Monday, July 09, 2018

**RSGE**::: ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಾರ್ವತ್ರಿಕ ವರ್ಗಾವಣೆಯ ಅಂಗವಿಕಲ ಉಪನ್ಯಾಸಕರ ಆದ್ಯತಾ ಪಟ್ಟಿಗೆ ೨೦೧೩ ರಲ್ಲಿ ನೇಮಕವಾದ ಅಂಗವಿಕಲ ಉಪನ್ಯಾಸಕರನ್ನು ಪರಿಗಣಿಸುವ ಕುರಿತು



ಇವರಿಗೆ,
ಮಾನ್ಯ ಶ್ರೀ ಎನ್ ಮಹೇಶರವರು
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರು
ವಿಧಾನ ಸೌಧ, ಕರ್ನಾಟಕ ಸರ್ಕಾರ
ಬೆಂಗಳುರು -
ಇವರಿಂದ,
ಅಂಗವಿಕಲ ಉಪನ್ಯಾಸಕರು
ಸರ್ಕಾರಿ ಪದವಿ ಪೂರ್ವ ಕಾಲೇಜುಗಳು
ರಾಜ್ಯದ ಎಲ್ಲಾ ತಾಲ್ಲೂಕು ಹಾಗೂ ಜಿಲ್ಲೆಗಳು
ಮಾನ್ಯರೇ,
ವಿಷಯ- ೨೦೧೭-೧೮ ನೇ ಸಾಲಿನ ಸರಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಾರ್ವತ್ರಿಕ
ವರ್ಗಾವಣೆಯ ಅಂಗವಿಕಲ ಉಪನ್ಯಾಸಕರ ಆದ್ಯತಾ ಪಟ್ಟಿಗೆ ೨೦೧೩ ರಲ್ಲಿ ನೇಮಕವಾದ
ಅಂಗವಿಕಲ ಉಪನ್ಯಾಸಕರನ್ನು ಪರಿಗಣಿಸುವ ಕುರಿತು ಮನವಿ.
ಉಲ್ಲೇಖ-) ಸಂಖ್ಯೆ-ಪಪೂಶಿಇ/ಆಡಳಿತ-/.ವರ್ಗ-೦೧/೨೦೧೭-೧೮ ದಿನಾಂಕ೨೪/೦೧/೨೦೧೮.
) ಸಂಖ್ಯೆ-.ರಾ..ಅಂ.ನೌ.ಸಂ ದಿನಾಂಕ-೨೨-೦೧-೨೦೧೮.
) ಸಂ: ಸಿಆಸುಇ ೧೮ ಸೆನ್ಸವ ೨೦೧೪, ಬೆಂಗಳೂರು ದಿನಾಂಕ-೦೬.೦೨.೨೦೧೪,
) ಸಂ: ಸಿಆಸುಇ ಎಸ್ ಟಿ ಆರ್ ೨೦೦೧, ಬೆಂಗಳೂರು ದಿನಾಂಕ-೨೨.೧೧.೨೦೦೧
) ಅಂಗವಿಕಲರ ವ್ಯಕ್ತಿಗಳ ಅಧಿ ನಿಯಮ ೧೯೯೫(ಅವಕಾಶ,ಹಕ್ಕು ಸಂರಕ್ಷಣೆ, ಭಾಗವಹಿಸುವಿಕೆ)
) ಅಂಗವಿಕಲರ ವ್ಯಕ್ತಿಗಳ ಹಕ್ಕು ಅಧಿನಿಯಮ ೨೦೧೬(ಅವಕಾಶ,ಹಕ್ಕು ಸಂರಕ್ಷಣೆ, ಭಾಗವಹಿಸುವಿಕೆ)
| 中中车卒中中中
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಸಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಕರ್ತವ್ಯ
ನಿರ್ವಹಿಸುತ್ತಿರುವ ಅಂಗವಿಕಲತೆ ಹೊಂದಿ ನೇಮಕವಾದ ಉಪನ್ಯಾಸಕರಾದ ನಾವು ಅರಿಕೆ
ಮಾಡಿಕೊಳ್ಳುವುದೇನೆಂದರೆ, ಉಲ್ಲೇಖ () ರಂತೆ ಮಾನ್ಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು
೨೦೧೭-೧೮ ನೇ ಸಾಲಿನ ಉಪನ್ಯಾಸಕರ ವರ್ಗಾವಣೆಗೆ ಅಧಿಸೂಚಿಸಿದ್ದು, ಸದರಿ ಅಧಿಸೂಚನೆಯಲ್ಲಿ ಹೊಸದಾಗಿ
ನೇಮಕಗೊಂಡ ಎಲ್ಲಾ ಉಪನ್ಯಾಸಕರಿಗೆ ವರ್ಷಗಳ ಕನಿಷ್ಟ ಸೇವೆಯನ್ನು ಕಡ್ಡಾಯಗೊಳಿಸಿದ್ದು, ಆದರೆ
ಹಿಂದಿನ ಅಧಿಸೂಚನೆಗಳಲ್ಲಿ ಖಾಯಂ ಪೂರ್ವ ಸೇವೆ ಪೂರೈಸಿದ ಅಂಗವಿಕಲ ಉಪನ್ಯಾಸಕರಿಗೆ ವರ್ಗಾವಣೆಗೆ
ಅವಕಾಶ ನೀಡುತ್ತಿದ್ದು, ಸದರಿ ಅಧಿಸೂಚನೆಯಲ್ಲಿ ಅಂಗವಿಕಲ ಉಪನ್ಯಾಸಕರಿಗೂ ವರ್ಷ ಕನಿಷ್ಟ ಸೇವೆ ಕಡ್ಡಾಯ
ಮಾಡಿ, ನಮ್ಮನ್ನು ಪರಿಗಣಿಸದೇ ಪಟ್ಟಿ ತಯಾರಿಸಲಾಗಿದೆ. ನಮಗೆ ತುಂಬಾ ಅನ್ಯಾಯವಾಗಿರುವುದರ ಜೊತೆಗೆ
ಯಾವುದೇ ಅನುಕಂಪದ ವಿನಾಯ್ತಿ ನೀಡಿರುವುದಿಲ್ಲ. ಜೊತೆಗೆ ಅಂಗವಿಕಲ ನೌಕರರ ರಾಜ್ಯಾಧ್ಯಕ್ಷರು ಉಲ್ಲೇಖ ()
ರಲ್ಲಿ ಮಾನ್ಯ ಮುಖ್ಯ ಕಾರ್ಯದರ್ಶಿಗಳು ಸಾರ್ವಜನಿಕ ಶಿಕ್ಷಣ ಇಲಾಖೆ ಇವರಿಗೆ ನಿಯಮಗಳನ್ನು ಸರಿಪಡಿಸಲು
ಅಂಗವಿಕಲ ಶಿಕ್ಷಕರು, ಉಪನ್ಯಾಸಕರಿಗೆ ವಿನಾಯ್ತಿ ನೀಡಲು ಮನವಿ ಮಾಡಿರುತ್ತಾರೆ. ಉಲ್ಲೇಖ ರಲ್ಲಿ ಅಂಗವಿಕಲ
ನೌಕರರಿಗೆ ಸಾಮಾನ್ಯ ವರ್ಗಾವಣಾ ನಿಯಮಗಳಲ್ಲಿ ಸೂಕ್ತ ವಿನಾಯ್ತಿ ನೀಡಬೇಕೆಂದು ಜೊತೆಗೆ ಉಲ್ಲೇಖ ರಲ್ಲಿ
ಬಿ ವರ್ಗದ ಸರ್ಕಾರಿ ನೌಕರರಿಗೆ ವರ್ಷ ಸೇವೆಯನ್ನು ಕಡ್ಡಾಯಗೊಳಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ
ಇಲಾಖೆ ಆದೇಶಿಸಿದೆ. ಉಲ್ಲೇಖ ಹಾಗೂ ರಲ್ಲಿ ಅಂಗವಿಕಲರ ವ್ಯಕ್ತಿಗಳ ಹಕ್ಕು ಅಧಿನಿಯಮಗಳಲ್ಲಿ (೧೯೯೫
ಹಾಗೂ ೨೦೧೬) ಅಂಗವಿಕಲ ನೌಕರರಿಗೆ ವರ್ಗಾವಣಾ ನಿಯಮ ಹಾಗೂ ನಿಯೋಜನಾ ನಿಯಮಗಳಲ್ಲಿ ಸೂಕ್ತ
ವಿನಾಯ್ತಿ ನೀಡಿ ಸಹಾನುಭೂತಿಯಿಂದ ನೋಡಬೇಕು ಹಾಗೂ ಅವರ ಇಚ್ಚೆಗೆ ಅನುಸಾರ ವರ್ಗಾಯಿಸಬೇಕು ಮತ್ತು
ಅಂಗವಿಕಲ ನೌಕರರು ಆದ್ಯತೆ ನೀಡಿದ ಸ್ಥಳಕ್ಕೆ ವರ್ಗಾವಣೆ ಮಾಡಬೇಕು ಎಂದು ಸ್ಪಷ್ಟವಾಗಿ ಸೂಚಿಸಿವೆ. ತಾವುಗಳು
ದೈಹಿಕವಾಗಿ ಮಾನಸಿಕವಾಗಿ, ಭಾವನಾತ್ಮಕವಾಗಿ, ಆರ್ಥಿಕವಾಗಿ ಸಧೃಡವಾಗಿರುವ ನಮಗಿಂತ ಕೆಳಗಿನ ವರ್ಗಾವಣಾ
ಆದ್ಯತಾ ವಲಯದವರಿಗೆ ಹೆಚ್ಚಿನ ಮಹತ್ವ ನೀಡಿ ಅವರಿಗೆ ಮಾತ್ರ ವರ್ಷಗಳ ಕಡ್ಡಾಯ ಸೇವೆಯಿಂದ ವಿನಾಯ್ತಿ
ನೀಡುತ್ತಿರುವುದು ದಿನಂಪ್ರತಿ ಪತ್ರಿಕೆಗಳಲ್ಲಿ ಪ್ರಚಾರವಾಗುತ್ತಿದೆ. ಇದನ್ನು ಗಮನಿಸಿದಾಗ ನಮಗೆ ತುಂಬಾ ನೋವಾಗಿದೆ.
ಅಂಗವಿಕಲರು ಯಾರ ಗಮನಕ್ಕೂ ಬಾರದೇ ಇರುವುದು, ಅವರಿಗೆ ಯಾರು ಸಹಾಯ ಮಾಡದಿರುವುದು, ನಮ್ಮ
ಬಗ್ಗೆ ಯಾವ ನಾಯಕರು ಧ್ವನಿ ಎತ್ತದಿರುವುದು, ಮಹತ್ವ ನೀಡದಿರುವವುದನ್ನು ಗಮನಿಸಿದರೆ ನಮಗೆಲ್ಲಾ ತುಂಬಾ
ನೋವಾಗಿದೆ. ನಮ್ಮ ಬಗ್ಗೆ ಈಗಾಲಾದರೂ ಅನುಕಂಪದಿಂದಾದರೂ ಸಹಾನೂಭೂತಿ ತೋರಿಸಿ ಕರಣಾಳುಗಳಾದ
ತಾವುಗಳು ಮೇಲಿನ ಆದೇಶಗಳನ್ನ ಪರಿಶೀಲಿಸಿ ಖಾಯಂಪೂರ್ವ ಸೇವಾ ಅವಧಿಯನ್ನು ಪೂರೈಸಿದ ಎಲ್ಲಾ
ವಿಧದ ಅಂಗವಿಕಲ ಉಪನ್ಯಾಸಕರಿಗೆ ೨೦೧೭-೧೮ ನೇ ಸಾಲಿನ ವರ್ಗಾವಣೆಯ ಆದ್ಯಾತೆಗಳಲ್ಲಿ ಒಂದಾದ
ಅಂಗವಿಕಲರ ಉಪನ್ಯಾಸಕರಿಗೆ ಪ್ರಸ್ತುತ ನಡೆಯುತ್ತಿರುವ ಸದರಿ ವರ್ಗಾವಣಾ ಕೌನ್ಸಲಿಂಗ್ ಪ್ರಕ್ರಿಯೆಯಲ್ಲಿ ಅವಕಾಶ
ಕಲ್ಲಿಸಿ ವರ್ಗಾವಣೆ ಕೊಡಬೇಕಾಗಿ ತಮ್ಮಲ್ಲಿ ವಿನಮ್ರಶೀಲ ಮನವಿ ಮಾಡಿಕೊಳ್ಳುತ್ತಿದ್ದೇವೆ. ಜೊತೆಗೆ ವರ್ಗಾವಣಾ
ನಿಯಮಗಳಲ್ಲಿ ಅಂಗವಿಕಲರಿಗೆ ಸೂಕ್ತ ವಿನಾಯ್ತಿ ನೀಡಿ ತಿದ್ದುಪಡಿ ಮಾಡಿ ಅಂಗವಿಕಲ ಉಪನ್ಯಾಸಕರ ಹಿತ
ಕಾಯುತ್ತೀರಿ ಎಂದು ನಾವೆಲ್ಲಾ ನಂಬಿದ್ದೇವೆ ಆದ್ದರಿಂದ ನಮಗೂ ವಿನಾಯ್ತಿ ನೀಡಿ ವರ್ಗಾವಣಾ ಅವಕಾಶ
ನೀಡಬೇಕೆಂದು ಮತ್ತೊಮ್ಮೆ ಬೇಡಿಕೊಳ್ಳತ್ತೇವೆ.
ಧನ್ಯವಾದಗಳೊಂದಿಗೆ
ಸ್ಥಳ- ಬೆಂಗಳೂರು
ಇಂತಿ ತಮ್ಮ ಅಂಗವಿಕಲ ಉಪನ್ಯಾಸಕ ವಿಶ್ವಾಸಿಗಳು
ದಿನಾಂಕ- ೨೩-೦೬-೨೦೧೮
ಲಗತ್ತುಗಳು-
ವರ್ಗಾವಣಾ ಅಧಿಸೂಚನೆ
ಅಂಗವಿಕಲರ ಅಧ್ಯಕ್ಷರ ಮನವಿ
ಡಿ ಪಿ ಆರ್ ವಿನಾಯ್ತಿ ಆದೇಶ
ಡಿ ಪಿ ಆರ್ ಕಡ್ಡಾಯ ಸೇವೆ ಆದೇಶ
ಹಕ್ಕು ಅಧಿನಿಯಮ ೧೯೯೫
ಹಕ್ಕು ಅಧಿನಿಯಮ ೨೦೧೬
ಸಿ
ಸಿ
ಗೌರವ ಪೂರ್ವಕವಾಗಿ-
ಮಾನ್ಯ ಮುಖ್ಯ ಮಂತ್ರಿಗಳು
ಮಾನ್ಯ ಮಹಿಳಾ ಮಕ್ಕಳ ಸಚಿವರು
ಮಾನ್ಯ ಮುಖ್ಯ ಕಾರ್ಯದರ್ಶಿಗಳು ಶಿಕ್ಷಣ ಇಲಾಖೆ
ಮಾನ್ಯ ಮುಖ್ಯ ಕಾರ್ಯದರ್ಶಿಗಳು ಅಂಗವಿಕಲರ ಇಲಾಖೆ
ನಿದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ
ಆಯುಕ್ತರು ಅಂಗವಿಕಲರ ಸಬಲೀಕರಣ ಇಲಾಖೆ
ಅಧ್ಯಕ್ಷರು ಅಂಗವಿಕಲರ ನೌಕರರ ಸಂಘ.


No comments:

Post a Comment

ಅನಿಸಿಕೆ ತಿಳಿಸಿ

ಹೆಚ್ಚು ಓದಿದವು