವಿಚಾರಗಳ ಬಗ್ಗೆ ಮಾಹಿತಿ ವಿಶ್ಲೇಷಣೆಗಳನ್ನು ನೀಡುವುದು ಮಾತ್ರವಲ್ಲ, ಓದುಗರ ಪ್ರಶ್ನೆಗಳಿಗೆ ಉತ್ತರವನ್ನೂ ನೀಡಲಾಗುತ್ತದೆ. ಹೂಡಿಕೆ, ಉಳಿತಾಯ, ತೆರಿಗೆ, ವಿಮೆ, ಷೇರು ಮಾರುಕಟ್ಟೆ – ಹೀಗೆ ವಿತ್ತರಂಗಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ಕಳುಹಿಸಬಹುದು. ನಮ್ಮ ತಜ್ಞರ ತಂಡದವರು ಉತ್ತರ ನೀಡುತ್ತಾರೆ. ಪ್ರಶ್ನೆ ಕಳಿಸುವವರು ಕಡ್ಡಾಯವಾಗಿ ಮೊಬೈಲ್ ಸಂಖ್ಯೆ ನಮೂದಿಸಿ.
ಪ್ರಶ್ನೆ ಕಳಿಸಬೇಕಾದ ಇಮೇಲ್: vittasuggi@gmail.com

**RSGE**::: ಚೆಸ್ ಒಲಿಂಪಿಯಾಡ್​ಗೆ ಭಾರತದ ಅಂಧ ಸ್ಪರ್ಧಿ!,

ಭಾರತದ ಅಂಧ ಚೆಸ್ ಆಟಗಾರ್ತಿ ವೈಶಾಲಿ ನರೇಂದ್ರ ಸಲಾವ್​ಕರ್, ವಿಶ್ವ ಚೆಸ್ ಒಲಿಂಪಿಯಾಡ್​ನಲ್ಲಿ ಸ್ಪರ್ಧಿಸಲಿರುವ ಭಾರತದ ಮೊದಲ ದೃಷ್ಟಿಹೀನ ಸ್ಪರ್ಧಿ ಎನಿಸಲಿದ್ದಾರೆ. ಜಾರ್ಜಿಯಾದ ಬಟುಮಿಯಲ್ಲಿ ಭಾನುವಾರ ಆರಂಭವಾಗಲಿರುವ 43ನೇ ಆವೃತ್ತಿಯ ಒಲಿಂಪಿಯಾಡ್​ನಲ್ಲಿ, ಇಂಟರ್​ನ್ಯಾಷನಲ್ ಬ್ರೖೆಲಿ ಚೆಸ್ ಸಂಸ್ಥೆ (ಐಬಿಸಿಎ) ತಂಡದ ಭಾಗವಾಗಿ ವೈಶಾಲಿ ಸ್ಪರ್ಧೆ ಮಾಡಲಿದ್ದಾರೆ. ಫಿಡೆ ಮಾನ್ಯತೆ ಹೊಂದಿರುವ ಐಬಿಸಿಎ, ಒಲಿಂಪಿಯಾಡ್​ನ ಮುಕ್ತ ಹಾಗೂ ಮಹಿಳಾ ವಿಭಾಗಕ್ಕೆ ತಂಡವನ್ನು ಕಳುಹಿಸಿಕೊಟ್ಟಿದೆ. ‘ಮಹಾರಾಷ್ಟ್ರದ 45 ವರ್ಷದ ವೈಶಾಲಿ, ಕಳೆದ 20-25 ವರ್ಷಗಳಿಂದ ಚೆಸ್ ಆಡುತ್ತಿದ್ದು, ಎಂಟು ಬಾರಿ ರಾಷ್ಟ್ರೀಯ ಚಾಂಪಿಯನ್ ಕೂಡ ಆಗಿದ್ದಾರೆ. ಈ ಸಾಧನೆಗೆ ಅವರು ಅರ್ಹರಾಗಿದ್ದಾರೆ’ ಎಂದು ಐಬಿಸಿಎ ಜತೆ, ಅಖಿಲ ಭಾರತ ಅಂಧರ ಚೆಸ್ ಸಂಸ್ಥೆ (ಎಐಸಿಎಫ್​ಬಿ) ಅಧ್ಯಕ್ಷರೂ ಆಗಿರುವ ಜಾಧವ್ ಚಾರುದತ್ತ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಸ್ಪೇನ್​ನ ಇಬ್ಬರು ಚೆಸ್ ಆಟಗಾರ್ತಿಯರಿಗೆ ಟೂರ್ನಿಯಲ್ಲಿ ಭಾಗವಹಿಸಲು ಸಾಧ್ಯವಾಗದ ಕಾರಣ ವೈಶಾಲಿಗೆ ಈ ಅದೃಷ್ಟ ಒಲಿದಿದೆ. ಒಲಿಂಪಿಯಾಡ್ ಅಧಿಕೃತ ವೆಬ್​ಸೈಟ್ ಪ್ರಕಾರ, ಅಂತಾರಾಷ್ಟ್ರೀಯ ಕಿವುಡರ ಚೆಸ್ ಸಮಿತಿ ತಂಡದ ಭಾಗವಾಹಿ ಭಾರತದ ಮಲಿಕಾ ಹಂಡಾ ಸ್ಪರ್ಧೆ ಮಾಡಲಿದ್ದಾರೆ.

**RSGE**:::

ಸರ್ಕಾರಿ ಶಾಲೆಗಳ ಶಿಕ್ಷಕರು ವಾರ್ಷಿಕ ಶೈಕ್ಷಣಿಕ ಅವಧಿಯಲ್ಲಿ ಕೇವಲ ಶೇ.19.1 ಸಮಯವನ್ನು ವಿದ್ಯಾರ್ಥಿಗಳ ಕಲಿಕೆಗೆ ಮೀಸಲಿಡುತ್ತಿದ್ದಾರೆ. ಉಳಿದ ಶೇ.81 ಅವಧಿ ಸರ್ಕಾರದ ವಿವಿಧ ಕೆಲಸದಲ್ಲೇ ಕಳೆದುಹೋಗುತ್ತಿದೆ ಎಂಬ ಆತಂಕಕಾರಿ ವಿಷಯವನ್ನು ಶೈಕ್ಷಣಿಕ ಯೋಜನೆ ಹಾಗೂ ಆಡಳಿತದ ರಾಷ್ಟ್ರೀಯ ಸಂಸ್ಥೆ(ಎನ್​ಐಇಪಿಎ)ಸಮೀಕ್ಷಾ ವರದಿ ಹೊರಗೆಡವಿದೆ.
ಪಾಠ ಮಾಡಲೇ ಬಿಡುವುದಿಲ್ಲ!
ಶೈಕ್ಷಣಿಕ ವರ್ಷ ಆರಂಭದಿಂದ ಸೆಪ್ಟೆಂಬರ್​ವರೆಗೆ ಪಠ್ಯಪುಸ್ತಕ, ಸಮವಸ್ತ್ರ, ಸೈಕಲ್ ವಿತರಣೆ ಹಾಗೂ ಇತರ ಸರ್ಕಾರಿ ಕೆಲಸಗಳಲ್ಲಿಯೇ ಶಿಕ್ಷಕರು ಹೈರಾಣಾಗಿ ಹೋಗುತ್ತಾರೆ. ಉಳಿದ ದಿನಗಳಲ್ಲಿಯೂ ಸರ್ಕಾರ ಹೇಳಿದ ಇತರ ಕೆಲಸಗಳನ್ನು ಮಾಡಬೇಕಾಗುತ್ತದೆ. ಸರ್ಕಾರದ ವಿವಿಧ ಕೆಲಸಗಳನ್ನು ಮಾಡುವುದು ಹೇಗೆಂದು ಹೇಳಿಕೊಡುತ್ತಾರೆ. ಆದರೆ ಪಠ್ಯದ ಗುಣಮಟ್ಟ ಏರಿಕೆಗೆ ಯಾವುದೇ ಮಾರ್ಗಸೂಚಿಗಳು ಬರುವುದಿಲ್ಲ. ಇದರಿಂದ ಸರ್ಕಾರಿ ಶಾಲೆಗಳ ಗುಣಮಟ್ಟ ಕುಸಿಯುತ್ತಿದೆ ಎಂಬ ಶಿಕ್ಷಕರ ಅಭಿಪ್ರಾಯವೂ ವರದಿಯಲ್ಲಿ ಉಲ್ಲೇಖವಾಗಿದೆ.
ಏನೇನು ಶಿಕ್ಷಣೇತರ ಕೆಲಸ?
# ಚುನಾವಣೆ ಅಧಿಕಾರಿ, ಮತಚೀಟಿ ನೋಂದಣಿಗೆ ಸಹಕಾರ
# ಬಿಸಿಯೂಟ ಹಾಗೂ ಕ್ಷೀರಭಾಗ್ಯ ಉಸ್ತುವಾರಿ
# ಆದಾಯ ಹಾಗೂ ಜಾತಿ ಪತ್ರದ ನೋಂದಣಿ
# ಶಿಕ್ಷಣ ಇಲಾಖೆಯ ಇತರ ಕೆಲಸಗಳು
# ಜನಗಣತಿ
# ಶಾಲೆಯಲ್ಲಿ ಗುಮಾಸ್ತ ಹಾಗೂ ಪರಿಚಾರಕರು ಮಾಡುವ ಎಲ್ಲ ಕೆಲಸ
# ಬಯಲು ಬಹಿರ್ದೆಸೆ ಮುಕ್ತ ಸಮಾಜ ಸೇರಿ ಇತರ ಸರ್ಕಾರಿ ಯೋಜನೆಗಳ ಕುರಿತು ಸಮೀಕ್ಷೆ
# ಪಲ್ಸ್ ಪೋಲಿಯೊ ಲಸಿಕೆ ಕಾರ್ಯಕ್ರಮ
ನೆಪಮಾತ್ರದ ಅನುಪಾತ
ಶಿಕ್ಷಣ ಹಕ್ಕು ಕಾಯ್ದೆ ಪ್ರಕಾರ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಅನುಪಾತ 30:1 ಇರಬೇಕು. ಆದರೆ ಕರ್ನಾಟಕ ಸೇರಿ ಯಾವುದೇ ರಾಜ್ಯಗಳಲ್ಲಿ ಈ ಅನುಪಾತ ಅನುಷ್ಠಾನಕ್ಕೆ ಬಂದಿಲ್ಲ. ವರದಿಯಲ್ಲಿ ಮಹಾರಾಷ್ಟ್ರದ ಒಂದು ಶಾಲೆಯ ಉದಾಹರಣೆ ನೀಡಲಾಗಿದ್ದು, ಆ ಶಾಲೆಯಲ್ಲಿ 8 ಶಿಕ್ಷಕರಿದ್ದರೆ, ಐವರು ಶಿಕ್ಷಣೇತರ ಚಟುವಟಿಕೆಯಲ್ಲಿ ನಿರತರಾಗಿರುತ್ತಾರೆ. ಉಳಿದ ಮೂವರು ಶಿಕ್ಷಕರು 555 ವಿದ್ಯಾರ್ಥಿಗಳನ್ನು ನಿಭಾಯಿಸಬೇಕಿದೆ. ಶೇ.15 ಶಿಕ್ಷಕರು ಪಾಠ ಮಾಡುವುದು ಬಿಟ್ಟು ಕಾಯಂ ಆಗಿ ಸರ್ಕಾರಿ ಚಾಕರಿಯಲ್ಲಿ ನಿರತರಾಗಿದ್ದಾರೆ.
> ದೇಶದಲ್ಲಿರುವ ಶಾಲೆಗಳು: 14.67 ಲಕ್ಷ
> ಸರ್ಕಾರಿ ಶಾಲೆಗಳು: 10.7 ಲಕ್ಷ
> ಸರ್ಕಾರಿ ಶಾಲೆ ವಿದ್ಯಾರ್ಥಿಗಳು: 11 ಕೋಟಿ
> ಒಟ್ಟು ಶಿಕ್ಷಕರು: 80.7 ಲಕ್ಷ
> ಸರ್ಕಾರಿ ಶಾಲೆ ಶಿಕ್ಷಕರು: 47.3 ಲಕ್ಷ
ಶಿಫಾರಸುಗಳೇನು?
# ಶಿಕ್ಷಣ ಹಕ್ಕು ಕಾಯ್ದೆಯಲ್ಲಿ ಉಲ್ಲೇಖವಾಗಿರುವಂತೆ ಶಿಕ್ಷಣೇತರ ಚಟುವಟಿಕೆಗಳಿಗೆ ಶಿಕ್ಷಕರನ್ನು ಬಳಸಿಕೊಳ್ಳಬಾರದು.
# ಶಿಕ್ಷಣ ಹಾಗೂ ಶಿಕ್ಷಣೇತರ ಚಟುವಟಿಕೆಗಳ ವ್ಯಾಖ್ಯಾನವನ್ನು ಶಿಕ್ಷಣ ಇಲಾಖೆ ಮಾಡಬೇಕು.
# ಶಿಕ್ಷಕರನ್ನು ಆಡಳಿತದ ಕೆಲಸಕ್ಕೆ ಬಳಸಿಕೊಳ್ಳುವುದನ್ನು ನಿರ್ಬಂಧಿಸಬೇಕು.
# ಒಂದು ದೇಶ, ಒಂದು ಚುನಾವಣೆ ವ್ಯವಸ್ಥೆಯಿಂದ ಪದೇಪದೆ ಶಿಕ್ಷಕರ ಮೇಲಿನ ಚುನಾವಣೆ ಕೆಲಸದ ಒತ್ತಡ ತಪ್ಪಲಿದೆ.
ನಿಯಮ ಹೇಳುವುದೇನು?
# ಕಾಯ್ದೆ ಪ್ರಕಾರ ಕಿರಿಯ ಪ್ರಾಥಮಿಕ ಶಾಲೆಗೆ ವಾರ್ಷಿಕ 200 ಕೆಲಸದ ದಿನ
# ಹಿರಿಯ ಪ್ರಾಥಮಿಕ ಶಾಲೆಗೆ 220 ಕೆಲಸದ ದಿನ
# ಆದರೆ ಕೇವಲ 42 ದಿನಗಳು ಕಲಿಕೆಗೆ ಮೀಸಲು

**RSGE**::: ಪಿಡಿಒಗಳಿಗೆ ಮುಂಬಡ್ತಿ,

ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ(ಪಿಡಿಒ) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾ ಯತ್​ರಾಜ್ ಇಲಾಖೆ ಸಹಾಯಕ ನಿರ್ದೇಶಕರ ಹುದ್ದೆಗೆ ಬಡ್ತಿ ನೀಡಲು ಸರ್ಕಾರ ಮುಂದಾಗಿದೆ. ಈ ಸಂಬಂಧ ಎಲ್ಲ ಜಿಲ್ಲ್ಲಾ ಪಂಚಾಯಿತಿ ಸಿಇಒಗಳಿಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಪತ್ರ ಬರೆದಿದೆ. ಪಿಡಿಒ ವೃಂದದ ಹಳೆಯ ಮತ್ತು ಹೊಸ ಜ್ಯೇಷ್ಠತಾ ಕ್ರ.ಸಂ. 420/1223 ರಿಂದ 500/1329ರವರೆಗಿನ ಅಧಿಕಾರಿಗಳಿಗೆ ಮುಂಬಡ್ತಿ ಅವಕಾಶವಿದೆ. ಈ ಕ್ರಮ ಸಂಖ್ಯೆಯಲ್ಲಿ ತಮ್ಮ ಕಚೇರಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವ ಹಿಸುತ್ತಿರುವ ಅಧಿಕಾರಿಗಳ ವಿವರ ಸಹಿತ ಪ್ರಸ್ತಾವನೆ ಸಲ್ಲಿಸಬೇಕು. ಪ್ರತಿ ಅಧಿ ಕಾರಿಯ 2017-18ನೇ ಸಾಲಿನ ಮೂಲ ಕಾರ್ಯನಿರ್ವಹಣಾ ವರದಿ ಜತೆ ಸದರಿ ನೌಕರರ ವಿರುದ್ಧ ನಡೆಯುತ್ತಿರುವ, ನಡೆಸಲು ಉದ್ದೇಶಿಸಲಾಗಿರುವ ಅಥವಾ ಮುಕ್ತಾಯ ಗೊಂಡಿರುವ ಇಲಾಖಾ ವಿಚಾರಣೆ ಮಾಹಿತಿ ಹಾಗೂ ಆದೇಶದ ಪ್ರತಿ ನೀಡಬೇಕು. ಈ ನೌಕರರ ವಿರುದ್ಧ ಲೋಕಾಯುಕ್ತ ಪ್ರಕರಣ ಬಾಕಿಯಿದ್ದರೆ ವಿವರ ನೀಡಬೇಕೆಂದು ಸಿಇಒಗಳಿಗೆ ತಿಳಿಸಲಾಗಿದೆ.

ಹೆಚ್ಚು ಓದಿದವು