Wednesday, July 04, 2018

**RSGE**::: *JYOTHI SANJEEVINI PLAN:*

*"ಜ್ಯೋತಿ ಸಂಜೀವಿನಿ ಯೋಜನೆ- Cashless Medical Treatment"*
HRMS ನಲ್ಲಿ ,
(೧) ಸರ್ಕಾರಿ ನೌಕರರ ಆಧಾರ್ ನಂ. & ಆತನ ಕುಟುಂಬ ಸದಸ್ಯರ ಆಧಾರ್ ನಂ. Register ಮಾಡಿಸಿ.
(೨) ಜ್ಯೋತಿ ಸಂಜೀವಿನಿ ಯೋಜನೆಯು ಕೇವಲ 7 ಮಾರಣಾಂತಿಕ ಖಾಯಿಲೆಗಳ ಚಿಕಿತ್ಸೆಗೆ ಮಾತ್ರ ಸಂಬಂಧಿಸಿದೆ
1. ಹೃದ್ರೋಗ
2. ಕ್ಯಾನ್ಸರ್
3. ನರ ರೋಗ
4. ಯುರಿನರಿ (ಕಿಡ್ನಿ)
5. ಸುಟ್ಟ ಗಾಯ
6. ಪಾಲಿಟ್ರಾಮ
7. ಶಿಶುಗಳ ಶಸ್ತ್ರಚಿಕಿತ್ಸೆ.
(೩) ಜ್ಯೋತಿ ಸಂಜೀವಿನಿ ಯೋಜನೆಗೆ ಒಳಪಡುವ ಆಸ್ಪತ್ರೆಗಳಲ್ಲಿ ಮಾತ್ರ ಚಿಕಿತ್ಸೆ ಪಡೆಯಬೇಕು.
*ಆಸ್ಪತ್ರೆಗೆ ದಾಖಲಾದ ನಂತರ ಏನು ಮಾಡಬೇಕು..?*
ಆ ಆಸ್ಪತ್ರೆಯ ADMIN ರವರನ್ನು ಭೇಟಿ ಮಾಡಿ,
(೧) ಆ ಆಸ್ಪತ್ರೆಯು 'ಜ್ಯೋತಿ ಸಂಜೀವಿನಿ ಯೋಜನೆ' ಗೆ ಒಳಪಡುತ್ತದೆಯೇ ಖಾತ್ರಿ ಪಡಿಸಿಕೊಳ್ಳಿ
(ಜ್ಯೋತಿ ಸಂಜೀವಿನಿ ಯೋಜನೆಯ ಆಸ್ಪತ್ರೆಗಳ ಪಟ್ಟಿ ಆಗಾಗ್ಗೆ ಬದಲಾಗುತ್ತಿರುತ್ತದೆ)
(೨) ನಿಮ್ಮ ಖಾಯಿಲೆಯು ಜ್ಯೋತಿ ಸಂಜೀವಿನಿ ಯೋಜನೆಯಡಿಯಲ್ಲಿ ಬರುತ್ತದೆಯೇ, ಇಲ್ಲವೇ ಎಂದು ADMIN/ ವೈದ್ಯರಿಂದ ಖಚಿತಪಡಿಸಿಕೊಳ್ಳಿ
(೩) ADMIN ರಲ್ಲಿ ನೀವು ಸರ್ಕಾರಿ ನೌಕರರೆಂದು ಪರಿಚಯಿಸಿಕೊಂಡು, ನಿಮ್ಮ ಮೊದಲ KGID ನಂ. ನೀಡಿ
(೪) ಆ ಆಸ್ಪತ್ರೆಯ E-MAIL ID ಪಡೆದು, ನಿಮ್ಮ HRMS SALARY CERTIFICATE & HRMS DETAILS ಆ ಆಸ್ಪತ್ರೆಯ E-MAIL ID ಗೆ ಇ-ಮೇಲ್ ಮಾಡಲು ನಿಮ್ಮ CLERK/ CASE WORKER ರಲ್ಲಿ ವಿನಂತಿಸಿಕೊಳ್ಳಿ.
(ಅಥವಾ ನಿಮ್ಮ HRMS SALARY SLIP & HRMS DETAILS print out ನಿಮ್ಮ ಬಳಿ ಇದ್ದಲ್ಲಿ ಆಸ್ಪತ್ರೆಗೆ ನೀಡಿ)
(೫) ರೋಗಿಯ VOTER ID ಅಥವಾ AADHAAR CARD ಅಥವಾ DL Zerox Copy ಆಸ್ಪತ್ರೆಗೆ ನೀಡಿ.
*ಸೂಚನೆ:*
ಜ್ಯೋತಿ ಸಂಜೀವಿನಿ ಯೋಜನೆಯಲ್ಲಿ ಒಂದು ರೂಪಾಯಿ ಕೂಡ ಖರ್ಚು ಆಗದು, ಇದು ಸಂಪೂರ್ಣ ಉಚಿತ..
ಇದು ರಾಜ್ಯ ಸರ್ಕಾರದ ಅದ್ಭುತವಾದ & ಅತ್ಯುತ್ತಮವಾದ ಯೋಜನೆ.
ಈ ರೀತಿಯಲ್ಲಿ *ಜ್ಯೋತಿ ಸಂಜೀವಿನಿ* ಯೋಜನೆಯ ಪ್ರಯೋಜನ ಪಡೆಯಬಹುದು
(HRMS ನಲ್ಲಿ ನಿಮ್ಮ ಕುಟುಂಬ ಸದಸ್ಯರ ಆಧಾರ್ ನಂ. ನೋಂದಣಿ ಸಾಧ್ಯವಾಗದಿದ್ದರೆ ಯೋಚಿಸುವ ಅಗತ್ಯವಿಲ್ಲ... ನಿಮ್ಮ ಆಧಾರ್ ನಂ. ನೋಂದಣಿ ಆಗಿದ್ದರೆ ಸಾಕು...)
*#ಜ್ಯೋತಿ ಸಂಜೀವಿನಿ HELP LINE: 1800-4258-330*

No comments:

Post a Comment

ಅನಿಸಿಕೆ ತಿಳಿಸಿ

ಹೆಚ್ಚು ಓದಿದವು